Tuesday, August 30, 2011

ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಅಣ್ಣನ ನೆನಪು ಪುಸ್ತಕದಿಂದ ಆಯ್ದ ಭಾಗ





ಶಿವಮೊಗ್ಗಾದಿಂದ ಎರಡು ನಾಯಿಮರಿಗಳು ನಮ್ಮ ಮನೆಗೆ ಬಂದಾಗ ನಮ್ಮ ಬಹುದಿನಗಳ ಕನಸು ನನಸಾದುದಕ್ಕೆ ಆದ ಹಿಗ್ಗು ಅಷ್ಟಿಷ್ಟಲ್ಲ. ಮನೆಗಳಲ್ಲಿ ಸಾಕಲು ನಾಯಿಮರಿಗಳಿಲ್ಲದ ನತದೃಷ್ಟ ಸ್ಕೂಲು ಮಿತ್ರರನೇಕರು ನಮ್ಮೊಡನೆ ದಿನಾ ಸಂಜೆ ಬಂದು ನಾಯಿಮರಿಗಳನ್ನು ನೋಡಿಕೊಂಡು ಅವುಗಳನ್ನು ಪ್ರಶಂಶಿಸಿ ಹೋಗುತ್ತಿದ್ದರು. ಮನೆಯೆದುರು ಬೀದಿಗಳಲ್ಲಿ ಆಡುತ್ತಿದ್ದ ನಮ್ಮ ಆಟಗಳೆಲ್ಲಾ ತಾತ್ಕಾಲಿಕವಾಗಿ ಖೈದಾಗಿ ಸ್ಕೂಲಿನಿಂದ ಬಂದ ಕೂಡಲೆ ನಾಯಿ ಮರಿಗಳ ಜೊತೆ ಆಟವಾದಲು ಶುರುಮಾಡುತ್ತಿದ್ದೆವು, ಅವುಗಳಿಗೆ ಸತತವಾಗಿ ತಿಂಡಿ ತಿನ್ನಿಸುವುದೊಂದೇ ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನವೆಂದು ನಾವು ತಿಳಿದಿದ್ದುದ್ದರಿಂದ ನಮಗೆ ಕೊಟ್ಟ ತಿಂಡಿ ತೀರ್ಥಗಳಲ್ಲಿ ಸಾಕಷ್ಟು ಅವಕ್ಕೇ ವ್ಯಯವಾಗುತ್ತಿದ್ದು, ಅವುಗಳ ಹೊಟ್ಟೆ ಯಾವಾಗಲೂ ಗುಡಾಣದಂತೆ ಊದಿಕೊಂಡಿರುತ್ತಿತ್ತು. ಯಾರಾದರೂ ಹಿಡಿದೆತ್ತಿದರೆ ಅವು ಉಸಿರಾಡಲೂ ಕಷ್ಟಪಡುತ್ತಾ ತಿಣುಕುತ್ತಿದ್ದವು.

ಕಟ್ಟೆ ಮಂದಿಯ ನಾಯಿ ಮೀಮಾಂಸೆ

ಊರ ಕಟ್ಟೆಯ ಮೇಲಿನ ಚರ್ಚೆಗಳಿಗೆ ಅಂತ್ಯವೇ ಇಲ್ಲ,ಸಿದ್ದನ ವಿಚಾರ ಧಾರೆಗಳಿಗೂ ಬರವಿಲ್ಲ,ಸದಾ ಬಿಸಿ ಬಿಸಿ ಸುದ್ದಿಯನ್ನೇ ಹೊತ್ತು ತರುವ ರಾಘ್ಯ ಸಿದ್ದನ ವಿಮರ್ಶೆಗಳಿಗಾಗಿ ತಡಪಡಿಸುತ್ತಾನೆ, ಕಟ್ಟೆ ಮ್ಯಾಗೆ ಊರ ಅಜ್ಜ ಇರ್ತಾನೆ,ವೆಂಕ,ಎತ್ತಿನ ಗಾಡಿ ಓಡಿಸುವ ಬಸವ,ಬುಟ್ಟಿ ಹೆಣೆಯುವ ವಾರಿಜ, ಸೈಕಲ್ ಟಯರ ಓಡಿಸುವ ಹಳ್ಳಿ ಹೈಕಳು,ಕೆಲಸ ಮುಗಿಸಿ ಬಂದು ಹರಟೆ ಹೊಡೆಯ/ಕೇಳ ಕುಂತಿರುವ ಮಂದಿ ಎಲ್ಲ ಸೇರುತ್ತಾರೆ,ಕಟ್ಟೆಯ ಪಕ್ಕದ ಅಂಗಡಿಯ ಮಾಧವನಲ್ಲಿ ಅತಿ ಚಟುವಟಿಕೆ ಈ ಸಮಯದಲ್ಲಿ ಕಂಡುಬರುತ್ತದೆ. ಅದೇನೋ ರಾಜಕೀಯ  ಮಂದಿಯೇ ಹೆಚ್ಚಿನ ಚರ್ಚಾ ವಸ್ತುವಾಗಿ ಬಳಕೆಯಾಗುವದು ಇಲ್ಲಿನ ವಿಶೇಷ.ಚರ್ಚೆಯು ಮುಗ್ದತೆ ಹಾಗು ಸ್ವಾರಸ್ಯದಿಂದ ಕೂಡಿರುವದರಲ್ಲಿ ಸಂಶಯವಿಲ್ಲ.ಇದಿಷ್ಟು ಊರ ಕಟ್ಟೆಯ ಸ್ಥೂಲ ಪರಿಚಯ.
ಮೊದಲ ಬಾರಿಗೆ ರಾಜಕೀಯದ ಹೊರತಾದ ನಾಯಿಗಳಿಗಾಗಿ ಅಂತ ಸ್ಪರ್ಧೆ ಮಡಿಕೇರಿ ಹಾಗು ಮೈಸೂರ್ ನಲ್ಲಿ ನಡೆಯಿತು ಎಂಬ ವಿಬಿನ್ನವಾದ ವಿಸಿಯ ಎತ್ತಿದ್ದ ರಾಘ್ಯ.ಅವಕ್ಕೇನು ಸ್ಪರ್ದೆ ನಿಂಗೆ ಮಾಡಕ್ಕೆ ಬದುಕಿಲ್ವೇನ್ಲ ಹೋಗೋಗಿ ಎಂಥ  ವಿಸಿಯ ಹೇಳ್ತಿಯಾ ನಮ್ಬುವತದ್ದನ್ನು  ಹೇಳ್ದ್ರೆ ದಿಟ ಅನ್ಬೋದು ನೋಡ್ಲ ಅಂತ ವಾರಿಜ ನಂಗೆ  ಶುರುಹಚ್ಚಿ ಕೊಂಡಿದ್ದಳು.ಅವಳ ಮಾತಿನ ಟೋನಿಗೆ ಸರಿಯಾಗಿ ಗೂಟಕ್ಕೆ ಕಟ್ಟಿದ್ದ ಅವಳ ನರಪೇತಾಲ ನಾಯಿ ಊರೂ ಒಂದು ಮಾಡುವಂತೆ ಘೀಳಿಡ ಅರಂಬಿಸಿತು, ಅಜ್ಜ, ವಾರಿಜನೋ ನಾಯಿಯೋ ಕುಗುತ್ತಿರುವದು  ತಿಳಿಯದೆ ಕಣ್ಣು ಮಿಟುಕಿಸುತ್ತಿರುವಾಗಲೇ ಸಿದ್ದ ವಾರಿಜಗೆ ಸುಮ್ಕಿರೆ ಅದು ನಿನ್ನ ನಾಯಿ ತರದ್ದಲ್ಲ ಸಾವಿರ ,ಲಕ್ಷ ರೂಪಾಯಿ ಕೊಟ್ಟು ಕೊಂಡ್ಕೊಂಡಿರುತ್ತಾರೆ,ಬುದ್ದಿ ಕಲ್ಸಿರುತ್ತಾರೆ,ಸಾಕಲು ಸಾವಿರಾರು ರೊಕ್ಕ ಸುರಿತಾರೆ ,ವಾರ ವಾರ ಡಾಕ್ತೋರು ತಾವ ಕರ್ಕೋ ಹೋಇತಾರೆ,ಅದಕ್ಕೆ ವಿಶೇಷ  ತಿಂಡಿ ತರ್ತಾರೆ,   ವಿಸಿಯ ಗೊತ್ತಿಲ್ಲ ಅಂದ್ರೆ ತಿಳ್ಕೋ ಈಗ ಬಾಯಿ ಮುಚ್ಚಿ  ಕೂತ್ಕೋ ಅನ್ಬೇಕದ್ರೆ ವಾರಿಜ ಪೆಚ್ಚಾಗಿ ಅಜ್ಜನ್ ಮುಖ  ನೋಡಿದಳು,ಅವಳ ನಾಯಿ ಬಾಲ ಮುದುರಿ ಮಣ್ಣು ಕೆರೆದು ಅಡ್ದಾಗಿತ್ತು.ಸಿದ್ದನ್ ಖದ್ರೆ ಅಂತದ್ದಿತ್ತು ವಿಸಿಯಕ್ಕ್ ಬಂದ ಅಂದ್ರೆ ಮಂದಿ ಕೇಳಕ್ಕೆ  ಕುರ್ತಿದ್ರೆ ಹೊರತಾಗಿ ಮಾತಾಡ್ತಾ ಇರ್ಲಿಲ್ಲ,ಅದಕ್ಕೆ ಈ ರಾಘ್ಯ ಇವನ  ತಾವ ಬರ್ತಿದ್ದ ವಿಸಿಯ ಹಂಚಕೊಳ್ತಿದ್ದ.

ವೆಂಕ ಆಶ್ಚರ್ಯ ಚಕಿತನಾಗಿ ಹಿಂಗು ಐತೇನ್ಲಾ? ಅಂತಕೇಳಿದ್ದ.ಹೂ ಮತ್ತೆ.......ಅಂದ ಸಿದ್ದ ಮುಂದುವರಿದು ಮಿನಿಯೇಚರ್, ಪಿನ್ಸ್‌ಚರ್, ಟಿಬೆಟಿಯನ್, ಟೆರಿಯರ್, ಮುಧೋಳ್, ಬ್ಯಾಸೆಟ್ ಹೌಂಡ್, ಬೀಗಲ್, ಡ್ಯಾಶಂಡ್, ಫಾಕ್ಸ್‌ಹೌಂಡ್, ರೋಡೆಶಿಯನ್, ರಿಡ್ಜ್‌ಬ್ಯಾಕ್, ಐರಿಷ್‌ರಿಟೈವಲ್, ಅಮೆರಿಕನ್ ಸ್ಟಾನಿಯಲ್, ವೈನರ್, ಬುಲ್‌ಡಾಗ್, ಫ್ರೆಂಚ್‌ಬುಲ್‌ಡಾಗ್, ಮಿನಿಯೇಚರ್ ಸ್ಕಾನಜರ್, ಶಿಷ್‌ಟ್ಸೂ, ಬುಲ್ ಮಾಸ್ಟಿಫ್, ಡಾಬರ್‌ಮ್ಯಾನ್, ಸೈಬೀರಿಯನ್ ಹಸ್ಕೀ, ಜರ್ಮನ್ ಶಫರ್ಡ್, ಗ್ರೇಟ್‌ಡೆನ್, ಸೆಂಟ್ ಬರ್ನಾಡ್ ಹೀಗೆ ಸಾವಿರಾರು ಜಾತಿ ನಾಯಿ ಗಳನ್ನೂ ದೊಡ್ಡ ಮಂದಿ  ಸಾಕ್ತಾರೆ,ಸಿದ್ದನ್ ವಿಚಾರ ಸಾಮರ್ಥ್ಯ ಕಂಡು ಅಬ್ಬಾಬ್ಬ.........!!!!!! ಅನ್ನೋ ಉದ್ಗಾರ ಅಜ್ಜನ್  ಬಾಯಿನಲ್ಲಿ ಹೊರಟಿತ್ತು .ಅಲ್ಲಲೇ ಸಿದ್ದ ಊರಾಗೆ ಈ ಪಾಟಿ ನಾಯಿ ಅವೇ,ಎಲ್ಲಾ ಬಿಟ್ಟು ಅದ್ಯಾಕಲ ಈ ಮಂದಿಗೆ ಈ ಫಾರಿನ್ ನಾಯಿಗಳ ಉಸಾಬರಿ,ಅವಕ್ಕೆ ಡಾಕ್ಟರು ,ಬೇರೇನೆ ತಿಂಡಿ ಎಲ್ಲಾ ಯಾಕ್ಲಾ ಎಂಬ ಪ್ರಶ್ನೆ ನನ್ನದಾಗಿತ್ತು.ಯಾವತ್ತೋ ಒಮ್ಮೆ ಅಬುಬಕ್ಕರ್ ಪಂಡಿತನ ಹತ್ರ ಔಸದ ತೆಗೊಳೋ ನಿಂಗೆ ಆಸ್ಪತ್ರೆ ಬೇಡ ಅಂದ್ರೆ ಅವಕ್ಕೆ ಬೇಡ ಅಂತ ಅನ್ನಕ್ಕಾಗಲ್ಲ ಅಂತ ಸಮದಾನವಾಗೆ ಉತ್ತರಿಸ ಆರಂಬಿಸಿದ ಸಿದ್ದ, ಪೇಟೆ ಜನ ನಾಯಿ ಅಂದ್ರೆ ಮನೆ ಮಂದಿ  ತರ ನೋಡ್ಕೊತಾರೋ!!!ಮನೆ ಎಲ್ಲಾ ಓಡಾಡ್ತವೆ ,ಮಂದಿ ಮಲಗೋ ಮಂಚದಾಗ ಮಂದಿ  ಜೊತೆ ಮಲಗ್ತಾವೆ ,ಮಂದಿ ಜನ  ನಾಯಿನ ಎತ್ತಿಕೊಳ್ಳುತ್ತಾರೆ ,ಮುದ್ದಿಸ್ತಾರೆ,ಇನ್ನೇನೇನೋ ಮಾಡ್ತಾರೆ.ಹಾಗಿರುವಾಗ ಅವೆಲ್ಲ ಉಸಾರಿರಬೇಕಲ್ಲ ಅದಕ್ಕೆ ಡಾಕ್ಟರ ತಾವ ಆಗಾಗ ಕರ್ಕೋ  ಹೋಗ್ತಾರ ,ಹುಚ್ಚು ಹಿಡೀದಿರ್ಲಿ ಅಂತ ಸೂಜಿ ಚುಚ್ಚಿಸ್ತಾರೆ,ಒಟ್ಟಿನಲ್ಲಿ ನಾಯಿ ಸಾಕುವದು ಪೇಟೆ ಮಂದಿ ಫ್ಯಾಸನ್ ಕಣ್ಲ,ಇರುವೆ ನೋಡಿ ಹೆದರೋ  ಪೇಟೆ ಹೆಣ್ಣು ಹೈಕಳು ನಾಯಿನ ಮಾತ್ರ ಎತ್ಕೊಂಡು ಮುದ್ದಾಡಿಸದೆ ಇರೋಲ್ಲ ಅರ್ಥ ಆಯ್ತಾ ಅಂದ.ಥೂ........ಅಂದು ಕಟ್ಟೆ ಬದಿ ಕಾಲೆತ್ತಿ ನಿಂತ ತನ್ನ ನಾಯಿಗೆ ಕಲ್ಲೆಸೆದು ತನ್ನ ಕೆಲಸದಲ್ಲಿ ತೊಡಗಿಕೊಂಡಳು ವಾರಿಜ , ನಾನು ಸಿದ್ದ ಅರ್ಥ ಆಯ್ತಾ ಅಂದಿದಕ್ಕೆ  ಆಯಿತು ಅಂದು ಬೇರೇನೂ ಹೇಳ್ಬೇಕುಂತ ಗೊತ್ತಾಗದೆ ಹಲ್ಲಿಗೆ ಕಡ್ಡಿ ಎತ್ಕೊಂಡು ಚುಚ್ಚುತ್ತಾ ಕೂತೆ.
             ನಾಯಿ ಸೌಬಾಗ್ಯ ನೆನೆಸುತ್ತ ಮರಕ್ಕೊರಗಿದ್ದ ಬಸವ ದಡಕ್ಕನೆ ಎದ್ದು ಅಲ್ಲಲೇ ಅವು ಬೀದಿ ತಿರ್ಗಲ್ಲ್ವೆನ್ಲಾ?ಮನೆಯೊಳಗೇ ಇರ್ತಾವ.ಇಲ್ಲಲೇ ದಿವ್ಸಕ್ಕೆರಡು ಬಾರಿ ದೊಡ್ಡವರೆಲ್ಲ ಅದೇ ವಾಕಿಂಗ್ ಅಂತ ಹೋಗಲ್ವೇನ್ಲ ಅವಾಗ ಕರ್ಕೋ ಹೋಇತಾರೆ ,ಅವಾಗ್ಲೇ ಇವು ಕೊರೋದು, ಕಾಲೆತ್ತೋ  ಕೆಲಸ ಎಲ್ಲಾ    ಮುಗಿಸ್ಕೊಬೇಕು,ಯಾವಾಗ್ ಬೆಕಾದ್ರಾವಾಗ ಹೋಗೋ ಹಂಗಿಲ್ಲ. ಹಾಗೆ ವರ್ಷಕ್ಕೊಮ್ಮೆ ಇವುಗಳನ್ನು ಮನೆ ಇಂದ ಹೊರ ತಂದು ಇಂತ ಸ್ಪರ್ದೆ  ಏರ್ಪಡಿಸಿ ಶೋಕಿ ತೋರಿಸ್ತಾರೆ ಜನ,ಅವುಗಳ ಜೀವನ ಕೂಡ ಕಷ್ಟ ಕಣ್ಲೇ ಅಂದ ಸಿದ್ದ.ಪಾಪ ಪೇಟೆಯ ಬಗ್ಗೆ ಆಸಕ್ತಿ ಹೊಂದಿದ್ದ ವೆಂಕ ಪೇಟೆಯಾಗೆ ಬೀದಿ ಸ್ವಚ್ಛ ಮಾಡೋ ಮಂದಿ ಪಾಡು ನೆನೆಸ್ಕೊತಿದ್ದ.ಈ ನಾಯಿ ವಿಸಿಯ ಕೇಳಿದ ಅಜ್ಜ ನಮ್ಮೂರ ನಾಯಿಗಳ ಪಾಡು ನೆನೆಸಿ ಹಾಗು ಅವುಗಳ ತಳಿ ನಾಶವಾಗುತ್ತಿರುವ ಬಗ್ಗೆ ಯೋಚಿಸಿ ಬಾಯಲ್ಲಿ ಲೊಚ್........ಎಂದು ಕನಿಕರಿಸಿದ.ಕೆಲ ಮಂದಿ  ನಾಯಿ  ಗುಂಗಲ್ಲೇ ಬೀಡಿ  ನೆನಸಿ ಮಾಧವನ ಅಂಗಡಿ ಕಡೆ ಹೆಜ್ಜೆ ಹಾಕಿದರು.
                                                                                                                ಇಂತೂ ಸಿದ್ದನ್ ಗೆಳೆಯ ರಾಘ್ಯ.

ಬ್ಲಾಗ್ ದಾರರ ಬಗ್ಗೆ ಒಂದಿಷ್ಟು.


ಇಂಗ್ಲೀಷಿನ ಪದ 'ವೆಬ್ ಲಾಗ್' ಎಂಬುವುದರ ರೂಪಾಂತರ 'ಬ್ಲಾಗ್'. ಬ್ಲಾಗ್ ಎಂದರೆ ಎನೋ ಒಂದಷ್ಟು ಬರೆದಿಟ್ಟದ್ದು ಎಂಬರ್ಥ ಬರುವಂತೆ. ಬರೆದದ್ದು ಸಾಹಿತ್ಯವೇ ಆಗಿರಬೇಕಿಲ್ಲ. ಮನಸ್ಸಿಗೆ ತೋಚಿದ್ದು ಬರೆದಿಟ್ಟರೂ ಅದೊಂದು ಬ್ಲಾಗ್ ಆದೀತು. ದಿನ ನಿತ್ಯ ಡೈರಿಯಲ್ಲಿ ಬರೆದಿಡುವ ಹವ್ಯಾಸ ಹಲವರಿಗಿದ್ದೀತು. ಡೈರಿಯಲ್ಲಿ ಬರೆದಿಡುವುದರ ಡಿಜಿಟಲ್ ರೂಪಾಂತರ - 'ಬ್ಲಾಗ್'. ಆದರೆ ಕಾಲಕ್ರಮೇಣ ಬ್ಲಾಗ್ ಎನ್ನುವುದು ಮನಸ್ಸಿಗೆ ತೋಚಿದ್ದನ್ನು ಬರೆದಿಡುವುದಷ್ಟಕ್ಕೇ ಸೀಮಿತವಾಗದೆ ಗಂಭೀರ ಚಿಂತನೆ, ಸಾಹಿತ್ಯ, ತಂತ್ರಜ್ಞಾನ ಕುರಿತ ವಿಷಯಗಳಿಗೆ ಕೂಡ ವಿಸ್ತಾರಗೊಂಡಿದೆ. ಬ್ಲಾಗ್ ಎಂಬುದು ಬರೆಯುವದಷ್ಟಕ್ಕೆ ಸೀಮಿತವಾಗದೆ  ತಮಗಿಷ್ಟವಾದ ಲೇಖನ ಕವಿತೆಗಳನ್ನು ಸಂಗ್ರಹಿಸಿ ತಮ್ಮಜೊತೆ ಇತರರಿಗೂ ತೋರಿಸುವ ತಾಣವಾಗಿ ಮಾರ್ಪಟ್ಟಿದೆ.ಇಂಟರ್ನೆಟ್ಟಿನಲ್ಲಿ ಈಗ ಎಲ್ಲೆಲ್ಲೂ ಬ್ಲಾಗುಗಳು ಕಾಣಸಿಗುವುದು. ಹುಡುಕಿದರೆ ಪ್ರತಿಯೊಂದು ವಿಷಯದ ಬಗ್ಗೆಯೂ ಒಂದೊಂದು ಬ್ಲಾಗ್ ಸಿಗುವುದು. ವಿವಿಧ ಭಾಷೆಗಳಲ್ಲೂ ಬ್ಲಾಗುಗಳಿವೆ.ಕನ್ನಡ ಭಾಷೆಯೊಂದರಲ್ಲೇ ಈಗ ಸಾವಿರಾರು ಬ್ಲಾಗು ಗಳಿವೆ. ಇಂಗ್ಲೀಷಿನಲ್ಲಿ ಮಿಲಿಯನ್ನುಗಟ್ಟಲೆ ಬ್ಲಾಗುಗಳಿವೆ.ಬ್ಲಾಗ್ ಅಂದಾಕ್ಷಣ ಬರೆದದ್ದೆಲ್ಲವೂ ಎಲ್ಲರಿಗೂ ಕಾಣಲೇಬೇಕು ಎಂದಿಲ್ಲ. ಗೆಳೆಯರೊಂದಿಗೆ ಮಾತ್ರ ಹಂಚಿಕೊಳ್ಳುವ ಸೌಲಭ್ಯ ಕೂಡ ಉಂಟು.

Monday, August 29, 2011

ನಾವು ಮೊಬೈಲನ್ನು ಸುರಕ್ಷಿತವಾಗಿ ಬಳಸುತಿದ್ದೇವ?



ಮೊಬೈಲಿನ ಮೊದಲಿಗೆ ಬರಿಯ ಮಾತಾಡುವದಕ್ಕೆ ಮತ್ತು ಮೆಸೇಜ್ ಗಾಗಿ ಮಾತ್ರ ಬಳಕೆಯಗುತಿತ್ತು, ಅದರೆ ಈಗ ಸ್ಮಾರ್ಟ್ ಫೊನ್ ಜಮಾನ.ಅಲ್ಲದೆ  ಸೋಷಲ್ ನೆಟ್ ವರ್ಕ್ ಬರಾಟೆಯು ಕೂಡಾ ಜೋರಿದೆ. ಪ್ರತಿ ಒಬ್ಬನ ಕೈಗೂ  ವಯಸ್ಸಿನ ಭೇದವಿಲ್ಲದೆ  ಮೊಬೈಲು ಬಂದಿದೆ.ಒಂದು ಸಂಶೋದನೆಯ  ಪ್ರಕಾರ ೧೦೦ ಕ್ಕೆ ೭೦ ಶೇಕಡಾ ಜನರು ತಮ್ಮ ಮೊಬೈಲ್ನಲ್ಲಿ ಇಂಟರ್ನೆಟ್  ಉಪಯೊಗಿಸುತಿದ್ದಾರೆ.ಮೊಬೈಲನ್ನು  ಒಂದು ನಿಮಿಷವು ಬಿಟ್ಟಿರಲಾರದಂತೆ ಮೊಬೈಲ್ ಜೊತೆಗಿನ ಭಾಂದವ್ಯ  ಈಗಿನ ತಲೆಮಾರಿನವರಲ್ಲಿ ಬೆಳೆದಿದೆ. ಮೊಬೈಲ್ ನಮಗೆಷ್ಟು ಹಿತ ಎಂಬುದನ್ನು ಅರಿಯಲು ಗೊಗಲ್ನಲ್ಲಿ ಹೀಗೆ ಕಣ್ಣಾಡಿಸಿದಾಗ ಸಿಕ್ಕ ವಿಚಾರಗಳು ನೋಡಿ ನಿಮಗೂ ತಿಳಿಸೋಣವೆಂದು,ನನಗೆ ಸಿಕ್ಕಿದ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ದಾಖಲಿಸುತಿದ್ದೇನೆ.
ಇತ್ತೀಚಿನ ಹೆಚ್ಚಿನೆಲ್ಲಾ ರಿಸರ್ಚಗಳ ಪ್ರಕಾರ ಕೆಲವು ಅರೋಗ್ಯ ಸಂಭಂದಿ ಹಾನಿಗಳು!!!!!!!! ಅತಿಯಾದ ಮೊಬೈಲು ಬಳಕೆಯಿಂದಾಗುತ್ತದೆ ಅಂತ ಹೇಳುತ್ತವೆ .ಹಾಗಾದರೆ ಆ ಹಾನಿಗಳೇನು ಎಂಬುದನ್ನು  ಕೆಳಗೆ ನಮೂದಿಸಿದ್ದೇನೆ  ಒಮ್ಮೆ ಓದಿಕೊಳ್ಳಿ...............

ನುಡಿ ನಮನ,ರಾಮಕೃಷ್ಣ ಹೆಗಡೆಯವರ ನೆನಪಲ್ಲಿ, ಇಂದು ಅವರ ಜನ್ಮದಿನ .

 ಮಹಾಬಲೇಶ್ವರ ಹೆಗ್ಡೆ ಹಾಗು ಸರಸ್ವತಿ ಹೆಗ್ಡೆ ದಂಪತಿಗಳಿಗೆ ಆಗಸ್ಟ್ -೨೯-೧೯೨೬ ರಲ್ಲಿ ಹುಟ್ಟಿದ ಪುತ್ರ ರಾಮಕೃಷ್ಣ ಹೆಗ್ಡೆ.ರಾಜ್ಯ ಕಂಡ ಅತ್ಯಂತ ಸಜ್ಜನಿಕೆಯ ಹಾಗು ಮೌಲ್ಯಾದಾರಿತ ರಾಜಕಾರಣಿಯಲ್ಲಿ ಒಬ್ಬರು.ಉತ್ತರ ಕನ್ನಡದ ಸಿದ್ದಾಪುರ ಇವರ ಹುಟ್ಟಿದ ಊರು.ಪ್ರಾಥಮಿಕ ಶಿಕ್ಷಣ ಶಿರಸಿಯಲ್ಲಿ, ಮುಂದೆ ಇವರು ಕಾಶಿ ವಿದ್ಯಾಪೀಠ, ಬನಾರಸ್ ಹಾಗು ಲಕ್ನೋ ಯುನಿವರ್ಸಿಟಿ ಗಳಲ್ಲಿ ಓದಿ LLB ಪದವಿ ಪಡೆದಿದ್ದರು.ಅತಿ ಸಣ್ಣ ವಯಸಲ್ಲೇ ಹೋರಾಟದ ಕಡೆಗೆ ಬಾಗಿದ ಇವರು ೧೯೪೨ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಬಾಗವಹಿಸಿದ್ದರು,ತನ್ನ ೨೦ನೇ ವಯಸಲ್ಲೇ ರೈತ ಚಳುವಳಿಯನ್ನು ರಾಜ್ಯದಲ್ಲಿ ರೂಪಿಸಿದ ಕೀರ್ತಿ ರಾಮಕೃಷ್ಣ ಹೆಗಡೆಯವರಿಗೆ ಸಲ್ಲುತ್ತದೆ. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ೧೯೫೪ ರಲ್ಲಿ ರಾಜಕೀಯಕ್ಕೆ  ಪ್ರವೇಶವಾದ ಇವರು ೧೯೫೭ರಲ್ಲಿ ಮೊದಲ ಬಾರಿಗೆ ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾದರು. ಇ೦ದಿರಾಗಾ೦ಧಿ ೧೯೭೫ ರಲ್ಲಿ ರಾಷ್ಟ್ರದ ಮೇಲೆ ಹೇರಿದ ತುರ್ತು
ಪರಿಸ್ಥಿತಿಯನ್ನು ವಿರೋಧಿಸಿ, ಜೈಲುವಾಸವನ್ನು ಕ೦ಡು, ಹೊರಬಂದ ನಂತರ ಜನತಾ ಪಾರ್ಟಿಯನ್ನು ಸೇರಿದ್ದರು. ೧೯೮೩ರಲ್ಲಿ ರಾಜ್ಯಾದ ಭಾರತೀಯ ಜನತಾ ಪಾರ್ಟಿಯ ೧೮ ಶಾಸಕರ ಬೆಂಬಲದೊಂದಿಗೆ ರಾಜ್ಯದ  ಮುಖ್ಯಮಂತ್ರಿಯಾದ ಇವರು ದೇಶದ  ಮೊದಲ ಕಾಂಗ್ರೆಸ್ಸ್ಯೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು.೧೯೮೫ರಲ್ಲಿ  ನಡೆದ ರಾಜ್ಯದ ಸ್ಥಳೀಯಾ ಸಂಸ್ಥೆಗಳ ಚುನಾವಣೆಗಳಲ್ಲಿ ತನ್ನ ಪಕ್ಷದ ಸಾಮಾನ್ಯ ಗೆಲುವನ್ನು ಕಂಡ ರಾಮಕೃಷ್ಣ ಹೆಗಡೆ ಪಕ್ಷದ ಸೋಲಿನ ನೈತಿಕ ಜವಾಬ್ದಾರಿಯನ್ನು ಹೊತ್ತು ತನ್ನ ಸ್ಥಾನಕ್ಕೆ  ರಾಜೀನಾಮೆ ಕೊಟ್ಟರು ಹಾಗು ಆ ವರ್ಷ ನಡೆದ ವಿದಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಆರಿಸಿ ಬಂದ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕಿಸಿದರು, ಹೇಳಿ ಕುರ್ಚಿಗಾಗಿ ಬಡಿದಾಡುವ ಇಂದಿನ ರಾಜಕಾರಣಿಗಳಲ್ಲಿ ರಾಮಕೃಷ್ಣ ಹೆಗ್ಡೆ ಅವರ ಈ ನಡೆಯನ್ನು ನಿರೀಕ್ಷಿಸಲು ಸಾದ್ಯವೇ?ಪಂಚಾಯತ್ ರಾಜ್ ಕಾನೂನಿನಲ್ಲಿ ಹೆಗಡೆಯವರ ಪಾತ್ರ,ಲೋಕಾಯುಕ್ತ ವ್ಯವಸ್ಥೆಯನ್ನು ರಾಜ್ಯಕ್ಕೆ ಒದಗಿಸಿದ ರಾಮಕೃಷ್ಣ ಹೆಗಡೆಯವರ ಪಾತ್ರ, ರೈತರಿಗೆ ಸಾಲ  ಮನ್ನ, ಕಡಿಮೆ ಬಡ್ಡಿ ಸಾಲ ಮುಂತಾದವು  ರಾಜಕಾರಣ ಅಂದ ಕೂಡಲೇ ನನ್ನ ನೆನಪಿಗೆ ಬರುವಂತದ್ದು.
ಪತ್ರಕರ್ತ ಆಗಬಯಸಿದ್ದರು
ಹೆಗಡೆ ಅವರಿಗೆ ಪತ್ರಕರ್ತ ಆಗಬೇಕೆಂಬ ಮಹದಾಸೆ ವಿದ್ಯಾರ್ಥಿ ದೆಸೆಯಿಂದಲೂ ಇತ್ತು. ಶಿರಸಿ ಮಾರಿಕಾಂಬ ಹೈಸ್ಕೂಲ್‌ನಲ್ಲಿ ಕಲಿಯುತ್ತಿದ್ದಾಗ ಕೈಬರಹದ ಪತ್ರಿಕೆ ‘ಹೂವಿನ ಸರ’ಕ್ಕೆ ಲೇಖನ ಬರೆಯುತ್ತಿದ್ದರು. ಬನಾರಸ್‌ವಿದ್ಯಾಪೀಠದಲ್ಲಿ ಪದವಿ ವ್ಯಾಸಂಗ ಮಾಡುವಾಗಲೂ ಸ್ಥಳೀಯ ಪತ್ರಿಕೆಗಳಲ್ಲಿ ಅವರ ಲೇಖನ ಪ್ರಕಟವಾಗುತ್ತಿದ್ದವು. ಕರ್ನಾಟಕಕ್ಕೆ ಮರಳಿದ ಹೆಗಡೆ ನಂತರ ಕಾಲದ ಹೊರಳಿಗೆ ಸಿಕ್ಕು, ರಾಜಕೀಯದತ್ತ ಮುಖ ಮಾಡಿದರು. ಪತ್ರಕರ್ತನಾಗಲಿಲ್ಲ ಎಂದು ಬಹಳ ಸಾರಿ ನೊಂದುಕೊಂಡಿದ್ದೂ ಉಂಟು. ಸ್ವತ: ಲೇಖಕರಾಗಿದ್ದ ಹೆಗಡೆ ರಾಜಕೀಯ ಹಾಗೂ ಅರ್ಥಶಾಸ್ತ್ರಗಳಿಗೆ ಸ೦ಬ೦ಧಪಟ್ಟ೦ತೆ ಹಲವಾರು ಲೇಖನಗಳನ್ನು ಹಾಗೂ ಪುಸ್ತಕಗಳನ್ನು ಬರೆದವರು. “ ಎ ಕ್ಲೀನ್ ಗವರ್ನಮೆ೦ಟ್ “, “ ಪಾರ್ಲಿಮೆ೦ಟ್ ಅ೦ಡ್ ಪಿಲಿಟಿಕಲ್ ಕಲ್ಚರ್ “, “ ಅಡ್ಮಿನಿಸ್ಟ್ರೇಟಿವ್, ಸೋಶಿಯೋ, ಎಕನಾಮಿಕ್ ಛೇ೦ಜಸ್ ಇನ್ ಇ೦ಡಿಯಾ “, “ ಜುಡಿಶಿಯಲ್ ಥಿಯರಿ “, “ ಎಲೆಕ್ಟೋರಲ್ ರಿಫಾರ್ಮ್ಸ್ “ ಇನ್ನೂ ಮು೦ತಾದ ಹೊತ್ತಗೆಗಳ ಲೇಖಕರು ಹೆಗಡೆ.


 ತನ್ನ ರಾಜಕೀಯ ಅವಧಿಯಲ್ಲಿ ಸರಿ ಸುಮಾರು ಎಲ್ಲಾ ಖಾತೆಗಳನ್ನೂ ನಿರ್ವಹಿಸಿದ  ಅವರು,ಮೇಲೆ ಹೇಳಿದಂತೆ  ಎರಡು ಬಾರಿ ಮುಖ್ಯಮ೦ತ್ರಿಯಾಗಿ ಹಾಗೂ ಕೇ೦ದ್ರ ಸಚಿವರಾಗಿ, ಕೇ೦ದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಜಪೇಯಿ ಸರ್ಕಾರದಲ್ಲಿ  ಕೇ೦ದ್ರ ವಾಣಿಜ್ಯ ಸಚಿವರಾಗಿದ್ದವರು. ಹೆಗಡೆ ಕರ್ನಾಟಕ ರಾಜ್ಯದ ಅತ್ಯ೦ತ ಉತ್ತಮ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು. ಕರ್ನಾಟಕದ ರಾಜಕೀಯದಲ್ಲಿ ೧೩ ಬಾರಿ ರಾಜ್ಯ ಆಯವ್ಯಯವನ್ನು ಮ೦ಡಿಸಿದ ಏಕೈಕ ಅರ್ಥ ಸಚಿವ!!! ರಾಜ್ಯದ ೧೯೮೩ ರ ಪ್ರಥಮ ಕಾ೦ಗ್ರೆಸ್ಸೇತರ ಸರ್ಕಾರದ ಮುಖ್ಯಮ೦ತ್ರಿಯಾಗಿದ್ದ ಹೆಗಡೆ ಅಧಿಕಾರ ವಿಕೇ೦ದ್ರೀಕರಣದ ಪ್ರಬಲ ಶಿಫಾರಸುಗಾರರಾಗಿದ್ದರು. ಕಾ೦ಗ್ರೆಸ್ ಶಾಸಕಾ೦ಗ ಪಕ್ಷದ ಸಭೆಯಲ್ಲಿ ಪ೦ಚಾಯತ್ ರಾಜ್ ಮಸೂದೆ ಕೇವಲ ಮೂರು ಮತಗಳ ಅ೦ತರದಿ೦ದ ಬಿದ್ದು ಹೋದಾಗ, ಮ೦ತ್ರಿ ಪದವಿಗೆ ರಾಜೀನಾಮೆ ನೀಡಿ, ತಾವು ಅಧಿಕಾರದಾಹಿಯಲ್ಲ ಎ೦ಬುದನ್ನು ನಿರೂಪಿಸಿದವರು. ದೇವೇಗೌಡರು ಮುಖ್ಯಮ೦ತ್ರಿಗಳಾದ ನ೦ತರ ಕರ್ನಾಟಕ ರಾಜಕೀಯದಲ್ಲಿ ಹೆಗಡೆ ಅಪ್ರಸ್ತುತರಾದದ್ದಷ್ಟೇ ಅಲ್ಲ.. ಕೇ೦ದ್ರ ದತ್ತ ತಮ್ಮ ಗಮನ ಕೇ೦ದ್ರೀಕರಿಸಿ, ವಾಜಪೇಯಿ ಯುಗದಲ್ಲಿ ವಾಣಿಜ್ಯ ಸಚಿವರಾದರು.ರಾಜಕಾರಣಿ ಆರೋಪಗಳಿಗೆ ಹೊರತಲ್ಲ ಎಂಬಂತೆ, ಟೆಲಿಫೋನ್ ಕದ್ದಾಲಿಕೆ ಮುಂತಾದ ಆರೋಪಗಳು ಕೂಡ ಹೆಗಡೆಯವರನ್ನು ಸುತ್ತುವರಿದಿತ್ತು.  ಹೆಗಡೆಯವರಿಗೆ ತನ್ನ  ಕೊನೆಗಾಲದಲ್ಲಿ ಅರೋಗ್ಯ ಕೆಟ್ಟಿತ್ತು.ಜನವರಿ ೧೨-೨೦೦೪ ರಲ್ಲಿ ನಿಧನರಾದರು,ಆದೆರೆ ಅವರ ರಾಜಕೀಯ ಮೌಲ್ಯಗಳು ಇಂದಿಗೂ ಹಸಿರಾಗಿದೆ,ಅದಕ್ಕೆ ಸಾವಿಲ್ಲ.


ರಾಮಕೃಷ್ಣ ಹೆಗಡೆಯವರ ಪತ್ನಿ ಶಕುಂತಲಾ ಹೆಗಡೆ


ಹೆಗಡೆಯವರ ಜನ್ಮನಕ್ಷತ್ರವನ್ನೇ ಹೆಸರಾಗಿಸಿಕೊಂಡ ‘ಕೃತ್ತಿಕಾ’ ನಿವಾಸದಲ್ಲಿ ಶಕುಂತಲಾ ಹೆಗಡೆ ಅವರದು ಈಗ  ಒಬ್ಬಂಟಿ ವಾಸ. ಎಂತಹ ವಿಪರ್ಯಾಸ ನೋಡಿ ಬೆಂಗಳೂರು ಸದಾಶಿವನಗರದಲ್ಲಿರುವ ಈ ಮನೆ ಒಂದು ಕಾಲದಲ್ಲಿ ಪ್ರಮುಖ ರಾಜಕೀಯ ತೀರ್ಮಾನಗಳಿಗೆ ಸಾಕ್ಷಿಯಾಗಿತ್ತು. ಹೆಗಡೆ ಅವರಿಂದ ರಾಜಾಶ್ರಯ ಪಡೆದವರು, ನೇತಾರರಾದವರು, ಅಧಿಕಾರ-ಅಂತಸ್ತು ಗಳಿಸಿದವರು, ಇವತ್ತಿಗೂ ಅದನ್ನು ಅನುಭವಿಸುತ್ತಿರುವವರು, ಬೇರೆ-ಬೇರೆ ರೀತಿ ಉಪಕೃತರಾದವರು ಯಾರೊಬ್ಬರೂ ಇತ್ತ ಕಡೆ ಸುಳಿಯುತ್ತಿಲ್ಲ. ಅಷ್ಟಕ್ಕೂ ಹೆಗಡೆ ಅವರ ಅಧಿಕಾರ ಹೋದಾಗಲೇ ಸುಳಿಯದಿದ್ದವರು, ಇನ್ನು ಅವರು ಈ ಲೋಕ ಬಿಟ್ಟು ಹೋದ ಮೇಲೆ ಬರುತ್ತಾರೆಯೇ?
ಈ ಎಲ್ಲ ವೈರುಧ್ಯಗಳಿಗೆ ಮೌನಸಾಕ್ಷಿಯಾದ ‘ಕೃತ್ತಿಕಾ’ ನಾಮಫಲಕ ಸುತ್ತಲಿನ ಕಾಪೌಂಡ್ ಗೋಡೆ ಬಿರುಕು ಬಿಟ್ಟಿದೆ. ಸುಣ್ಣ-ಬಣ್ಣ ಕಂಡು ಬಹಳ ದಿನಗಳೇ ಆಗಿದ್ದರೂ ಮನೆ ಒಪ್ಪ-ಓರಣವಾಗಿದೆ. ಹೆಗಡೆ ಬೃಹತ್ ಫೋಟೊ ಹೊತ್ತ ವಿಶಾಲ ಹಜಾರ, ಅವರು ಬಹುವಾಗಿ ಇಷ್ಟಪಡುತ್ತಿದ್ದ ನಾಟ್ಯ ಗಣಪತಿ ವಿಗ್ರಹ, ತಿರುವು ಮೆಟ್ಟಿಲು ಒಳಗೊಂಡ ಮೇಲಿನ ಮಹಡಿಯಲ್ಲಿ ಮತ್ತೊಂದು ವಿಶಾಲ ಹಜಾರ, ಹೆಗಡೆ ಜೀವಸಮಾನ ಗ್ರಂಥಾಲಯ ಎಲ್ಲವೂ ಹಾಗೆ ಇವೆ.

ಮಾಜಿ ಮುಖ್ಯಮಂತ್ರಿಯವರ ಪತ್ನಿಗೆ ಅಗತ್ಯಾನುಸಾರ ಸರಕಾರದಿಂದಲೇ ಭದ್ರತೆ ಒದಗಿಸುವ ಪರಿಪಾಠ ಇದೆ. ಆದರೆ ಬಹಳಷ್ಟು ಮನವಿ ಸಲ್ಲಿಸಿದರೂ ಪ್ರಯೋಜನ ಆಗಿರಲಿಲ್ಲ. ಕೊನೆಗೆ ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗ, ನಾಳೆ ನಾವೂ ಮಾಜಿ ಆದಾಗ ಇದೇ ಪರಿಸ್ಥಿತಿ ಬರಬಾರದು ಎಂದು ‘ಕೃತ್ತಿಕಾ’ಗೆ ಸೆಕ್ಯುರಿಟಿ ವ್ಯವಸ್ಥೆ ಮಂಜೂರು ಮಾಡಿದರು. ತತ್ಪರಿಣಾಮ ಬೆಳಗ್ಗೆ ಎಂಟಕ್ಕೆ ಬರುವ ಪೇದೆ ಮಧ್ಯಾಹ್ನ ಮೂರಕ್ಕೆ ಮರಳುತ್ತಾರೆ. ಹೆಚ್ಚುವರಿ ಭದ್ರತೆ ಕೋರಿ ನಂತರದ ಸರಕಾರಗಳಿಗೆ ಮಾಡಿದ ಮನವಿ ಪ್ರಯೋಜನಕ್ಕೆ ಬಂದಿಲ್ಲ. ಕೊನೆಗೆ ಶಕುಂತಲಾ ಅವರೇ ಒಬ್ಬ ಖಾಸಗಿ ಸೆಕ್ಯುರಿಟಿ ನೇಮಿಸಿಕೊಂಡಿದ್ದಾರೆ.
ಹೆಗಡೆ ಅವರ ಮಕ್ಕಳ ಪೈಕಿ, ಮಮತಾ ಮತ್ತು ಸಮತಾ ಇಬ್ಬರೂ ಸೇರಿ ಸದಾಶಿವನಗರದ ಬಿಡಿ‌ಎ ಕಾಂಪ್ಸೆಕ್ಸ್‌ನ ಬಾಡಿಗೆ ಮಳಿಗೆಯೊಂದರಲ್ಲಿ ಯಾತ್ರಿಕ್ ನೆಟ್‌ವರ್ಕ್ ಎಂಬ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದಾರೆ. ಭರತ್ ಹೆಗಡೆ ಹೆಸರುಘಟ್ಟದಲ್ಲಿರವ ಫಾರಂ ಹೌಸ್ ನೋಡಿಕೊಳ್ಳು ತ್ತಿದ್ದಾರೆ. ಮಮತಾ ಪುತ್ರಿ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಾಕ್ಟಿಸ್ ಮಾಡುತ್ತಿದ್ದರೆ, ಸಮತಾ ಮತ್ತು ಭರತ್ ಅವರ ತಲಾ ಇಬ್ಬರು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅಶ್ಚರ್ಯವೆಂದರೆ ಹೆಗಡೆ ಅವರ ಮೂವರು ಮಕ್ಕಳಿಗೂ ಬೆಂಗಳೂರಲ್ಲಿ ಒಂದು ಬಿಡಿ‌ಎ ನಿವೇಶನ ಇಲ್ಲ.
ಇವತ್ತಿನ ಮುಖ್ಯಮಂತ್ರಿಗಳು ತಾವು, ತಮ್ಮ ಪತ್ನಿ ಮತ್ತು ಮಕ್ಕಳ ಹೆಸರಲ್ಲಿ ಮಾಡಿರುವ ಆಸ್ತಿ-ಪಾಸ್ತಿಗಳಿಂದ, ಈ ಆಸ್ತಿ ಸಂಪಾದನೆ ಹಿಂದಿನ ಅವ್ಯವಹಾರಗಳಿಂದಲೇ (ಕು)ಖ್ಯಾತರಾಗಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಮುಖ್ಯಮಂತ್ರಿ ಎಂದು ಗುರುತಿಸಿಕೊಂಡಿದ್ದಾರೆ. ಹೆಗಡೆ ಅವರು ಕಟ್ಟಿಸಿದ ‘ಕೃತ್ತಿಕಾ’ ಹಾಗೂ ಹೆಸರುಘಟ್ಟದ ಫಾರಂ ಹೌಸ್ ಬಿಟ್ಟರೆ ಬೇರೆ ಆಸ್ತಿ-ಪಾಸ್ತಿ ಏನೂ ಇಲ್ಲ. ಹೆಂಡತಿ, ಮಕ್ಕಳ ಹೆಸರಲ್ಲಿ ಆಸ್ತಿ ಮಾಡುವ ವಿಷಯ ಪಕ್ಕಕ್ಕಿರಲಿ, ಒಂದೇ ಒಂದು ಕಿಲುಬು ಕಾಸನ್ನೂ ಇಡಲಿಲ್ಲ.
‘ಹೆಗಡೆಯವರು ಕೂಡ ಆಸ್ತಿ ಮಾಡಬೇಕಿತ್ತು, ಮಕ್ಕಳನ್ನು ರಾಜಕೀಯದಲ್ಲಿ ಬೆಳೆಸಬೇಕಿತ್ತು ಎಂದು ನಿಮಗೆ ಯಾವಾಗಲಾದರೂ ಅನಿಸಿದಿದ್ದೆಯೇ’ ಎಂದು ಕೇಳಿದಾಗ ಶಕುಂತಲಾ ಅವರನ್ನು ಕೇಳಿದರೆ ಸಿಗುವ ಉತ್ತರ.
  ‘ಹೆಗ್ಡೆ ಅವರು ಮುಖ್ಯಮಂತ್ರಿಯಾದ ಮೊದಲ ದಿನವೇ ಕುಟುಂಬ ಸದಸ್ಯರೆಲ್ಲರನ್ನೂ ಮನೆಯಲ್ಲಿ ಒಟ್ಟಿಗೆ ಸೇರಿಸಿ ಒಂದು ಮಾತು ಹೇಳಿದರು. ಇವತ್ತಿಂದ ನೀವ್ಯಾರೂ ವಿಧಾನಸೌಧದ ಕಡೆ ತಲೆ ಹಾಕುವಂತಿಲ್ಲ. ನೌಕರಿ, ವರ್ಗಾವಣೆ, ಯೋಜನೆ, ಕಾಮಗಾರಿ ಗುತ್ತಿಗೆ ಅಂತ ಶಿಫಾರಸ್ಸು ಮಾಡುವಂತಿಲ್ಲ. ಸರಕಾರಿ ಕೆಲಸದಲ್ಲಿ ಮೂಗು ತೂರಿಸುವಂತಿಲ್ಲ. ಹಾಗೇನಾದರೂ ತಲೆ ಹಾಕಿದ್ದು ಗೊತ್ತಾದರೆ ಆ ಕ್ಷಣದಿಂದ ನನಗೂ ಮತ್ತು ನಿಮಗೂ ಸಂಬಂಧ ಇರುವುದಿಲ್ಲ.’
    ನೀವು ಎಷ್ಟೋ ಮಂದಿನಾ ಎಂಎಲ್‌ಎ, ಎಂಎಲ್‌ಸಿ ಮಾಡಿದ್ದೀರಿ. ಮಂತ್ರಿಗಳನ್ನಾಗಿಸಿದ್ದೀರಿ. ಬೇರೆ-ಬೇರೆ ಪದವಿ ಕೊಡಿಸಿದ್ದೀರಿ. ನನ್ನನ್ನೂ ಎಂಎಲ್‌ಸಿ ಮಾಡಿ ಎಂದು ಮಗಳು ಕೇಳಿದಾಗ  ಹೆಗ್ಡೆ ಅವರ ಉತ್ತರ,  
ಒಂದು ಕೆಲಸ ಮಾಡು. ನೀನು ಯಾವುದಾದರೂ ಹಳ್ಳಿಗೆ ಹೋಗಿ ಒಂದೆರಡು ವರ್ಷ ಅಲ್ಲಿನ ಜನರ ಸೇವೆ ಮಾಡು ಉತ್ತರ. ಆಮೇಲೆ ಚುನಾವಣೆಗೆ ಸ್ಪರ್ಧಿಸು. ನೀನು ಚನ್ನಾಗಿ ಕೆಲಸ ಮಾಡಿದ್ದರೆ ಅವರೇ ನಿನ್ನನ್ನು ಗೆಲ್ಲಿಸುತ್ತಾರೆ.
ಇವತ್ತೇ ಕೊನೆ, ಇನ್ನೆಂದಿಗೂ ನನ್ನ ನೆರಳಲ್ಲಿ ರಾಜಕೀಯ ಮಾಡುವ ಕನಸು ಕಾಣಬೇಡ. ನಾನು ಬದುಕಿರುವವರೆಗೂ ನೀವ್ಯಾರು ರಾಜಕೀಯಕ್ಕೆ ಬರುವಂತಿಲ್ಲ. ನಿಮ್ಮ ರಾಜಕೀಯ ಏನಿದ್ದರೂ ನಾನು ಸತ್ತ ನಂತರವಷ್ಟೇ.’
ಹೌದು. ಹೆಗಡೆಯವರ ಇಚ್ಛೆಯಂತೆ ಅವರು ಬದುಕಿರುವವರೆಗೂ ಪತ್ನಿ, ಮಕ್ಕಳು ರಾಜಕೀಯಕ್ಕೆ ಬರಲಿಲ್ಲ. 
 ರಾಮಕೃಷ್ಣ   ಹೆಗ್ಡೆ ಅವರ ಕುಟುಂಬ ಹೆಗಡೆ ಅವರ ಹೆಸರು ಹೇಳಿಕೊಂಡು ಏನು ಬೇಕಾ ದರೂ ಮಾಡಬಹುದಿತ್ತು. ರಾಜಕೀಯ ನೆಲೆ ಅರಸಬಹುದಿತ್ತು. ಆರ್ಥಿಕವಾಗಿ ಬೆಳೆಯಬಹುದಿತ್ತು. ಆದರೆ ಅವರೆಂದೂ ಹೆಗಡೆ ಅವರ ತತ್ವ-ಆದರ್ಶಗಳನ್ನು ಬಿಡಲಿಲ್ಲ. ‘ಯಾರಾದರೂ ಬಂದು ನಮ್ಮ ಯೋಗಕ್ಷೇವು ವಿಚಾರಿಸಬೇಕು ಎಂದು ನಾನು ಯಾವತ್ತೂ ಬಯಸಿಲ್ಲ. ಬಯಸುವುದೂ ಇಲ್ಲ. ಅಷ್ಟೇ ಅಲ್ಲ ನಾನಾಗಲಿ, ನನ್ನ ಮಕ್ಕಳಾಗಲಿ ಯಾರ ಮನೆ ಬಾಗಿಲಿಗೂ ಹೋಗಿಲ್ಲ, ಹೋಗುವುದೂ ಇಲ್ಲ’ ಎಂಬ ಶಕುಂತಲಾ ಅವರ ಹೇಳಿಕೆಯಲ್ಲೇ ಹೆಗಡೆ ಅವರ ಆದರ್ಶ ಮನೆ ಮಾಡಿದೆ.
     ಈ ದಿನ ಹೆಗಡೆಯವರು ಇದ್ದಿದ್ದರೆ ಅವರಿಗೆ ೮೫ ವರ್ಷ ತುಂಬುತ್ತಿತ್ತು.ಹೆಗ್ಡೆ  ಅವರ ಜನ್ಮದಿನವಾದ ಇಂದು ಈ   ಲೇಖನದ ಮೂಲಕ ರಾಜಕೀಯ ಇಚ್ಚಾಶಕ್ತಿ ಹೊಂದಿದ್ದ ಹಾಗು ಮೌಲ್ಯಗಳಿಗೆ ಮಹತ್ವ ಕೊಡುತಿದ್ದ ರಾಜಕಾರಣಿಗೆ ನನ್ನ ನಮನಗಳನ್ನು ಸಲ್ಲಿಸುತ್ತಾ,ಇಂದಿನ ರಾಜಕಾರಣಿಗಳಿಗೆ  ಅವರ ಮೌಲ್ಯಗಳು ಅದರ್ಶವಾಗಲೆಂದು ಆಶಿಸುವ..........

ನಿಮ್ಮಯ
ರಾಘವೇಂದ್ರ ತೆಕ್ಕಾರ್ 

Sunday, August 28, 2011

Scams of India - A Summary Of Scams from 1947 to 2010

ಅರ್ಧಾಂಬರ್ಧ  ನಮಗೆಲ್ಲರಿಗೂ ಗೊತ್ತಿರುವ ದೇಶದ  ಹಗರಣಗಳ ಸರಮಾಲೆಯ ಪೂರ್ಣ ಚಿತ್ರಣಕ್ಕಾಗಿ, ಕೆಳಗಿನ ಲಿಂಕ್ ಕ್ಲಿಕ್ಕಿಸಿ ಅದರಲ್ಲಿನ  ವಿಡಿಯೋ ಒಮ್ಮೆ ನೋಡಿ ಕೊನೆಗೆ ಸಿಕ್ಕುವ ಸಂಖ್ಯೆಯನ್ನು ಓದಿ ಹೇಳಲು ಪ್ರಯತ್ನಿಸಿ.

ಲೋಕಪಾಲ ಜನಕ ಡಾ. ಲಕ್ಷ್ಮಿ ಮಲ್ ಸಿಂಘ್ವಿ

ಡಾ. ಲಕ್ಷ್ಮಿ ಮಲ್ ಸಿಂಘ್ವಿ
1963ರಲ್ಲಿ ಭ್ರಷ್ಟಾಚಾರ ವಿರುದ್ಧದ ಸರಕಾರಿ ವ್ಯವಸ್ಥೆಯೊಂದನ್ನು ಮೊದಲ ಬಾರಿಗೆ ಅನುಷ್ಠಾನಕ್ಕೆ ತರುವ ಪ್ರಯತ್ನದಲ್ಲಿದ್ದಾಗ ಸಂಸತ್ತಿನಲ್ಲಿ ಅದಕ್ಕೆ 'ಲೋಕಪಾಲ' ಎಂದು ನಾಮಕರಣ ಮಾಡಿದ ಡಾ. ಲಕ್ಷ್ಮಿ ಮಲ್ ಸಿಂಘ್ವಿ ಅವರನ್ನು ಈ ಹೊತ್ತಿನಲ್ಲಿ ನೆನಪಿಸಿಕೊಳ್ಳುವುದು ಉಚಿತವೆನಿಸುತ್ತದೆ. ಲೋಕಪಾಲ ಜನಕ ಡಾ. ಲಕ್ಷ್ಮಿ ಮಲ್ ಸಿಂಘ್ವಿ

1931ರ ನವೆಂಬರ್ 9ರಂದು ರಾಜಸ್ಥಾನದ ಜೋಧ್ ಪುರದಲ್ಲಿ ಜೈನರ ಕುಟುಂಬದಲ್ಲಿ ಜನಿಸಿದ ಲಕ್ಷ್ಮಿ ಮಲ್ ಸಿಂಘ್ವಿ ಮುಂದೆ ಖ್ಯಾತ ವಕೀಲರಾದರು. ಸುಪ್ರೀಂ ಕೋರ್ಟಿನ ಹಿರಿಯ ವಕೀಲರೂ ಆಗಿದ್ದರು. ಅಲ್ಲಿಂದ ಮುಂದೆ ಸಂಸತ್ತಿಗೂ ಆಯ್ಕೆಯಾದರು. 1962-67ರಲ್ಲಿ ಮೂರನೇ ಲೋಕಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಜೋಧ್ ಪುರದಿಂದ ಆಯ್ಕೆಯಾದರು. ಸಂಸತ್ತಿನಲ್ಲಿ ಕಾಲಿರಿಸುತ್ತಿದ್ದಂತೆ 'ಲೋಕಪಾಲ'ಕ್ಕೆ ಅಂಕಿತರಾದರು.

ಮುಂದೆ 1998–2004 ಅವಧಿಯಲ್ಲಿ ಬಿಜೆಪಿ ವತಿಯಿಂದ ರಾಜ್ಯಸಭೆಗೆ ಆಯ್ಕೆಯಾದರು. ಬಹು ಭಾಷಾ ವಿದ್ವಾಂಸರಾಗಿದ್ದರು. ಲೇಖಕಿ ಶ್ರೀಮತಿ ಕಮಲಾ ಬೇದ್ ಇವರ ಧರ್ಮಪತ್ನಿ. ನ್ಯಾಯವಾದಿ ಡಾ. ಅಭಿಷೇಕ್‌ ಮನು ಸಿಂಘ್ವಿ ಇವರ ಹಿರಿಯ ಪುತ್ರ. ಪುತ್ರಿ ಅಭಿಲಾಷ ಸಿಂಘ್ವಿ ಸಹ ನ್ಯಾಯವಾದಿ. ಅನುಭವ್ ಸಿಂಘ್ವಿ ಮತ್ತು ಆವಿಷ್ಕಾರ್ ಸಿಘ್ವಿ ಅವರು ಡಾ. ಅಭಿಷೇಕ್‌ ಅವರ ಪುತ್ರರು. ಇನ್ನು ಆಶತಾ ಮತ್ತು ನಿಶತಾ ಲಾಲಬಾಯಿ ಅವರುಗಳು ಅಭಿಲಾಷ ಅವರ ಕುಡಿಗಳು.
1998ರಲ್ಲಿ ಪದ್ಮಭೂಷಣ ಪುರಸ್ಕಾರವನ್ನು ಸ್ವೀಕರಿಸಿದರು. ವಿ.ಕೆ. ಕೃಷ್ಣ ಮೆನನ್ ನಂತರ ಇಂಗ್ಲೆಂಡಿನಲ್ಲಿ ದೀರ್ಘ ಕಾಲ ಭಾರತದ ಹೈಕಮಿಷನರ್ ಆಗಿ ಸೇವೆ ಸಲ್ಲಿಸಿದ ಕೀರ್ತಿ ಇವರದಾಗಿದೆ. 2007ರ ಅಕ್ಟೋಬರ್ 6ರಂದು 75 ವರ್ಷದ ಡಾ. ಲಕ್ಷ್ಮಿ ಮಲ್ ಸಿಂಘ್ವಿ ನಿಧನರಾದರು.(ಕೃಪೆ:ದಾಟ್ಸ್ ಕನ್ನಡ)

ಪ್ರಜಾಪ್ರಭುತ್ವದ ಗೆಲುವು



ಕಡೆಗೂ ಅಣ್ಣಾ ಹಜಾರೆ ನೇತ್ರತ್ವದಲ್ಲಿ ನಡೆದ ಜನ ಲೋಕ್ಪಾಲ್ ಪರವಾದ ಈ ದೇಶದ ಜನತೆಯ ಹೋರಾಟಕ್ಕೆ ಗೆಲುವು ಲಭಿಸಿದೆ.ನಿನ್ನೆ ಸಂಜೆ ಸರ್ಕಾರದ ಒಪ್ಪಿಗೆ ಪತ್ರ ಅಣ್ಣಾ ಕೈಗೆ ಸಿಕ್ಕಿ ಸೂರ್ಯೋದಯದ ವರೆಗೆ ಕಾದ ಅವರು ಇಂದು ಉಪವಾಸ ಅಂತ್ಯಗೊಳಿಸಿದ್ದಾರೆ,ತನ್ಮೂಲಕ ದೇಶದ ಅಬಿವೃದ್ಧಿ ದಿಸೆಗೆ ಹೊಸ ಉದಯವನ್ನು ಕೊಟ್ಟಿದ್ದಾರೆ.ದೇಶದ ಯುವಕರು ಜಾಗ್ರತಿಗೊಂಡಾಗ ಸಮಾಜದ ಅಬಿವೃದ್ಧಿ   ಸಾದ್ಯ ಎಂಬುದು ಈ ಹೋರಾಟ ಮನವರಿಕೆ ಮಾಡಿ ಕೊಟ್ಟಿದೆ.




 ಒಂದು ಸಾಮಾಜಿಕ ಕಳಕಳಿಯ ವಿಷಯಕ್ಕಾಗಿ ದೇಶವೇ ಒಂದು ದ್ವನಿಯಾಗಿದ್ದು,ಹೋರಾಟದ ಹಾದಿಯಲ್ಲಿ ಸಂಪೂರ್ಣ ಗಾಂಧೀಜಿ ತೋರಕೊಟ್ಟ ಅಹಿಂಸ ಮಾರ್ಗ ಮೆರೆದಿದ್ದು,ಎಲ್ಲೂ ಕೂಡ ಸಣ್ಣ ಅಹಿತಕರ ಘಟನೆ ನಡೆಯದೆ ಗೆಲುವು ಪಡೆದಿದ್ದು, ವಿಶ್ವಕ್ಕೆ ಮತ್ತೊಮ್ಮೆ ಅಹಿಂಸಾ  ಹೋರಾಟದ ವಿರಾಟ ದರ್ಶನ ಹೇಗಿರುತ್ತೆ ಎಂಬ ಅರಿವು ಮೂಡಿಸಿದ್ದು,ಮತದಾನದಲ್ಲಿ ಪಾಲ್ಗೊಂಡು ತಮ್ಮ ಕಾರ್ಯಗಳನ್ನು ಸರಕಾರದಿಂದ ಮಾಡಿಸಿಕೊಳ್ಳುವದಷ್ಟಕ್ಕೆ ಮಾತ್ರ ಸೀಮಿತವಾಗಿದ್ದ  ಜನರ ಮನೋಭಾವವನ್ನು ಬದಲಿಸಿ ನಿಜವಾದ ಪ್ರಜಾಪ್ರಭುತ್ವದಲ್ಲಿ ಪ್ರಜೆ ಹೇಗಿರಬೇಕು ಅನ್ನುವ ಅರಿವನ್ನು ದೇಶದ ಜನಸಾಮಾನ್ಯನಲ್ಲು  ಮುಡಿಸಿದ್ದು ,ಈ ಹೋರಾಟದ ವಿಶೇಷತೆಗಳು.ಇಷ್ಟೇ ಅಲ್ಲದೆ ನಿನ್ನೆ ನಡೆದ ಸಂಸತ್ ಅಧಿವೇಶನ, ಒಂದು ಪ್ರಜಾಪ್ರಭುತ್ವ  ದೇಶದ ಪಾರ್ಲಿಮೆಂಟು ಹೇಗೆ ನಡೆದುಕೊಳ್ಳಬೇಕೆಂಬ ಎಲ್ಲ ಅರಿವು ವಿಶ್ವಕ್ಕೆ ತೋರಿಸಿದಂತಿತ್ತು. ಹಿಂದಿನದೇನು ಇರಬಹುದು ಆದರೆ ನಿನ್ನೆ ನಡೆದ ಅಧಿವೇಶನದಲ್ಲಿ ಎಲ್ಲೂ ಕಹಿ ಭಾವನೆಗಳು ವ್ಯಕ್ತವಾಗದೇ ಒಕ್ಕೊರಲಿನ ಅಭಿಪ್ರಾಯ ದೇಶದ ಹಿತಕ್ಕಾಗಿ ವ್ಯಕ್ತವಾಯಿತಲ್ಲ ಇದನ್ನು ಪ್ರಜಾಪ್ರಭುತ್ವದ ಗೆಲುವು ಅನ್ನುತ್ತೇನೆ.
        
ಹೋರಾಟವೆಂದರೆ ಹೇಗಿರಬೇಕು ಅನ್ನುವ ದಾರಿ ದೊರೆತಾಗಿದೆ,ಈ ದಾರಿಯನ್ನು ಮುನ್ನಡೆಸಬೇಕಾಗಿದೆ.ಬ್ರಷ್ಟಾಚಾರ ವಿರುದ್ದ ಹೋರಾಟಕ್ಕೆ ಈ ಗೆಲುವು ಒಂದು ಹೆಜ್ಜೆ ಮುನ್ನಡೆ ಅಷ್ಟೆ, ಕ್ರಮಿಸಬೇಕಾದ ದಾರಿ ದೊಡ್ಡದಿದೆ.ದೇಶದ ಬ್ರಷ್ಟಾಚಾರದ ಬುಡವಾದ ಮತದಾನ ವ್ಯವಸ್ಥೆ ಸರಿಪಡಿಸಬೇಕಿದೆ,ದೇಶದ ಹಳ್ಳಿಗಳ ಅಬಿವೃದ್ಧಿಗಾಗಿ ಗ್ರಾಮ ಪಂಚಾಯತ್ ವ್ಯವಸ್ಥೆ ಬಲಪಡಿಸಬೇಕಿದೆ,ಕೃಷಿ ಪ್ರಧಾನ ದೇಶವಾದ ನಮ್ಮಲ್ಲಿ ದೇಶದ ರೈತರಿಗೆ ಅನುಕೂಲ ಒದಗಿಸಿ ಕೃಷಿ ಪ್ರಧಾನವೆಂಬುದರ ನಿಜ ಅರ್ಥವನ್ನು ಕಂಡುಕೊಳ್ಳಬೇಕಾಗಿದೆ.ದೇಶದ ನ್ಯಾಯಾಂಗ ವ್ಯವಸ್ಥೆಗೆ ಚುರುಕು ಮುಟ್ಟಿಸಬೇಕಾಗಿದೆ.ಅದಕ್ಕಾಗಿ ಮತ್ತಿನ್ನೊಂದಿಷ್ಟು ಹೋರಾಟದ ಅಗತ್ಯತೆಗಳು ಈ ದೇಶಕ್ಕೆ ಇವೆ.

 ಈ ದೇಶದ ಯುವ ಜನತೆ ಗಾಂಧೀಜಿ ಅವರನ್ನು ಅಣ್ಣಾ ಹಜಾರೆಯವರಲ್ಲಿ ಕಂಡರು.ಕೆಲವರು ಅದನ್ನು ಅತಿಷಯೋಕ್ತಿ ಎಂದು ಕರೆದರೂ ಕೂಡ, ಗಾಂಧೀಜಿ ಹಾದಿಯಲ್ಲಿ ನಡೆಯುತ್ತೇನೆ ಎಂದ ಅಣ್ಣಾ ಅವರು ಈ ಹೋರಾಟದ ಮಟ್ಟಿಗೆ ಅದ ನನಸಾಗಿಸಿದರು.ಒಟ್ಟಿನಲ್ಲಿ ದೇಶದ ಸಮಸ್ತ ಜನತೆಯಲ್ಲಿ ದೇಶಾಭಿಮಾನದ ಕಿಚ್ಚು ಉದ್ದೀಪನ ಗೊಳಿಸುವಲ್ಲಿ ಸಫಲರಾದರು,ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೊಸ್ಕರ ಇರುವ ವ್ಯವಸ್ಥೆಯಲ್ಲಿ ಪ್ರಜೆಯೆ ಪ್ರಭು ಎಂಬುದನ್ನು ವಿಶ್ವಕ್ಕೆ ಈ ಹೋರಾಟ ಸಂದೇಶ ರವಾನಿಸಿತು.ಒಟ್ಟಿನಲ್ಲಿ ಪ್ರಜಾಪ್ರಭುತ್ವದ  ಗೆಲುವಾಯಿತು.ಇಂತಹ ಪ್ರಜಾಪ್ರಭುತ್ವದ ಗೆಲುವಿಗೆ ಅಣ್ಣಾ ಹಜಾರೆ,ಸಂತೋಷ್ ಹೆಗ್ಡೆ ಅಂತವರ ಮಾರ್ಗದರ್ಶನ ಸದಾ ಈ ದೇಶಕ್ಕೆ ಲಭಿಸಲಿ ಎಂಬ ಆಶಯ ನನ್ನದು.
ನಿಮ್ಮವ,
ರಾಘವೇಂದ್ರ ತೆಕ್ಕಾರ್.




Saturday, August 27, 2011

ಯಡ್ಡಿಯ ಬೇನೆಗಳ ನಾಟಕ ಪ್ರಾರಂಭ.

ಭೂ ಹಗರಣಕ್ಕೆ ಸಂಬಂಧಿಸಿದಂತೆ ಜ್ವರದ ನೆಪವೊಡ್ಡಿ ಇಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ನ್ಯಾಯಾಧೀಶರು ಹರಿಹಾಯ್ದಿದ್ದಾರೆ. ಸೋಮವಾರ, ಆ.29ರಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಲೇಬೇಕೆಂದು ನಿರ್ದೇಶನ ನೀಡಿದ್ದಾರೆ.

ಈ ಪ್ರಕರಣದಲ್ಲಿ ಉಳಿದ 14 ಜನ ಆರೋಪಿಗಳೊಂದಿಗೆ ಯಡಿಯೂರಪ್ಪ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿತ್ತು. ಆದರೆ, ಹೃದಯದ ತೊಂದರೆ, ಹೈ ಬಿಪಿ, ಮಧುಮೇಹ ಮತ್ತು ತೀವ್ರ ಜ್ವರದಿಂದ ಯಡಿಯೂರಪ್ಪ ಬಳಲುತ್ತಿರುವ ಕಾರಣ ಅವರು ಖುದ್ದಾಗಿ ಹಾಜರಾಜಲು ಇಂದು ಮಾತ್ರವಲ್ಲ ಮುಂದೆಯೂ ವಿನಾಯಿತಿ ನೀಡಬೇಕು ಎಂದು ಅವರ ಪರ ನ್ಯಾಯವಾದಿ ರವಿ ಬಿ ನಾಯಕ್ ಅವರು ಮನವಿ ಮಾಡಿಕೊಂಡಿದ್ದರು.

ಇದನ್ನು ಸರಕಾರಿ ವಕೀಲ ಸಿಎಚ್ ಹನುಮಂತರಾವ್ ಅವರು ವಿರೋಧಿಸಿ, ಇಂಥ ಕಾಯಿಲೆಗಳು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂದ ಅವರು ಖುದ್ದಾಗಿ ಹಾಜರಾಗಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು. ಇದನ್ನು ಪುರಸ್ಕರಿಸಿರುವ ನ್ಯಾಯಾಧೀಶರು ಆ.29, ಸೋಮವಾರ ಯಡಿಯೂರಪ್ಪ ನಾಯ್ಯಾಲಯಕ್ಕೆ ಹಾಜರಾಗಬೇಕೆಂದು ನಿರ್ದೇಶನ ನೀಡಿದ್ದಾರೆ.
 ಜೊತೆಗೆ, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಅಕ್ರಮಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಸೋಮವಾರ ಕರ್ನಾಟಕ ಹೈಕೋರ್ಟ್ ಎದುರಿಗೆ ಬರುತ್ತಿರುವುದರಿಂದ, ಇಂದು ನ್ಯಾಯಾಲಯಕ್ಕೆ ಹಾಜರಾದರೆ ಆ ಅರ್ಜಿ ಅನೂರ್ಜಿತವಾಗುತ್ತದೆ. ಈ ಕಾರಣದಿಂದ ಅವರು ನ್ಯಾಯಾಲಯಕ್ಕೆ ಬರುವುದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬ ವಾದವನ್ನು ಹನುಮಂತರಾವ್ ಮಂಡಿಸಿದ್ದರು.(ಕೃಪೆ:-ಥಾಟ್ಸ್ ಕನ್ನಡ)

ಹೆಗ್ಡೆ ತನಗೆ ಕಿರಿಕ್ ಮಾಡ ಬಂದ ಕುಮಾರ ಅಣ್ಣನ್ ಬುಡಕ್ಕೆ ಕೈ ಹಾಕಿದ್ರಂತೆ!!!!!!!!

              .         ಸಂತೋಷ್ ಹೆಗ್ಡೆ ತಮ್ಮ ಬಗ್ಗೆ ಕಿರಿಕ್ ತೆಗ್ದ ಕುಮರಸ್ವಾಮ್ಯಿಗೆ ಸರಿಯಾದ ಗೂಸಾ ಈ ದಿನ ಫ್ರೀಡಂ ಪಾರ್ಕ್ನಾಗೆ ಕೊಟ್ಟವ್ರೆ ಅನ್ನ ಸುದ್ದಿ ಬಂದೈತೆ.ಅಷ್ಟಕ್ಕೂ ಕಿರಿಕ್ಕ್ ಏನೆಂದರೆ ಈ ಕುಮಾರ್ಸ್ವಾಮಿ , "ಸಂತೋಷ್ ಹೆಗ್ಡೆಯವರು ತಮ್ಮ ರಾತ್ರಿ ಕೆಲಸಕ್ಕೆ ಎಷ್ಟು ಖರ್ಚು ಮಾಡುತ್ತಾರೆ. ಅದರ ಲೆಕ್ಕ ಕೊಡ್ತಾರಾ? ಅಕ್ರಮ ಸಂಪಾದಿಸಿದ ಹಣವನ್ನು ರಾತ್ರಿ ಚಟುವಟಿಕೆಗಳಿಗೆ ವಿನಿಯೋಗಿಸುತ್ತಿದ್ದಾರಾ? ಅಂದಿತ್ತಂತೆ.
 ಅದಕ್ಕೆ ಸಂತೋಷ್ಹೆಗ್ಡೆ "ನನಗೆ 42 ವರ್ಷಗಳಿಂದ ಇರುವವಳು ಒಬ್ಬಳೇ ಹೆಂಡತಿ, ಒಂದೇ ಸಂಸಾರ. ನನಗಿರುವುದು ಒಂದೇ ಮನೆ. ನನಗೆ ರಾತ್ರಿ ಕೆಲಸ ಮಾಡುವ ಅವಶ್ಯಕತೆ ಇಲ್ಲವೇ ಇಲ್ಲ. ನನಗೆ ಯಾವುದೇ ಕೆಟ್ಟ ಚಟಗಳೂ ಇಲ್ಲ. ಇಲ್ಲಿಯವರೆಗೆ 1 ರು. ಕೂಡ ಲಂಚ ಪಡೆದಿಲ್ಲ."ಅಂತ ಅನ್ಬೇಕೆ,ಈ ಸ್ವಾಮಿ ರಾಧಿಕಾ  ಹಾಗು ತನ್ನ ಪಾಪು ನೆನಸ್ಕೊಂಡು ಮುಕ ಮೂತಿ ಒರೆಸ್ಕೊಂದು ಕುತಿದೆಯಂತೆ.ಅಲ್ಲ ಒಂದು ಸ್ವಲ್ಪ ದುಬಾರಿ ಎಣ್ಣೆ ಏನೋ ರಾತ್ರಿ ಊಟಕ್ಕ್ ಮುಂಚೆ ಟಾನಿಕ್ ತೆಗೊಳ್ಳ ವಿಸಿಯ ತೆಗೊಂಡು ಭಜನೆ ಮಾಡೋಣ ಅನ್ಕೊಂಡಿದ್ದಕ್ಕೆ ನನ್ನ ಬುಡಕ್ಕೆ ಕೈ ಹಾಕಿ ಏಳಿತಾರಪ್ಪೋ ಈ ಹೆಗ್ಡೆ ಅಂತ ತಲೆ ಮೇಲೆ ಕೈಯ ಹೊತಕೊಂಡು ಕುಂತೈತೆ ಅಂತೆ ಕುಮಾರ.


ಅಲ್ಲ ಯಾಕ್ಬೇಕಿತ್ತು ಅಂತೀನಿ ತನ್ನದೇ ಹರ್ದು ಉರ್ರ್ ಬಾಗ್ಲಗಿರ್ಬೇಕದ್ರೆ ಅಂತ ಸಿದ್ದನ್ ಹತ್ರ ಕೇಳಲಾಗಿ ಸಿದ್ದ ವಿಸಿಯಕ್ಕೆ ಎಂಟ್ರಿ ಕೊಟ್ಟ. ನಿಂಗ್ ಗೊತ್ತಾಗಲ್ಲಲೇ ಅವೆಲ್ಲ ಒಂದು ರಾಜಕೀಯ ತಂತ್ರ ಅಂದಾ,  ಸಿದ್ದ ಮುಂದುವರಿಸಿ ಈ ಕುಮಾರ
ಎಲ್ಲರೆದುರಿಗೆ ನಾ ಸಾಚಾ ಅಂತ ತೋರಿಸ್ಕೊಂದಿಲ್ವೇನ್ಲ? ಅವ್ರ ಮಾಗ್ನೇ ಈ ಹೆಗ್ಡೆ ಗಣಿ ಆರೋಪ ಹೊರಿಸಿಲ್ವೇನ್ಲ? ಈಗಲೋ ಆಗಲೋ ಅಂತ ಜೈಲ್ಗೆ ಹೋಗ್ತೀನಿ ಅನ್ನೋ ಪರಿಸ್ಥಿತಿ ತಂದ ಹೆಗ್ಡೆ  ಮ್ಯಾಗೆ ಕೋಪ್ ದಿಂದ  ಮಾತಿಗ್ ಬಂದು ಏನೋ ಅನ್ದೈತೆ.ಬದಲಾಗಿ ಸರಿಯಾಗಿ ಹೆಗ್ದೆರಿಂದ ಮಾತಿನ ತಪರಾಕಿ ತಿನ್ದೈತೆ ಕುಮಾರ ಅಷ್ಟೇ ಕಣ್ಲ ವಿಸಿಯ ಅಂದ. ನಮ್ಮ್ಜೋತೇನೆ ಕಟ್ಟೆ ಕಡೆಗ್ ಹೊಂಟ ಅಜ್ಜ ಒಂದು ಸಮಾದಾನ!!!!! ಅಂತ ಅನ್ತು ,ಏನಜ್ಜ ?ಅಂದೇ,ಅದೇ ಕುಮಾರ ಜೈಲ್  ಕಡೆ ತನ್ನ ಹೆಂಡ್ತಿ  ಕೂಡೆ ಹೋಗ್ತನಲ್ಲ ಪಾಪ ಯೆಡಿಯುರಪ್ಪಂಗೆ ಆ ಭಾಗ್ಯಾನು ಇಲ್ಲವಲ್ಲ !!!!!!!!ಅಂತ ಕಣ್ಣು ಮಂಜು ಮಾಡ್ಕೊಂಡ್ತು. 
ಸಿದ್ದ, ಪಾಪ........ ರಾಧಿಕಾ ಹಾಗು ಶೋಬಕ್ಕನ್ ಕತೆ ಏನೋ? ಅಂತ ನನ್ನೇ ಪ್ರಶ್ನೆ ಮಾಡ್ದ.
 ಇಂತೂ ಸಿದ್ದನ್ ಗೆಳೆಯ ರಾಘ್ಯ.

ಫ್ರೀಡಂ ಪಾರ್ಕಿನಲ್ಲಿ ಸಂತೋಷ್ ಹೆಗ್ದೆಯವರಿಂದ ಪ್ರಮಾಣವಚನ ಸ್ವೀಕರಿಸಿದ ಜನತೆ.

ಭ್ರಷ್ಟಾಚಾರದ ವಿರುದ್ಧ ಕರ್ನಾಟಕದ ಜನತೆಯನ್ನು ಪ್ರಖರವಾದ ಭಾಷಣಗಳ ಮುಖಾಂತರ ಬಡಿದೆಬ್ಬಿಸುತ್ತಿರುವ ನಿವೃತ್ತ ನ್ಯಾಯಮೂರ್ತಿ ನ್ಯಾ. ಸಂತೋಷ್ ಹೆಗ್ಡೆಯವರು ಶನಿವಾರ ಫ್ರೀಡಂ ಪಾರ್ಕಿನಲ್ಲಿ ನೆರೆದಿದ್ದ ಯುವಜನತೆಗೆ ಭ್ರಷ್ಟವಿರೋಧಿ ಪ್ರಮಾಣ ಬೋಧಿಸಿದರು.

ಫ್ರೀಡಂ ಪಾರ್ಕಿನಲ್ಲಿ ಜಮಾಯಿಸಿದ್ದ ಜನತೆ ಮಾತ್ರವಲ್ಲ ಇಡೀ ಕರ್ನಾಟಕ ಜನತೆಯೂ (ಕನಿಷ್ಠ ಈ ಬರಹ ಓದಿದವರು) ಇದ್ದಲ್ಲಿ, ನಿಂತಲ್ಲಿ, ಕುಂತಲ್ಲಿ ಭ್ರಷ್ಟಾಚಾರ ವಿರೋಧಿ ಪ್ರಮಾಣವನ್ನು ಸ್ವೀಕರಿಸಬೇಕೆಂಬ ಉದ್ದೇಶದಿಂದ  ಇಲ್ಲಿ ದಾಖಲಿಸುತಿದ್ದೇನೆ.

ಫ್ರೀಡಂ ಪಾರ್ಕಿಗೆ ಆಗಮಿಸಿದ್ದ ಉಪೇಂದ್ರ ಮೊದಲು ಪ್ರಮಾಣ ಬೋಧಿಸಿದರು. ಆದರೆ, ಹೆಗ್ಡೆಯವರು ಪ್ರಮಾಣ ಬೋಧಿಸಿ ನಾವೆಲ್ಲರೂ ಪ್ರಮಾಣ ಸ್ವೀಕರಿಸಬೇಕೆಂದು ಅವರು ಅಪೇಕ್ಷೆಪಟ್ಟಿದ್ದರಿಂದ ಸಂತೋಷ್ ಹೆಗ್ಡೆಯವರು ಪ್ರಮಾಣ ಬೋಧಿಸಿದರು. ಜನರೆಲ್ಲ ಒಕ್ಕೊರಲಿನಲ್ಲಿ, ವಿಧಾನಸೌಧಕ್ಕೂ ಮುಟ್ಟುವಂತೆ ಪ್ರಮಾಣ ಸ್ವೀಕರಿಸಿದರು.

ಹೆಗ್ಡೆ ಬೋಧಿಸಿದ ಪ್ರಮಾಣ ಇಲ್ಲಿದೆ

* ಜೀವಮಾನದಲ್ಲಿ ಲಂಚ ಕೊಡೋದಿಲ್ಲ, ಲಂಚ ಸ್ವೀಕರಿಸುವುದಿಲ್ಲ.
* ಎಲ್ಲ ಕಾನೂನು ನಿಯಮಗಳನ್ನು ಚಾಚೂತಪ್ಪದೆ ಪಾಲಿಸುತ್ತೇನೆ.
* ಎಲ್ಲರನ್ನೂ ಅತ್ಯಂತ ಗೌರವದಿಂದ ಕಾಣುತ್ತೇನೆ.
* ನಿಯಮ ಉಲ್ಲಂಘಿಸಿದರೆ ವಿಧಿಸಿದ ದಂಡ ತಪ್ಪದೆ ಪಾವತಿ ಮಾಡುತ್ತೇನೆ.
* ಸಾರ್ವಜನಿಕ ಸಭೆಗಳಲ್ಲಿ ಅತ್ಯಂತ ಶಿಸ್ತಿನಿಂದ ವರ್ತಿಸುತ್ತೇನೆ.
* ಸಾರ್ವಜನಿಕ ಸ್ಥಳಗಳಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುವುದಿಲ್ಲ.
* ತೆರಿಗೆಯನ್ನು ತಪ್ಪದೆ ಪಾವತಿ ಮಾಡುತ್ತೇನೆ.
* ಯಾವ ವಿಷಯಗಳನ್ನೂ ಮುಚ್ಚಿಡುವುದಿಲ್ಲ.
* ಯಾವುದೇ ಕೆಲಸವಾದರೂ ಕಾನೂನುಬದ್ಧವಾಗಿಯೇ ಮಾಡುತ್ತೇನೆ.
* ಭಾರತ ಪ್ರೀತಿಸುತ್ತೇನೆ, ದೇಶದ ಒಗ್ಗಟ್ಟನ್ನು, ಪ್ರಜಾಪ್ರಭುತ್ವವನ್ನು ಗೌರವಿಸುತ್ತೇನೆ, ಪಾಲಿಸುತ್ತೇನೆ.
 (ಕೃಪೆ:-ಧಟ್ಸ್ ಕನ್ನಡ )

अपने अपने सच -अंशुमान अवस्थी लिका हुवा मेरा पसंद कहानी

पने अपने सच
प्रतीक... क्या देख रहे हो? कोई अजनबी कान में फुसफुसा गया
'उ..म..म..... मैंने लगभग नींद से जागते हुए कहा नहीं कुछ नही.....बस उगते सूरज को देख रहा हूं ...।काफी मनमोहक दृश्य है। दुनिया की भीड में लोग कितने बेमानी नजर आते हैं। सिर्फ कुछ ही चीजे ज़ानी पहचानी रह गयी हैं यह उगता सूरज उनमें से एक है। मैने अपने आसपास देखने की कोशिश की पर कोई नजर नहीं आया।
दिन में कितने लोग तुम्हारी आंखों के सामने से निकल जाते हैं, किस किस को याद रखते होसुबह घर से निकलते हो, शाम को लौट आते हो, सारा दिन लोगों से मिलते हो, किसी को याद रखते हो किसी को भूल जाते होपर घर लौट आने के बाद ये सब कुछ कितना गैरजरूरी सा लगता है
हुह... सब कुछ कपडों के साथ खूंटी पे टांग देते हो पर परछांई कहीं टंगती है, परछाईं तो हमेशा रहती है - कंधे पर लदे बेताल की तरह विचारों का क्या है, आदमी अकेला हो और व्हिस्की का एक पैग हाथ में हो तो, वो भी मस्तिष्क में उमडने ही लगते हैंवैसे भी कोई प्रतिबन्ध तो है नहीं
खैर........ आजकल लोग अपने हिस्से की रोशनी, हवा, पानी आदि आदि अपनी अपने साथ अपनी जेबों में लेकर घूमते हैंएक जेब से सिगरेट निकाली और दूसरी से सूरज.. बस..फिर भला ऐसे में किसी दूसरे से क्या मतलब
यदि जेबों में नहीं है तो वो है जन्म और मृत्यु...पर फर्क क्या पडता है... न अपनी खुशी आये न अपनी खुशी चले..... ..दम भी नहीं घुटता...। और कितनी सीमायें अपने कपडों पर जेबों की तरह टांकी जा सकती हैं
''सीमायें हैं तो सही पर लोग खुश भी तो हैं और........। ''
''बात केवल खुशी की नहीं है, बात है टुकडा टुकडा जिन्दगी और सीमाओं में बटी खुशी की ...।''
''पेट की सीमा के बारे में क्या खयाल है, भूखे से पूछो वो बतायेगा, वैसे भी सीमायें पूरी तरह सापेक्ष हैं। कोई खुश है और कोई नहीं है।''
''माना कि सीमायें सापेक्ष हैं पर क्या व्यक्ति व्यक्ति का व्यक्तित्व और उसका अस्तित्व केवल पेट तक ही सीमित है? उसके आसपास कुछ सरोकार हैं........।''
''व्यक्तित्व भी ठीक है, अस्तित्व भी ठीक है और सरोकार भी समझ में आते हैं पर यदि ये सीमायें बनी हैं तो कोई न कोई कारण तो अवश्य ही होगाआज जब सब लोग अपनी अपनी जेबों में हाथ डालकर घूम रहे हैं तो इसका भी कारण है .....कि कोई दूसरा जेब न काट ले...। भई..लोग तो इस पर विश्वास भी करते हैं''
''ये विश्वास तो व्यक्तिगत है पर व्यक्तिगत विश्वास की जगह समाज में तो होती नही है, व्यक्ति कोई इकाई नहीं हैसब एक दूसरे से जुडे हैंसबका अपना अपना अस्तित्व है पर अपनी जगह पर जहां बात समुदाय या समाज की होती है वहां तुम्हारा कोई अलग अस्तित्व नहीं रह जातागत विश्वास व्यक्ति को अपने तक ही सीमित रखने चहियेबात सीमायें खींचने की और टुकडों में......।''
अचानक नजर घडी पर पड ग़यीसात बज रहे थेसिगरेट पीने का मन हो रहा था पर जेब में रखे सूरज की याद आते ही हंसी आ गयीतपन घर आ गया होगातेज कदमों से चल पडातपन बाहर बरामदे की धूप में बैठा अखबार पढ रहा थागेट खुलने की आवाज शायद उसने सुन ली थी सामने से अखबार हटाकर उसने मेरी तरफ देखा और फिर अखबार सामने टेबल पर रख दिया
''कोई खास खबर नहीं है क्या? '' मैंने पास पडी क़ुर्सी पर बैठते हुए पूछा।
''खास खबर तो मैं लाया हूं।''
''क्या?''
''जन्मेजय को जानते हो, मिश्रा की पार्टीमें मुलाकात हुई थी...।''
'हां, तो...।''
''उसने आत्महत्या कर ली भई..लोग तो इस पर विश्वास भी करते हैं।''
''उहूं.. अजीब बात है, वो तो काफी मस्त आदमी था।''
तपन कुछ नहीं बोलापरेशान दिखायी पड रहा थावैसे भी तपन काफी इमोशनल है पता नहीं किस किस के बारे में सोचा करता हैलोगों के अपने अपने विश्वास हैं, अपनी अपनी मान्यताएं हैं जीवन और मृत्यु को लेकरजिन्दा रहने या न रहने के लोगों के पास व्यक्तिगत कारण हैं, कम से कम मैं तो ऐसा ही सोचता हूंपर तपन ऐसा नहीं सोचता, मैं जानता हूं
''...व्यक्तिगत विश्वास का आधार क्या है? हमारे सरोकार हमें एक दूसरे से किस हद तक जोडते हैं?'' जीने का अर्थ क्या केवल कैलकुलेटर के बटन दबाने की तरह है जहां एक और एक मिलकर दो होते हैं, फिर एक और एक ग्यारह करने वाले लोग भी तो हैंहमारे सरोकार यदि व्यापक नहीं हैं तो ..... और व्यापकता की सीमा क्या है? फिर सीमाएं...।''
''बकवास है...।'' उसी अजनबी की आवाज।
किसी ने सही कहा है कि कुछ बातें फालतू होती हैंअचानक तपन का चेहरा याद आ गया और फिर जन्मेजय की मौतमुझे लगा कि जन्मेजय की मौत पर मेरी प्रतिक्रिया से तपन को मायूसी हुई हैवो चाहता था कि मैं कुछ कहूं, कुछ और कहूंपर क्या? अब कहा या किया ही क्या जा सकता था मैं न तो अपने व्यक्तिगत मामलों पे किसी से बात करता हूं और न ही दूसरों के मामलों में हस्तक्षेपयदि कोई दूसरा ऐसा करता है तो मुझे पसन्द नहींजन्मेजय की मौत उसका नितान्त व्यक्तिगत मामला था और ऐसे में तपन मुझसे किस तरह की प्रतिक्रिया की अपेक्षा करता है, मैं समझ नहीं पाया
''दुःख नहीं हुआ जन्मेजय की मौत का...?''
''
नहींअब कोई वजह भी तो होनी चाहिये।''
''
इंसानियत के नाते भी नहीं...।''
''दुःख तो नहीं पर अफसोस अवश्य है।''
''
किस बात का...?''
''
यही कि वो एक भला अदमी था और उसे अभी और जीना चाहिये था।''
''
बकवास है...।''
''
बकवास क्या है?''
''मैं जन्मेजय को व्यक्तिगत रूप से नहीं जानता। लेकिन हर ऐसी मृत्यु के पीछे दुनिया से छूट कर अलग रह जाने की विडम्बना ही होती है। क्यों इतना आत्मकेंद्रित हो गया है जीवन...।हर आदमी...।अपनी जिन्दगी टुकडे टुकडे क़र के, उसे अपनी जेबों में भर के कोई भला कितने दिन जी सकता है। जन्मेजय की मौत के जिम्मेदार सब हैं और खुद जन्मेजय भी।''
लगा कि कोई सर्द आवाज झुरझरी बनकर रीढ क़ी हड्डी में उतर गयी होमुझे अपने कानों में सूंऽऽऽऽ की आवाज स्पष्ट सुनायी दे रही थीमन हुआ कि पकड क़र जान से मार दूंपर किसे?
शायद जन्मेजय ने भी यही सोचा होगा
अंशुमान अवस्थी
ग्राफिक्स पूर्णिमा वर्मन
   

Altimate product HP Compaq 8200 Elite will launch shortly.

HP Setup new All in 1 Computer and it will launch shortly. Its have great features and called as 21 st century computer in the world. so that here i am  mentioning more about this.

The HP Compaq 8200 Elite Series incorporates the newest business PC technology with HP’s designs, and specific programs and services created for business including stable and lengthy life cycles, and security and remote management solutions. The result is our best performing line of business PCs to date.
Superior business PC technology
The latest innovations combined with HP’s engineering excellence and new BIOS designs make the HP Compaq 8200 Elite Series the right choice for your business today and tomorrow.
Featuring Intel® 2nd Generation Core™ pro™ processors providing hardware-based remote management solutions that enable a stable, secure and reliable IT infrastructure.
Configure your PC with industry-standard data drives and devices including a Blu-ray Writer Drive and Media Card Reader that can accommodate up to 22 formats. Other options for your business include discrete graphics options, wireless networking.
Includes HP Protect Tools™ Security Suite that helps to provide protection for your PC and verifies it does not become a point of vulnerability. HP Protect Tools™ is flexible allowing you to adopt only the modules that meet your security needs.

Efficient PC technologies for the environment

HP has designed this product with materials free of brominated flame retardants (BFRs) and polyvinyl chloride (PVC) to help support your environmental initiatives.
Reduce your impact on the environment and help lower operating costs with ENERGY STAR® qualified models certified as EPEAT® Gold.
Easily optimize the PC’s power settings with HP’s exclusive Power Assistant application. You’re in control with HP Elite Series’ energy efficient options.

Stable, useful designs
There is an HP Elite Series form factor to fit your workspace and performance requirements. Choose the Ultra-Slim Desktop with flexible mounting options, Small Form Factor, Micro tower, or Convertible Mini tower for the most expansion flexibility.
With business needs in mind, we’ve placed line in and line out ports and USB ports up front for convenience. Connect dual external monitors via VGA and Display Port connectors to help you work more productively.
When your deployments are scheduled over a lengthy period of time it’s good to know you’ll be able to get the same chassis over multiple deployments. Plan for a minimum of 15 months availability for the HP Compaq 8200 Elite Series.
Protected by HP Services, including standard warranties geared toward corporate uses available. You’ll get fast, responsive support for timely problem resolution with the HP Standard Limited Warranty that provides onsite service.

Now a days technology is every where we are using for fulfill our daily needs, new inventions are rapidly going on, there result is HP Compaq 8200 Elite.you can purchase it by just rupees 45.644.00.you can take satisfied feeling by its enough Features. For Demo please click bellow.
http://h71016.www7.hp.com/html/interactive/8200elite/model.html

Yours,
Raghavendra Thekkar

Friday, August 26, 2011

ಊರ ಕಟ್ಟೆಯ ಮೇಲೆ ರಾಹುಲನ ಬಗ್ಗೆ ಸಿದ್ದನ ವಿಚಾರಗಳು

                          ಇವತ್ತು ನಮ್ಮಗಳಿಂದಾಗಿ ದೊಡ್ಡವರು ಅನಿಸಿಕೊಂಡವರು ಕೂತ್ಕೋ ಸಂಸತ್ತಿನಾಗ ಈ ರಾಹುಲ್ ಗಾಂದಿ ಬಾಷಣ  ಬಿಗಿದಾನಂತೆ.ಅವ ಹೇಳೋ ಪ್ರಕಾರ ಅಣ್ಣಾವ್ರು ಅನ್ನ ನೀರು ಬಿಟ್ಟು ಅದೇ ಅಣ್ಣಾ ಹಜಾರೆ  ಲೋಕ್ಪಾಲ್ ಕಾನೂನು ಬರಬೇಕಂತ ಕುತ್ಕೊಂಡಿದ್ದಾರಲ್ಲ, ಆ ಕಾನುನಿಂದ ಹಣ ತಿನ್ನೋ ದೊಡ್ಡ ದೊಡ್ಡ ಹೆಗ್ಗಣಗಳನ್ನ ಹಿಡಿಯಲು ಸಾದ್ಯವಿಲ್ಲ ಅಂದನಂತೆ.ಅಲ್ಲ ಹೆಗ್ಗಣ ಹಿಡಿಯಲು ಬೋನೇ ಇಟ್ಟಿಲ್ಲ ಅದೆಂಗೆ ಆ ವಯ್ಯಂಗೆ ಈಗಲೇ ಗೊತ್ತಾಯ್ತು ಅಂತ ನಾ ಕಾಣೆ.ಈ ವಿಸಿಯ ಕೇಳಿ ಅಣ್ಣಾ ಮಂದಿ ಗರಂ ಅಗವ್ರಂತೆ,ಅದೇ ಶಾಂತಿಭೂಷಣ್ ಅಂತ ಒಬ್ಬ್ರವ್ರಲ್ಲ ಅವ್ರು ರಾಹುಲನನ್ನ ಹಿಂದಿನಾಗೆ ಬೆವಕುಫ್ ಅಂತ ಬೋದ್ರನ್ತಪ್ಪ.ರಾಹುಲ್  ನಮ್ಮ ಬೋನು ಹೆಂಗಿದೆ ಅಂತ ನೋಡೇ ಇಲ್ಲ,ಆಗ್ಲೇ  ಮಕ್ಲಾಟ ಅಡ್ತವ್ನೆ, ಮೊದಲು ನಾವು ನಿಮ್ಮಂತ ಹೆಗ್ಗಣ ಹಿಡಿಯೋ ಕಾನೂನು ಹೆಂಗೆ ಮಾಡಿವಿ ಅಂತ ಓದ್ಕೊಂಡ್ ಬಾ ಅಂತ ಗದ್ರಿಸಿದ್ದಾರಂತೆ.ಪಾಪ ಯಾಕ್ಬೇಕಿತ್ತು ರಾಹುಲ್ಗೆ, ಸುಮ್ನೆ ಅಮುಲ್ ಹಾಲು ಕುಡಿಯೋ ಬದಲಿಗೆ ಇದರ ಉಸಾಬರಿ ಅಂತ ಜಗಲಿಕಟ್ಟೆ ಮಂದಿ ಪಿಸ ಪಿಸ ಅಂತ ಮತೋಡ್ಕೊತಿದ್ದ್ವು
           ಅಲ್ಲ ಆ ಯಪ್ಪಾ ರಾಹುಲ್ ಒಂದು ಕಡೆ ತನ್ನ ಬಷ್ನಾದಾಗೆ ಭ್ರಷ್ಟಾಚಾರದಂಥ ಬೃಹತ್ ಸಮಸ್ಯೆ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ವೇದಿಕೆ ಒದಗಿಸಿದ ಅಣ್ಣಾ ಹಜಾರೆಗೆ ದನ್ಯವಾದ ಅಂತನು ಹೇಳುತ್ತಾ ಅಣ್ಣಾ ಹಜಾರೆ ಬೋನು ಕಾನೂನು ಬೇಡ ಅಂತಲೂ ಹೇಳ್ತವ್ನೆ,ಇದು ಹೆಂಗ್ಲ ಅಂತ ಜಗಲಿಕಟ್ಟೆ ವಿಮರ್ಶೆಗಾರ ಸಿದ್ದನ್ ಹತ್ರ   ಕೇಲ್ಲ್ದಾಗ ಅಂತವ್ನೆ ಪರ ದೇಶದ ಬ್ಯಾಂಕಿನಾಗೆ ಬಾರತದ ಹೆಗ್ಗಣ ಮಂದಿ ಇನ್ನೊಂದು ದೇಶ ಖರೀದಿ ಮಾಡೋವಷ್ಟು ದುಡ್ಡು ಇಟ್ಟವ್ರಲ್ಲ ಅದ್ರಾಗೆ ಈ ಯಪ್ಪನ ಕುಟುಂಬಕ್ಕೆ ಸೇರಿದ್ದು ಬಹಳಷ್ತಿವೆಯನ್ತಪ್ಪೋ.ಅದಕ್ಕಾಗಿ ಪ್ರಣಂ ಮುಕರ್ಜಿ ಆ ಬಗ್ಗೆ ಮತಡ್ತಿಲ್ಲ್ವಂತೆ.೨ಜಿ ಅಂತ ದೊಡ್ಡ ರಂಪವಾಗಿದ್ಯಲ್ಲ ಅದ್ರಾಗೆ ಹಿಂದ್ಗಡೆ ಇಂದ ಒಂದು ಬ್ಯಾಗ್ ರಾಹುಲ್ ಮತ್ತು ಇವ್ರಮ್ಮ ನ್ಗೆ ಇರ್ಲಿ ಅಂತ ಕೊಟ್ಟಿದ್ರಂತೆ,ಯಪ್ಪೋ ಯಪ್ಪೋ ಅನ್ಕೊಂಡೆ!! ಸಿದ್ದನ್ ಮಾತ್ ಕೇಳಿ.
                           ಸಿದ್ದ ಮಾತು ಮುಂದುವರಿಸಿ ಬೋಸ್ಟನ್ ಅನ್ನೋ ಹೊರ ದೇಶದಾಗೆ ಅಲ್ಲಿನ ವಿಮಾನ ನಿಲ್ದಾನ್ದಾಗೆ ಸೆಪ್ಟೆಂಬರ್ ೨೦೦೧ರಾಗೆ ಸಿಕ್ಕಿಹಕೊಂಡಿದ್ದ ಈ  ಯಪ್ಪಾ!!!೧,೬೦,೦೦೦ ಡಾಲರ್ ಹೊಂತ್ಕೊಂಡು ನಮ್ಮದೇಶಕ್ಕೆ ಬರ್ತಿದ್ದ್ನಂತೆ.ಜೊತೆಗೆ  ಆ ದಿವ್ಸ ಅವ್ನ ಹುಡುಗಿ ಕೂಡ ಜೋತೆಯಲ್ಲಿದ್ದ್ಳಂತೆ.೯ ಗಂಟೆ ಕುರಿಸ್ಕೊಂಡಿದ್ದ ಪೋಲಿಸರು ಪ್ರದಾನಿ ವಾಜಪೈ ಹೇಳಿದ್ರುಂತ ಸಾಬಿತಾಗಿ ಕಳ್ಸಿದ್ರಂತೆ, ದೇಶಕ್ಕ ಬಂದ್ ಮೇಲೆ ಟಿವಿ ಮಂದಿ ಮುಂದೆ ಬಂದು ನನ್ನನ್ನ ೯ ಗಂಟೆ   ಕುರ್ಸುವಂಗೆ ಮಾಡಿದ್ದೂ ಭಾರತ ಸರ್ಕಾರ, ಅದಕ್ಕೆ ಭಾರತೀಯ ಅಂತ  ನಂಗೆ ಹೇಳ್ಕೊಲ್ಲಕ್ಕೆ ನಾಚಿಕೆ ಅಗ್ತಯ್ತೆ ಅಂತ ಹೇಳಿದ್ದನಂತೆ, ಹೆಂಗಿದೆ ಈತನ ವರಸೆ  ಅಂತ ಸಿದ್ದ ನನ್ನನ್ನು ಕೇಳಬೇಕಾದರೆ,ಗೋಸುಂಬೆ  ತರ ಗೋಣಾಡಿಸಿಕೊಂಡು ಕೂತೆ.ಅರೆಅರೆ ಸಿದ್ದ ಬಹಳಷ್ಟು ತಿಳ್ಕೊಂಡ್ ಅವ್ನೆ ಅಂತ ಅನುಸ್ತು. ಅಲ್ಲಲೇ ನಿಂಗೆ ಇದೆಲ್ಲ ಹೆಂಗೆ ಗೊತ್ತಾಗಿದ್ದು ಅಂದಾಗ ಮತ್ತೆ ಸಿದ್ದ ಶುರುಹಚ್ಚಿದ.
               ನಂಗೆ ಕಾಂಗ್ರೆಸ್ ಮಂದಿ ನಮ್ಮ ಯುವ ನಾಯಕ ಇವ್ನು ಅಂದಾಗ ಅವ್ನ ಬಗ್ಗೆ  ತಿಳ್ಕೊಬೇಕು ಅನಿಸ್ತು,ತಿಳ್ಕೊಲ್ಲ್ಬೇಕು ಅಂತಾದ್ರೆ ಅದೆಸ್ಟ್ ಹೊತ್ತಲೆ?ನಿನ್ಗೆಂಗ್ ಅವೆಲ್ಲ ಗೊತ್ತಾಗಬೇಕು ಬಡ್ದೆತ್ತದೆ ಅಂತ ನಂಗೆ ಬೊವ್ದ ಸಿದ್ದ.ಅವನ್ ಬಗ್ಗೆ ಬಹಳಷ್ಟು ಹೇಳಬೇಕಿದೆ ಅಂತಿದೆ, ನಿಂಗೆ ಅರ್ಥ ಅಗೊಂಗಿಲ್ಲ ಬಿಡು ಅಂತ ಅವ್ನೆ ಹೇಳ್ಕೊಂಡ.ಹಂಗಾರೆ ಹೆಗ್ಗಣ ಹಿಡಿಯೋ ಕಾನೂನು ಬಂದ್ರೆ ಈ  ಯಪ್ಪಂಗೆ ಸಾನೆ ಪ್ರಾಬ್ಲಮ್ ಅತದಲ್ಲ ಸಿದ್ದ ಅಂದಾಗ ಮತ್ತೆನಕ್ಕ್ಲ ಈ ಪಾಟಿ ಕತೆ ಹೇಳಿದ್ದು ಅಂತ ನನ್ನ ಗದರಿಸಿದ, ನಾನು ಇನ್ನ ಹೊರಡ್ತೀನಿ ಅವ್ವ ಪೇಟೆ ಕಡಇಂದ ಬರೋ ಹೊತ್ತಾಯ್ತು,ಮನೆಲಿಲ್ದಿದ್ದ್ರೆ ಬೋಯ್ತಾಳೆ ಅಂದಾ ಸಿದ್ದನಿನಿಗೆ ಕೊನೆ ಪ್ರಶ್ನೆ ಮುಂದಿಟ್ಟೆ, ಅಲ್ಲ ಸಿದ್ದ ಈಗ ಕಾಂಗ್ರೆಸ ಪಕ್ಷದಾಗ ಸ್ವಲ್ಪ ಮೆದುಳು  ಅಂತ  ಇದ್ದರೆ ಅದು ರಾಹುಲ್  ಅವನಿಗೆ ಅಲ್ವ!!!? ಈಗ ಗೋಣಾಡಿಸುವ ಸರದಿ ಸಿದ್ದನ್ದಾಗಿತ್ತು. ಕಟ್ಟೆ ಮಂದಿ ನಮ್ಮಚರ್ಚೆ ಕೇಳಿಸಿಕೊಂಡು ಮಾತು ಮರೆತು ಸಿದ್ದನ ಕಡೆಗೆ ತಮ್ಮ ಎಲೆ ಅಡಿಕೆ ತುಂಬಿದ ಬೊಚ್ಚು ಬಾಯಿ ತೆರೆದು ನೋಡಾಕೆ ಹಿಡಿದವು. ಕಟ್ಟೆ ಬದಿಯಾಗ ಬುಟ್ಟಿ ಹೆಣೆಯುತಿದ್ದ ವಾರಿಜ ಕಾಂಗ್ರೆಸ್ ಶಬ್ದ ಕೇಳಿ, ನಾನು ಕೈಗೆ ಒತ್ತುತ್ತೆನ್ರಿ ಎಷ್ಟು ಕೊಡ್ತಾರಂತೆ ? ಎಂಬ ಹೊಸ ಪ್ರಶ್ನೆ ಮುಂದಿಟ್ಟಳು.
ಇಂತೂ ಸಿದ್ದನ್ ಗೆಳೆಯ ರಾಘ್ಯ.

   .

Wednesday, August 24, 2011

ಧರ್ಮ ಜಾತಿಗಳ ಬಗ್ಗೆ ವಿಮರ್ಶೆ ನಮಗೆ ಅಗತ್ಯವೇ?

               Face book ನ ಒಂದು  ಪುಟಗಳಲ್ಲಿ  ಧರ್ಮಗಳ ಬಗ್ಗೆ  ಚರ್ಚೆಗಳು ಇತ್ತೀಚಿಗೆ ಹೆಚ್ಚಾಗುತ್ತಿದೆ.ಅದೇ ತರನಾಗಿ ಅಂಬೇಡ್ಕರ್ ಹಿಂದೂ ಧರ್ಮವನ್ನ ತ್ಯಜಿಸಿ ಬೌಧ ಧರ್ಮ ಸ್ವೀಕರಿಸಿದ ಕಾರಣ ಹಿಂದೂ  ಧರ್ಮ  ಕೆಟ್ಟದ್ದು ಅನ್ನುವ ವಿಶ್ಲೇಷಣೆಗಳನ್ನು ನೋಡಿದೆ.ಮಾತು ಹಳಿತಪ್ಪಿ ಗಾಂಧಿಯನ್ನು ಹಿಂದೂ ಮೂಲಭೂತವಾದಿಗಳು ಕೊಂದಿದ್ದು ಅನ್ನುವ ವಿಚಾರಗಳವರೆಗೂ ಹೊರಳುತ್ತದೆ,ಈ ಚರ್ಚೆಯಲ್ಲಿ ಪಾಲ್ಗೊಂಡ ಹಲವಸ್ಟು ಮಂದಿಗೆ ತಮ್ಮ ಧರ್ಮವನ್ನು ಪರಮೋಚ್ಛ ಅನ್ನುವದನ್ನು ಎಲ್ಲರೂ ಒಪ್ಪಬೇಕು ಅನ್ನುವ ದಾವಂತ ಇತ್ತು ಅನ್ನುವದು ಸ್ಪಷ್ಟವಾಗಿ ಕಾಣುತಿತ್ತು. ಹೆಚ್ಚಿನವರಿಗೆ ಧರ್ಮಗಳ ಅರಿವು ಅಷ್ಟಕಷ್ಟೇ ಇತ್ತು ಅನ್ನುವದು ನನ್ನ ಅಬಿಪ್ರಾಯ .
                     ನನ್ನ ಪ್ರಕಾರ ಬುದ್ದ ಮತ್ತು ಗಾಂಧಿ ಬಗ್ಗೆ ಮಾತನಾಡುವ ಹಲವಷ್ಟು ಮಂದಿ ಸಾಚ ಅಂತ ಖಂಡಿತ ಹೇಳ ಬರುವದಿಲ್ಲ.ಇವರುಗಳು ಗಾಂಧಿ,ಬುದ್ದ , ಅಂಬೇಡ್ಕರ್ ಎಂದು   ತಮ್ಮನ್ನು ಸಮರ್ಥಿಸಿಕೊಳ್ಳಲು  ಉದಾಹರಣೆಗಳನ್ನಾಗಿ ಬಳಸುವ ಮಂದಿಯಗಿರುತ್ತಾರೆ.ಹಾಗೆ ಹಿಂದುವಾದಿಗಳು ಕೂಡ ಎಲ್ಲರೂ ಸಾಚಗಳಲ್ಲ. ತನಗೆ ಯಾವೊಬ್ಬನ ಮೇಲೆ ಅಸಮದಾನ ಇದೆ ಅಂದ ಮಾತ್ರಕ್ಕೆ ಇಡಿ ಧರ್ಮವನ್ನು ದೂಷಿಸುವ ಅದಿಕಾರ ಯಾರೋಬ್ಬನಿಗು ಇಲ್ಲ.ಅವನವನ ನಂಬಿಕೆ ಸ್ವಾತಂತ್ರ್ಯ ಪ್ರತಿಯೊಬ್ಬನಿಗೂ ಇದೆ,ಹಾಗೆಂತ ಅದನ್ನು ಇನ್ನೊಬ್ಬರ ಮೇಲೆ ಹೇರಿ ಅವರ ಮನಕ್ಕೆ ಘಾಸಿಗೊಳಿಸುವದು ಸರಿಯಾದ ಕ್ರಮವಲ್ಲ.ಎಲ್ಲ ದರ್ಮಗಳಲ್ಲು ಒಪ್ಪಬಹುದಾದ ಹಾಗು ಎಲ್ಲರಿಗೂ ವಿಹಿತವಾಗದ  ವಿಷಯಗಳು ಬಹಳಷ್ಟಿವೆ. ವಿಚಾರವಂತ ವಿವೆಚನೆಯುತ ಚರ್ಚೆ ನಡೆದಾಗ ಮಾತ್ರ ದರ್ಮದ ಸಾರಗಳು ಮನದಟ್ಟಾಗುತ್ತದೆ.
                      ಧರ್ಮಗಳ ವಿಚಾರಗಳ ಬಗ್ಗೆ ಮಾತಾಡೋಣ ಅಂದರೆ ನಂಗೆ ದರ್ಮಗ್ರಂಥಗಳ ಅರಿವಿಲ್ಲ,ನಾನು ಯಾವ ಗ್ರಂಥವನ್ನು ಪೂರ್ಣವಾಗಿ ಓದಿಲ್ಲ,ಒಬ್ಬ ಸಮಾನ್ಯನಲ್ಲಿ ಸಾಮಾನ್ಯವಾದವ ನಾನು. ಆದರೆ ನಾನು ಯಾವ ದರ್ಮಗಳು ಹಾಳು ಎನ್ನುವದಿಲ್ಲ,ಎಲ್ಲವೂ ಒಳ್ಳೆ ವಿಚಾರಗಳನ್ನೇ ಹೊಂದಿದೆ,ಆದರೆ ಕೆಟ್ಟದ್ದನ್ನು ಹೊಂದಿದೆ ಎಂದು ಯಾರಾದರು ಒಂದು ದರ್ಮದ ಬಗ್ಗೆ ಹೇಳಿದರೆ ಅವನ ವಿಚಾರ ದೃಷ್ಟಿಕೋನದ ಫಲವಿರಬಹುದು ಅನ್ನುತ್ತೇನೆ.ಕಾರಣ ತುಂಬಾ ಸ್ಪಷ್ಟ ಏನೆಂದರೆ ನಾನು ಇದ್ದ ಹಾಗೆ ಅತವ ನಾನು ಯೋಚಿಸಿದಂತೆ ಎಲ್ಲರೂ ಯೋಚಿಸಬೇಕಿಲ್ಲ,ಹಾಗಂತ ಅವನನ್ನು ತಪ್ಪು ಎನ್ನುವದು ಕೂಡ ನ್ಯಾಯ ಅಂತ ನನಗನಿಸುವದಿಲ್ಲ,ವಿಚಾರಗಳ ದೃಷ್ಟಿಕೋನದಿಂದ ದರ್ಮಗಳು ಬೇರೆಯಾಗುತ್ತದೆ ಹೊರತಾಗಿ ಅದರ ಸಾರದಿಂದಲ್ಲ ಅಂತ ನಂಬಿದವ ನಾನು.ಅದ್ದರಿಂದ ನನಗೆ ಕುರಾನ್,ಬಗವದ್ಗೀತೆ,ಬೈಬಲ್ ಎಲ್ಲವೂ ಸಮಾನವಾಗಿ ಕಾಣುತ್ತದೆ ಅಲ್ಲದೆ ಎಲ್ಲ ಜಾತಿ ವರ್ಗದ ಜನರೊಂದಿಗೆ ಉತ್ತಮ ಸ್ನೇಹ ಸಂಪಾದಿಸಿ ಮನಸ್ಸು ಕೂಡ ಪರಿಶುದ್ದವಾಗಿರಿಸಲು ಸಹಾಯಕವಾಗಿದೆ ಎಂದು ತಿಳಿದಿರುವೆ.ಧರ್ಮಗಳ ಬಗ್ಗೆ ಸ್ವತಹ ಓದಿಕೊಂಡಿರುವವರು ಕಡಿಮೆ,ಪಂಡಿತರಿಂದ,ಮವ್ಲಿಗಳಿಂದ,ಪಾದ್ರಿಗಳಿಂದ ದರ್ಮ ಪ್ರಭಾವಕ್ಕೆ ಒಳಪಟ್ಟವರೆ ಹೆಚ್ಚು.ಅದೇ ಆಗಿದ್ದು ಪ್ರಮಾದ.  ತಾನೆ ಓದಿಕೊಂಡರೆ ವಿಚಾರಗಳು ತಮ್ಮೊಳಗೆ ವಿಮರ್ಶೆಗೆ ಒಳಪಡುತ್ತದೆ ಮೌಲ್ಯಗಳು ಎದ್ದು ಕಾಣುತ್ತದೆ ,ಅದೇ ಇನ್ನೊಬ್ಬರಿಂದ ಹೇಳಿಸಿ ಕೊಂಡರೆ ದರ್ಮವು ದರ್ಮ ಅದೇಶವಾಗಿ ಕಾಣುತ್ತದೆ  ದರ್ಮದ ಮುಡ ಅನುಕರಣೆಗೆ ನಾಂದಿಯಾಗುತ್ತದೆ.ಇದರ ಫಲವೇ ನಮ್ಮದಲ್ಲದ ದರ್ಮಗಳು ಮತ್ತು   ಅದರ ಅನುಯಾಯಿಗಳು ಶತ್ರುಗಳಂತೆ ಭಾಸವಾಗುತ್ತಾರೆ.ಅದೇ ಬಾವನೆ ಬಿಸಿ ಚರ್ಚೆಗೆ ಗ್ರಾಸವಾಗುವ ಮೂಲ ಕಾರಣ ಅನ್ನುವದು ನನ್ನ ಅನಿಸಿಕೆ.  ಮಾನವೀಯತೆ ನೆಲೆಯಲ್ಲಿ ಯೋಚಿಸಿದಾಗ ಈ ಎಲ್ಲ ಮೌಡ್ಯಗಳಿಂದ ಹೊರಬಂದು ಜೀವನ ಎಂಬ ಅರ್ಥ ಕಂಡುಕೊಳ್ಳಲು ಸಾಧ್ಯ.

                   ಇನ್ನು ದರ್ಮದ ವಿಚಾರಗಳಿಂದ ಮಾತ್ರ  ನಮ್ಮ ಜೀವನ ಸಾಗಿಸಬೇಕು ಅಂತ ನಂಬಿದವರಿಗೆ ನಾನು ಹೇಳುವದಿಷ್ಟು,ಎಲ್ಲ ದರ್ಮಗಳು ಕೂಡ ನಮ್ಮ  ಜೀವಿತದ ಫಲವನ್ನು ಉಣ್ಣುವ ಬಗೆಯನ್ನು ಸ್ವರ್ಗ ಮತ್ತು ನರಕ ಎಂದು ವಿಬಾಗಿಸಿ ಹೇಳುತ್ತವೆ ಅಂತ ತಿಳಿದುಕೊಂಡಿರುವೆ.ನಾವು ಒಳ್ಳೆ ಕೆಲಸ ಮಾಡಿದಲ್ಲಿ   ಸ್ವರ್ಗ ಇಲ್ಲದಲ್ಲಿ ನರಕ , ನರಕದ ವಿವರಣೆ ಒಂದೊಂದು ದರ್ಮದಲ್ಲಿ ಒಂದೊಂದು ರೀತಿಯಲ್ಲಿ  ಚಿತ್ರಿಸಲಾಗಿದೆ,ಅದರ  ಬಗ್ಗೆ ವಿವರಣೆ ಹೇಗೂ ಇರಲಿ ವಿಚಾರ ಒಂದೇ,ತಪ್ಪು ಮಾಡಬೇಡ ಒಳ್ಳೆ ರೀತಿ ಇಂದ ಬದುಕಿ ಬಾಳು ಎಂದು. ಅಷ್ಟಕ್ಕೂ ನಾನು ಬದುಕಿರುವಾಗಲೇ ಸ್ವರ್ಗ, ನರಕ ಎಲ್ಲ ಅನುಬವಿಸುತ್ತೇವೆ ಅಂದುಕೊಂಡಿರುವವ ನಾನು.ನನ್ನ ಒಳ್ಳೆತನದಿಂದ ಒಂದಷ್ಟು ಒಳ್ಳೆ ಜನ ಸಂಪಾದಿಸಿ ಕಷ್ಟ ನಷ್ಟಗಳಲ್ಲು ಬಾಗಿಯಾಗಿ ನಮಗೆ ಕುಶಿ ಕೂಡುವ ವಿಚಾರಗಳಿಂದ ಬದುಕನ್ನು ಸಂತೋಷವಾಗಿ ಮುಗಿಸುವಂತ ಸೌಬಾಗ್ಯ ದಿಂದ  ಸಿಗುವ  ರಿಯಲ್ ಸ್ವರ್ಗದ  ಅನುಭವವನ್ನು ಕಾಣದ ಸ್ವರ್ಗದ ಅನುಬವಕ್ಕಾಗಿ ಬಲಿಕೊಡಲು ಇಷ್ಟವಿಲ್ಲ.ಸಮಾಜದಲ್ಲಿ ಎಲ್ಲರನ್ನು ದ್ವೇಷಿಸಿ ಪರಕಿಯನಾಗಿ, ಎಲ್ಲರಿಂದಲೂ ತೆಗಳಿಸಿಕೊಲ್ಲುವದು ಒಬ್ಬ ಸ್ವಾರ್ಥಿಯಾಗಿ  ಬದುಕುವದು ನನ್ನ ಪ್ರಕಾರ ರಿಯಲ್ ನರಕ.ಏನನ್ನುತ್ತೀರಿ?
                ಫೇಸ್ ಬುಕ್ ನ ಸ್ನೇಹ ಸಂವಾದ ಅನ್ನುವ ಪುಟಗಳ ಚರ್ಚೆಗಳಿಂದಾಗಿ ನಾನು ಈ ಬ್ಲಾಗ್ ಬರೆಯಬೇಕೈತು, ಬಹುಶಃ ಎಲ್ಲರೂ ನನ್ನತರಹ ಅಂತಲ್ಲ, ಇದೆ ಬೇಸ್ ಮೇಲೆ ಯೋಚನೆ ಮಾಡಿದಲ್ಲಿ ಸಮಾಜದಲ್ಲಿ ಜಾತಿಯತೆಯಲ್ಲಿ ಸಾಮರಸ್ಯ ಸಾದ್ಯ ಅಂತ ನನ್ನ ನಂಬಿಕೆ.ಜೀವನ ಸಾಗಿಸಲು ಕಷ್ಟ ಬೀಳುವ ನಾವುಗಳು ನನ್ನ ದರ್ಮ ನಿನ್ನ ಧರ್ಮ ವೆಂದು ಕಚ್ಚಡುವದರಲ್ಲಿ ಅರ್ಥವಿಲ್ಲ ಅಲ್ಲವೇ.? ಧರ್ಮ ಜಾತಿಗಳ ಬಗ್ಗೆ ವಿಮರ್ಶೆ ನಮಗೆ ಅಗತ್ಯವೇ?
ನಿಮ್ಮಯ.......
ರಾಘವೇಂದ್ರ ತೆಕ್ಕಾರು.

Tuesday, August 23, 2011

ಫ್ರೀಡಂ ಪಾರ್ಕಿನ ದೃಶ್ಯಗಳು


ಎಲ್ಲೆಲ್ಲು ಜನಸ್ತೋಮ,ಮನತುಂಬ ದೇಶಾಭಿಮಾನ 
ರಾಷ್ಟ್ರ ದ್ವಜದ ಕೆಳಗೆ ದೇಶಬಕ್ತಿ ಮೆರೆವ ಜನತೆ.
ಯುವ ಜನತೆ ಗಾಂದಿ ಟೋಪಿಯೊಂದಿಗೆ 

ಎಲ್ಲೆಲ್ಲು ತಿರಂಗ ಹಾಗು ವಂದೇ ಮಾತರಂ ಜಯಘೋಷ

Monday, August 22, 2011

ಸಬಕೋ ಸನ್ಮತಿ ದೇ ಭಗವಾನ್

        ಭಾರತ್ ಮಾತಾ ಕೀ ಜೈ. ನೀನು ಎಂಥವರನ್ನು ಸಲಹುತಿದ್ದೀ  ತಾಯಿ? ಹೌದು ನಾನು ಹೀಗೆ  ಹೇಳಲು ಕಾರಣಗಳು ಇಲ್ಲದಿಲ್ಲ. ಇವತ್ತು ಅಂತರ್ಜಾಲ ಸುದ್ದಿಗಳನ್ನೂ ತಿರುವಿಹಾಕುತಿದ್ದಾಗ ಹೀಗೆ ಅನ್ನಿಸಿದ್ದು.
ಕಾರಣ 'ವಂದೇ ಮಾತರಂ' ಮತ್ತು 'ಭಾರತ್ ಮಾತಾ ಕೀ ಜೈ' ಎಂದು ಘೋಷಣೆ ಕೂಗಿಗೆ ದನಿಗೂಡಿಸಬೇಡಿ. ಇಸ್ಲಾಂಗೆ ವಿರುದ್ಧ ವಾದ ಚಳವಳಿಯಲ್ಲಿ ಮುಸ್ಲಿಮರು ಭಾಗವಹಿಸಬಾರದು ಎಂದು ಸಯ್ಯದ್ ಅಹ್ಮದ್ ಬುಖಾರಿ ಮುಸ್ಲಿಮರಿಗೆ ಕರೆ ನೀಡಿದ್ದಾರೆ ಎಂಬ ಸುದ್ದಿ. ಇಸ್ಲಾಮ್ಗೆ ವಿರುದ್ದವೆಂದು ಅವರಿಗೆ ಅನ್ನಿಸಿದ್ದು ಅಣ್ಣಾ ಅವರಿಗೆ ಆರೆಸ್ಸೆಸ್ ಮತ್ತು ಬಿಜೆಪಿ ಬೆಂಬಲವಿದೆ ಎಂದು.ಭೂಮಿ, ರಾಷ್ಟ್ರ,ತಾಯಿ ವ್ಯಕ್ತಿ ಪೂಜೆಯನ್ನು ಇಸ್ಲಾಂ ನಿಷೇಧಿಸಿದೆ. ಇಸ್ಲಾಂ ಆಶಯಕ್ಕೆ ವಿರುದ್ಧವಾದ ಚಳವಳಿ ಹಾಗೂ ಘೋಷಣೆಯಲ್ಲಿ ಮುಸ್ಲಿಮರು ತೊಡಗಿಕೊಳ್ಳುವುದು ಅಪರಾಧ ಎಂದು. 

     ಅಗ್ನಿ ಶ್ರೀದರ್ ಹೇಳಿಕೆ ನೋಡಿ,ಜನ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಗಾಂಧಿವಾದಿ ಅಣ್ಣಾ ಹಝಾರೆ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ದೂರದೃಷ್ಟಿಯಿಲ್ಲ, ಸಮೂಹ ಸನ್ನಿಯಾಗಿರುವ ಹೋರಾಟಕ್ಕೆ ಸ್ಪಷ್ಟ ನಿಲುವಿಲ್ಲ ಎಂದು.ಅಲ್ಲದೆ ಅಣ್ಣಾ ಹಜಾರೆ ನಡೆಸುತ್ತಿರುವ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಮಸೂದೆ ಜಾರಿ ಕುರಿತು ಚರ್ಚೆ ಸಂಸತ್‌ನಲ್ಲಿ ಮಾಡಬಹುದೇ ಹೊರತು ಬೀದಿಯಲ್ಲಲ್ಲ ಎಂದು ಅವರ ಅಭಿಪ್ರಾಯ , ಅವರು ತಿಳಿದು ಕೊಂಡಿರಬೇಕು  ಅಣ್ಣ ಟೀಮ್ನಲ್ಲಿರುವವರಿಗೆ ಈ ಕನಿಷ್ಠ  ಜ್ಞಾನ ತಾನು ಹೇಳಿದರಷ್ಟೇ  ತಿಳಿಯುತ್ತದೆ ಎಂದು.ಸ್ವಾಮಿ ಒಂದು ಮೇಧಾವಿ ದೇಶ ಬಕ್ತ ತಂಡ ಅಣ್ಣ ಜೊತೆಯಲ್ಲಿದೆ. ನೀವು ತಲೆ ಕೆಡಿಸಬೆಕಂತಿಲ್ಲ, ಅಣ್ಣ ಟೀಮ್ಗೆ ದೂರದೃಷ್ಟಿಯಿಲ್ಲ ಮತ್ತು ಹೋರಾಟಕ್ಕೆ ಸ್ಪಷ್ಟ ನಿಲುವಿಲ್ಲ ಎನ್ನುವ ತಾವುಗಳು ತಮ್ಮ ನಿಲುವು ಹಾಗು ದೃಷ್ಟಿ ಕೋನವೆನೆಂದು ಸ್ಪಷ್ತಪಡಿಸುವದಿಲ್ಲ, ಕೇವಲ ಸಂಸತ್ತಿನಲ್ಲಿ ನಿರ್ಧಾರವಗಬೇಕೆಂದು ಹೇಳುತ್ತೀರಿ,ನಮಗೂ ಗೊತ್ತಿದೆ ೪೨ ವರ್ಷ ಸಂಸತ್ತು ಲೋಕಪಾಲ ಕಾನೂನು ತರುತ್ತಾರೆಂದು ಕಾದ ನಾವು ಲೋಕಪಾಲ್ ಜಾರಿಯಾಗಲೇ ಬೇಕೆಂದು ಪಟ್ಟು ಹಿಡಿದು ತಮ್ಮ ಅಬಿಪ್ರಾಯವನ್ನು ಹೋರಾಟದ   ಮೂಲಕ ತಿಳಿಸುತಿದ್ದಿವಿ ಎಂದಾಗ ಸಮರ್ಪಕ ಉತ್ತರವಿಲ್ಲದೆ ಮಾತು ಮರೆಯುವಿರಲ್ಲ ಯಾಕೆ?
              ಅಲ್ಲ ಈ ಜನಗಳಿಗೆ ವಿಚಾರವಾದಿಗಳು ಅನ್ನುತ್ತೇವಲ್ಲ? ದಾರ್ಮಿಕ ಗುರುಗಳು ಅನ್ನುತ್ತೇವಲ್ಲ? ಅದಕ್ಕೆ ಈ ತರಹ ನಮ್ಮನ್ನ ಬಳಸಿಕೊಳ್ಳುವದು ಎಷ್ಟು ಸರಿ? ತಮಗೆ ಸರಿ ತೋರುತ್ತಿಲ್ಲ ಎಂಬ ಕಾರಣಕ್ಕೆ ಈಡಿಯ ಸಮಾಜವನ್ನ ದಿಕ್ಕು ತಪ್ಪಿಸುತ್ತಿರುವದು  ಯಾಕೆ? ಕೆಲಮಂದಿ ಹಾಗೆ, ಅದು ಕೂಡ  ವಿಚಾರವಂತ ಬುದ್ದಿಜೀವಿಗಳು ಎನಿಸಿಕೊಂಡಿರುವವರು ತಾವು ಯಾವ ಒಳ್ಳೆಯ ಕೆಲಸ ಮಾಡಲ್ಲ,  ಯಾವದೋ ಒಂದು ಒಳ್ಳೆ ಕೆಲಸ ನಡಯುತ್ತಿರುವಾಗ  ನೋಟಿಸ್ ಇಲ್ಲದೆ ಹಾಜರಾಗಿ ವಿಮರ್ಶೆಗೆ ತೊಡಗಿ ಯಾವದೋ ಈರ್ಷೆಗೆ ಬಿದ್ದು ಎಲ್ಲರಿಗೆ ಒಳ್ಳೆಯದಾದ ಕೆಲಸವನ್ನು ತಪ್ಪು ಎನ್ನುತ್ತಾರೆ. ಒಂದು  ವೇಳೆ ಅವರನ್ನು ಇಂತ ಕೆಲಸಗಳ  ಮುಂದಾಳತ್ವವನ್ನು ಕೊಟ್ಟಾಗ ದೋಸೆ ಮಗುಚಿದಂತೆ ಅವರ ವಿಚಾರಗಳು ಬದಲಾಗುತ್ತದೆ.ಅಲ್ಲ ನಾಳೆ ಬ್ರಷ್ಟಾಚಾರ ತೊಲಗಿದರೆ ಅದರ ಲಾಭದ ಫಲಾನುಬವಿಗಳು  ಇವರು ಅಲ್ಲವೇ?ಅವರೇನು ದೇಶ ಬಿಟ್ಟು ಹೋಗುವದಿಲ್ಲ ಅಲ್ಲವೇ? ಇವರಿಗೆ ಸಾಮಾನ್ಯ ಜನಗಳ ಕಷ್ಟ ಅರ್ಥವೇ ಆಗುವದಿಲ್ಲ ಯಾಕೆ? ಕಾರಣ ಈಗ ನಡೆಯುತ್ತಿರುವ ಆಂದೋಲನ ಜನಸಾಮಾನ್ಯನದ್ದು, ಇವರಿಗೆ ಯಾರು ಆಮಂತ್ರಣ ಕೊಟ್ಟು ಕರೆದು ವೇದಿಕೆ ಹತ್ತಿಸಿ ಮೈಕ್ ಕೊಟ್ಟಿಲ್ಲ.ಅದ್ದರಿಂದ ಅವರಿಗೆ ಈ ಅಂದೋಲನದ ಲಾಭ ಸಿಗುವದಿಲ್ಲ.ಅದಕ್ಕಾಗಿ ಬಾಯಿಗೆ ಬಂದಂತೆ ಮಾತಾಡುತಿದ್ದಾರೆ.ಮುಸ್ಲಿಂ,ಕ್ರೈಸ್ತ, ಹಿಂದೂ ಅನ್ನದೆ ನಾನು ಆ ಪಕ್ಷ ಈ   ಪಕ್ಷ ಅನ್ನದೆ ಜನ ಒಂದಾಗಿದ್ದರೆ ನೋಡಿ!!!!! ಅದ ನೋಡಿ ಮುಂದೆ ನಮ್ಮ ಬೇಳೆ ಬೇಯುವದಿಲ್ಲ ಎಂಬ ಅರಿವಾಗಿದೆ ಈ ಜನಗಳಿಗೆ ಅದಕ್ಕೆ ಹೋರಾಟದ ದಿಕ್ಕು ತಪ್ಪಿಸುವ ಹೇಳಿಕೆ  ನೀಡುತಿದ್ದಾರೆ.
                    ನಾನು  ನಿನ್ನೆ ಫ್ರೀಡಂ ಪಾರ್ಕಿನಲ್ಲಿದ್ದೆ  . ಒಂದು ತಾಯಿ ತನ್ನ ೧ ತಿಂಗಳ ಕಂದನ ಜೊತೆ ಬಂದಿದ್ದಳು, ಕುತೂಹಲದಿಂದ ಯಾಕಮ್ಮ ಇಷ್ಟು ಕಷ್ಟದಿಂದ ಕಿವಿಗೆ ಮಫ್ಲರ್ ಕಟ್ಟಿಕೊಂಡು ಈ ಹಸುಳೆಯನ್ನು ಎತ್ತಿಕೊಂಡು ಈ ಜನಸಾಗರ ನಡುವೆ ಹೋರಾಟಕ್ಕೆ ಬಂದಿರುವೆ.ಕತ್ತಲಾಗುವ ಮುಂದು ಹಿಂತಿರುಗು ಅಂದೇ. ಅದಕ್ಕೆ  ಅವಳ ಉತ್ತರ ನೋಡಿ ನಾನು ಈ ಕಂದಮ್ಮನನ್ನು ಹೆರಲು ಸರ್ಕಾರೀ ಆಸ್ಪತ್ರೆಗೆ ಹೋದಾಗ ದಾಖಲಾಗಲು  ಲಂಚ,ಡಾಕ್ಟರರಿಗೆ  ಲಂಚ,ಹೆರಿಗೆ ಬೇನೆ ಬಂದಾಗ ಡಾಕ್ಟರ ಕರೆ ತರಲು ನರ್ಸಿಗೆ ಲಂಚ,ಎಲ್ಲ ಬಿಟ್ಟು ಹೆರಿಗೆ  ನಂತರ  ಮಗು ನೋಡಲು ಲಂಚ ಕೊಟ್ಟಿರುವೆ,ನನ್ನ ಒಟ್ಟು ಹೆರಿಗೆ ಖರ್ಚು ೬೫೦೦ ರೂಪಾಯಿ ,ವೃಥಿಯಲ್ಲಿ ಕೂಲಿ ಕಾರ್ಮಿಕರಾಗಿದ್ದ ದಂಪತಿಗಳು  ೨೦೦೦ ಸಾವಿರ ಇಟ್ಟುಕೊಂಡು  ಆಸ್ಪತ್ರೆಗೆ ಹೋಗಿದ್ದರು , ಉಳಿದ ಹಣಕ್ಕಾಗಿ ಸಾಲ ಮಾಡಿದ್ದರು.ಬ್ರಷ್ಟಾಚಾರ ವಿರೋದಿ ಹೋರಾಟದ ಸುದ್ದಿತಿಳಿದ ಇವಳು ಮನೆಯಲ್ಲಿ ಮಲಗಲಾರದೆ ತನ್ನ ಗಂಡನೊಂದಿಗೆ ದುಂಬಾಲು ಬಿದ್ದು ದೊಡ್ಡಬಳ್ಳಾಪುರ ದಿಂದ ಫ್ರೀಡಂ ಪಾರ್ಕಿಗೆ ಬಂದಿದ್ದರು,ಹೊತ್ತಾದರೆ ಬಸ್ ಸಿಗುವದಿಲ್ಲವೆಂದು ರಾತ್ರಿ ಎಂಟು ಗಂಟೆಗೆ ಹಿಂತಿರುಗಿದರು.ಹೀಗೆ ಯಾವ ರಾಜಕೀಯ ಪಕ್ಷಗಳ ಕರೆ ಇಲ್ಲದೆ ಯಾರ ಒತ್ತಾಯವೂ ಇಲ್ಲದೆ ಸ್ವಯಂ ಪ್ರೇರಿತವಾಗಿ ರೂಪುಗೊಂಡ ಹೋರಾಟ ಹಾಗು ಅತ್ಯಂತ ಪಾರದರ್ಶಕವಾಗಿ  ನಡೆಯುತ್ತಿರುವ ಹೋರಾಟಕ್ಕೆ ವಿರೋದಿಸುತ್ತಿರುವ ಅಸಂಬದ್ಧ ನುಡಿ ಹಾಗು ಜನಗಳಿಗೆ ದಿಕ್ಕಾರವಿರಲಿ.ತಮಗೇನಾದರೂ ತೊಂದರೆ ಇದ್ದಲಿ ದೇಶದಲ್ಲಿನ ಕಾನೂನು ಮೂಲಕ ತಮಗೆ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರವಿದೆ ಅಂತಹ ಬುದ್ದಿಜೀವಿಗಳ ನಡೆಗೆ ಘನತೆಯು ಇದೆ.ಅದು ಬಿಟ್ಟು  ಹರಕು ಬಾಯಿ ಮಾತಾಡುತ್ತದೆ ಎಂದು ಮಾತಾಡಿದರೆ ಅದ ಕೇಳುವವರು ಈಗ ಯಾರು ಇಲ್ಲ, ನಿಮ್ಮ ಬೇಳೆ ಗೆ ನೀವೇ ಬಿಸಿನೀರುಕಾಯಿಸಬೇಕಾಗಿ ನಮ್ರ ವಿನಂತಿ.

  ದೇಶದಲ್ಲಿ ಭ್ರಷ್ಟಾಚಾರವೇ ಇಲ್ಲ ಅಥವಾ ಭ್ರಷ್ಟಾಚಾರವನ್ನು ನಿರ್ಲಕ್ಷಿಸಿ ಎಂದು ಯಾರಾದರೂ ಹೇಳಲು ಸಾಧ್ಯವೆ? 42 ವರ್ಷಗಳಿಂದ ದೇಶವು ಲೋಕಪಾಲರಿಗಾಗಿ ಕಾಯುತ್ತಿದೆ. ಅಣ್ಣಾ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕರೆ  ನೀಡಿದ ನಂತರ, ಒಬ್ಬ ಸಮರ್ಥ ಮುಂದಾಳು ಸಿಕ್ಕಾಗ, ಸುಮ್ಮನಿರುವದು ಹೇಗೆ?ಎಷ್ಟೇ ದಿನಗಳಾದರೂ ಬೇಡಿಕೆ ಈಡೇರುವ ತನಕ ಅಣ್ಣಾ ಬೆಂಬಲಕ್ಕಿದ್ದೇವೆ ಎನ್ನುತ್ತಾ, ಲೋಕಪಾಲ್ ಜಾರಿ ಕಂಡಿತಾ ಆಗುತ್ತದೆ ಎಂಬ ದಿಟ್ಟ ವಿಶ್ವಾಸದೊಂದಿಗೆ.......................................
ನಿಮ್ಮಯ.......
ರಾಘವೇಂದ್ರ ತೆಕ್ಕಾರ್

Saturday, August 20, 2011

ಬಿಎಸ್ಸೆನ್ನೆಲ್, ಎಂಟಿಎನ್ನೆಲ್ ಸಂಸ್ಥೆಗಳು ಸಂಕಷ್ಟದಲ್ಲಿ

ಖಾಸಗಿ ದೂರವಾಣಿ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ವಿವಿಧ ಕಸರತ್ತು ನಡೆಸುತ್ತಿರುವ ಉದಾಹರಣೆಗಳು ನಮ್ಮ ಮುಂದಿರುವಾಗಲೇ, ಎರಡು ಸರ್ಕಾರಿ ದೂರವಾಣಿ ಸಂಸ್ಥೆಗಳ ಆದಾಯ ಸ್ಥಿತಿ ತೀರಾ ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ ಹಣಕಾಸು ನೆರವಿಗಾಗಿ ಕೈಚಾಚುವಂತೆ ಮಾಡಿದೆ.

ಈ ವಿಚಾರವನ್ನು ಬುಧವಾರ ಲೋಕಸಭೆಯಲ್ಲಿ ತಿಳಿಸಿದ ದೂರಸಂಪರ್ಕ ಖಾತೆ ರಾಜ್ಯ ಸಚಿವ ಮಿಲಿಂದ್ ಡಿಯೋರಾ, 2009-10 ನೇ ಸಾಲಿನಲ್ಲಿ ಭಾರತ ಸಂಚಾರ ನಿಗಮ (ಬಿಎಸ್ಸೆನ್ನೆಲ್) 1,823 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದರೆ, ಮಹಾನಗರ ಟೆಲಿಫೋನ್ ನಿಗಮ (ಎಂಟಿಎನ್ನೆಲ್) 2,611 ಕೋಟಿ ನಷ್ಟ ಅನುಭವಿಸಿರುವುದಾಗಿ ತಿಳಿಸಿದರು.

ಎರಡು ದೂರವಾಣಿ ಸಂಸ್ಥೆಗಳನ್ನು ವಿಲೀನಗೊಳಿಸುವುದು ಸೇರಿದಂತೆ ಸಂಸ್ಥೆಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಈಗಾಗಲೇ ಉಭಯ ಸಂಸ್ಥೆಗಳು ಸಲ್ಲಿಸಿರುವ ಹಲವಾರು ಪ್ರಸ್ತಾವನೆಗಳು ಪರಿಶೀಲನೆಯಲ್ಲಿವೆ. ಇದಲ್ಲದೆ ನಷ್ಟ ಅನುಭವಿಸುತ್ತಿರುವ ಭಾರತೀಯ ದೂರವಾಣಿ ಕೈಗಾರಿಕಾ ಸಂಸ್ಥೆ (ಐಟಿಐ)ಯನ್ನು ಬಿಎಸ್ಸೆನ್ನೆಲ್ ಜೊತೆ ವಿಲೀನಗೊಳಿಸುವ ಪ್ರಸ್ತಾಪವೂ ಇದೆ ಎಂದು ಅವರು ಹೇಳಿದ್ದಾರೆ.

 ಬೃಹತ್ ಖಾಸಗಿ ದೂರವಾಣಿ ಸಂಸ್ಥೆಗಳು ಅತೀ ಹೆಚ್ಚು ಗ್ರಾಹಕರನ್ನು ಹೊಂದುತ್ತಿರುವ ವೇಳೆಯಲ್ಲಿ ಕೇವಲ ಈ ಎರಡು ಸಂಸ್ಥೆಗಳ ಚಂದಾದಾರರ ಸಂಖ್ಯೆಯಲ್ಲಿ ಅಲ್ಪಪ್ರಮಾಣದ ಏರಿಕೆ ಮಾತ್ರ ಕಂಡುಬಂದಿರುವ ಹಿನ್ನೆಲೆಯಲ್ಲಿ ಡಿಯೋರಾ ಸಂಸತ್ತಿನಲ್ಲಿ ಈ ಹೇಳಿಕೆ ನೀಡಿದ್ದಾರೆ.(ಸಂಗ್ರಹ ವೆಬ್ ದುನಿಯಾದಿಂದ)

Friday, August 19, 2011

Mozilla launches Firefox 6; You can Download HERE

San Francisco, Aug 17: The Firefox maker Mozilla has announced the launch of the latest version of its popular web browser Firefox 6. The new version Firefox 6 brings security updates and notable changes from the previous versions.

One of the notable changes in Firefox 6 is the address bar, which now highlights the domain of the website a user is visiting. The new version also added support for the latest draft version of Web Sockets with a prefixed API.

Other changes include Scratchpad, an interactive JavaScript prototyping environment; and a new Web Developer menu item and moved development-related items into it.
Changes in Firefox 6:
  • The address bar now highlights the domain of the website you're visiting
  • Streamlined the look of the site identity block
  • Added support for the latest draft version of Web Sockets with a prefixed API
  • Added support for Event Source / server-sent events
  • Added support for window.match Media
  • Added Scratchpad, an interactive JavaScript prototyping environment
  • Added a new Web Developer menu item and moved development-related items into it
  • Improved usability of the Web Console
  • Improved the discover ability of Firefox Sync
  • Reduced browser start up time when using Panorama
  • Fixed several stability issues
  • Fixed several security issues
 The latest version of the Mozilla Firefox has been launched few days after its rival Google updated the Chrome browser to Chrome 13. Click here to download Firefox 6.