Saturday, November 12, 2011

ಅಸೆ - ದುರಾಸೆ


ಮಿನುಗು ತಾರೆ ಪಡೆಯಲೇಕೆ ಹಂಬಲ 
ಬದುಕೇ ಹೊಳಪಿಲ್ಲದ ಹರಳಾಗಿರುವಾಗ..?                                                      
ಮಳೆ ಸುರಿಸುವ ಮುಗಿಲಾಗಲೇಕೆ ಹಂಬಲ
ಮನಸ್ಸು ಬರಡು ಮರುಭೂಮಿಯಾಗಿರುವಾಗ..?

ನದಿಯು ತೊರೆಯ ಸ್ನೇಹ ಮರೆತಿರುವಾಗ
ನದಿಗೆ ಕಡಲಾಗುವ ದುರಾಸೆ...!
ಸೌಗಂಧ ಹೂವ ಋಣ ಮರೆತಿರುವಾಗ
ಸೌಗಂಧಕ್ಕೆ ತನ್ನಿಂದ ತಾನೇ ಹರಡುವಾಸೆ..!

ದೇವರ ಪರಮ ಭಕ್ತ ಎನಿಸಿಕೊಳ್ಳುವಾಸೆ
ಭಯ ಭಕ್ತಿ ಇಲ್ಲದ ನಾ-ಆಸ್ತಿಕನಿಗೆ...!
ಜನಪರ ನಾಯಕನಾಗುವಾಸೆ
ನಿಷ್ಠೆ ಕಾಳಜಿ ಇಲ್ಲದ ಮನುಷ್ಯ ಹುಳುವಿಗೆ...!


ತನ್ನ ಒಲವು ತೊಡಕುಗಳ ಅರಿವಿಲ್ಲದವನಿಗೆ
ಇತರರ ದುಮ್ಮಾನಗಳ ನೀಗಿಸುವಾಸೆ...!
ನಾನು ನಾನಲ್ಲ ಎಂದು ಬದುಕಿದ್ದರೂ
ಸಂಪತ್ತು ನನ್ನದಾಗಿಸುವಾಸೆ...! 

- ವಿಘ್ನೇಶ್ ತೆಕ್ಕಾರ್

Thursday, November 10, 2011

ನನ್ನ ಭಾವನಾ ...............!!!!!














ನುಡಿಯಲ್ಲಿ ಅರಿಯುತಿತ್ತು ಪ್ರೇಮದ ಹೊನಲು
ತುಡಿಯುತ್ತಿತ್ತು ಮನ ಅದ ನಿವೇದನೆಗೆ
ಆ ದಿನವೊಂದು ಎದುರಾಯಿತು ಮನದ ಒಲವಿನಂತೆ
ಇನ್ನು ಮುಂದು ಬದುಕು ಬಂಗಾರದ ಬಯಲು ಅಂದುಕೊಂಡು
ನನ್ನೊಲವಿನ ಪ್ರೇಮವನ್ನು ತಿಳಿಸಿದೆ ಅವಳ ಕಣ್ಣ ಭಾವ ಹುಡುಕೊಂಡು.

ಚೆಂದವಿತ್ತು ನವಿರು ಮುದಗೊಂಡ ಆ ದಿನ.
ನುಲಿಯುತ್ತಲೇ ಒಪ್ಪಿಸಿಕೊಂಡು ಅಪ್ಪಿದ್ದಳು ನನ್ನ.
ಭಾವನೆಗಳ ಮಿಳಿತವಾಗಿದೆ ಅಂದು ಕೊಂಡೆ ಆ ಕ್ಷಣ.
ಅಂದೇ ನಾ ಅಂದೆ, ನೀ ನನ್ನ ಜೀವನದ ಬಾನಂಗಳದ ಅರ್ಧಾಂಗಿ ಭಾವನ
ಅಂಟಿಕೊಂಡೆ ಪ್ರೀತಿಯೆಂಬ ಹೊನಲೊಳಗೆ,ಮುಂದೆಲ್ಲ ಅಲ್ಲೇ ನನ್ನ ಗಮನ.

ಕೈ ಕೈ ಹಿಡಕೊಂಡು ಕೆರೆ ದಂಡೆ ಸುತ್ತಿದ್ದೆವು ಬಹಳ ಸಲ
ಅನಿವಾರ್ಯತೆಯ ಕಷ್ಟಗಳನ್ನು ಅವಳಿಗಾಗಿ ನನ್ನದಾಗಿಸುತಿದ್ದೆ ಪ್ರತಿಸಲ.
ಅಸಹನೆ,ನಗು, ಕೋಪ ಇವೆಲ್ಲವುದರ ಮಿಳಿತವಿತ್ತು ಆ ದಿನಗಳಲ್ಲಿ
ಅಂದುಕೊಂಡ್ಡಿದ್ದೆ ಈ ಪ್ರೀತಿಯೆಂಬ ತೊಟ್ಟಿಲ ತೂಗು ಶಾಶ್ವತ ಅಂತ
ಆಗ ನನಗೇನು ಗೊತ್ತಿತ್ತು ವಿಧಿ ವಿಪರೀತ,ವಿಧಿ ವಿಲಾಸ ಅನ್ನೋ ವೇದಾಂತ.

ವಿಧಿ ವಿಲಾಸದ ಆ ಒಂದು ದಿನ...........................
ಶ್ರೀಮಂತ ಮನೆಯ ಸಂಬಂಧ ಅವಳ ಅರಸಿ ಬಂದಿತ್ತು
ವರ ಅಮೇರಿಕಾದಲ್ಲಿ ಇರೋವವ,ಇವಳೋ ಆ ಕನಸನ್ನ ಬಚ್ಚಿಟ್ಟುಕೊಂಡವಳು
ಹೀಗೆ ಅದೊಂದು ಕಾರ್ಪೊರೇಟ್ ಸಂಭಂದ ಕೈ ಬೀಸಿ ಕರೆದಿತ್ತು
ಬಂಗಾರು ಬಣ್ಣ ಲೇಪನದ ಭಾವನಾಳ ಮನಸು ಖುಷಿಯಿಂದ ತೋಯ್ದಿತ್ತು.

ಮುಂದೆಂದು ನಾ ನಿನಗೆ ಸಿಗಲ್ಲ, ಆಗಿದ್ದೆಲ್ಲ ಮರೆತುಬಿಡು ಅನ್ನೋ ನಿಭಂದನೆ
ಹನಿ ಕಣ್ಣೀರಿಗೂ ಅವಕಾಶ ಕೊಡದೆ ಬಂದಿಯಾಗಿತ್ತು ನನ್ನ ಮನದ ಭಾವನೆ
ಕುಸಿದು ಕೂತಿದ್ದೆ ಆ ಕ್ಷಣ,ಎಚ್ಚೆತ್ತು ಕೊಳ್ಳುವಾಗ ಅವಳಿಲ್ಲ
ಕಾಲಿ ಮನದ ಹೊಯ್ದಾಟದೊಂದಿಗೆ ಉಯಿಲಿಟ್ಟುಕೊಂಡು ಲೇಖನಿ ಹಿಡಿದಿದ್ದೆ
ಕಲ್ಪನಾ ಲೋಕದೊಳಗೆ ಕಲ್ಪಿತ ಭಾವನಾಳನ್ನು ರೂಪಿಸುತ್ತಾ......................!!!!!











Sunday, November 6, 2011

ಅಡ್ನಾಡಿ ಅಡ್ಡೆಯ ಇಬ್ಬರಿಗೆ ಬಿಳ್ಕೊಡುಗೆ ಮತ್ತು ಶುಭ ಹಾರೈಕೆಗಳು.


ವಿಕ್ರಂ ಮತ್ತು ಚಂದುವಿನ ಸಮಾನ ಗೆಳೆಯ ನಾನು,ಅಡಕತ್ತರಿಯಲ್ಲಿ ಸಿಲುಗಿಸಿದ ಅಡಿಕೆ ತರ.ತಮಾಷೆಗಳು,ಪ್ರಿಯಹೀಯಾಳಿಕೆಗಳು, ಜಗಳಗಳು,ನಗುಗಳು,ಆಗಾಗ ಸಮಾಧಾನದ ಒಗ್ಗರಣೆಗು,ಸಂಧಾನಗಳು,ಇಬ್ಬರು ಜೊತೆಗೂಡಿ ನನ್ನನ್ನೇ ಗುರಿಯಾಗಿಸಿ ಕಾಲೆಳೆಯುವ ತಂತ್ರಗಳು,ಸೀರಿಯಸ್ ಮಾತುಗಳು,ಮತ್ತದೇ ಮಕ್ಕಳಾಟಗಳು ಹಿಂಗೆ ನಡೆದೇ ಬಂದಿದೆ ಸುಮಾರು ೧೫-೧೬ ವರುಷಗಳಿಂದ.ಹಾಗೆ ನೋಡಿದಲ್ಲಿ ಇವರಿಬ್ಬರಲ್ಲಿ ನಡೆಯುವದು ಜಗಳ ಮಾತ್ರ,ಆದರೆ ಇದಕ್ಕಿಂತಲೂ ಮಿಗಿಲಾದ ಸ್ನೇಹ ನಮ್ಮಲ್ಲಿದೆ ಹಾಗು ಈ ಜಗಳಗಳೇ ನಮ್ಮ(ಅಡ್ನಾಡಿಗಳ)ಸ್ನೇಹವನ್ನು ಪೋಷಿಸಿ ಬೆಳೆಸುತ್ತಾ ಬಂದಿದೆ  , ಜಗಳದಲ್ಲೂ ನಗುವಿಗೆನು ಕೊರತೆ ಇರಲಿಲ್ಲ.ಇವತ್ತಿಗೂ ೩ ವರು ಸೇರಿದಲ್ಲಿ ದಿನಪೂರ್ತಿ ನಗುವೊಂದೇ ನಮಗೆ ಸಿಗುವ ಆಹಾರ.ನಮ್ಮಗಳ ಜಗಳಗಳು ಸ್ನೇಹ ನಡೆತೆಗೆ ಒಂದು ಮಾಧ್ಯಮ, ಇದು ಒಂದು ತರ ವಿಶಿಷ್ಟ ಮತ್ತು ವಿಚಿತ್ರವು ಹೌದು.

ಚಂದು ಸ್ನೇಹಪರನಾದರು ಅಂತರ್ಮುಖಿ ,ತನ್ನ ದುಗುಡಗಳನ್ನು ಅಷ್ಟು ಸುಲಭದಲ್ಲಿ ಬಿಚ್ಚಿಡಲಾರ.ಸದಾ ಯೋಚನೆಯಲ್ಲಿರುವವ, ಸಣ್ಣ ಸಣ್ಣ ತೊಂದರೆಗಳು ಕೂಡ ಅವನನ್ನು ವಿಚಿತ್ರ ಚಿಂತೆಗೆ ದೂಡಬಲ್ಲದು,ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲಾರ,ಅಷ್ಟು ಸುಲಭದಲ್ಲಿ ಯಾರೊಂದಿಗೂ ಮಿಳಿತನಾಗಲಾರ.ಜೀವನದಲ್ಲಿ ಮದುವೆ ಎಂಬುದು ಕೂಡ ವಿಚಿತ್ರವಾಗಿ ಚಿಂತೆಗೆ ಹಚ್ಚಿದ ವಿಷಯಗಳಲ್ಲಿ ಒಂದು ನಮ್ಮ ಚಂದುವಿಗೆ.ಅದೇ ಹಾಸ್ಯ ,ವಾದಕ್ಕೆ ಬಿದ್ದರೆ ಇವನ ಮಿರಿಸೋದು ಕಷ್ಟನೆ,ವಾದಗಳಿಂದ ಅಂತಲ್ಲ,ಅದೆಷ್ಟು ಹೊತ್ತಾದರೂ ರಗಳೆಗಳಿಗೆ, ಹಾಸ್ಯಕ್ಕೆ ಆ ಮೂಲಕ ವಾದಕ್ಕೆ ನಿಂತುಬಿಡುವವ.ಒಂದ ತನ್ನ ತೆಜೋವದೆ ನಡಿಬೇಕು ಅಥವಾ ತನ್ನ ಹಾಸ್ಯಕ್ಕೆ ಎಳೆದವ ಇವನ ವಾದದ ಎದುರು ಮಣ್ಣು ಮೆತ್ತಿಸಿಕೊಂಡು ತೆಪ್ಪಗಾಗಬೇಕು.ಇದು ಇವನ ವಾದದ ಪ್ರಳಯಾಂತಕ ಪರಿ.ಬಹುಶಃ ವಿಕ್ರಂ ಮತ್ತು ಚಂದುವಿನಲ್ಲಿ ಸಾಮಾನ್ಯ ಮಿಳಿತ ಅಂಶಗಳು ಈ ವಾದ ಮತ್ತು ಹಾಸ್ಯಗಳು ಆ ಮೂಲಕ ನಗುಗಳು ಮಾತ್ರ ಉಳಿದ ವಿಷಯಗಳು ತದ್ವಿರುದ್ದ.

ವಿಕ್ರಂ ಅನ್ನುವದನ್ನು ಒಂದು ಕ್ಯಾರೆಕ್ಟರ್ ಅಂದರೇನೆ ಸರಿ,ಕಾರ್ ಡ್ರೈವೆರ್, ಬಸ್ ನಿರ್ವಾಹಕ,ಹಲವು ವಾಹನಗಳ ಮಾಲಿಕ,ರೋಡ್ ರೋಮಿಯೋ,ಜಗಳ ಬಿಡಿಸುವ ಸಂದಾನಕಾರ,ಎಂ ಏನ್ ಸಿ ಕಂಪನಿ ನೌಕರ,ಮಾರ್ಕೆಟಿಂಗ್ ರೆಪ್,ತಾಂತ್ರಿಕ ಕೆಲಸ, ಎಂಜಿನಿಯರ್ ಹೀಗೆ ಮುಟ್ಟದ ಕ್ಷೇತ್ರಗಳಲಿಲ್ಲ,ಈ ನಿಟ್ಟಲ್ಲಿ ನನಗು ವಿಕ್ಕಿಗು ಒಂದು ೩೦ ಶೇಕಡಾ ಸಾಮ್ಯತೆ ಇದೆ,ರಿಸ್ಕ್ ತನ್ನದಾಗಿಸುವದರಲ್ಲಿ ನಿಸ್ಸೀಮ,ಅದು ತನ್ನ ಬಗ್ಗೆಯೇ ಆಗಿರಬೇಕು ಅನ್ನುವದಿಲ್ಲ,ಒಮ್ಮೆ ಮನಸಿಗೊಪ್ಪುವ ಮಂದಿ ಆದರೆ ಆಯಿತು ನಂತರ ಅವನ ತಾಪತ್ರೆಯ ಎಲ್ಲ ಇವನದ್ದೆ. ಇಂತಿಪ್ಪ ವಿಕ್ಕಿ ತರುಣತನದ ಹುಚ್ಚಾಟಗಳಿಗೂ ಹೊರತಲ್ಲ,ಇದೆ ಹುಚ್ಚಾಟ ವಿಪರೀತವಾಗಿ ವಿಷ ಸೇವಿಸಿ ಅತ್ತ ಹೋಗಿ ಇತ್ತ ಬಂದವ ಇವ ಅಂದರೆ ನಂಬಲೇ ಬೇಕು.ಬಹುಶಃ ಇವನನ್ನು ಪ್ರೀತಿಸುವ ಗೌರವಿಸುವ ಮತ್ತು ದ್ವೇಷಿಸುವ ಮಂದಿ ಎಲ್ಲರೂ ಇದ್ದಾರೆ.ಆದರೆ ನಿಜವಾಗಿಯೂ ಇಷ್ಟವಾಗುವದು ಇವನ ಕಾರ್ಯಕ್ಷಮತೆ,ಅದರಲ್ಲಿ ತೋರಿಸುವ ನಿಷ್ಠೆ,ಪರಿಸ್ಥಿತಿ ಅವಲೋಕಿಸಿ ಮಾತನಾಡುವ ಪರಿ,ಕಷ್ಟಕ್ಕೆ ಸ್ಪಂದಿಸುವ ಮನಸ್ಸು ಇತರವು ಬಹಳ.ಆದರೆ ಇವೆಲ್ಲವಿಂದಲೂ ಇವ ನೆಮ್ಮದಿಯಾಗಿದ್ದಾನೆಯೇ? ಇಲ್ಲ ಅನ್ನುವದನ್ನು ಹತ್ತಿರದಿಂದ ಕಂಡವರಿಗೆ ಅಷ್ಟೇ ಗೊತ್ತು.ಜೀವನದಲ್ಲಿ ಅನುಭವಿಸಿ ಅನುಭವಿಸಿ(ಕೆಟ್ಟದ್ದು ಒಳ್ಳೆಯದು ಎರಡನ್ನು)ಒಂದು ಹಂತಕ್ಕೆ ಬಂದು ನಿಂತ ಚಂದು ಮತ್ತು ವಿಕ್ರಂ ಇವರಿಬ್ಬರಿಗೂ ಕಾಡಿದ್ದು ತಮ್ಮಗಳ ಮದುವೆ. ಕಷ್ಟ ಗಳನ್ನೂ ಹಂಚಿಕೊಳ್ಳುವ ಜೀವನ ಸಂಗಾತಿ ಪಡೆವ ಒಲವು.


ಮದುವೆ ಮಾಡಿಕೊಳ್ಳುವ ಬಗ್ಗೆ ಪಟ್ಟ ಪಾಡುಗಳು ಅಷ್ಟಿಷ್ಟು ಅಲ್ಲ,ಪೂರ್ಣ ವಿವರಗಳನ್ನು ಬರೆಯುತ್ತಾ ಕುಳಿತಲ್ಲಿ ಅದರ ಬಗ್ಗೆನೇ ಒಂದು ಧೀರ್ಘ ಪ್ರಭಂದ ಮಂಡಿಸಬಹುದೇನೋ!!!!!.ಗೆಳೆತನ ಜೀವನದಲ್ಲಿ ಹಾಸ್ಯ ನಗುಗಳಲ್ಲಿ ಪೈಪೋಟಿ ಯಲ್ಲೇ ಸಾಗಿ ಬಂದ ಇವರಿಬ್ಬರು ಮದುವೆ ವಿಷಯದಲ್ಲೂ  ಪೈಪೋಟಿಗಿಳಿದವರಂತೆ ಡಿಸೆಂಬರ್ ತಿಂಗಳ ಬೆನ್ನು ಬೆನ್ನಿನ ರವಿವಾರದಲ್ಲಿ ಹಸೆಮಣೆ ಏರುತಿದ್ದಾರೆ, ಮೊದಲ ಭಾನುವಾರ ವಿಕ್ರಂ ದಾದರೆ ಮರು ಭಾನುವಾರ ಚಂದುದು ಹಸಮಣೆ ಏರೋ ಬ್ಯಾಚುಲರ್ ಲೈಫ್ ನಿಂದ ಬಿಳ್ಕೊಡುಗೆ ಶಾಸ್ತ್ರಗಳು,ಅದರಲ್ಲೂ ಛೆ...!!! ನನ್ನದು ಅವನಿಂದ ಒಂದು ವಾರ ಮುಂಚಿತವಾಗಿ ಮದುವೆ ನಡಿಬೇಕಿತ್ತು ಎಂಬುದು ಒಂದು ಚಿಂತೆಯಾದರೆ ವಿಕ್ರಂನ ಹೆಂಡತಿ ಆಗುವವಳ ಹುಟ್ಟಿದ ದಿನ ನವೆಂಬರ್ ೧ ನನ್ನ ಹೆಂಡತಿ ಆಗುವವಳ ಹುಟ್ಟಿದ ದಿನ ನವೆಂಬರ್ ೨ ಆಯಿತಲ್ಲ ಎಂಭ ಮಗದೊಂದು ಚಿಂತೆ ಚಂದುವಿಗೆ , ಹೀಗು ಒಂದು ಪೈಪೋಟಿ ಮದ್ಯದ ಚಂದುವಿನ ನಿಟ್ಟುಸಿರು.ಗೆಳೆತನ ಹೇಗೆ ಸಾಗಬಲ್ಲದು, ಕಚ್ಚಾಟ ತಿಕ್ಕಾಟಗಳು,ನಗುಗಳು, ಪ್ರತಿಸ್ಪಂದನಗಳು ಗೆಳೆತನವನ್ನು ಹೇಗೆ ಗಟ್ಟಿಗೊಳಿಸುತ್ತಾ ಸಾಗಬಲ್ಲದು ಎಂಭ ವಿಚಿತ್ರ ಆಯಾಮವನ್ನು ಇವರಿಬ್ಬರಲ್ಲೂ ಕಂಡು ಅರಿತಿದ್ದೇನೆ.ಯಾವುದೇ ಕಾರಣಕ್ಕೂ ಯಾವುದೇ ವಿಷಯಕ್ಕೂ ಇವರಿಬ್ಬರಲ್ಲಿ ಕರುಣೆ ಮಾತುಗಳಿಗೆ ಆಸ್ಪದವಿಲ್ಲ,ಬದಲಾಗಿ ಸ್ನೇಹ ಬಾವದಿಂದ ಕಷ್ಟಗಳಿಗೆ ಕೇಳದೆ, ಹೇಳದೆ ಪರಸ್ಪರ ಸ್ಪಂದನೆಗಳಿವೆ . ಅದು ನನಗು ಕೂಡ ಇವರಿಬ್ಬರನ್ನು ನೋಡಿ ರೂಡಿಸಿದೆ ಅಂದರೆ ತಪ್ಪಿಲ್ಲ.ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಆ ಮೂಲಕ ಜೀವನದ ಮತ್ತೊಂದು ಪರಿದಿಯನ್ನು ಅವಲೋಕಿಸಲು ಹೊರಟ ಇವರಿಬ್ಬರಿಗೂ ಶುಭವಾಗಲಿ ಎಂಭ ಹಾರೈಕೆಗಳು ನನ್ನ ಕಡೆ ಇಂದ.ನಮ್ಮ ಒಳಗಿನ ಕಚ್ಚಾಟ,ಜಗಳ,ನಗುಗಳು ಕೊನೆಯಾಗದು ಎಂಭ ವಿಶ್ವಾಸ ದೊಂದಿಗೆ .........
ನಿಮ್ಮ ಅಡ್ನಾಡಿ ಗೆಳೆಯ.
ರಾಘವೇಂದ್ರ ತೆಕ್ಕಾರ್.

Tuesday, October 25, 2011

ಈ ಅನಿಷ್ಟ ಪದ್ಧತಿ ಇಲ್ಲಿಗೆ ಕೊನೆಯಾಗಲಿ.

ಕೋಲಾರದ ಕೆ ಜಿ ಎಫ್  ಚಿನ್ನದ ಗಣಿ ಹೊತ್ತಿರುವ ಊರು.ಒಂದು ಕಾಲದಲ್ಲಿ ಇಲ್ಲಿ ದುಡಿಯುತಿದ್ದ ಒಂದಷ್ಟು ದಲಿತ ಮಂದಿ ರಾಶಿ ರಾಶಿ ಚಿನ್ನ ಹೊರತೆಗೆಯುತಿದ್ದರು ಹಾಗು ಗಣಿಯಾಳದಲ್ಲಿ ಅದಿರನ್ನು ಲೋಡ್ ಮಾಡುವ ಕಾಯಕವು ಇವರದಾಗಿತ್ತು.ಇದೆಲ್ಲದರ ಜೊತೆ ಜೊತೆಗೆ ಇವರನ್ನು ಅವತ್ತಿನಿಂದಲೇ ಪಾಯಿಖಾನೆ ಕ್ಲೀನ್ ಮಾಡುವ ಕೆಲಸಕ್ಕೂ ತೊಡಗಿಸಲಾಗುತಿತ್ತು.ಯಾವಾಗ ಚಿನ್ನದ ಗಣಿ ಮುಚ್ಚಲ್ಪಟ್ಟಿತು ಆವಾಗ ಈ ಜನಗಳಿಗೆ ಒಳಚರಂಡಿ ವ್ಯವಸ್ಥೆ ಹೊಂದಿರದ ಕೆ ಜಿ ಎಫ್ ಪಟ್ಟಣದಲ್ಲಿ ಜೀವನಕ್ಕೆ ಆಧಾರ ದುಡಿಮೆಯಾಗಿದ್ದು ಮಲಹೊರುವ ಪದ್ಧತಿ ಒಂದೆ.ತೋಟಿಗರು ಎಂದು ಕರೆಯಲ್ಪಡುವ ಈ ಜನಗಳಿಗೆ ಬೇರೆ ಉದ್ಯೋಗ ಮಾಡಲು ಅವಕಾಶವೇ ಇಲ್ಲದಂತೆ ವ್ಯವಸ್ಥೆ ನಿರ್ಮಾಣವಾಗಿದೆ.ಈ ವ್ಯವಸ್ಥೆ  ಇಂದ ಅದೆಷ್ಟೋ ಮಂದಿ ಅನಾರೋಗ್ಯ ಪೀಡಿತರಾಗಿದ್ದಾರೆ.ಹಲವಷ್ಟು ಜನ ಪ್ರಾಣ ಕಳಕೊಂಡಿದ್ದಾರೆ,ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ, ಸರ್ಕಾರಕ್ಕೂ,ಸ್ಥಳೀಯ  ಆಡಳಿತ ವ್ಯವಸ್ಥೆಗೂ ಈ ವಿಷಯದಲ್ಲಿ ಮಾಹಿತಿಗಳಿವೆ,ಸುಧಾರಿಸುವ ನಿಟ್ಟಿನಲ್ಲಿ ಅವಘಡಗಳು ನಡೆಯದಂತೆ ಎಚ್ಚರವಹಿಸುವ ಹಾಗು ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ  ಹಲವು ಭರವಸೆ ದೊರಕಿದ್ದರು ಅವುಗಳು ಭರವಸೆಗಷ್ಟೇ ಸೀಮಿತವಾಗಿದೆ ಅನ್ನುವದನ್ನು ನಿನ್ನೆ  ನಡೆದ ಘಟನೆ ಸಾಕ್ಷ ಒದಗಿಸುತ್ತಿದೆ.

ಹೌದು ಈ ವಿಷ ವ್ಯವಸ್ಥೆಗೆ ನಿನ್ನೆ ಮೂವರ ಬಲಿ ಆಗಿದೆ. ನಿನ್ನೆ ಬಲಿ ಆದವರು ಕೆ.ಜಿ.ಎಫ್ ನಲ್ಲಿ ಸಫಾಯಿ ಕರ್ಮಚಾರಿಗಳ ಹೋರಾಟ ಸಮಿತಿಯ ನಾಯಕರಾದ ಪ್ರಸಾದ್(ಕುಟ್ಟಿ) ನರೇಂದ್ರ ಕುಮಾರ್ ಮತ್ತು ರವಿ . ಇವರುಗಳು ಮಲಗುಂಡಿಯನ್ನು ಸ್ವಚ್ಚಗೊಳಿಸುವ ಸಂದರ್ಭದಲ್ಲಿ ಮಲದ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿರುವುದು.ಈ ಘಟನೆ ಹಿನ್ನಲೆಯಲ್ಲಿ ಈ ಹಿಂದೆ  ಆಗಸ್ಟ್ ೨೯ ರಂದು ಕೆಜಿಎಫ್‌ನ ಅಧ್ಯಕ್ಷ ಪಿ. ದಯಾನಂದ್ ಹಾಗೂ ಆಯುಕ್ತ ಬಾಲಚಂದರ್ ಸೇರಿ ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಕೆಜಿಎಫ್‌ನಲ್ಲಿ ಮಲಹೊರುವ ಪದ್ಧತಿ ಇದೆ ಎಂದು ಮಾಧ್ಯಮಗಳು ಹೇಳುತ್ತಿರುವುದೆಲ್ಲಾ ಸುಳ್ಳು ಎಂದೂ ಅವು ಅಮಾಯಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದೂ ಹೇಳಿದ್ದನ್ನು ನೆನಪಿಸಿಕೊಳ್ಳೋಣ.ಹಾಗೆ ನೋಡಿದಲ್ಲಿ ಇದು ಮೊದಲ ಬಾರಿಯ ಅವಘಡ ಅಲ್ಲ. ಕೆಲವು ತಿಂಗಳುಗಳ ಹಿಂದೆ ಸಕಲೇಶಪುರದಲ್ಲಿ ಮಹಾದೇವ ಮತ್ತು ಅರ್ಜುನ ಎಂಬುವವರು,ಕೋಲಾರದ ನಾಗರಾಜು ಮತ್ತು ಬಾಬು ಹೀಗೆ ಬಳಷ್ಟು ಪಟ್ಟಿಯನ್ನು ಮಾಡಬಹುದು.ಈ ಘಟನೆಗಳೆಲ್ಲ ನಡೆದಾಗ ಒಂದಷ್ಟು ಪರಿಹಾರ, ಪುನರ್ವಸತಿ ಎಂದು  ಮಾತನಾಡುವ ಆಡಳಿತ ಮಂದಿ ಈ ನಿಟ್ಟಿನಲ್ಲಿ ಕಾನುಬಹಿರವಾಗಿ ನಡೆಯುವ ಇಂತಹ ಚಟುವಟಿಕೆಗಳಿಗೆ ಇತಿಶ್ರೀ ಹಾಡುವಲ್ಲಿ ಮುಂದಾಗದಿರುವದು ವಿಪರ್ಯಾಸ.

1993ರಲ್ಲಿ ಜಾರಿಗೆ ಬಂದ ಸಫಾಯಿ ಕರ್ಮಾಚಾರಿಗಳ ಉದ್ಯೋಗ ಹಾಗೂ ಒಣಪಾಯಖಾನೆ (ನಿಷೇಧ) ಕಾಯ್ದೆಯು ಮಲಹೊರುವ ಪದ್ಧತಿಯನ್ನು ನಿಷೇಧಿಸಿದೆ.ಯಾರು ಈ ಕೆಲಸ ಮಾಡಿಸುತ್ತಾರೋ ಅಂತವರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ದಂಡ ಶಿಕ್ಷೆಯನ್ನೂ ವಿಧಿಸಬಹುದಾಗಿದೆ. ಆದರೆ ಈ ಕಾಯ್ದೆ ಜಾರಿಗೊಳಿಸಿ ೧೮ ವರ್ಷಗಳಾದರೂ ಈ ಕಾನೂನಿನಡಿ ಒಬ್ಬನೇ ಒಬ್ಬ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿರುವುದಾಗಲೀ, ಶಿಕ್ಷೆ ವಿಧಿಸಿರುವುದಾಗಲೀ ಇಲ್ಲ. ಈ ಕಾಯ್ದೆಯ ಪ್ರಕಾರ ಒಣಪಾಯಖಾನೆಗಳನ್ನು ಇಟ್ಟುಕೊಳ್ಳುವುದಾಗಲೀ ನಡೆಸುವುದಾಗಲೀ ಶಿಕ್ಷಾರ್ಹ ಅಪರಾಧ. ಹಾಗೆಯೇ ಮಲವನ್ನು ಪಾಯಖಾನೆಗಳಿಂದ ನೇರವಾಗಿಯಾಗಲೀ, ಗುಂಡಿಗಳಿಂದ ಸಾಗಿಸುವುದಾಗಲೀ ಅಪರಾಧ ಎನಿಸಿಕೊಳ್ಳುತ್ತದೆ. ಒಳಚರಂಡಿ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ಪಾಯಖಾನೆಗಳನ್ನು ಸೆಪ್ಟಿಕ್ ಟ್ಯಾಂಕ್‌ಗಳಿಗೆ ಜೋಡಿಸಿರತಕ್ಕದ್ದು. ಇದರಿಂದ ಹೀರುಯಂತ್ರಗನ್ನು ಬಳಸಿ (ಸಕಿಂಗ್ ಮಷೀನ್) ಮಲವನ್ನು ತೆಗೆಯಲು ಸಾಧ್ಯವಾಗುತ್ತದೆ ಎನ್ನುವ ಆಶಯ ಕಾಯ್ದೆಯಲ್ಲಿದೆ.ಆದರೆ ಈ ಕಾಯ್ದೆಯ ಒಂದು ಅಂಶ  ಕೂಡ ಜಾರಿಯಾಗದಿರುವದು ವಿಪರ್ಯಾಸ.ಎಲ್ಲ ಕ್ಷೇತ್ರದಲ್ಲೂ ತಂತ್ರಜ್ಞಾನ ಬೆಳೆಯುತ್ತಿದೆ,ಆದರು ಈ ವಿಷಯದಲ್ಲಿ ಇನ್ನು ಕೂಡ ಮಾನವ ಶಕ್ತಿ ಬಳಕೆ ಹಿಂದಿನಂತೆ ನಡೆಯುತ್ತಿದೆ ಎಂಬುದು ಸತ್ಯ. ಸಿಲಿಕಾನ್ ಸಿಟಿ ಅಂತ ತಂತ್ರಜ್ಞಾನ ನಿಟ್ಟಿನಲ್ಲಿ ಹೆಸರು ಪಡೆದ ಬೆಂಗಳೂರಿಗೆ ತಾಗಿ ಕೊಂಡೆ ಇರುವ ಕೆ ಜಿ ಎಫ್ ನಲ್ಲೂ ಇಂತದ್ದು ನಡೆಯುತ್ತಿದೆ ಎಂದರೆ ವ್ಯವಸ್ತೆಗೆ ಸಲ್ಲುವ ನಾಚಿಕೆಗೇಡು. ಹಾಗೆ ನೋಡಿದಲ್ಲಿ ಇದು ಬರಿಯ ಕೆ ಜಿ ಎಫ್ ಗೆ ಸಿಮೀತವಾಗಿದ್ದಲ್ಲ , ಬಹಳ ದಿನಗಳಿಂದ ಗೆಳೆಯ ದಯಾನಂದ್ ಮತ್ತು ಬಳಗ ದವರು ಈ ನಿಟ್ಟಿನಲ್ಲಿ ಮಾಹಿತಿ ಕಲೆ ಹಾಕಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಈ ಪದ್ಧತಿ ಜೀವಂತ ವಿದೆ ಎಂಬುದನ್ನು ಪುರಾವೆ ಸಮೇತ ತೋರಿಸುತಿದ್ದಾರೆ.ಈ ಅನಿಷ್ಟ ಪದ್ದತಿಗಳು ಸಂಪೂರ್ಣ  ತೊಲಗಲೇ ಬೇಕಾಗಿದೆ, ಇಲ್ಲದಲ್ಲಿ ನಮ್ಮನ್ನು ನಾವು ಅಸಹ್ಯಿಸಿಕೊಂಡು ಸಮಾಜದ ಒಂದು ವರ್ಗ ತುಳಿತಕ್ಕೆ ಒಳಗಾಗುವದನ್ನು ನೋಡುತ್ತಾ ಕೈ ಕಟ್ಟಿ ಕುತಿರುವದು ಕಷ್ಟ.

ದೀಪಾವಳಿಯ ಈ ದಿನದಂದು ಏನಾದರು ವಿಶೇಷ ಬರೆಯಬೇಕೆಂದಿದ್ದೆ. ಸಾವಿನ ಸುದ್ದಿ ಬರೆಯಬೇಕಾಗಿ ಬಂದಿದೆ. ಅಷ್ಟಕ್ಕೂ ದೀಪದಿಂದ ದೀಪ ಹಚ್ಚಿ ಮಾನವೀಯತೆ ಮೆರೆಯುವ ಹಬ್ಬ ,ಹೀಗೆ ಭಾವಿಸಿ ದೀಪಾವಳಿ ಆಚರಿಸುತ್ತಿರುವ ನನಗೆ  ಇದೆ ಸರಿ ಅಂದುಕೊಂಡು ಬರೆದಿದ್ದೇನೆ ಅನ್ನುವದಕ್ಕಿಂತ ಮಾಹಿತಿಗಳನ್ನ ನಮೂದಿಸಿದ್ದೇನೆ.ಇನ್ನಾದರೂ ಸರ್ಕಾರ ಕಣ್ಣು ತೆರೆಯಲಿ ಆ ಮೂಲಕ ಈ ಪದ್ಧತಿ ಇಂದ ಶೋಷಣೆಗೊಳಗಾದವರ ಬಾಳಿನಲ್ಲಿ ಬೆಳಕು ಮೂಡಲಿ. ಆ ಮೂಲಕ ಸತ್ತವರ ಸಾವುಗಳು ಚಿರಾಯುವಾಗಲಿ,ಈ ಅನಿಷ್ಟ ತೊಲಗಿಸುವ ಬಗ್ಗೆ ದುಡಿಯುತ್ತಿರುವ ಎಲ್ಲರಿಗೂ ಸಫಲತೆ ಸಿಗಲಿ ಎಂಬುದನ್ನು ಬಯಸೋಣ.
( ಮಾಹಿತಿಗಳನ್ನು ಸಂಡೆ ಇಂಡಿಯನ್ ಪತ್ರಿಕೆ ಇಂದಲೂ ಪಡೆದು ಇಲ್ಲಿ ಬಳಸಿಕೊಂಡಿರುವೆ,ಈ ಮೂಲಕ ಅವರಿಗೆ ನನ್ನದೊಂದು ಕೃತಜ್ಞತೆ ಇದ್ದೆ ಇರುತ್ತದೆ )
ನಿಮ್ಮವ..................
ರಾಘವೇಂದ್ರ ತೆಕ್ಕಾರ್ 

Sunday, October 23, 2011

ತಮ್ಮ ಐಡೆ೦ಟಿಟಿ ಡಾಕುಮೆಂಟ್ ಸಮಸ್ಯೆ ನೀಗಿಸುವಲ್ಲಿ ಅಧಾರ ಆಗಬಲ್ಲುದೇ -ಆಧಾರ್ ಕಾರ್ಡ್ ಯೋಜನೆ?

ನಮ್ಮಲ್ಲಿ ನಮ್ಮ ಜನನ ಪ್ರಮಾಣ ಪತ್ರ ಪಡೆಯಲು ,ಚಾಲನ ಪರವಾನಿಗೆಯನ್ನು ಪಡೆಯಲು,ರೇಶನ್ ಕಾರ್ಡ್ ಪಡೆಯಲು,ಮತದಾನದ ಕಾರ್ಡ್ ಪಡೆಯಲು ,ಪಾಸ್ ಪೋರ್ಟ್ ಮುಂತಾದವುಗಳನ್ನು ಪಡೆದು ಇದನ್ನೇ ನಮ್ಮ ಐಡೆ೦ಟಿಟಿ ಯನ್ನಾಗಿ ಬಳಸಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನೂ ಪಡೆಯುವಲ್ಲಿ ಎಷ್ಟೊಂದು ವೇಳೆ , ಹಣ ಮತ್ತು ಕಿರಿ ಕಿರಿ ಯನ್ನು ಅನುಭವಿಸುತಿದ್ದೆವಲ್ಲ? ಜೀವನವೇ ಈ ಐಡೆ೦ಟಿಟಿ ಡಾಕುಮೆಂಟ್ ಗಳ ಮೇಲೆ ನಿಂತಿದೆಯಲ್ಲ ? ಇವು ಯಾವುದು ಇಲ್ಲದೆ ನಾವು ಬದುಕುವದೆ ದುಸ್ಥರ ಅನ್ನೋ ಈ ದಿನಗಳಲ್ಲಿ ಇದನ್ನು ಪಡೆಯುವಲ್ಲಿ ವ್ಯವಸ್ಥೆಗಳು ಸುಲಭವಾದಲ್ಲಿ ಜನಸಾಮಾನ್ಯನಿಗೆ ಅನುಕೂಲ ಹೆಚ್ಚು. ಸ್ವಾಮಿ ಎಲ್ಲವೂ ಮನೆ ಬಾಗಿಲಿಗೆ ಬರಲು ಸಾಧ್ಯವೇ? ಸ್ವಲ್ಪ ಕಷ್ಟ ಪಡಬೇಕು ಅನ್ನುವವರು ಇರಬಹುದು. ಇಂದಿನ ಜನರಿಗೆ ಮೂಲಭೂತವಾಗಿ ಅವಶ್ಯವಾಗಿರುವ ಈ ವ್ಯವಸ್ಥೆ ಇನ್ನು ಸರಳಿಕೃತವಾಗಿ ಎಲ್ಲರಿಗೂ ಸುಲಭದಲ್ಲಿ ದೊರಕುವಂತೆ ಆಗಲಿ ಅನ್ನುವದನ್ನ ಅಷಿಸುವದು ತಪ್ಪಲ್ಲ ಅಂದುಕೊಂಡೆ ಈ ಲೇಖನ ಬರೆಯಲು ಶುರು ಹಚ್ಚಿಕೊಂಡಿದ್ದೇನೆ.
ನೀವೇ ಅನ್ನುವದಕ್ಕೆ ಡಾಕುಮೆಂಟ್ ಒದಗಿಸಬೇಕು.

ನಾವು ಒಂದು ಊರಲ್ಲಿ ಹುಟ್ಟಿ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ನಿಮಿತ್ತ ಬೇರೆ ಊರುಕಡೆ ಅಥವಾ ಉದ್ಯೋಗದಲ್ಲಿ ಇದ್ದು ಕೊಂಡು ಬೇರೆ ಊರು ರಾಜ್ಯಗಳಲ್ಲಿ ನೆಲೆ ಕಂಡುಕೊಳ್ಳಬೇಕಾದದ್ದು ಇವತ್ತಿನ ಅನಿವಾರ್ಯತೆ. ಅವಾಗ ನಮ್ಮ ಈ ಐಡೆ೦ಟಿಟಿ ಡಾಕುಮೆಂಟ್ ಗಳಲ್ಲಿ ಯುನಿಫಾರ್ಮಿಟಿ ಕಾಯ್ದು ಕೊಳ್ಳೋದು ಕಷ್ಟ ಸಾಧ್ಯವೇ ಸರಿ.ಅದಕ್ಕಾಗಿ ಬೆಂಗಳೂರು ಅಂತ ನಗರ ಜನತೆ (ಬೆಂಗಳೂರು ಉದಾಹರಣೆ ನಿಮಿತ್ತ ಮಾತ್ರ)ತಮ್ಮನ್ನು ತಾವು ಅಂತ ನಿರುಪಿಸಬಹುದಾದ ಸ್ಥಳೀಯ ಡಾಕುಮೆಂಟ್ ರೂಪಿಸಿಕೊಳ್ಳಲು ಪಡುವ ಪರಿಪಾಟಲು ಸಣ್ಣದೇನಲ್ಲ.ಅಂತಹ ಅದೆಷ್ಟೋ ಸಂದರ್ಭ ನನಗು ಕೆಲವು ವರುಷಗಳ ಹಿಂದೆ ಒದಗಿ ಬಂದುದರಿಂದ ಆ ದಿನಗಳಲ್ಲಿ ಯಪ್ಪಾ ಈ ಡಾಕುಮೆಂಟ್ ರುಪಿಸಿಕೊಳ್ಳುವದರಲ್ಲಿ ಇಸ್ಟೊಂದು ಕಷ್ಟ ಪಡಬೇಕೆ? ಇದರ ಪ್ರೋಸಿಜರ್ ಇನ್ನಷ್ಟು ಸುಲಭ ಗೊಳಿಸುವಲ್ಲಿ ಸಾದ್ಯತೆಗಳು ಇದ್ದಾಗ್ಯೂ ಕೂಡ ಯಾರು ಮನಸ್ಸು ಮಾಡಿಲ್ಲ ಹಾಗು ಮಾಡದಿರುವದು ಏಕೆ? ಅನ್ನೋ ಪ್ರಶ್ನೆಗಳು ಕಾಡಿದ್ದು ಸಹಜ. ನಾವಿನ್ನು ಹಳೆಯ ಓಬಿರಾಯನ ಕಾಲದ ಪ್ರೋಸಿಜರ್ ಮೂಲಕ ಈ ಡಾಕುಮೆಂಟ್ ಪಡೆದುಕೊಳ್ಳಬೇಕಾಗಿರುವುದು ೨೧ನೆ ಶತಮಾನದ ಸತ್ಯ.ಈ ವ್ಯವಸ್ಥೆಯಲ್ಲಿ ಈ ಐಡೆ೦ಟಿಟಿ ಡಾಕುಮೆಂಟ್ ಪಡೆಯುವಲ್ಲಿ ಅನುಭವಿಸುವ ಕಷ್ಟ ಅನಿವಾರ್ಯತೆಗಳನ್ನು ನನ್ನ ಅನುಭವಕ್ಕೆ ಬಂದಂತೆ ಕೆಲವೊಂದನ್ನು ದಾಖಲಿಸುತ್ತೇನೆ ನೋಡಿ.

ಒಂದು ಗ್ಯಾಸ್ ಕನೆಕ್ಷನ್ ನಾನು ಪಡೆಯಬೇಕು, ಅದಕ್ಕಾಗಿ ನನಗೆ ಇಲ್ಲಿ ಒಂದು ಲೋಕಲ್ ಅಡ್ರೆಸ್ಸ್ ಪ್ರೂಫ್ ಬೇಕು,ಬೆಂಗಳುರಂತ ಮಹಾ ನಗರದಲ್ಲಿ ಒಂದಷ್ಟು ಮಂದಿ ಒಟ್ಟಾಗೆ ಒಂದು ಮನೆ ಹಿಡಿದು ಜೀವನ ನಡೆಸುತ್ತಿರಬೇಕಾದರೆ ಪ್ರತಿಯೊಬ್ಬರೂ ಈ ಅಡ್ರೆಸ್ಸ್ ಪ್ರೂಫ್ ಗಾಗಿ ರೆಂಟ್ ಅಗ್ರಿಮೆಂಟ್ ಉತ್ಪತ್ತಿ ಮಾಡುವದು ಎಲ್ಲಿಂದ??? ಇನ್ನು ಇಲ್ಲಿಯದೇ ವಿಳಾಸ ಹೊಂದಿದ  ಮತದಾನ ಕಾರ್ಡ್ ಪಡೆಯಲು ಲೋಕಲ್ ಅಡ್ರೆಸ್ಸ್ ಪ್ರೂಫ್ ಬೇಕು, ಇಲ್ಲಿಯದೇ ಮತದಾನ ಪತ್ರವು ಗ್ಯಾಸ್ ಕನೆಕ್ಷನ್ ಪಡೆಯುವಲ್ಲಿ ಅನಿವಾರ್ಯ ಹಾಗಿದ್ದಲ್ಲಿ ಅವನಿಗೆ ಅಗತ್ಯವಿರುವ ಈ ಸೌಲಬ್ಯ ಪಡೆಯುವುದು ಎಂತು? ಸರಿ ನನ್ನಲ್ಲಿ ಲೋಕಲ್ ಅಡ್ರೆಸ್ಸ್ ಪ್ರೂಫ್ ಇದೆ ಆದರೆ ರೇಷನ್ ಕಾರ್ಡ್ ಸೌಲಬ್ಯ ಪಡೆಯಲು ತನ್ನ ಊರಿನಿಂದ ತನ್ನ ಮೂಲ ರೇಷನ್ ಕಾರ್ಡ್ನಲ್ಲಿರುವ ತನ್ನ ಹೆಸರನ್ನು ತೆಗೆಸುವ ಮೂಲಕ ಪ್ರೋಸಿಜರ್ ಶುರು ಹಚ್ಚಿಕೊಳ್ಳಬೇಕು,ದುಡಿಯುದಕ್ಕಾಗೆ ನಗರ ಸೇರಿರುವ ಮಂದಿಗೆ ಇವಿಷ್ಟು ವೇಳೆ ಸಿಗಲಾರದು ? ಇನ್ನು ಒಂದು ಬ್ಯಾಂಕ್ ಅಕೌಂಟ್ ತೆರೆಯಬೇಕು,ಒಂದು ಬ್ರಾಡ್ ಬ್ಯಾಂಡ್ ಕನೆಕ್ಷನ್ ಹಾಕಿಸಿಕೊಳ್ಳಬೇಕು ಹೀಗೆ ಇನ್ನು ಮುಂತಾದ ಕೆಲಸಗಳಲ್ಲಿ ಈ ತಾಪತ್ರಯ ನಾವು ಅನಿವಾರ್ಯವಾಗಿ ಪಡೆಯಲೇ ಬೇಕು.ಇಸ್ಟೆಲ್ಲಾ ಕಷ್ಟ ಪಡುವ ಬದಲು ಜನ ಒಂದಷ್ಟು ಲಂಚ ಎಸೆಯುತ್ತಾರೆ,ಪೋರ್ಜರಿ ದಾಖಲೆಗಳನ್ನು ತನ್ನ ಐಡೆ೦ಟಿಟಿ ಡಾಕುಮೆಂಟ್ ಪಡೆಯುವ ನಿಟ್ಟಿನಲ್ಲಿ ರೆಡಿ ಮಾಡಿಕೊಳ್ಳುತ್ತಾರೆ, ಆ ಮೂಲಕ ಬ್ರಷ್ಟಾಚಾರಕ್ಕೆ ತಮಗೆ ಅನಿವಾರ್ಯ ಎಂಬೋ ನಿಟ್ಟಲ್ಲಿ ಕೊಡುಗೆ ಕೊಡುತ್ತಾ ಸಾಗುತ್ತಾರೆ, ಹಾಗಿದ್ದಲ್ಲಿ ನಾವು ಕಟ್ಟಿಕೊಂಡ ವ್ಯವಸ್ಥೆಯು ಬ್ರಷ್ಟಾಚಾರ ನಿರ್ಮೂಲನೆ ಮಾಡುವದಕ್ಕೆ ಬದಲಾಗಬೇಕಿದೆ ಅಲ್ಲವೇ?ಅದಕ್ಕಾಗೆ ನಾನಾಗಲೇ ಅಂದಿದ್ದು ವ್ಯವಸ್ಥೆ ಸರಳಿಕೃತ ಆಗಬೇಕು ಆ ಮೂಲಕ ಜನರೆಲ್ಲರಿಗೂ ಸುಲಭದಲ್ಲಿ ಮೂಲಭೂತ ಅವಶ್ಯ ಐಡೆ೦ಟಿಟಿ ಡಾಕುಮೆಂಟ್ ಸಿಗುವಂತೆ ಆಗಬೇಕು ಅಂದಿದ್ದು.ಈ ಬಗ್ಗೆ ಇನ್ನು ಕೆಲವೊಂದು ಆಯಾಮಗಳನ್ನು ನೋಡೋಣ.

ಒಂದು ಪಾನ್ ಕಾರ್ಡ್ ಪಡೆಯಬೇಕು ಅಂತಿಟ್ಟುಕೊಳ್ಳಿ, ನಿಮ್ಮ ಚಾಲನ ಅನುಮತಿ ಪತ್ರ(ಬೆಂಗಳೂರ್ ವಿಳಾಸದ್ದು) ಹಾಗು ನಿಮ್ಮ ವೋಟರ್ ಕಾರ್ಡನ್ನು(ನಿಮ್ಮ ಊರ ವಿಳಾಸದ್ದು) ಪ್ರೊಫ್ ಗಾಗಿ ಬಳಸುತ್ತಿರಿ,ಇದಕ್ಕಾಗಿ ಅಡ್ರೆಸ್ಸ್ ಅನ್ನು ನಿಮ್ಮ ಕಂಪನಿ ವಿಳಾಸ ಕೊಡುತ್ತಿರಿ ಅಂತಾದರೆ ಖಂಡಿತವಾಗಿಯೂ ನಿಮಗೆ ಆಗ ಪಾನ್ ಕಾರ್ಡ್ ಐಡೆ೦ಟಿಟಿ ಕಾರ್ಡ್ ಗಳ ಯುನಿಫಾರ್ಮಿಟಿ ಕೊರತೆ ಇದೆ ಎಂಬ ನಿಟ್ಟಿನಲ್ಲಿ ನಿಮಗೆ ದೊರಕಲಾರದು.ನೀವುಯಾವುದೇ ಪೋರ್ಜರಿ ಮಾಡಿಲ್ಲ, ನಿಮ್ಮ ಅಗತ್ಯಕ್ಕೆ ತಕ್ಕಂತೆ ಅನುಕೂಲವಾಗುವದು ಎಂಭ ನಿಟ್ಟಲ್ಲಿ ನಿಮ್ಮ ಕಂಪನಿ ವಿಳಾಸ ಕೊಟ್ಟಿದ್ದರು ಕೂಡ ಪ್ರೋಸಿಜರ್ ಪ್ರಕಾರ ಸರಿ ಹೊಂದಿಕೆ ಬರದೆ ತಿರಸ್ಕರಿಸಲ್ಪಡುತ್ತದೆ.

ನಮ್ಮಲ್ಲಿ ಪಾಸ್ ಪೋರ್ಟ್ ಇದೆ ,ನಾವೀಗ ಯು ಎಸ್ ಹೋಗಬೇಕೆಂದು ವಿಸಾಕ್ಕೆ ಅಪ್ಲೈ ಮಾಡುತ್ತೇವೆ ಅಂತಿಟ್ಟುಕೊಳ್ಳಿ.ನಮ್ಮ ತಂದೆ ಹಳ್ಳಿಗರು ಅವರಲ್ಲಿ ಜನನ ಪ್ರಮಾಣ ಪತ್ರ ಇಲ್ಲ.ಇದರಿಂದಾಗಿ ನಮ್ಮ ತಂದೆಯ ಹೆಸರು ನಮ್ಮ ಬ್ಯಾಂಕ್ ಪಾಸ್ ಬುಕ್ ಮತ್ತು ಪಾಸ್ ಪೋರ್ಟ್ ನಲ್ಲಿ ಒಂದಕ್ಷರ ವ್ಯತ್ಯಾಸವಾಗಿದೆ ಅಂತಿಟ್ಟುಕೊಳ್ಳಿ .ಹೀಗಿರುವಾಗ ಇದೊಂದೇ ಕಾರಣದಿಂದ ನಾವು ಅಪ್ಲೈ ಮಾಡಿದ ವಿಸಾ ನಿರಾಕರಣೆ ಆಗಬಹುದು.ಯು ಎಸ್ ಹೋಗಬೇಕಾದವ್ರು ನಾವು ನಮಗಡ್ಡಿಯಾಗುವದು ಡಾಕುಮೆಂಟ್ ನಲ್ಲಿ ವಿಬಿನ್ನವಾಗಿ ನಮೂದಾಗಿರುವ ನಮ್ಮ ತಂದೆಯ ಹೆಸರು.ಇಲ್ಲಿ ನಾನು ಹೇಳಿರುವದು ಕೆಲವು ಆಯಾಮಗಳಷ್ಟೇ ಇಂಥ ಹಲವಷ್ಟು ಬೇರೆ ಬೇರೆ ಅನುಭವಗಳು ನಮಗಿದೆ ಅಲ್ಲವೇ?

ಮೊದಲಿನ ಹಾಗೆ ಈಗ ಜನ ಯಾವುದೇ ಒಂದು ಪಟ್ಟಣ ಹಳ್ಳಿಯನ್ನು ನಗರವನ್ನು(ಕೆಲವರನ್ನು ಬಿಟ್ಟು)ಅವಲಂಭಿಸಿ ಇಲ್ಲ.ಹಾಗಿರಬೇಕಾದರೆ ಅಡ್ರೆಸ್ಸ್ ಪ್ರೂಫ್ ಅನ್ನುವದು ಕೂಡ ಒಂದು ಅನಿಶ್ಚಯತೆ ಇಂದ ಕೂಡಿದ್ದು ಅಲ್ಲವೇ.ಹಾಗಿದ್ದಲ್ಲಿ ಈ ಐಡೆ೦ಟಿಟಿ ಡಾಕುಮೆಂಟ್ ಪಡೆಯುವಲ್ಲಿ ಮತ್ತು ಆ ಮೂಲಕ ಸೌಲಭ್ಯ ಗಳನ್ನೂ ಪಡೆಯುವಲ್ಲಿ ವ್ಯವಸ್ಥೆಗಳು ಸರಳಿಕೃತ ಆಗಬೇಕು.ಇಲ್ಲದಿದ್ದಲ್ಲಿ ಈ ವ್ಯವಸ್ಥೆ ಕೂಡ ಬ್ರಷ್ಟಚಾರಕ್ಕೆ ತನ್ನದೇ ಆದ ಕೊಡುಗೆಯನ್ನು ಹಿಂದೆಯೂ ನೀಡಿದಂತೆ ಮುಂದೆಯೂ ನೀಡಬಲ್ಲುದು.ಹೀಗಿರುವಾಗ ದೇಶದೆಲ್ಲಡೆ ಬಳಕೆಯಾಗಬಲ್ಲ ಐಡೆ೦ಟಿಟಿ ವ್ಯವಸ್ಥೆ ಬೇಕು,ಈ ನಿಟ್ಟಲ್ಲಿ ಆಧಾರ್ ಕಾರ್ಡ್ ಒಂದು ದಾರಿಯಾಗ ಬಹುದು ಎಂಬ ಆಶಯ ನನ್ನದು.ಆದರೆ ಇದ ಪಡೆಯುವಲ್ಲಿ ಕೂಡ ಪ್ರೋಸಿಜರ್ ಸುಲಭವಾಗಬೇಕಾದ ಅಗತ್ಯ ಇದೆ. ಖಾಸಗಿ ಸಂಸ್ಥೆಗಳ ಸಹಬಾಗಿತ್ವ ದೊಂದಿಗೆ ಇದ ಜನರಿಗೆ ತಲುಪಿಸುವಲ್ಲಿ ಪ್ರಯತ್ನ ಇನ್ನು ಮುಂದೆ ನಡೆಯುತ್ತದೆ ಅಂಬುದನ್ನು ಕೇಳ್ಪಟ್ಟೆ.ಹಾಗಾದಲ್ಲಿ ಉತ್ತಮ ಅನ್ನುವದು ನನ್ನ ಅಭಿಪ್ರಾಯ.ಒಟ್ಟಿನಲ್ಲಿ ಈ ವ್ಯವಸ್ತೆ ಒಳಿತನ್ನು ಮಾಡಲಿ ಅನ್ನುವ ಕಳಕಳಿಯೊಂದಿಗೆ ಭಾರತೀಯ ಪ್ರತಿಯೊಬ್ಬನಿಗೆ ಸುಲಭದಲ್ಲಿ ಈ ವ್ಯವಸ್ಥೆ ದೊರಕಲಿ ಎಂಬುದಷ್ಟೇ ನನ್ನ ಹಾರೈಕೆ.

ನಿಮ್ಮವ .............
ರಾಘವೇಂದ್ರ ತೆಕ್ಕಾರ್

Friday, October 21, 2011

ಅಂಗಡಿ ರಂಗ

ಸಹೋದರ ವಿಘ್ನೇಶ್ ತೆಕ್ಕಾರ್ ಲೇಖನಿ ಇಂದ ಮೂಡಿಬಂದ ಸಣ್ಣ ಕಥೆ:-

ಗಾಜಿನ ಡಬ್ಬದ ತಳದಲ್ಲಿ ನಾಲ್ಕಾರು ಸಕ್ಕರೆ ಮಿಟಾಯಿಗಳು,ಪಕ್ಕದ ಡಬ್ಬದಲ್ಲಿ ಹರುಕು ಮುರುಕು ಅಂದ ಕಳೆದುಕೊಂಡ ಚಕ್ಕುಲಿಗಳು , ಮತ್ತೊಂದು ಡಬ್ಬದಲ್ಲಿ ಎಂದೋ ತಂದಿಟ್ಟ ಬಣ್ಣ ಕಳೆದುಕೊಂಡ ಪೆಪ್ಪರ್ ಮಿಟಾಯಿಗಳು , ಸೂರಿನ ಅಡ್ಡಕ್ಕೆ ತೂಗಿಟ್ಟ ಬಾಳೆ ಗೊನೆಯಲ್ಲಿ ನೇಣು ಹಾಕಿಕೊಂಡ ಒಂದು,ಎರಡು ಮತ್ತು ಮತ್ತೊಂದು ,ಒಟ್ಟು ಮೂರೂ ಕದಳಿ ಹಣ್ಣುಗಳು,ಹಿಂದಿನ ಗೋಡೆಗೆ ಮೊಳೆಹೊಡೆದು ಕಟ್ಟಿದ ಹಗ್ಗದಲ್ಲಿ ಹಿಡಿದ ದೂಳಿನಲ್ಲೂ ಮಿರ ಮಿರ ಮಿಂಚುವ ಪಾನ್ ಪರಾಗ್ , ಗುಟ್ಕಾ ಮಾಲೆಗಳು , ಒಂದು ಕಾಲು ಮುರಿದ ಟೇಬಲಿನ ಮೂಲೆಯಲ್ಲಿನ ಪೆಟ್ಟಿಗೆ ಯಲ್ಲಿ ಇನ್ನೇನು ಚಲಾವಣೆಯ ಕೊನೆ ಅಂಚಿನಲ್ಲಿರುವ ಒಂದೆರಡು ನಾಣ್ಯಗಳು , ಪೆಟ್ಟಿಗೆ ಪಕ್ಕದಲ್ಲಿಟ್ಟ ಬಾಕ್ಸಿನಲ್ಲಿ ತುಟಿಗೆ ಚುಂಬಿಸಿ ಮೋಕ್ಷಪಡೆಯಲು ಹಪಹಪಿಸುವ ಗಣೇಶ ಬೀಡಿಗಳು,ಇನ್ನೊಂದು ಮೂಲೆಯಲ್ಲಿ ದಶಕಗಳಿಂದ ಮುಕ್ತಿ ಪಡೆಯದೇ ಬಿದ್ದ ಗೋಲಿ ಸೋಡಾ ಬಾಟಲಿಗಳು , ಇವೆಲ್ಲದರ ನಡುವೆ ಮುತ್ತಾತನ ಕಾಲದ ಮರದ ಕುರ್ಚಿಯಲ್ಲಿ ವಿರಾಜಮಾನನಾಗಿರುವ ಅದರುವ ಅದರಗಳ ರಂಗಜ್ಜ.ಕ್ಷಮಿಸಿ ,ಕ್ಷಮಿಸಿ , ಎಪ್ಪತೈದು ವರ್ಷ ಪ್ರಾಯದ ನವ ತರುಣ ರಂಗ. ಅಯ್ಯೋ ಇದೇನಿದು ಈ ಹಣ್ಣು ಹಣ್ಣು ಮುದುಕನನ್ನು ಸರಿ ವಿರೋದ ಶಬ್ದಗಳಿಂದ ಪರಿಚಿಸುವದು ನಿಮಗಿಷ್ಟವಾಗಿರಲಿಕ್ಕಿಲ್ಲ..ಆದರೆ ರಂಗನಿಗಂತೂ ಆನಂದವಾದಿತು.ಇದು ನಮ್ಮೂರು ಹರಿಪುರದಲ್ಲಿ ಮೂರೂ ದಶಕಗಳಿಗಿಂತಲೂ ಹೆಚ್ಚು ವರುಷಗಳಿಂದ ನೆಲೆ ನಿಂತಿದ್ದ ವ್ಯಾಪಾರಿ ರಂಗನ ಚಿತ್ರಣ.
                
ಅದೊಂದು ಮುಸ್ಸಂಜೆ ನಾನು ನನ್ನೂರು ಹರಿಪುರದ ಮನೆಯಲ್ಲಿ ಏನೋ ಗಿಚುತ್ತಾ ಕೂತಿದ್ದೆ . ನನಗಂತೂ ಕಥೆ.ಕವನಗಳನ್ನು ಬರೆಯುವ ಹುಚ್ಚು.ಕೈಗೆ ಸಿಕ್ಕಿದ ಕಾಗದ ಚೂರಿನಲ್ಲೊಂದು ಶಾಸನ ಬರೆದಿಡುವ ಕೆಟ್ಟ ಬುದ್ದಿ ಎಂದು ನೀವೆ೦ದರೂ, ಒಳ್ಳೆಯ ಹವ್ಯಾಸ ನನ್ನದು.ಆ ದಿನವೂ ನನ್ನ ಮೇಜಿನ ಅಂಚಿನಲ್ಲಿದ್ದ ಕಾರ್ಡ್ ನಲ್ಲೊಂದು ಕವನ ಬರೆಯುವ ಮನಸ್ಸಾಯಿತು. ಮುಗಿಲಿನ ಬಗ್ಗೆ ಕವನ ಜೀವ ತಳೆಯಲು ಆರಂಭಿಸಿದಾಗ ಪಕ್ಕನೆ ಕಾರ್ಡ್ ಅನ್ನು ತಿರುಗಿಸಿ ನೋಡುತ್ತೇನೆ, ಅದು ನಮ್ಮೂರು ವ್ಯಾಪಾರಿ ಪುಣ್ಯತಿಥಿಯ ಆಮಂತ್ರಣ ಪತ್ರಿಕೆ.ರಂಗ ತೀರಿಕೊಂಡ ಎಂಬುದಾಗಿ ಕೆಲ ವಾರದ ಹಿಂದಷ್ಟೇ ಮನೆ ಇಂದ ಫೋನಿನ ಮೂಲಕ ತಿಳಿದಾಗಲೇ ಮನಸ್ಸಿಗೆ ಬೇಸರವಾಗಿತ್ತು.ರಂಗನ ಜೀವನವನ್ನು ಹತ್ತಿರದಿಂದ ನೋಡಿದವರಿಗೆ ಆತನ ಮರಣ ಖಂಡಿತ ಬೇಸರವನ್ನುಂಟು ಮಾಡುತ್ತದೆ.ರಂಗ ಬದುಕಿದ್ದ ರೀತಿ ಹಾಗಿತ್ತು.ಆತ ಅನುಭವಿಸಿದ ನೋವು,ಆತನ ದೇಶ ಭಕ್ತಿ , ಸ್ವಾವಲಂಬನೆ ಎಂತವರನ್ನು ಸೆಳೆಯುವಂತದ್ದು.ನನ್ನ ಮನದ ಮೂಲೆಯಲ್ಲಿ ರಂಗನ ಪುಣ್ಯ ತಿಥಿಯ ಕಾರ್ಡಿನ ಮೇಲೆ ಕವನ ಗೀಚಿದ್ದಕ್ಕೆ ಖಿನ್ನತೆ ಎನಿಸಿದರೂ, ಆತನ ಜೀವನ ಕಥೆಯನ್ನು ನಿಮ್ಮ ಮುಂದಿಡುವ ಯೋಚನೆ ಹುಟ್ಟಿದ್ದು ಆ ಕ್ಷಣದಲ್ಲೇ.
                    
ಹರಿಪುರ ಎಂಬ ಹೆಸರು ನಮ್ಮೂರಿನ ದೇವರಾದ ಹರಿಹರೇಶ್ವರ ನೆಲೆ ನಿಂತ ತಾಣವಾದ್ದರಿಂದ ಬಂದಿದೆ ಎಂಬುದು ಪ್ರತೀತಿ.ಅತ್ತ ಕರಾವಳಿಯು ಅಲ್ಲ, ಮಲೆನಾಡು ಅಲ್ಲ,ಎಂಬಂತೆ ಭೌಗೋಳಿಕವಾಗಿ ರೂಪಿತವಾದ ಐನೂರರಿಂದ ಆರುನೂರರವರೆಗೆ ಜನಸಂಖ್ಯೆಯಿಂದ ಕೂಡಿದ ಹಳ್ಳಿ. ಭತ್ತದ ಗದ್ದೆಗಳು, ಮುಗಿಲೆತ್ತರಕ್ಕೆ ಎದ್ದು ನಿಂತ ಅಡಿಕೆ ತೋಟಗಳು, ಅಲ್ಲಲ್ಲಿ ತೊಂಡೆಕಾಯಿ ಚಪ್ಪರಗಳು,ಕುಂಬಳಕಾಯಿ,ಹಾಗಲಕಾಯಿ ಬೀಳುಗಳು,ಗೆಣಸು,ಮರಗೆಣಸುಗಳ ಸಾಲುಗಳು,ವೀಳ್ಯದೆಲೆ ಬೀಳುಗಳನ್ನು ಮೈಯೆಲ್ಲಾ ಸುತ್ತಿಕೊಂಡು ಆಕಾಶದೆಡೆಗೆ ದಿಟ್ಟವಾಗಿ ನಿಂತ ಕೋಲುಗಳು ಹಳ್ಳಿಗರ ಕೃಷಿ ಆಧಾರಿತ ಜೀವನವನ್ನು ಬಿಂಬಿಸುತ್ತದೆ.ಹಲವು ಸಾಧಕರಿಗೆ ಶಿಕ್ಷಣವನ್ನಿತ್ತ ಅನುದಾನಿತ ಖಾಸಗಿ ಶಾಲೆಯೊಂದು ಸುಮಾರು ಅರವತ್ತು ವರ್ಷಗಳಿಂದ ಹರಿಹರಪುರದ ವಿದ್ಯಾದೇಗುಲವಾಗಿದೆ.ಕಾಡುಗಲ್ಲುಗಳನ್ನೋಳಗೊಂಡ ಪಕ್ಕಾ ಮಣ್ಣಿನ ರಸ್ತೆಯಲ್ಲಿ ತೆವಳುತ್ತಾ ಕೆಂಪು ದಟ್ಟ ದೂಳನ್ನೆಬ್ಬಿಸುತ್ತ ದಿನಕ್ಕೆರಡು ಬಾರಿ ಬಂದು ಹೋಗುವ ಶ್ರೀ ವೀರಭದ್ರ ಟ್ರಾವೆಲ್ಸ್ ಹರಿಹರಪುರದ ಜನರನ್ನು,ತರಕಾರಿ ಮೂಟೆಗಳನ್ನೂ, ಆಡು ಕುರಿ ಕೋಳಿಗಳನ್ನು ಸಾಗಿಸುವ ಏಕೈಕ ಸಾರಿಗೆ.ಮಲೆನಾಡ ಕೊರಕಲುಗಳಲ್ಲಿ ಹುಟ್ಟಿ ಹರಿಹರಪುರದ ಮೂಲಕ ಹರಿಯುವ ತೊರೆಯೊಂದು ಜನ-ದನಕರುಗಳ ಬಾಯಾರಿಕೆ ತಣಿಸುವ ಜಲ ಸಂಪನ್ಮೂಲ. ಯುವಕ ಯುವತಿಯರ ಪ್ರಗತಿಯ ಸಲುವಾಗಿ ಒಂದೆರಡು ಮಂಡಳಿಗಳು ನಮ್ಮ ಹರಿಹರಪುರದಲ್ಲಿವೆ.ವರ್ಷಕ್ಕೊಮ್ಮೆ ನಡೆಯುವ ನಾಟಕ, ಯಕ್ಷಗಾನಗಳು ಮಂಡಳಿಗಳು ಜೀವಂತವಾಗಿರುವದಕ್ಕೆ ಸಾಕ್ಷಿಗಳಾಗಿವೆ.ಹೀಗೆ ಹರಿಹರಪುರದ ಅಲ್ಪ ಸೌಲಭ್ಯಗಳ ನಡುವೆ ಪಕ್ಕನೆ ಮನೆಗೆ ನೆಂಟರು, ಬಂಧುಗಳು ಬಂದರೆ ಬೇಕಾಗುವ ಸಕ್ಕರೆ, ಚಾ ಪುಡಿ, ಉಪ್ಪು,ಎಣ್ಣೆ,ಸಿಗರೇಟು,ಗುಟ್ಕಾಗಳನ್ನೂ ಒದಗಿಸುವದು ನಮ್ಮ ರಂಗನ ಅಂಗಡಿ.
                          
ಶಾಲೆಯ ಮೆಟ್ಟಿಲನ್ನು ಹತ್ತಿದವನಲ್ಲ ರಂಗ. ಬದಲಾಗಿ ಊರ ಮಕ್ಕಳೆಲ್ಲ ದೂರದ ಊರುಗಳಿಗೆ ಕಲಿಕೆಗಾಗಿ ಹೊರಟಾಗ ರಂಗ ಕಾಡು ಮೇಡುಗಳಲ್ಲಿ ಅಲೆಯುತ್ತಾ ಕಾಡು ಪಾರಿವಾಳ,ಅಳಿಲು,ಕೋತಿ ಮರಿಗಳನ್ನು ಶಿಕಾರಿ ಮಾಡುತಿದ್ದ. ತಂದೆ ಚಿಂಕ್ರನಿಗಂತೂ ಮಗನ ಶಿಕಾರಿಯಿಂದ ದಿನವೂ ಒದಗುವ ಬಗೆ ಬಗೆಯ ಮಾಂಸದಿಂದಾಗಿ ತನ್ನ ಮಗನು ಇತರರಂತೆ ಓದಬೇಕು , ಉದ್ಯೋಗ ಹಿಡಿಬೇಕೆಂಬ ಕನಸೂ ಬೀಳಲಿಲ್ಲ.ಬಾಲ್ಯವನ್ನು ಹೀಗೆ ಕಳೆದ ರಂಗನಿಗೆ ಯವ್ವನದಲ್ಲಿ ಬದುಕಿನ ಆಸರೆಯಾದ ತಂದೆ ಚಿಂಕ್ರನ ವೃತ್ತಿಯಾದ ಗಾರೆ ಕೆಲಸವನ್ನು ಮಾಡಿದವನಲ್ಲ.ಬದಲಾಗಿ ಆಗೆಲ್ಲಾ ಕ್ರಾಂತಿ ಹುಟ್ಟಿಸಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಮಹದಾಸೆ ರಂಗನಲ್ಲಿ ಮೂಡಿತ್ತು .ಬಿಸಿರಕ್ತದ ರಂಗ ಹರಿಹರಪುರದ ಗಾಂಧೀಯಾಗಿ ಪೋಲಿ -ಪುಡಾರಿಗಳನ್ನೆಲ್ಲ ಒಗ್ಗೂಡಿಸಿ ನಡೆಸಿದ ಸತ್ಯಾಗ್ರಹದಲ್ಲಿ ಪೋಲೀಸರ ಏಟು ತಿಂದ ಸಾಧನೆ ಆತನದ್ದು.ಲಾಟಿ ಏಟು ತಿಂದ ರಂಗನ ಗಾಂಧೀಗಿರಿ ಅಲ್ಲಿಗೆ ಕೊನೆಗೊಂದು ತೋಟದ ಕೆಲಸ , ಗದ್ದೆ ಕೊಯುಲುನ ಸಂದರ್ಭದಲ್ಲಿ ಕೆಲಸ ಹೀಗೆ ಸಣ್ಣ ಪುಟ್ಟ ಕೆಲಸ ಮಾಡುತಿದ್ದನಾದರು ಯಾವ ಕ್ಷೇತ್ರದಲ್ಲೂ ಶಾಶ್ವತನಾಗಲಿಲ್ಲ.ರಂಗನ ವೃತ್ತಿಗಳೆಲ್ಲವು ಕೈ ಸುಟ್ಟುಕೊಂಡವುಗಳೇ, ಅಂತಹ ಕೆಲವು ವೃತ್ತಿಗಳ ಬಗ್ಗೆ ನಿಮಗೆ ಹೇಳಲೇ ಬೇಕು.
                        
ಕೆಲಕಾಲ ರಂಗ ಹರಿಹರಪುರದ ಜನತೆಗೆ ಕಂಕಣ ಭಾಗ್ಯವನ್ನು ಕಲ್ಪಿಸಿಕೊಡುವ ಮಾಡುವೆ ದಲ್ಲಾಳಿಯಾಗಿ ಮೆರೆದ.ಆದರೆ ದಲ್ಲಾಳಿಯಲ್ಲಿ ಮದುವೆಯಾದ ಗಂಡಸರಂತು ತಮ್ಮ ಗಂಡುಬೀರಿ ಹೆಂಡತಿಯರ ಕಾಟ ತಾಳಲಾರದೆ ಸೊಂಟದಲ್ಲೇ ಚೂರಿ ಸಿಕ್ಕಿಸಿಕೊಂಡು ರಂಗನಿಗಾಗಿ ಹರಿಹರಪುರದಲ್ಲಿ ಸುಳಿದಾಡಲು ಶುರು ಮಾಡಿದಂದಿನಿಂದ ಸುಮಾರು ಆರು ವರ್ಷ ಆತನ ಮುಖ ನೋಡಿದ ನೆನಪು ಹರಿಹರಪುರದ ಜನತೆಗೆ ಇಲ್ಲ.
ಮತ್ತೊಂದು ದಿನ ಮುಂಜಾನೆ ಆಗಿನ ಕಾಲದ ಫ್ಯಾಶನ್ ಆಗಿದ್ದ ಕಣ್ಣಿಗೆ ಕಪ್ಪು ಗ್ಲಾಸ್ , ಬಕೇಟು ಪ್ಯಾಂಟು , ಫುಲ್ ಸ್ಲೀವ್ ಶರ್ಟ್ ತೊಟ್ಟು ಹರಿಹರಪುರದ ಬಸ್ ಸ್ಟಾಂಡಿನಲ್ಲಿ ಪ್ರತ್ಯಕ್ಷನಾದ ಎಂದು ನನ್ನ ಶಿಕ್ಷಕರಾದ ರಾಮಕೃಷ್ಣ ಮಾಷ್ಟ್ರು ಹೇಳಿದ ನೆನಪಿದೆ.ಮಾಸ್ಟ್ರೆ, ನಂಗೆ ಮುಂಬೈಯಲ್ಲಿ ದೊಡ್ಡ ಕಂಪೆನಿಯಲ್ಲಿ ಕೆಲಸ ದೊರೆತಿದೆ,ರಜಾದಲ್ಲಿ ನಿಮ್ಮನ್ನೆಲ್ಲ ನೋಡಿಕೊಂಡು ಹೋಗೋಣಾ ಅಂತ ಹೊರಟು ಬಂದೆ ಎಂದು ರಾಮಕೃಷ್ಣ ಮಾಸ್ಟರಿಗೆ ಬಾಲ್ ಪೆನ್ ಒಂದನ್ನು ಕೊಡುಗೆಯಾಗಿ ನೀಡಿದ್ದನಂತೆ. ಪೆನ್ ಕೊಟ್ಟಿದ್ದರಿಂದಲೋ ಏನೋ ಅ ಆ ಇ ಈ ಬಾರದ ರಂಗನಿಗೆ ಕಂಪೆನಿಯಲ್ಲಿ ಉದ್ಯೋಗ ಹೇಗೆ ದೊರಕಿತು ಎಂಬ ವಿಚಾರ ಮಾಸ್ಟರಿಗೆ ಆ ಕ್ಷಣದಲ್ಲಿ ಹೊಳೆಯದಿದ್ದರೂ, ತಿಂಗಳು ಮೂರಾದರು ಊರಲ್ಲೇ ಜಾಂಡ ಹೂಡಿರುವ ರಂಗನನ್ನು ನೋಡಿ ಬೊಂಬಾಯಿ ಕಂಪೆನಿಯ ಬಗ್ಗೆ ವಿಚಾರಿಸಿದ ಮಾಸ್ತರಿಗೆ ತಿಳಿದ ಸತ್ಯವೇನೆಂದರೆ, ರಂಗ ಮಂಗಳೂರಿನ ಹೋಟೆಲೊಂದರಲ್ಲಿ ಕ್ಲೀನರ್ ಆಗಿದ್ದ ಎಂಬುದಾಗಿ.ಆತ ಕೊಟ್ಟ ಪೆನ್ ಕೂಡ ಹೋಟೆಲ್ ಮಾಲಿಕನದ್ದು ಎಂದು ಮಾಸ್ಟ್ರು ನಗುತ್ತಾ ನನ್ನಲ್ಲಿ ಹೇಳಿದ್ದರೊಮ್ಮೆ.
                               
ಹೀಗೆ ಬಹುಕಾಲ ಅದು ಇದು ಎಂದು ಹೊಟ್ಟೆ ಹೊರೆಯಲು ಪ್ರಯತ್ನ ಪಟ್ಟ ರಂಗನಿಗೆ ಕೊನೆಗೆ ಹೊಳೆದದ್ದು ಹರಿಹರಪುರದಲ್ಲೊಂದು ದಿನಸಿ ಅಂಗಡಿ.ಆಗಿನ ಕಾಲದಲ್ಲಿ ತೊರೆದಾಟಿ ನಾಲ್ಕು ಮೈಲು ದೂರದ ರಾಂಪುರದಲ್ಲಿದ್ದ ಕರಿಯ ಶೆಟ್ರ ಮನೆಯಲ್ಲಿದ್ದ ಅಂಗಡಿಗೆ ಸಣ್ಣ ಪುಟ್ಟ ಸಾಮನುಗಳಿಗೂ ಓಡಾಡಬೇಕಾದ ಪರಿಸ್ಥಿತಿ ಹರಿಹರಪುರದಲ್ಲಿತ್ತು.ಮಳೆಗಾಲದಲ್ಲಂತೂ ತೊರೆ ದಾಟಲಾಗದ ಪರಿಸ್ಥಿತಿಯಲ್ಲಿ ಜನರು ಮಳೆಗಾಲದ ಮೊದಲೇ ಮೂರೂ ನಾಲಕ್ಕು ತಿಂಗಳಿಗಾಗುವಷ್ಟು ದಿನ ನಿತ್ಯದ ಸಾಮಾನುಗಳನ್ನು ತಂದಿದಬೇಕಾಗಿತ್ತು . ಈ ಎಲ್ಲಾ ಕಷ್ಟಗಳ ನಡುವೆ ಬೆಳೆದ ರಂಗನ ಯೋಚನೆಗೆ ಊರ ಕೆಲವರ ಪ್ರೋತ್ಸಾಹ ದೊರೆತಾಗ ತನ್ನ ಮನೆಯ ಜಗುಲಿಯನ್ನು ಅಂಗಡಿಯನ್ನಾಗಿ ಪರಿವರ್ತಿಸುವ ನಿರ್ಧಾರಕ್ಕೆ ಬಂದ ರಂಗ.ಬಂಡವಾಳಕ್ಕಾಗಿ ತನ್ನ ತಂದೆಗೆ ಮಡಿಕೆ ಸರಾಯಿ ಕುಡಿಸಿ ಒಂದು ಎಕರೆ ಭೂಮಿ ಮಾರಿ ರಂಗನ ಅಂಗಡಿಯಂತು ಶುರು ಆಯಿತು. 
                              
ಅಂದಿನಿಂದ ಹರಿಹರಪುರದಲ್ಲಿ ಪ್ರಥಮ ದಿನಸಿ ಅಂಗಡಿ ಪ್ರಾರಂಭ ಮಾಡಿ ಜನರ ಕಷ್ಟ ಕಡಿಮೆ ಮಾಡಿದ ರಂಗ ಎಲ್ಲರ ಅಚ್ಚು ಮೆಚ್ಚಿನ ವ್ಯಕ್ತಿಯಾದ. ಸೋಮಾರಿ ಎಂದು ಮೂದಲಿಸುತಿದ್ದವರೆಲ್ಲ ರಂಗನ ಒಡನಾಡಿಗಳಾದರು. ಸುಮಾರು ಆರೇಳು ವರ್ಷಗಳು  ಚೆನ್ನಾಗಿಯೇ ವ್ಯಾಪಾರ ಮಾಡಿದ ರಂಗನಿಗೆ ತನ್ನ ತಂದೆ ಇಂದಲೋ, ಗೆಳೆಯರಿಂದಲೋ , ಏನೋ ಗೊತ್ತಿಲ್ಲ ಸಾರಾಯಿ ಕುಡಿಯುವ ಚಟ ಅಂಟಿಕೊಂಡಿತು.ಅದೇ ಆತನ ಅಳಿವಿನ ಆರಂಭ ಎಂದರು ತಪ್ಪಾಗಲಾರದು.ಸಾರಾಯಿ ಅಮಲಿನಲ್ಲಿಯೇ ಬಂದ ಗಿರಾಕಿಗಳಿಗೆ ಐನೂರು ಗ್ರಾಂ ಬದಲು ಒಂದು ಕೆ ಜಿ , ಒಂದು ಕೆ ಜಿ ಕೇಳಿದವರಿಗೆ ಐನೂರು ಗ್ರಾಂ ತೂಗಿ ಕೊಡುವ ಮಟ್ಟಕ್ಕೆ ಹೋದ ರಂಗ.
ವಾಡಿಕೆಯಂತೆ ಮದುವೆ ಮಾಡಿದರೆ ಸರಿ ಹೋದಾನು ಎಂಬುದಾಗಿ ಎಂಬುದಾಗಿ ಊರಿನವರೇ ಅಲ್ಪ ಸ್ವಲ್ಪ ಹಣ ಒಟ್ಟು ಹಾಕಿ ಮದುವೆಯನ್ನು ಮಾಡಿದರು.ರಂಗನೇನೋ ಕುಡಿತ ಕಡಿಮೆ ಮಾಡಿ ಸಮಯಕ್ಕೆ ಸರಿಯಾಗಿ ಮನೆಗೆ ತಲುಪುತಿದ್ದ. ಆದರೆ ಗಯ್ಯಾಳಿ ಹೆಂಡತಿ ಕಮಲನ ದೆಸೆ ಇಂದ ರಂಗ ಸಂಸಾರದ ಜಂಜಾಟದಲ್ಲಿ ನಲುಗಿ ಹೋದ. ಪ್ರತಿ ದಿನವೂ ಮನೆ ರಣರಂಗವಾಗಿರುತಿತ್ತು.ರಂಗನ ಮನಸ್ಸು ಚನಿಯನ ಸಾರಾಯಿ ಅಂಗಡಿಯತ್ತ ಎಳೆಯಲ್ಪಟ್ಟು ಪುನಹಃ ಕುಡಿತದ ದಾಸನಾದ.ಮದುವೆಯಾಗಿ ವರ್ಷ ಪೂರ್ತಿಯಾಗುವ ಮೊದಲೇ ಕಮಲ ಸಾರಾಯಿ ಅಂಗಡಿ ಚನಿಯನೊಡನೆ ಪರಾರಿಯಾಗಿದ್ದಾಳೆ ಎಂಬ ಸುದ್ದಿ ರಂಗನನ್ನು ಇನ್ನಷ್ಟು ದುರ್ಭಲಗೊಳಿಸಿತು. ಅಂಗಡಿಯ ಸ್ಥಿತಿಯೋ ಹೇಳುವಂತಿರಲಿಲ್ಲ.ತಂದು ಹಾಕಿದ ಮಾಲುಗಳು ಕೊಳೆತರು ಅರಿವಾಗುತ್ತಿರಲಿಲ್ಲ ರಂಗನಿಗೆ. ಗಾಯಕ್ಕೆ ಉಪ್ಪು ಸುರಿವಂತೆ ಹರಿಹರಪುರದಲ್ಲಿ ಇಬ್ರಾಹಿಮ್ ಬ್ಯಾರಿ ಶುರು  ಮಾಡಿದ ಆಲ್ ಮದಿನಾ ಸ್ಟೋರ್ಸ್.ನಮ್ಮ ರಂಗ ಎಂಬ ಪ್ರೀತಿ, ವಿಶ್ವಾಸದಿಂದ ಅಂಗಡಿಗೆ ಬರುತಿದ್ದವರು ಕೂಡ ಇಬ್ರಾಹಿಮ್ ಬ್ಯಾರಿಯ ಅಂಗಡಿ ಕಡೆ ದಾರಿ ಬದಲಾಯಿಸಿದರು.ಹೊಟ್ಟೆಗೆ ಎಣ್ಣೆ ಸುರಿಯಲಾದರು ಸಿಗುತಿದ್ದ ಆದಾಯಕ್ಕೂ ಕುತ್ತು ಬಿತ್ತು.
                                    
ತಂದೆ ಚಿಂಕ್ರನ ಮರಣ ರಂಗನ ಬದುಕಿನಲ್ಲಿ ಮತ್ತೊಮ್ಮೆ ಎದ್ದ ಬಿರುಗಾಳಿ.ತಂದೆಯ ಆಸ್ತಿಯನ್ನು ಮೋಸದಿಂದ ಮಾರಿ ಅಂಗಡಿ ಇಟ್ಟಾಗ ಬೆನ್ನು ಬಗ್ಗಿಸಿ ಹೊಡೆದಾಗ ಕತ್ತಿ  ಹಿಡಿದು ತಂದೆಯನ್ನೇ ಕೊಲ್ಲಲು ಮುಂದಾದ ರಂಗ ಚಿಂಕ್ರ ಸತ್ತಾಗ ಹೆಣದ ಮುಂದೆ ತಲೆ ಬಗ್ಗಿಸಿ ದಿನವಿಡಿ ಕೂತಿದ್ದ.ಆತನನ್ನು ಸಮಾಧಾನ ಪಡಿಸಲು ಮುಂದಾದ ರಾಮಕೃಷ್ಣ ಮಾಸ್ಟ್ರಲ್ಲಿ, ಮಾಷ್ಟ್ರೆ , ಅಪ್ಪ ನನ್ನ ಕೊಂದು, ಬದುಕಿ ಬಿಟ್ಟ, ಎಂದು ಮಂಜಾದ ಕಣ್ಣಿಂದ ಆಕಾಶ ದಿಟ್ಟಿಸುತ್ತಾ ನುಡಿದಿದ್ದನಂತೆ. ಸಾಲು ಸಾಲು ಸೋಲುಗಳಿಂದ ಜರ್ಜರಿತನಾದ ರಂಗ ಕೊನೆವರೆಗೂ ಒಬ್ಬಂಟಿಗನಾಗಿ ಬದುಕಿದ.ಬೆಳಿಗ್ಗೆ ಅಂಗಡಿ ಬಾಗಿಲು ತೆರೆದು ಕೂರುತಿದ್ದ. ಕತ್ತಲಾಗುವವರೆಗೆ ಸುಮ್ಮನೆ ಕೂತೂ ಕಾಲ ದೂಡುತಿದ್ದ, ಗಿರಾಕಿಗಳು ಬಂದು ಯಾವುದಾದರು ಸಾಮಗ್ರಿ ಕೇಳಿದಾಗ ತನಗೆ ಮನಸ್ಸಿದ್ದರೆ ಎದ್ದು ಕೊಡುತಿದ್ದ.ಒಂದು ವೇಳೆ ಮನಸಿಲ್ಲದಿದ್ದರೆ ಯಾವುದಾದರೊಂದು ದಿಕ್ಕಿನತ್ತ ದೃಷ್ಟಿಸುತ್ತಾ ಕುರುತಿದ್ದಾ.ಗಿರಾಕಿಗಳು ಬೊಬ್ಬೆ ಹೊಡೆದು ರಂಪಾಟ ಮಾಡಿದರು ಕದಲುತ್ತಿರಲಿಲ್ಲ.ಒಮ್ಮೊಮ್ಮೆ ರಂಗ ಕೇಳಿದ ಸಾಮಗ್ರಿಗಳ ಬದಲು ತನಗೆ ಕೈಗೆ ಸಿಕ್ಕಿದ ಸಾಮಗ್ರಿಯನ್ನೇ ಗಿರಾಕಿಯ ಮುಖಕ್ಕೆ ಎಸೆಯುತಿದ್ದ.ಒಮ್ಮೆ ಜೀಪಿನಲ್ಲಿ ಯಾವುದೋ ಊರಿಂದ ಬಂದ ಕುಟುಂಬದ ಪುಟ್ಟ ಹುಡುಗಿಯೊಬ್ಬಳು ರಂಗನ ಅಂಗಡಿಗೆ ಬಂದು ಪೆಪ್ಪರ ಮಿಟಾಯಿ ಕೇಳಿದಾಗ ಆ ಹುಡುಗಿಯ ಬೆನ್ನು ಬಗ್ಗಿಸಿ ನಾಲ್ಕು ಗುದ್ದಿದ್ದ.ಅಲ್ಲೇ ಜೀಪಿನ ಬಳಿ ಇದ್ದ ಹುಡುಗಿಯ ಕುಟುಂಬಿಕರು ಹಿಗ್ಗಾ ಮುಗ್ಗ ಹೊಡೆದಿದ್ದರು ಒಂದು ತೊಟ್ಟು ಕಣ್ಣೀರಿಟ್ಟವನಲ್ಲ ರಂಗ.ಹಸಿವಾದರೆ ಅನ್ನ ಬೇಯಿಸಿಕೊಂಡು ತಿನ್ನುತಿದ್ದ.ಇಲ್ಲವಾದರೆ ಪಕ್ಕದ ವಾರಿಜಕ್ಕನ ಅಡುಗೆ ಮನೆಯಲ್ಲಿ ತಿನ್ನಲು ಏನಾದರು ಕೊಡುವವರೆಗೆ ಕುಕ್ಕರುಗಾಲಿನಲ್ಲಿ ಕೂತು ಬಿಡುತಿದ್ದ. 
                                
ಈ ರೀತಿ ಬದುಕಿನುದ್ದಕ್ಕೂ ಎಲ್ಲವನ್ನು ಸೋಲಿನಿಂದಲೇ ಎದುರಿಸಿದ ರಂಗನನ್ನು ನೋಡಿ ಮಾನಸಿಕ ಅಸ್ತಿತ್ವವನ್ನು ಕಳೆದುಕೊಂಡ ಹುಚ್ಚ ಎಂದು ನಾನೆಂದು ಹೇಳಲಾರೆ. ಏಕೆಂದರೆ ರಂಗನ ಬದುಕಿನ ಒಂದೆರಡು ರೋಚಕ ವಿಚಾರಗಳನ್ನು ನೀವು ಕೂಡ ತಿಳಿದರೆ ರಂಗನನ್ನು ಹುಚ್ಚ ಎನ್ನಲು ತಡವರಿಸುತ್ತೀರಿ.ರಂಗ ಬದುಕಿದ್ದಷ್ಟು ವರ್ಷ ಆಗಷ್ಟ್ ಹದಿನೈದರ ಸ್ವಾತಂತ್ರ್ಯೋತ್ಸವ ದಿನದಂದು ಶಾಲಾ ಮಕ್ಕಳಿಗೆ ಪೆಪ್ಪರ್ ಮಿಟಾಯಿ ಹಂಚುವದನ್ನು ಮರೆತವನಲ್ಲ.ದಿನಾ ಬೆಳಿಗ್ಗೆ ರೇಡಿಯೋ ದಲ್ಲಿ ಪ್ರಸರವಾಗುತಿದ್ದ ವಾರ್ತೆಗಳನ್ನು ರಂಗ ತಪ್ಪದೆ ಕೇಳುತಿದ್ದ, ಇನ್ನೊಂದು ರೋಚಕ ಸಂಗತಿ ಎಂದರೆ ರಂಗನನ್ನು ಮಕ್ಕಳೇನಾದರು ರಂಗಜ್ಜ ಎಂದು ಕರೆದರೆ ಸಿಡುಕುತ್ತಾ,ನಾನೇನೂ ಅಜ್ಜನಲ್ಲ ಎಂದು ಕೈಗೆ ಸಿಕ್ಕ ವಸ್ತುವನ್ನು ಎಸೆಯುತಿದ್ದ.ಅದ್ದರಿಂದ ನಾನಾಗಲೇ ರಂಗನನ್ನು ತರುಣ ಎಂದು ಪರಿಚಯಿಸಿದ್ದು.
                          
ರಂಗನು ಕೂಡ ವಿದಿಯಾಟದಲ್ಲಿ ಪುನಹಃ ಸೋತ.ಈ ಸೋಲು ರಂಗನ ದೃಷ್ಟಿಯಲ್ಲಿ ಗೆಲುವು.ತಂದೆ ತೀರಿಕೊಂಡಾಗ ಬದುಕಿ ಬಿಟ್ಟೆ ಎಂದ ರಂಗ ಅದೊಂದು ದಿನ ತಾನು ಕೂಡ ಅಂಗಡಿಯ ಗಲ್ಲಾದ ಮೇಲೆ ಬದುಕಿಬಿಟ್ಟ.ಹಿಂದೂ ಮುಂದೂ ಇಲ್ಲದ ರಂಗನ ಮದುವೆ ಮಾಡಿಸಿ ಕೂಪಕ್ಕೆ ದೂಡಿದ ಊರವರ ನೇತ್ರತ್ವದಲ್ಲಿ ಆತನ ಅಂತಿಮ ಕ್ರಿಯೆಗಳು ನಡೆದವು. ಇವತ್ತಿಗೂ ನನಗೆ ಹರಿಹರಪುರದ ಬಸ್ ಸ್ಟ್ಯಾಂಡ್ ನತ್ತ ನಡೆಯುವಾಗ ರಸ್ತೆ ಬದಿಯಲ್ಲಿ ರಂಗನ ನೆನಪಿಗಾಗಿ ಉಳಿದಿರುವ ಅಂಗಡಿಯ ಕಟ್ಟಡ ಆತನ ಬದುಕಿನ ಪುಟಗಳನ್ನೂ ತೆರೆದಿಟ್ಟಂತೆ ಭಾಸವಾಗುತ್ತದೆ,ನಾನೊಮ್ಮೆ ರಂಗನನ್ನು ರಂಗಜ್ಜ ಎಂದಾಗ ಕೈಯಲ್ಲಿದ್ದ ಕೋಲನ್ನು ನನ್ನತ್ತ ಎಸೆದಾಗ ಓಡಿ ಕೆಸರು ಗುಂಡಿಯಲ್ಲಿ ಬಿದ್ದ ನೆನಪು ಚಿಗುರೊಡೆಯುತ್ತದೆ.ಮತ್ತೊಮ್ಮೆ ರಂಗನೆ ಕೋಲು ಹಿಡಿದುಕೊಂಡು ನನ್ನ ಅಟ್ಟಿಸಿಕೊಂಡು ಬಂದಂತೆ ಭಾಸವಾಗುವದು ಸುಳ್ಳಲ್ಲ.

******************************************

ಕಟ್ಟೆ ಮಂದಿಯ ರಾಜಕೀಯ ಒಗ್ಗರಣೆ

ಕಟ್ಟೆ ಪುರಾಣಕ್ಕೆ ಕೊನೆ ಎಲ್ಲಿ ??? ಬೇಡವೆಂದರೂ ಮಾತಾಡಕ್ಕೆ ವಿಷಯವಾಗಬಲ್ಲ  ಹಾಳು ಹರಟೆ ಸುದ್ದಿಗಳಿಗೆ ಬರವಿಲ್ಲ. ಹಳ್ಳಿಗರು ಆದರು ರಾಜಕೀಯ ಸುದ್ದಿಗಳಿಗೆ ಚರ್ಚೆಗಳು ತಮ್ಮದೇ ರೀತಿಯಲ್ಲಿ ಒಕ್ಕಣೆಗಳನ್ನು ಒಪ್ಪಿಸೋ ಮಂದಿ ಬಹಳ.ಇಂತಿಪ್ಪ ಹಳ್ಳಿಯ  ಕಟ್ಟೆ ಮೇಲೆ ಇದೀಗ ಯಡಿಯೂರಪ್ಪ, ಕಟ್ಟಾ , ಕುಮಾರ ಹೀಗೆ ರಾಜ್ಯ ನಾಯಕರುಗಳದೆ ಸುದ್ದಿ.

ಊರ ಅಜ್ಜ ಅಂತು ಬ್ರಷ್ಟರೆಲ್ಲ ಜೈಲು ಕಡೆ ಮುಖ ಮಾಡ್ತಾವ್ರಲ್ಲ, ಎಲ್ಲರ ಒಳಗುಟ್ಟುಗಳು ಬಯಲಗ್ತಾ ಇದ್ದವಲ್ಲ, ಇನ್ನಾದರೂ ಸರ್ಕಾರ ನಡೆಸಲು ಒಳ್ಳೆ ಮಂದಿ ಬಂದು ನಮ್ಮ ಹಳ್ಳಿ ಕಡೆ ನೋಡ್ ಬಹುದವು ಅಲ್ವೇ ಸಿದ್ದ? ಅಂತ ಪ್ರಶ್ನೆ ಇಟ್ಟಿತ್ತು.ಹೂಂ ಅಜ್ಜ ಈ ಪರಿ ಜೈಲ್ ಕಡ ಹೊಂಟಾರಲ್ಲ ನಮ್ಮ ರಾಜಕೀಯ ಮಂದಿ ತಪ್ಪು ಮಾಡಿದವರು  ತಪ್ಪನ್ನ ಎಷ್ಟು ದಿನ ಮುಚ್ಚಿ ತೆಪ್ಪಗೆ ಕುತ್ಕೊಳ್ಳಕಗುತ್ತೆ ಅಜ್ಜ, ಇನ್ನೇನಿದ್ದರೂ ಈ ಮಂದಿಯದ್ದು  ಜೈಲಿಗ್  ಬನ್ನಿರೋ ಗೆಳೆಯರಾ   ಅನ್ನೋ ಹೊಸ ಕಾರ್ಯಕ್ರಮನೆ!!!! ಒಳ್ಳೆದಾತು  ಬಿಡಜ್ಜ ನಮ್ಮ ಹಣ ಎಷ್ಟು ಅಂತ ತಿಂದು ತೆಗಿದ್ರೋ ನಾ ಕಾಣೆ, ಮುದ್ದೆ ಮುರಿದು ಅರಗಿಸ್ಲಿ ಬಿಡಜ್ಜ ಅಂದ ಸಿದ್ದ. ಅಲ್ಲಲೇ ಸಿದ್ದ ಈ ಮಂದಿಗೆ ಜೈಲ್ ಸೇರುತಿದ್ದಂಗೆ ಬರಬಾರದ ರೋಗ ಅಂಟಿಕೊತದಲ್ಲ ಸುಮ್ಮನೆ ಹಿಂಗ್ ಮಾಡ್ತಾರೆ ಅಂತ ಎಲ್ಲರಿಗೂ ಗೊತ್ತಾಗುತ್ತೆ ಅನ್ನೋ ನಾಚಿಕೆ ಮಾನ  ಇವಕ್ಕೆ ಬೇಡ್ವೆನ್ಲ ಸಿದ್ದ ಎಂಬೋ  ಪ್ರಶ್ನೆ ಎಸೆದ ರಾಘ್ಯ.ಏನೋಪ್ಪ ಅದು ಸರಿ ಬಿಡಲೇ, ಆದ್ರೆ ಈ ಸರಿ ಈ ಡಾಕ್ಟರೆಲ್ಲ ಸೇರಿ ಇದಕ್ಕೆ ಮದ್ದು ಅರೆದನ್ಗಿದೆ,ಮಂಚ ಎಲ್ಲ ತಿಗಣೆ ಬಿಟ್ಟವರಂತೆ, ಹೊರಗೆ ತಿರ್ಗಾಡಕ್ಕೆ ಹೊಂಟ್ರೆ ಮಾದ್ಯಮದವರಿಗೆ  ಸುದ್ದಿ ಮುಟ್ಟಿಸ್ತವ್ರಂತೆ , ಬಿಸಿ ನೀರು ಕೊಡಕಿಲ್ವಂತೆ, ಟಿ ವಿನಾಗೆ ಕಡ್ಡಿ ಆಂಟೆನಾ ದೊಂದಿಂಗೆ ದೂರದರ್ಶನ ಮಾತ್ರ ಕೊಡು ವ್ಯವಸ್ಥೆ  ಮಾಡಿದ್ದರಂತೆ, ಘಂಟೆಗೆ ಘಂಟೆಗೆ ಬಿಸಿ ನೀರು ತುಂಬಿಸಿದ ಇ೦ಜೆಕ್ಶನ್ ದನಕ್ಕೆ ಕೊಟ್ಟಂಗೆ ಸುಮ್ಮನೆ ಕೊಟ್ಟು ಕಾಡಿಸ್ತವ್ರಂತೆ, ಒಟ್ಟಲ್ಲಿ ಜೈಲಿಗಿಂತ ಕಡೆ ಅಸ್ಪತ್ರೆನಾ ಇವರಿಗಾಗಿ  ಮಾಡವ್ರಂತೆ ರೋಗ ಅಂತ ಸುಳ್ಳು ಹೇಳಿ ಬಂದೊವ್ರು ನಿಜವಾದ ರೋಗ ಅಂಟಿಸ್ಕೊಂಡು ಹೊರ ನಡೆಯೋ  ಹಂಗೆ ಮಾಡವ್ರಂತೆ. ಎಲೆ!! ಎಲೆ !!ಎಲೆ!! ನಿನ್ಗೆನ್ಗೆ ಗೊತ್ತಲ ಇವೆಲ್ಲ ಅಂದ ರಾಘ್ಯ ಸಿದ್ದನನ್ನೇ ಬಿಟ್ಟ ಬಾಯಿ ಮುಚ್ಚದೇ ಹಂಗೆ  ನೋಡುತ್ತಾ.!!! ಏ ನಿಂಗೆ ಅಷ್ಟು ಗೊತ್ತಗಲ್ವೇನ್ಲಾ !!!!! ಹಿಂಗೆ ತನ್ನ ಪ್ರಮಾತಿತಾ ಶಿಷ್ಯ ಕಟ್ಟಾ ಹೇಳಿದ್ದಕ್ಕೆ ಅಲ್ವೆನ್ಲಾ ಎಡ್ಡಿ ಕಚ್ಚೆ ಎತ್ತಿ ಜೈಲು ಕಡೆ ಹೊಂಟಿದ್ದು , ಇದಕ್ಕಿಂತ ದೊಡ್ಡ ಪುರಾವೆ ಬೇಕೆನ್ಲಾ ನಿಂಗೆ.

ಹಿಂಗೆ ವಿಸಿಯ ಮುಂದುವರಿತಿರಬೇಕಾದರೆ  ಕಟ್ಟೆ ಪಕ್ಕ ಕಟ್ಟಿದ್ದ ವಾರಿಜಳ ನಾಯಿ ಗೂಳಿಡ ಪ್ರಾರಂಬಿಸಿತು , ವಾರಿಜ ಥೂ.....!!! ಇದ್ಯಾಕೆ ಹಿಂಗೆ ಅರಚುತ್ತೆ ಎಂದು ಚಿರಿ ಪಿರಿ ಗುಟ್ಟುತ್ತಲೇ ತನ್ನ ಬುಟ್ಟಿ ಮೊಡೆಯಲು ತಂದ ಕಾಡು   ಬೀಳ ಹೊರೆಯನ್ನು ದಬಾರಂತ  ನೆಲಕ್ಕೆ ಒಗೆದಿದ್ದಳು, ಅಲ್ಲೇ ಪಕ್ಕದಲ್ಲೇ ಹೂಜಿಯಲ್ಲಿ ತುಂಬಿಸಿ ಇಟ್ಟಿದ್ದ ನೀರನ್ನು ಗುಟುಕರಿಸಿ ತನ್ನ ಸೀರೆ ಸೆರಗಿಂದ ಗಾಳಿ ಬೀಸುತ್ತಾ  ಕಟ್ಟೆ ಮಂದಿ ಚರ್ಚೆ ಆಲಿಸ ತೊಡಗಿದಳು.ಇದೇನ್ಲೆ ಸಿದ್ದ  ನಮ್ಮ ಕುಮಾರನ್ಗೆ ಭೊಮಿ ಗುಳುಂ ಮಾಡಿದ ಆರೋಪದೊಂದಿಗೆ ಬುಡಕ್ಕೆ ತಂದಿಡುವ ಕೇಸು ಒಂದು ತಗುಲಿ ಹಾಕೊಂಡಿದೆಯಲ್ಲ  ಅಂದ ವೆಂಕ. ಸಿದ್ದ ಯಾಕೋ ಸಿರಿಯಸ್ ಆಗಿ ನಮಗ್ಯಾಕಲೆ ಹೋಗ್ ಬರೋ ಅವ್ರ ಉಸಾಬರಿ, ಏನಾರ ಮಾಡ್ಕೊಳ್ಳಿ ಪಾಪ ಮಗು ಐತೆ ಅದ್ರ ಬಗ್ಗೆ ಯೋಚನೆ ಮಾಡ್ಲ. ವಿಸಿಯ ಸಿಕ್ತು ಅಂತ ಹೆಂಗೆಂಗೋ ಮತೊಡಿದು ಯಾಕ್ಲ, ಬಿಟ್ಟಾಕಲ ಏನಾರ ಮಾಡ್ಕೊಳ್ಳಿ ,ಅವರವರ ಸಂಸಾರ , ಮಗ ಸೊಸೆ ಇಬ್ಬರು ಜೈಲಿಗೆ ಹೋದ್ರೆ ದೊಡ್ಡ ಗೌಡ್ರ ನೋಡ್ಕೋಳ್ಳಕ್ಕೆ   ಒಂದು ಜನ ಆಯಿತು ಅಂತ ಸಂತೋಷ ಪಡ್ಲ, ಥುಕ್ಕ್.....!! ಅಂತ ಎಲೆ ಅಡಿಕೆ ಉಗಿದು ಸೆರಗಿಂದ ಬಾಯಿ ಒರೆಸಿಕೊಂಡಿದ್ಲು ವಾರಿಜ.ನೋಡ್ರಲೇ( ಕಟ್ಟೆ ಮಂದಿಯನ್ನು ಉದ್ದೇಶಿಸಿ ) ಜೈಲಿಗೆ ಹೋಗೋ ಲಿಸ್ಟ್ ಬಹಳ ದೊಡ್ದದಿದಿಯಂತೆ ಅದಕ್ಕೆ ವಿದಾನ ಸೌಧದಿಂದ ಒಂದು ಬಸ್  ಟ್ರಿಪ್ ಹಾಕೊತ್ತರಂತೆ ಹಂಗೆ ಕೆಲವರಿಗೆ ಅಲ್ಲೇ ಸೆಟ್ಟಲ್ ಆಗಕ್ಕೆ ಹೊಗವ್ರು ಹಾಗು ಅಲ್ಲಿರುವವರನ್ನು ವಿಚಾರಿಸಿಕೊಂಡು ಬರೋವರಿಗೂ ಅನುಕೂಲ ಅಗ್ಲಿಂತ .ಒಟ್ಟಲ್ಲಿ ತಿಹಾರ್,ಚಂಚಲಗುಡು,ಪರಪ್ಪನ ಅಗ್ರಹಾರ ಹೊಸ ಆಕರ್ಷಣಿಯ ಸ್ಥಳಗಳಾಗಿವೆ ನೋಡ್ರಿ ಅಂದ ಸಿದ್ದ .ಈ ನಡುವೆ ಈ ಬಿ ಜೆ ಪಿ ಪಕ್ಷದ ಹಿರಿಯ ರಥ ಹೊಂಟ್ಸನಲ್ಲ ಯಾಕ ಬೇಕಿತ್ತು ಇವಂಗೆ ,ನನ್ನಗೆ ಅರಾಂಸೆ ಕೂತ್ಕೋ ಬಹುದಿತ್ತು, ಸಿವನೇ ಏನೆಲ್ಲ ನೋಡಬೇಕೋ ಅಂತ ನಿಟ್ಟುಸಿರು ಬಿಟ್ಟಿತು ಊರ ಹಿರಿಯ ಅಜ್ಜ ಕಟ್ಟೆ ಮರಕ್ಕೆ ಒರಗುತ್ತಾ.......... 

Thursday, October 20, 2011

ಶಂಕರ್ ನಾಗ್ ಕನಸು ನನಸಾದ ದಿನ - ನಮ್ಮ ಮೆಟ್ರೋ ಇಂದು ಜನತೆಗೆ.


ನನ್ನ ಬೆಂಗಳೂರಿನ ಜನ ಮೆಟ್ರೋದಲ್ಲಿ ಓಡಾಡಬೇಕು , ಆದರೆ ಇದರಿಂದ ನನ್ನ ಬೆಂಗಳೂರಿನ ಸೌಂದರ್ಯ ಹಾಳಾಗಬಾರದು,ಯಾವುದೇ ಕಟ್ಟಡಗಳಿಗೂ ಹಾನಿಯಾಗಬಾರದು,ಮೆಟ್ರೋ ಏನಿದ್ದರು  ಸುರಂಗ ಮಾರ್ಗದಲ್ಲೇ ಸಂಚರಿಸಬೇಕು,ಮೆಟ್ರೋದಲ್ಲಿ ಸಂಚರಿಸುವ ಪಾದಚಾರಿಗಳು ಅಷ್ಟೇ ಸುರಂಗ ಮಾರ್ಗದಲ್ಲೇ ಸಂಚಾರ ವ್ಯವಸ್ಥೆ ಅವರಿಗೆ ಕಲ್ಪಿಸಬೇಕು.ಅದರಿಂದಾಗಿ ಇತರ ಟ್ರಾಫಿಕ್ ವ್ಯವಸ್ಥೆಗಳಿಗೆ  ತೊಂದರೆ ಆಗಬಾರದು. ಇಂಥ ಪ್ರಥಮ ಬೆಂಗಳೂರು ಮೆಟ್ರೋ ಕನಸನ್ನು ಕಂಡವರು ದಿವಂಗತ ಮೆಚ್ಚಿನ ನಟ ಶಂಕರ್ ನಾಗ್ , ೧೯೮೭ ರಲ್ಲಿ ತನ್ನ ಮಾಲ್ಗುಡಿ ಡೇಸ್ ಪ್ರದರ್ಶನಕ್ಕೆ ಲಂಡನ್ ಗೆ ಹೋದಾಗ ಅಲ್ಲಿನ ಮೆಟ್ರೋ ನೋಡಿ ತನ್ನ ಬೆಂಗಳುರಿಗೂ ಇಂತದ್ದೊಂದು ಸಂಚಾರ ವ್ಯವಸ್ಥೆ ಬೇಕು ಅನ್ನೋ ಕನಸು ಕಂಡಿದ್ದ ಶಂಕರ್.ಅದಕ್ಕಾಗಿ ತನ್ನ ಸ್ವಂತ ಹಣದಿಂದ ಜರ್ಮನ್ ಮತ್ತು ಜಪಾನ್ ನಿಂದ ೨ ತಂಡವನ್ನು ಕರೆಸಿ ಸರ್ವೇ ಮಾಡಿಸಿದ್ದ. ಆಗಿನ ಕಾಲದಲ್ಲಿ ಈ ಕಾರ್ಯಕ್ಕೆ ಶಂಕರ್ ಗೆ  ತಗುಲಿದ ವೆಚ್ಚ ಬರೋಬ್ಬರಿ ೮ ಲಕ್ಷ ರುಪೈಗಳು.ಹೀಗೆ ನಡೆಸಿದ ಸರ್ವೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು ಆಗಿನ ಸರ್ಕಾರ ಈ ಬಗ್ಗೆ ಕಾಳಜಿ ತೋರಿಸದ ಕಾರಣ ಅದು ಮೂಲೆಗುಂಪು  ಆಗಿತ್ತು.ಇಲ್ಲದಿದ್ದಲ್ಲಿ ೧೫-೨೦ ವರುಷಗಳ ಹಿಂದೆಯೇ ಬೆಂಗಳೂರಿಗೆ ಮೆಟ್ರೋ ದೊರಕುತ್ತಿತ್ತು. ಶಂಕರ್ ನಾಗ್ ಪ್ಲಾನ್ ಪ್ರಕಾರ ಸಂಪೂರ್ಣ ಮೆಟ್ರೋ ಕಾಮಗಾರಿ ಸಂಪೂರ್ಣ ಬೆಂಗಳೂರು ನಗರಕ್ಕೆ ಸಿಗುವಂತೆ ೩ ವರುಷಗಳಲ್ಲಿ ಪೂರ್ಣ ಗೋಳ್ಳುತಿತ್ತು.೧೩-೧೪ ಸಾವಿರಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಇಂದಿನ ಮೆಟ್ರೋಗು ಶಂಕರ್ ಕನಸಿದ ಮೆಟ್ರೋಗು ವ್ಯವಸ್ತೆಯಲ್ಲಾಗಲಿ, ಖರ್ಚಲ್ಲಾಗಲಿ ಅಜಗಜಾಂತರ ವ್ಯತ್ಯಾಸವಿದೆ.ಆದ್ರೆ ಇಂದಿನ ಪರಿಸ್ತಿತಿಯಲ್ಲಿ ಇದು ಅನಿವಾರ್ಯ, ಬೆಂಗಳೂರಿನ ವ್ಯಾಪ್ತಿ ದೊಡ್ಡದಾಗಿದೆ, ಬಹಳಷ್ಟು ಅಭಿವೃದ್ದಿ ಹೊಂದಿದೆ, ಖರ್ಚು ವೆಚ್ಚಗಳು ಜಾಸ್ತಿಯಾಗಿದೆ,ಶಂಕರ್ ಕನಸಿದಂತೆ ಎಲ್ಲ ಕಡೆ ಸುರಂಗ ಮಾರ್ಗ ನಿರ್ಮಿಸಿದಲ್ಲಿ ವೆಚ್ಚ ದ್ವಿಗುಣ ಗೊಳ್ಳುತ್ತದೆ,ಈ ನಡುವೆ ಕಾಣದ ರಾಜಕೀಯ(ಅ)ಇಚ್ಚಾಶಕ್ತಿ ಕೂಡ ಕೆಲಸ ಮಾಡಿರಬಹುದೇ ಗೊತ್ತಿಲ್ಲ ,ಈ ಎಲ್ಲ ನಿಟ್ಟಿನಲ್ಲಿ ಯೋಚಿಸಿದಾಗ ಶಂಕರ್ ನಾಗ್ ಮೆಟ್ರೋ ಕನಸು ಅವ ಕನಸಿದಂತೆ ಅಲ್ಲದಿದ್ದರೂ ಬೇರೆ ರೂಪದಲ್ಲಾದರೂ ಸಾಕಾರಗೊಳ್ಳುತ್ತಿದೆಯಲ್ಲ ಎಂದು ಖುಷಿ ಪಡಲು ಅಡ್ಡಿ ಇಲ್ಲ. 

ಇವತ್ತು ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಅತ್ಯಾದುನಿಕ ಸೌಲಭ್ಯ ಹೊಂದಿದ ಹೈಸ್ಪೀಡ್ ಮೆಟ್ರೋ ರೈಲು ಸಂಪರ್ಕ ಬೆಂಗಳೂರಲ್ಲಿ ಕೇಂದ್ರ ನಗರಾಬಿವ್ರುದ್ದಿ ಸಚಿವ ಕಮಲನಾಥ್ , ಕೇಂದ್ರ ರೈಲ್ವೆ ಸಚಿವ ದಿನೇಶ್ ದ್ವಿವೇದಿ,ಹಾಗು ರಾಜ್ಯದ ಮುಖ್ಯಮಂತ್ರಿ ಡಿ, ವಿ , ಸದಾನಂದ ಗೌಡ ಅವರ ನೇತ್ರತ್ವದಲ್ಲಿ ಉದ್ಘಾಟನೆ ಗೊಳ್ಳಲಿದೆ.ಆ ಮೂಲಕ ಶಂಕರ್ ನಾಗ್ ಕಂಡಿದ್ದ ಕನಸು ನನಸಾಗುತ್ತಿದೆ.ಸಂಜೆ ೪ ಘಂಟೆಯ ನಂತರ ಸಾರ್ವಜನಿಕರಿಗೆ ಈ ಸೇವೆ ಲಭ್ಯವಾಗಲಿದೆ.ನಮ್ಮ ಮೆಟ್ರೋ ನಿರ್ದೇಶಕ ಕೆ ಏನ್ ಶ್ರೀವಾಸ್ತವ್,ವಿ . ಮಧು ,ದಿಲ್ಲಿ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಇ ಶ್ರೀಧರನ್ ಈ ಯೋಜನೆಯ ಆರಂಭಿಕ ರೂವಾರಿಗಳು.ಹಾಲಿ ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಏನ್ . ಶಿವ ಶೈಲಂ ಹಾಗು ಅವರ ಟೀಂ , ೨೦೦೪ ರಿಂದ ಕರ್ತವ್ಯ ಮೆರೆದ ಎಲ್ಲ ರಾಜಕಾರಣಿಗಳು ಹಾಗು ಸಂಭದಪಟ್ಟ ಸರ್ಕಾರಗಳು , ಅಪಾರ ಸಂಖ್ಯೆಯ ಕಾರ್ಮಿಕ ವರ್ಗ ,ಟ್ರಾಫಿಕ್ ಕಿರಿ ಕಿರಿ ಯನ್ನು ನಮ್ಮ ಮೆಟ್ರೋ ಸಲುವಾಗಿ ಆತ್ಮೀಯತೆ ಇಂದಲೇ ಅನಿವಾರ್ಯವಾಗಿ ಸ್ವೀಕರಿಸಿದ ಬೆಂಗಳೂರು ಜನತೆ, ಸಾವಿರಾರು ಜನರು  ಮೆಟ್ರೋ ಕಾಮಗಾರಿಗಾಗಿ ತಮ್ಮ ಆಸ್ತಿ ಪಾಸ್ಥಿಯನ್ನು ಅನಿವಾರ್ಯವಾಗಿ ಒಪ್ಪಿಯೋ,ಒಪ್ಪದೆಯೋ ಕಳಕೊಂಡವರು  ಎಲ್ಲರೂ ಈ ನಿಟ್ಟಿನಲ್ಲಿ ಅಭಿನಂದನೆಗೆ ಅರ್ಹರು.ಈ ಸಂದರ್ಬದಲ್ಲಿ ಸುಮಾರು ೨೦ ವರುಷಗಳ ಹಿಂದೇನೆ ಈ ಬಗ್ಗೆ ಕನಸು ಕಂಡ ಶಂಕರ್ ನಾಗ್ ನೆನಪಾಗುತಿದ್ದಾನೆ,ಅವನ ದೂರ ದೃಷ್ಟಿ ಮೆಚ್ಚುವಂತದ್ದು, ಈ ದಿನ ಇದ್ದರೆ ಅದೆಷ್ಟು ಸಂತಸ ಪಡುತಿದ್ದನೋ......!!!!!!!!! ಅಥವಾ ಈ ಪರಿ ರಾದ್ದಾಂತ ಕಾಮಗಾರಿ , ಉದ್ಘಾಟನೆ ಗೆಂದು ನಡೆವ ದುಂದುವೆಚ್ಚ , ೪೬  ಕಿಲೋ ಮೀಟರ್ ಪೂರ್ಣಗೊಳ್ಳಬೇಕಿರುವ ಮೆಟ್ರೋ ಬರಿಯ ೬ ಕಿಮಿ ಪೂರ್ಣಗೊಂಡು ಅದ ಉದ್ಘಾಟನೆ ನಡೆಸುತ್ತಿರುವದನ್ನು ನೋಡಿ ಮರುಕ ಪಡುತಿದ್ದನೋ !!!!!!! ಗೊತ್ತಿಲ್ಲ.

ಸಂಪೂರ್ಣ ಬೆಂಗಳೂರು  ಮೆಟ್ರೋ ಪಡೆಯಲು ಇನ್ನು ೪-೫ ವರುಷ ಬೇಕಾಗಬಹುದು.ಅಲ್ಲದೆ ಮೆಟ್ರೋದಿಂದ ಸಂಪೂರ್ಣ ಟ್ರಾಫಿಕ್ ಕಂಟ್ರೋಲ್ ಆಗಬಹುದು ಎಂಬುದನ್ನು ನಿರೀಕ್ಷಿಸಲು ಸಾದ್ಯವಿಲ್ಲ.  ಅದೇನೇ ಇರಲಿ ಈ ಮೂಲಕ ಕರ್ನಾಟಕ ಒಂದು ಹಿರಿಮೆಯನ್ನು ತನ್ನ ಮುಡಿಗೇರಿಸಿಕೊಂಡಿದೆ  ಶುಭವಾಗಲಿ.

Tuesday, October 18, 2011

ವ್ಯವಸ್ಥೆಯ ಬಾಹುಬಂದನದಲ್ಲಿ ಬಂದಿಯಾಗಿರುವ ಮಾನವೀಯತೆ.


ಮನುಕುಲದ ಸಂಸ್ಕೃತಿ ಏನು?ಎಲ್ಲ ಧರ್ಮಗಳನ್ನು ಮೀರಿದ ಆ ಸಂಸ್ಕೃತಿಯ ಅರಿವು ನಮಗೆ ಇರುವದಿಲ್ಲ ಯಾಕೆ? ನಾವು ಇನ್ನೊಬ್ಬನನ್ನು ಗುರುತಿಸಬೇಕಾದರೆ ಅವನ ಜಾತಿ ಧರ್ಮದ ಆಧಾರದಲ್ಲೇ ಗುರುತಿಸತೋಡಗುತ್ತೆವಲ್ಲ , ಅವನು ತನ್ನಂತೆ ಒಬ್ಬ ಮಾನವ, ಮೊದಲು ಆ ದೃಷ್ಟಿಯಲ್ಲಿ ಇನ್ನೊಬ್ಬರನ್ನು ನೋಡುವದಿಲ್ಲ ಯಾಕೆ?ಜಾತಿ-ಮತ-ಕುಲ-ಪಂಥಗಳ ಎಲ್ಲೆಗಳನ್ನು ಮೀರಿ ಸಮಾಜಮುಖಿಯಾಗಿ ಮುನ್ನಡೆಯುವ ನಿಜವಾದ ಮಾನವ ಅಂತಃಸತ್ವ ಅಡಗಿರುವ ಸುಖ ನಮ್ಮದಾಗುವದಿಲ್ಲ ಏಕೆ? ಯಾರಾದರು ಮಾನವತೆಯತ್ತ ನಡೆಯೋಣ ಎಂಭ ಸಲಹೆ ಇಟ್ಟಾಗ ಅವ ಧರ್ಮಗಳ ದ್ವೇಷಿ ಆಗುತ್ತಾನೋ? ನಾನಿಲ್ಲಿ ಎತ್ತಿರುವ ಪ್ರಶ್ನೆಗಳು ವಿಚಿತ್ರ ಅನಿಸಬಹುದಲ್ವೆ !!!!!! ಇತ್ತೀಚಿಗೆ ಕಾಡುತ್ತಿರುವ ಬಹಳಷ್ಟು ಪ್ರಶ್ನೆಗಳಲ್ಲಿ ಮೇಲಿನವುಗಳು ಕೆಲವೊಂದು ಅಷ್ಟೇ.ಸಮಾಜದ ವಿವಿದ ಸ್ಥರಗಳಲ್ಲಿ ನನ್ನಂತೆ ಯೋಚಿಸಬಲ್ಲ ಹಲವು ಮಂದಿಗಳಿಗೆ ಎದುರಾಗುವ ಪ್ರಶ್ನೆಗಳು ಇವು.

ಹಾಗಾದರೆ ಮೇಲಿನ ಪ್ರಶ್ನೆಗಳಿಗೆ ಉತ್ತರ ಇಲ್ಲವೇ ಖಂಡಿತ ಇದೆ.ಆದರೆ ಅವನ್ನು ಹೇಳುವದರಲ್ಲಿ ಆಗುವ ಒಳಿತಿಗಿಂತ ಹೇಳಲು ಹೊರಟ ವ್ಯಕ್ತಿಗೆ ಅಪವಾದ ಎದುರಾಗುವದೆ ಹೆಚ್ಚು.ಹುಟ್ಟಿನಿಂದಲೇ ಧರ್ಮ ಆಚಾರಗಳು ನಮ್ಮದಾಗಿರುವದಿಲ್ಲ, ಅವನ್ನು ಬೆಳೆಯುತ್ತ ಪಡೆಯುತ್ತೇವೆ ಯಾಕೆಂದರೆ ಉತ್ತಮ ವ್ಯಕ್ತಿಯಾಗಿ ರುಪಿತವಗುವದಕ್ಕೆ ಮತ್ತು ಜೀವನಕ್ಕೆ ಒಂದು ನೀತಿ ನಿಯಮದ ಅನುಸ್ಟಾನಕ್ಕೆ ಮಾರ್ಗದರ್ಶಿ  ಆಗುವದಕ್ಕೆ!!!! ಅನ್ನೋದು ಕೆಲವೊಂದು ಧರ್ಮ ವಿದ್ವಾಂಸರಲ್ಲಿ ಹೀಗೆ ಕೆಲವೊಂದು ಚರ್ಚೆ ನಡೆಸುತ್ತಾ ಕೇಳಿ ತಿಳಿದುಕೊಂಡೆ.,ಹಾಗಾದರೆ ಧರ್ಮಗಳನ್ನು  ಆ ನಿಟ್ಟಿನಲ್ಲಿ ನಾವು  ಎಷ್ಟು ಜನ ಅರ್ತೈಸಿಕೊಂಡಿದ್ದೇವೆ?ಹೀಗೆ ಹೇಳುವ ವಿದ್ವಾಂಸರನ್ನು ಒಳಗೂಡಿ, ರಾಜಕೀಯ ಕ್ಷೇತ್ರದಿಂದ ಹಿಡಿದು ಬಯೋತ್ಪಾದನೆಯೋರಗೆ ಧರ್ಮ ವಿಚಾರಗಳು ಹಬ್ಬಿದೆಯಲ್ಲ ಇದಕ್ಕೆಲ್ಲ ಹಾಗಾದರೆ ಕಾರಣ ನಾವೇ ಅಲ್ಲವೇ?? ಧರ್ಮಗಳು  ಉತ್ತಮ ವ್ಯಕ್ತಿಯಾಗಿ ರುಪಿತವಗುವದಕ್ಕೆ ಮತ್ತು ಜೀವನಕ್ಕೆ ಒಂದು ನೀತಿ ನಿಯಮದ ಅನುಸ್ಟಾನಕ್ಕೆ ಮಾರ್ಗದರ್ಶಿ  ಅನ್ನುವದೇ ಸತ್ಯವಾದರೆ ಅದನ್ನು ನಾವು ಅಳವಡಿಸಿಕೊಂಡಿದ್ದೆ ನಿಜವಾದಲ್ಲಿ ಧರ್ಮದ ಹೆಸರಲ್ಲಿ ಅನಾಚಾರ ರುಪಿತಗೊಂಡಿದ್ದನ್ನು ನೋಡಿದಲ್ಲಿ ಇದನ್ನು ಎಲ್ಲರೂ ಸರಿಯಾಗಿ ಅರ್ತಯೇಸಿಲ್ಲ ಅನ್ನುವ ನಿರ್ಧಾರವೇ ಸರಿ ಅನ್ನೋದು ನನ್ನ ಅನಿಸಿಕೆ.ಇಷ್ಟಕ್ಕೂ ಧರ್ಮವಿಚಾರ ಬೇಕೇ ಬೇಡವೇ ಅನ್ನೋದು ಇನ್ನೊಂದು ತೆರನಾದ ತರ್ಕ. ಪರಸ್ಪರ ವ್ಯಕ್ತಿಗೌರವವೇ ಮಾನವತೆಯ ಮೊದಲ ಪಾಠ , ಇದೆ ಸಾಮಾಜಿಕ ನ್ಯಾಯದ ಮೊದಲ ಮೈಲಿಗಲ್ಲು ಆದುದರಿಂದ ಧರ್ಮ ನಿಟ್ಟಿನಲ್ಲಿ ಸಾಗುವವರು ಹಾಗು ತನ್ನದೇ ಅತ್ಮಬಲದ ಮೂಲಕ ಸಾಗುವವರು ಯಾರನ್ನು ದೂರಲು ಆ ಅರ್ಹತೆ ಯಾರಿಗೂ ಇಲ್ಲ.

ನಾನು ಕಂಡು ಕೊಂಡಂತೆ ಭಯೋತ್ಪಾದನೆಯು ರಾಜಕೀಯ ಲಾಭಕ್ಕಾಗಿ ನೆಡೆಸುವ ಹಿಂಸೆಯ ಪ್ರಯೋಗ. ಸಾಮಾನ್ಯವಾಗಿ ಯುದ್ಧಗಳಲ್ಲಿರುವಂತೆ ಯಾವುದೂ ನೀತಿ ನಿಯಮಗಳು ಭಯೋತ್ಪಾದನೆಯಲ್ಲಿರುವುದಿಲ್ಲ. ಇದರಿಂದಾಗಿ ಯಾವುದೇ ಸಮಾಜದ ನೀತಿ ನಿಯಮಗಳನ್ನು ಧಿಕ್ಕರಿಸಿ ವ್ಯವಸ್ಥೆಯನ್ನು ಬುಡಮೇಲು ಮಾಡಲು ವ್ಯವಸ್ಥಿತವಾಗಿ ನೆಡೆಸಲ್ಪಡುವ ಕ್ರಿಯೆ.
ಭಯೋತ್ಪದಕರ ಧಾಳಿಯು ಸಮಾಜದ ಎಲ್ಲ ವರ್ಗ ಮತ್ತು ಪಂಗಡಗಳನ್ನು ಭೇದ ಭಾವವಿಲ್ಲದೆ ನಾಶಪಡಿಸುವುದರಿಂದ "ಭಯೋತ್ಪಾದನೆ" ಎಂಬ ಪದವು, "ಅನ್ಯಾಯ", "ಅನೀತಿ", "ದೋಷಪೂರಿತ", "ವಿತಂಡ", "ಹೇಯ" ಮತ್ತು "ಹಿಂಸಾತ್ಮಕ" ಎಂಬ ಅರ್ಥ ಕೊಡುವ ಎಲ್ಲ ಪದಗಳ ಜೊತೆ ತಾಳೆ ಹೊಂದುತ್ತದೆ. ವಿಶ್ವದ ಸರ್ಕಾರಿ, ಅಸರ್ಕಾರಿ ಸಂಸ್ಥೆಗಳು ಮತ್ತು ವಿದ್ವಾಂಸರು "ಭಯೋತ್ಪಾದನೆ ಅಥವಾ ಭಯೋತ್ಪಾದಕ" ಎಂಬ ಪದವನ್ನು ವಿಶ್ವ ಮಾನ್ಯತೆ ಹೊಂದದ ಸೈನಿಕ ಶಕ್ತಿ ಎಂದೇ ಪರಿಗಣಿಸುತ್ತಾರೆ. ಯಾಕೆಂದರೆ ವಿಶ್ವದ ಎಲ್ಲ ದೇಶಗಳ ಸೈನ್ಯ ಸಂಸ್ಥೆಗಳು ವಿಶ್ವಸಂಸ್ಥೆಯ ಸಾಮಾನ್ಯ ಸೈನಿಕ ನಿಯಮಗಳಿದೆ ಬಧ್ಧರಾಗಿರುತ್ತಾರೆ. ಆದ್ಧರಿಂದ ಭಯೋತ್ಪಾದಕರು ಯಾವಾಗಲೂ ವಿಶ್ವದ ಖಂಡನೆಗೆ ಒಳಗಾಗುವ "ದುರ್ಜನರು".ಹೀಗಿರಬೇಕಾದರೆ ಧರ್ಮಗಳು ರಾಜಕೀಯ  ಮತ್ತು  ಬಯೋತ್ಪಾದನೆ ಜೊತೆಗೆ ತಳುಕು ಹಾಕಿಕೊಳ್ಳುತ್ತವಲ್ಲ ಯಾಕೆ?ಎಲ್ಲರಿಗೂ ತಮ್ಮ ನಿಲುಕಿಗೆ ಸಿಗುವ ವಿಚಾರ ಆಗಿದ್ದರು ಕೂಡ ಮತ್ತೆ ಮತ್ತೆ ನೆನಪಿಸಿಕೊಳ್ಳುವ ಅನಿವಾರ್ಯತೆ ಇವತ್ತಿನ ದಿನಗಳಲ್ಲಿ  ಇದೆ.

ರಾಜಕಿಯತೆಗೆ ಧರ್ಮ ಜಾತಿ ಯಾಕೆಂದರೆ ವೋಟ್ ಬ್ಯಾಂಕ್ ರಚಿಸಿಕೊಳ್ಳುವದಕಷ್ಟೇ.ಆದರೆ ನಮ್ಮ ಹಲವಷ್ಟು ರಾಜಕಾರಣಿಗಳಿಗೆ ಸಮಾಜದಲ್ಲಿ ಈ ಮೂಲಕ ಒಡಕನ್ನು ಬಿತ್ತುತಿದ್ದೇವೆ ಅನ್ನುವದು  ಗೊತ್ತಿಲ್ಲ ಅಂತ ಅಲ್ಲ ,ತಮ್ಮ ಸ್ವಾರ್ಥಕ್ಕಾಗಿ ಈ ವಿಚಾರ ಅವರಿಗೆ ಗೌಣ.ಇದಕ್ಕೆ ಪ್ರಜೆಗಳು ಆದ ನಮ್ಮದು ಬಹಳಷ್ಟು ಪಾಲು ಇದೆ.ನಾವಿನ್ನು ಪಕ್ಷಾತೀತವಾಗಿ ಯೋಚನೆ ಮಾಡುವದನ್ನು ರೂಡಿಸಿಕೊಂಡೆ  ಇಲ್ಲ.ಕಾರಣ ಇಷ್ಟೇ ನಾವು ಮೊದಲು ಮಾನವ ಅನ್ನುವ ದೃಷ್ಟಿಕೋನವೇ ನಮ್ಮಲ್ಲಿ ಇಲ್ಲ. ನಾವು ಜಾತಿ ಧರ್ಮ ಹೆಸರಿನಲ್ಲೇ ಗುರುತಿಸಿಕೊಳ್ಳಲು ಇಚ್ಛೆ ಪಡುತ್ತೇವೆ ಆದುದರಿಂದ ನಮ್ಮ ಈ ತನವನ್ನು ರಾಜಕಾರಣಿಗಳು  ಸುಲಬದಲ್ಲಿ  ತಮ್ಮ ಸ್ವಾರ್ಥಕ್ಕಾಗಿ  ಬಳಸಲು ನಾವೇ ಅನುವು ಮಾಡಿಕೊಟ್ಟಿದ್ದೇವೆ.ಹೀಗಿದ್ದಾವಾಗ ರಾಜಕಾರಣಿಗಳನ್ನು ದೂರುವದು ಎಂತು?ಈ ರೀತಿಯಲ್ಲಿ ಮೂಲವನ್ನು ಅವಲೋಕಿಸುತ್ತಾ ನಡೆದಲ್ಲಿ ಸಮಾಜ ಒಡೆಯುವ ಕೆಲಸದಲ್ಲಿ ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ಒಂದು ಪಾತ್ರವಗಿದ್ದ್ದೇವೆ ಅಂದರು ತಪ್ಪಿಲ್ಲ ಅಲ್ಲವೇ?
ಬಯೋತ್ಪಾದನೆ ಎಂಬುದು ಒಬ್ಬ ವ್ಯಕ್ತಿ ಇಂದ ರೂಪುಗೊಳ್ಳಲು ಸಾಧ್ಯವೇ ಇಲ್ಲ , ಅದಕ್ಕೊಂದು ಸಂಘಟನೆ ಬೇಕು ಅದರ ಕ್ರಿಯೆಯನ್ನು ಜಾರಿಗೊಳಿಸಲು ಒಂದಷ್ಟು ಸಾವಿರ ಮಂದಿ ಅವರಿಗೆ ಬೇಕು.ಸಾಮಾಜಿಕ  ಸಮಾನತೆ ಎಂಬೋ ನಿಟ್ಟಿನ ಹಿಂಸಾ  ರೂಪಕ!! ಬಯೋತ್ಪದನೆಯ ಒಂದು ಮುಖವಾದರೆ ಧರ್ಮ ನ್ಯಾಯ!!ಅನ್ನುವದು ಇದರ  ಇನ್ನೊಂದು ಹಿಂಸಾ ಮುಖ.ಇವೆರಡು ಕ್ರಿಯೆಗಳು ಮೇಲೆ ಹೇಳಿದಂತೆ "ಅನ್ಯಾಯ", "ಅನೀತಿ", "ದೋಷಪೂರಿತ", "ವಿತಂಡ", "ಹೇಯ" ಮತ್ತು "ಹಿಂಸಾತ್ಮಕ" ಎಂಬ ಅರ್ಥ ಕೊಡುವ ಎಲ್ಲ ಪದಗಳ ಜೊತೆ ತಾಳೆ ಹೊಂದುವ ಭಯೋತ್ಪಾದನೆ ಕ್ರಿಯೆಯೇ.ಧರ್ಮದ ಹೆಸರು ತೆಗೆದು ಒಂದಷ್ಟು ಜನರನ್ನು ಒಟ್ಟುಗೂಡಿಸುವದು ಬಹಳ ಸುಲಭದ ದಾರಿ.ಆ ಮೂಲಕ ತನ್ನ ಕ್ರಿಯೆಯನ್ನು ಜಾರಿಗೆ ತರುವಾಗ ಎಲ್ಲ ಧರ್ಮಿಕರನ್ನು ಸೇರಿಸಿಯೇ ಕೊಲ್ಲುತ್ತಾರಲ್ಲವೇ ಈ ಬಯೋತ್ಪಾದಕರು ಅಂದರೆ ಅವರು ಧರ್ಮದ ಹೆಸರನ್ನು ಬಳಸುವದು ತಮ್ಮ ಸ್ವಾರ್ಥಕ್ಕೆ ಬಳಸುವದು.ತಮ್ಮ ರಾಜಕೀಯ ಇತರ ಉದ್ದೇಶಗಳ ಯಶಸ್ವಿಯಾಗಿ ಧರ್ಮದ ಹೆಸರನ್ನು ಅವಲಂಭಿಸಿ ಮಾಡುವ ಹೇಯ ಕೃತ್ಯ.ಇವರು ಯಾವ ಜಾತಿ ಧರ್ಮಕ್ಕೂ ಸೇರಿದವರಲ್ಲ ಇವರ ಜಾತಿ ಧರ್ಮ ಒಂದೇ ಅದು ರಕ್ತ ಪಿಪಾಸುತನ.ಅಂದರೆ ಭಯೋತ್ಪಾದನೆಗೆ ಸಂಸ್ಕೃತಿಯೂ ಇರುವುದಿಲ್ಲ. ಸಂವೇದನೆ ಇರುವುದಿಲ್ಲ. ಮಾನವತೆಗೆ ಅಲ್ಲಿ ಅವಕಾಶವಿರುವುದಿಲ್ಲ. ಏಕೆಂದರೆ ಭಯೋತ್ಪಾದನೆಯ ಮೂಲ ತಳಹದಿ ದ್ವೇಷ, ಅಸಹನೆ, ಹಿಂಸೆ, ಮತ್ಸರ, ಮತಾಂಧತೆ, ಸಮರಶೀಲತೆ ಮತ್ತು ಮಹತ್ವಾಕಾಂಕ್ಷೆ ಈ ಅರಿಷಡ್ವರ್ಗಗಳನ್ನು ಹೊಂದಿರುವ ಯಾವುದೇ ಸಂಘಟನೆ ಅಥವಾ ವ್ಯಕ್ತಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ,ಮತ್ತೆ ಇದರ ಮೂಲವನ್ನು ಕೆದಕುತ್ತಾ ಸಾಗಿದಲ್ಲಿ ನಮಗೆ ಅರಿವಾಗುವದು ನಮ್ಮಲ್ಲಿ ಮಾನವೀಯತೆ ,  ಮನುಕುಲ ಸಂಸ್ಕೃತಿ ಮರೆ ಅದುದೇ ಕಾರಣ ಅನ್ನುವದು ಸ್ಪಷ್ಟ ಅಲ್ಲವೇ?


ಇಂದಿನ ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಮೂಢ ಆಚರಣೆಗಳನ್ನು ಕಾಣಬಹುದು , ಇದು ಉತ್ತಮ ಸಮಾಜಕ್ಕೆ ಖಂಡಿತ ಯಾವುದೇ ಕೊಡುಗೆಯನ್ನು ನೀಡುತ್ತಿಲ್ಲ  ಬದಲಾಗಿ ಜಾತಿ ವೈಷಮ್ಯಗಳಿಗೆ ನಾಂದಿ ಹಾಡಿದೆ.ಪರಸ್ಪರ ಅಪನಂಬಿಕೆಗಳು ಸಂಶಯ ದೃಷ್ಟಿಗಳು ಜಾತಿ ವ್ಯವಸ್ತೆಯ ಮೂಲಕ ಮೆರೆದಿದೆ.ಮಾನವೀಯ ಸಂವೆದನನೆಗಳು ಅಪರೂಪವಾಗುತ್ತಿದೆ ,ಹಾಗೆ ನೋಡಿದಲ್ಲಿ ನಮ್ಮೆಲ್ಲ ಜ್ವಲಂತ ಸಮಸ್ಯೆಗಳನ್ನು ಪರಹರಿಸಿಕೊಳ್ಳುವಲ್ಲಿ ನಮ್ಮ ಮನುಕುಲ ಸಂಸ್ಕೃತಿಯನ್ನು ಎಲ್ಲರೂ ಮೆರೆದರೆ ಅದೇ ದೊಡ್ಡ ಪರಿಹಾರ ಆಗಬಲ್ಲುದು. ದೇಶ ಗಡಿ ದಾಟಿ ಮಾನವ ಕುಲಕೋಟಿಗಳು  ಇದ ಅರ್ತೈಸಿಕೋಳ್ಳಬೇಕಿದೆ , ಹರಿಯುವ ನೀರು ಯಾವತ್ತು ಕೊಳದಲ್ಲಿ ತುಂಬಿರುವ ನೀರಿಗಿಂತ ಸ್ವಚ್ಹ. ಧರ್ಮಗಳಿಗೆ ಅಂಟಿಕೊಂಡಾದರು ಸರಿ, ಧರ್ಮಬಾದಿತರಾಗಿ ಇಲ್ಲದಿದ್ದರೂ ಸರಿ. ಅದೆಲ್ಲದವನ್ನು ಮೀರಿ ಪರಸ್ಪರ ಮಾನವ ಮಾತ್ರರಿಂದ ವ್ಯಕ್ತಿಗಳನ್ನು ಗುರುತಿಸೋಣ,ಪರಸ್ಪರ ವ್ಯಕ್ತಿ ಗೌರವಗಳು ಮೆರೆಯಲಿ. ಆ ಮೂಲಕ ಸಮಾಜದ ಮೂಲ ವಾಹಿನಿಯಲ್ಲಿ ನಿಂತು ಒಂದಷ್ಟು ನಮಗಾಗುವ ಸಮಾಜಮುಕಿ ಕೆಲಸಗಳಲ್ಲಿ ತೊಡಗೋಣ.ಆ ಮೂಲಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ. ಇದು ಇವತ್ತಿಂದ ನಾಳೆಗೆ ಬದಲಾವಣೆ ತರುತ್ತದೆಂದಲ್ಲ, ಆದರೆ ಇದಕ್ಕಿಂತ ಸೂಕ್ತ ದಾರಿಗಳು ಬೇರೆ ಕಾಣುತ್ತಿಲ್ಲ. ಧರ್ಮ ಪಂಡಿತರು , ವಿವಿದ ಧರ್ಮದ ಶ್ರ್ಹದ್ದಾ ಕೇಂದ್ರಗಳು ಧರ್ಮ ಬೊದನೆ ಜೊತೆ ಜೊತೆಗೆ ಮಾನವೀಯ ಸಂವೇದನೆ ಕಾರ್ಯಗಳನ್ನು ಹಮ್ಮಿಕೊಳ್ಳಲಿ.ಈ ಕಾರ್ಯಗಳು ಸಕಲ ಮಾನವ ಜೀವರಾಶಿಗೂ ಸಿಗಲಿ.ಆ ಮೂಲಕ ಮಾನವ ಜನ್ಮದ ಸುಖಾಮೃತ ನಮ್ಮೆಲ್ಲರದ್ದಾಗಲಿ.
ನಿಮ್ಮವ ..................
ರಾಘವೇಂದ್ರ ತೆಕ್ಕಾರ್ 





Friday, September 30, 2011

ವೈಧಿಕ.

ಜಾತೀಯತೆ ತಾಳ ಮೇಳಗಳ ಜೊತೆ ಪ್ರಕೃತಿ ಮತ್ತು ಪರಿಸ್ಥಿತಿ ಕಲಿಸುವ ಪಾಠ -ವೈಧಿಕ.

ಮೇಲೊಂದು ಕಟ್ಟಿಗೆ ಹೊರೆ,ಕಂಕುಳಕ್ಕೆ ತೂಗು ಹಾಕಿರುವ ಕತ್ತಿ,ಅಷ್ಟಿದ್ದರು ಕೈ ಬೀಸಿ ಬಿರು ಬೀಸನೆ ನಡೆಯುತಿದ್ದ ಚೋಮನ ನಡಿಗೆಯು ಒಮ್ಮೆಲೆ ಸ್ಥಭ್ದವಾಗಿ ಗಪ್ಪನೆ ನಿಂತಿದ್ದ.ಎದುರಿಗೆ ಕಚ್ಚೆ ಉಟ್ಟುಕೊಂಡು ಹೆಗಲಿಗೆ ಶಾಲು ಹಾಕಿ ಒಂದು ಜೋಳಿಗೆ ತೂಗು ಹಾಕಿಕೊಂಡು ತನ್ನ ಜನೀವಾರವನ್ನು ನೇವರಿಸುತ್ತ ಕೋಪದಿಂದ ನಿಂತಿದ್ದ ಸುಬ್ರಾಯ ಭಟ್ಟರನ್ನು ಕಂಡು. ಸುಬ್ರಾಯ ಭಟ್ಟರು ಹೆಗಡೆ ಹಳ್ಳಿಯ ಪೌರೋಹಿತ್ಯ ಕುಟುಂಬದವರು,ಪರ ಜಾತಿಯವರು ಎದುರಿಗೆ ಸಿಕ್ಕಲ್ಲಿ ಮೈಲಿಗೆ ಅಂತ ಬೊಬ್ಬಿರುದು ಬಯ್ಯ ನಿಲ್ಲುವ ವೈಧಿಕ.ಅಂತವರ ಎದುರು ಹೊಲೇರು ಅಂತ ಕರೆಸಿಕೊಳ್ಳುವ ಚೋಮ ನಿಂತಿದ್ದ,ಇನ್ನೇನನ್ನುತ್ತಾನೊ ಈ ಬ್ರಾಹ್ಮಣ ಎಲ್ಲಿ ಶಾಪ ಹಾಕಿ ಬಿಡುತ್ತಾನೊ ಅನ್ನೊ ಭಯದಿಂದ ಸುಬ್ರಾಯ ಭಟ್ಟ ಬಾಯಿ ತೆಗೆಯುವ ಮೊದಲೆ,ಮುಬ್ಬು ಕತ್ಲಲ್ವೆ!!!!!ಹಟ್ಟಿ ಬೇಗ ಸೇರ್ಕೊಂಡ್ಬಿಡೋಣ ಅಂಬೋ ಅವಸರ್ದಾಗೆ ಗೊತ್ತಾಗ್ಲಿಲ್ಲ ಬುದ್ದಿಯೋರ ಎಂದು ಪ್ರತ್ಯುತ್ತರಕ್ಕು ಕಾಯದೆ ಮುಂದಡಿ ಇರಿಸಿದ್ದ ಆ ದಿನ ಚೋಮ.ಸುಬ್ರಾಯ ಭಟ್ಟ ಬಾಯಲ್ಲೇ ಗೊಣಗುತ್ತ ಮನೆ ಕಡೆ ಹೊಂಟಿತ್ತು.

ಹೆಗಡೆ ಹಳ್ಳಿ ಮಡಿಕೇರಿಯ ಸೋಮವಾರ ಪೇಟೆಯಿಂದ ಒಂದು 10 ಮೈಲಿ ದೂರವಿರುವ ಹಳ್ಳಿ.ಹಳ್ಳಿಯ ಹಿಂದಡಿ ಸುಂದರ ಕುಮಾರ ಪರ್ವತದ ರಮಣೀಯ ದೃಶ್ಯ.ಆ ಊರು ಹೆಚ್ಚಿನ ಬ್ರಾಹ್ಮಣ ಕುಟುಂಬಗಳನ್ನು ಹೊಂದಿದ್ದು ಆ ಕುಟುಂಬಗಳ ಅಡಿಕೆ ತೋಟ ಮುಂತಾದುವದರಲ್ಲಿ ದುಡಿಯಲು ಬಂದ ಒಂದಷ್ಟು ಸಮಾಜದಲ್ಲಿ ಕೆಳ ಜಾತಿಗಳು ಎಂದು ಕರೆಯಲ್ಪಡುವ ಕುಟುಂಬಗಳು,ಒಂದಷ್ಟು ಮುಸ್ಲಿಂ ಕುಟು೦ಬಗಳು,ಬ್ರಿಟಿಷರ ಕಾಲದಿಂದ ನೆಲೆ ನಿಂತ ಒಂದೆರಡು ಕ್ರೈಸ್ತ ಕುಟುಂಬ.ಇತರೆ ಮಧ್ಯಮ ಜಾತಿ ಕುಟುಂಬಗಳು ಹೊಂದಿದ್ದ ಒಂದು ಸಣ್ಣ ಊರು ಅದು.ಊರಿನಲ್ಲೊಂದು ದೇಗುಲ.ಅದರ ಅರ್ಚಕರೆ ಈ ಸುಬ್ರಾಯ ಭಟ್ಟರು.ಊರ ಮಂದಿಯಿಂದ ಜಾತೀಯ ಹೆದರಿಕೆಗೊ, ಭಕ್ತಿ ಭಾವಕ್ಕೊ ಏನೋ ಒಟ್ಟಿನಲ್ಲಿ ಗೌರವಕ್ಕೆ ಪಾತ್ರರಾಗಿದ್ದವರು.ಆ ಊರಿಗೊಂದು ಏಕೋಪಾಧ್ಯಯ ಕಿರಿಯ ಪ್ರಾಥಮಿಕ ಶಾಲೆ.ಅದರ ಮೆಸ್ತರೆ ದೂರದ ಸುಳ್ಯದ ನಾವಡರು. ಜಾತಿಯಲ್ಲಿ ಅವರು ಬ್ರಾಹ್ಮಣರೆ ಆದರು ಆ ತನವನ್ನು ಸಂಸ್ಕಾರದಲ್ಲಿ ತನ್ನದಾಗಿಸಿ ಅಚಾರದಲ್ಲಿ ಮಾನವತೆ ಮೆರೆಯುವವರು. ಅದಕ್ಕೆ ಕಾರಣಗಳು ಇತ್ತು. ಅವರ ತಂದೆ ಮಿಲಿಟರಿಯಲ್ಲಿ ಇದ್ದವರು ತನ್ನೊಬ್ಬಳೆ ಮಗಳನ್ನು ತನ್ನ ಆತ್ಮೀಯ ಕೊರಗಪ್ಪ ಗೌಡರ ಮಗ ವಿವೇಕನಿಗೆ ಕೈಯೇರೆದು ಮದುವೆ ಮಾಡಿದ್ದರು,ಯಾರೊ ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ನಾನು ಒಬ್ಬ ವೇದ ಪುರಾಣಗಳು ತಿಳಿದುಕೊಂಡ ನಿಮ್ಮ ಪ್ರಕಾರದ ಅಚ್ಚ ಬ್ರಾಹ್ಮಣ ಏನು ಮಾಡಬೇಕಿತ್ತೊ ಅದನ್ನೇ ಮಾಡಿದ್ದೇನೆ, ನನಗೆಂದು ನನ್ನ ಸಂಸ್ಕೃತಿ ಜಾತೀಯತೆಯನ್ನು ಎಲ್ಲೂ ಕಲಿಸಿಲ್ಲ ತಾವಿನ್ನು ತೆರಳಬಹುದು ಅಂದು ಮುಖಕ್ಕೆ ಹೊಡೆದಂತೆ ನುಡಿದಿದ್ದರು,ಇಂತವರ ಮಗನಾದ ನಾವಡರ ವಿಚಾರಗಳು ಈ ತೆರವಾಗೆ ಇದ್ದು,ಟಿ ಸಿ ಹೆಚ್ ಕಲಿಕೆಯ ನಂತರ ಆರಿಸಿ ಬಂದ ಕೆಲಸದ ನಿಮಿತ್ತ ಈ ಹೆಗಡೆ ಹಳ್ಳಿ ಬಂದು ಸೇರಿದ್ದರು.

ಮೊದಲಿಗೆ ನಾವಡರಿಗೆ ಬ್ರಾಹ್ಮಣರೆ ಹೆಚ್ಚಾಗಿದ್ದ ಆ ಊರಿನಲ್ಲಿ ಇವರು ಬ್ರಾಹ್ಮಣರೆಂಬ ಕಾರಣಕ್ಕೆ ಅದ್ದೂರಿ ಸ್ವಾಗತವೆ ದೊರಕಿತ್ತು.ಹಲವು ಕುಟುಂಬಗಳು ತಮ್ಮ ಮನೆಯಲ್ಲಿರಲು ಆಹ್ವಾನ ಕೊಟ್ಟರು ಅದೆಲ್ಲವನ್ನು ಪ್ರೀತಿ ಇಂದಲೆ ನಿರಾಕರಿಸಿ ನಾವಡರು ಶಾಲೆಯ ಒಂದು ಕೋಣೆಯನ್ನು ತನ್ನದಾಗಿಸಿ ಅಲ್ಲಿಯೇ ಬಿಡಾರ ಹೂಡಿದ್ದರು.ಶಾಲೆ ಮುಗಿದ ನಂತರ ಒಂದು ಸಣ್ಣ ರೇಡಿಯೋ ಕಿವಿ ತಿರುವಿ, ಸೀಮೆ ಎಣ್ಣೆ ಸ್ಟೋವ್ ಹಚ್ಚಿ ಟೀ ಮಾಡಿ ಕುಡಿದು ಅಲ್ಲಿನ ಕೋಡಗನ ಬೆಟ್ಟಕ್ಕೆ ನಡೆದು ಕತ್ತಲಾಗುವವರೆಗೆ ಅಲ್ಲಿಂದ ಕಾಣುವ ಪ್ರಕೃತಿ ಸೌಂದರ್ಯ ಆಸ್ವಾದಿಸಿ ಮನೆ ತಲುಪುತ್ತಿರುವದಷ್ಟೆ ಆ ದಿನಗಳ ಅವರ ಹವ್ಯಾಸಗಳಾಗಿತ್ತು.ಮುಂದೆ ಈ ಹವ್ಯಾಸಗಳಿಗೆ ಅವರಿಗೆ ಜೊತೆಯಾಗಿದ್ದು ಆ ಊರಿನ ಚಾರಣಿಗರ ಮಾರ್ಗದರ್ಶಿಯಾಗಿ ಕೆಲಸ ಮಾಡುತಿದ್ದ ರಾಮಣ್ಣ.ಜೀವನೋಪಾಯಕ್ಕಾಗಿ ಇವನು ಒಂದು ಸಣ್ಣ ಅಂಗಡಿಯನ್ನು ದೇಗುಲದ ಪಕ್ಕ ಇಟ್ಟುಕೊಂಡು ದೇಗುಲದಲ್ಲಿ ಪೂಜೆ ಕೈಗೊಳ್ಳಲು ಬೇಕಾದ ಸಾಮಗ್ರಿ ಮತ್ತು ಕುಮಾರ ಪರ್ವತದಿಂದ ಇಳಿದು ಬರುವ ಚಾರಣಿಗಳನ್ನೆ ನಂಬಿಕೊಂಡು ವ್ಯಾಪಾರ ವಹಿವಾಟು ನಡೆಸುತಿದ್ದ.ತಾನು ಚಾರಣಿಗರ ಜೊತೆ ತೆರಳಬೇಕಾದಾಗ ಅಂಗಡಿಯನ್ನು ತನ್ನ ಬಾವ ಮೈದುನ ತನಿಯನ ಸುಪರ್ದಿಗೆ ವಹಿಸುತಿದ್ದ,ಹೀಗಿದ್ದ ರಾಮಣ್ಣನಿಗೆ ತನ್ನೂರಿನ ಮೇಸ್ತ್ರ ಈ ಹವ್ಯಾಸಗಳು ಆಸಕ್ತಿ ಕೆರಳಿಸಿದ್ದವು,ಹಾಗು ಅವರ ಈ ಆಸಕ್ತಿಗಳಿಗೆ ಅವನು ಜೊತೆಯಾಗಿದ್ದ.ಮುಂದೆ ಹೀಗೆ ಇವರು ರಜಾ ದಿನಗಳಲ್ಲಿ ಕಾಡು ಸುತ್ತುವದು,ತಿಂಗಳಿಗೊಮ್ಮೆ ಪರ್ವತ ಏರುವದು,ಬೇಟೆ,ತೊರೆ ಬದಿ ಬಿಡಾರ ಹೂಡಿ ಅಡಿಗೆ ಮಾಡಿ ತಿಂದು ತೇಗುವದು ಮುಂತಾದ ಹವ್ಯಾಸಗಳು ಮುಂದುವರಿದಿತ್ತು,ಇವರ ಜೊತೆ ರಾಮಣ್ಣನಲ್ಲದೆ ಚೋಮ , ಮಾದ,ಸಿದ್ದರ ಹುಡುಗ ಪರಮ,ಅಣ್ಣು ಪೂಜಾರಿ ಮಗ ನೋಣಯ ಹೀಗೆ ಬಹಳಷ್ಟು ಸಾಥಿಗಳು ದೊರಕಿದ್ದರು.ಮೊದ ಮೊದಲು ನಾವಡರು ಬ್ರಾಹ್ಮಣರೆಂಬ ಕಾರಣಕ್ಕೆ ಹಿಂದೆ ಸರಿಯುತಿದ್ದ ಇವರುಗಳು ಕ್ರಮೇಣ ಇವರು ತೋರಿಸುತಿದ್ದ ಪ್ರೀತಿ ಅಪ್ಯಾತೆಗಳಿಗೆ ಮಾರು ಹೋಗಿದ್ದರು,ಇದಲ್ಲದೆ ಹೆಚ್ಚಿನ ಬ್ರಾಹ್ಮಣ ಮಕ್ಕಳೇ ತುಂಬಿದ್ದ ಆ ಶಾಲೆಯಲ್ಲಿ ನಾವಡರಿಂದಾಗಿ ಉಳಿದ ಜಾತಿಯ ಮಕ್ಕಳು ಕೂಡ ಹೆಚ್ಚು ಹೆಚ್ಚು ಬರ ತೊಡಗಿದರು.

ನಾವಡರ ಈ ಎಲ್ಲ ಕಾರ್ಯಗಳಿಂದಾಗಿ ಹೆಚ್ಚಿನ ಚಿಂತೆಗೊಳಗಾದವರು ಎಂದರೆ ಆ ಊರಿನ ಜಾತಿ ಅಧಿಪತ್ಯದ ಮೂಲಕ ಅಳುತಿದ್ದ ಬ್ರಾಹ್ಮಣ ಕುಟುಂಬಗಳು ಅದರಲ್ಲೂ ಆ ದಳದ ನಾಯಕ ಸುಬ್ರಾಯ ಭಟ್ಟರು.ಈ ಪುಡಗೊಸಿ ಬ್ರಾಹ್ಮಣ ವೇಷದಾರಿ ನಾವಡ ಶಾಲೆಯನ್ನು ಹಾಗು ನಮ್ಮ ಮಕ್ಕಳನ್ನು ಮೈಲಿಗೆ ಮಾಡ ಹೊರಟಿದ್ದಾನೆ!!!! ಎಂದು ಬಹಿರಂಗವಾಗಿಯೆ ದೇವಳದ ಅಂಗಳದಲ್ಲಿ ಸೇರಿದ್ದ ಬ್ರಾಹ್ಮಣ ಸಮುದಾಯದವರೊಡನೆ ತನ್ನ ಅಸಮಧಾನ ತೋಡಿಕೊಂಡಿದ್ದರು.ತದ ನಂತರ ಒಂದು ಅಘೋಷಿತ ಬಹಿಷ್ಕಾರ ನಾವಡರ ಮೇಲೆ ಬ್ರಾಹ್ಮಣ ಕುಟುಂಬಗಳು ಹೇರಿದ್ದವು.ಇವೆಲ್ಲವೂ ನಾವಡರಿಗೆ ವಿಧಿತವಾಗಿ ತಿಳಿದರು ಕೂಡ ಅವಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಮೌನಕ್ಕೆ ಶರಣಾಗಿದ್ದರು.ಹೀಗಿರಬೇಕಾದರೆ ಅದೇ ಊರಿನ ಗಾಣಿಗ ಸಮಾಜಕ್ಕೆ ಸೇರಿದ ಅರುಣಳನ್ನು ತನ್ನ ಮನೆಯವರ ಒಪ್ಪಿಗೆ ಪಡೆದು ಅದ್ದೂರಿಯಾಗಿಯೇ ಮದುವೆಯಾದರು.ಅರುಣಳಾ ಮನೆ ಅಂಗಳದ ಮೂಲಕವೇ ಕೊಡುಕಲ್ಲ ಮೇಲೆ ಹೋಗುವ ದಾರಿ ಇದ್ದುದರಿಂದಲೊ ಏನೊ ಅವರಲ್ಲಿ ಕೊಡು ಕಲ್ಲಿನ ಕೃಪೆ ಇಂದ ಪ್ರೀತಿ ಉಕ್ಕಿತ್ತು, ನಾವ್ಯಾಕೆ ಮದುವೆಯಾಗಬಾರದು? ಎಂಭ ಮೊದಲ ಪ್ರಸ್ತಾಪ ನಾವಡರಿಂದಲೆ ಬಂದಿತ್ತು.ಅಚ್ಚರಿಯೊಂದಿಗೆ ಹೂಂ....... ಅನ್ನೋ ಪ್ರತಿಕ್ರಿಯೆಯೊಂದಿಗೆ ಅರುಣ ನಾಚಿ ನಿಂತಿದ್ದಳು.ಇಷ್ಟೆ!! ವಿಷಯ ನಾಡಿಗರ ಮೂಲಕ ತನ್ನ ತಂದೆಗೆ ರವಾನೆ ಆಯಿತು,ಮಗನ ಇಚ್ಚೆಯ ಮುಂದೆ ಉಳಿದಿದ್ದೆಲ್ಲ ಅವರಿಗೆ ಗೌಣವಾಗಿರಬೇಕಾದರೆ ಸಂತೋಷದಿಂದಲೆ ಅವರ ಸಮ್ಮತಿ ಕೂಡ ದೊರಕಿತ್ತು,ಊರ ಜನರಿಗೆ ಅಚ್ಚರಿ ಆದರು ನಾವಡರ ಯಾವುದೇ ಕಾರ್ಯವು ಸಂತೋಷದ್ದೆ ಆಗಿರುತ್ತದೆಂಬ ಅದಮ್ಯ ವಿಶ್ವಾಸವು ಇದ್ದುದರಿಂದ ಜನ ಸಂಭ್ರಮ ಪಟ್ಟರು.ಅಸಹ್ಯ ಪಟ್ಟುಕೊಂಡವರು ಅದೆ ಬ್ರಾಹ್ಮಣ ಪಂಗಡದವರು ಹಾಗು ದೇಗುಲ ಅರ್ಚಕ ಸುಬ್ರಾಯ ಭಟ್ಟರು.ನಾವಡರ ಈ ನಿರ್ಧಾರ ಅವರಿಗೆ ಘೋಷಿತ ಬಹಿಷ್ಕಾರ ಮತ್ತು ನಾವಡರಿಗೆ ದೇಗುಲ ಪ್ರವೇಶ ನಿಷಿದ್ದ ಅನ್ನುವ ಕಟ್ಟಪ್ಪಣೆಗಳು ಸುಬ್ರಾಯ ಭಟ್ಟರಿಂದ ಬಂದಿತ್ತು.ಅದೆಲ್ಲವನ್ನು ಮೌನವಾಗಿಯೆ ಸ್ವೀಕರಿಸಿದ ಊರ ಜನ ಶಾಲಾ ಮೈದಾನದಲ್ಲೆ ಚಪ್ಪರ ಹಾಕಿ ನಾವಡರ ಮತ್ತು ಅರುಣಲ ಮದುವೆಯನ್ನು ಸುಸೂತ್ರವಾಗಿ ನೆರವೇರಿಸಿದ್ದರು,ಊರ ಬ್ರಾಹ್ಮಣರ ಹೊರತಾಗಿ, ಜನ ಜಾತ್ರೆಯೆ ನೆರೆದಿತ್ತು,ನಾವಡರ ತಂದೆ ಖುದ್ದು ಹಾಜರಿದ್ದು ಮಂಗಳ ಕಾರ್ಯ ನೆರವೇರಿಸಿದ್ದರು.ಮದುವೆ ಮುಗಿಸಿದ ಮರುದಿನದ ಬೆಳಿಗ್ಗೆ ಅರುಣ ಕೊಡುಕಲ್ಲ ಕಡೆ ಮುಖ ಮಾಡಿ ತನ್ನ ಬಾಲ್ಯ ವಿವಾಹ ,ಒಂದೆ ವರ್ಷದಲ್ಲಿ ತೀರಿಕೊಂಡ ಆ ಬಾಲ್ಯ ಗಂಡ,ಮದುವೆ ಅಂದರೇನು ಅರಿತುಕೊಳ್ಳಲಾಗದ ವಯಸಲ್ಲಿ ವಿಧವೆ ಪಟ್ಟ,ಇದೆಲ್ಲವೂ ಗೊತ್ತಿದ್ದೂ ತನ್ನ ಮತ್ತೆ ಕೈ ಹಿಡಿಯಲು ಮುಂದೆ ಬಂದ ನಾವಡರು ಈ ಎಲ್ಲವನ್ನ ಯೋಚಿಸುತಿದ್ದಳು!!,ಕೊಡುಕಲ್ಲು ಹಾಗು ಅದರ ಹಿಂದಿನ ಕುಮಾರ ಪರ್ವತದ ಮುಸುಕಿದ್ದ ಮಂಜು ಮೆಲ್ಲನೆ ಕರಗುತ್ತಾ ಸೂರ್ಯ ಕಿರಣಗಳು ಅವುಗಳ ನಡುವೆ ನಗುತಿದ್ದವು.

ಸುಬ್ರಾಯ ಭಟ್ಟರ ಮಗಳು ಕಾವ್ಯ, ತನ್ನ ಪ್ರೌಡ ಶಿಕ್ಷಣ ಮುಗಿಸಿ ಸೋಮವಾರ ಪೇಟೆಯಲ್ಲಿ ಪದವಿ ಪೂರ್ವ ಕಾಲೇಜ್ ನಲ್ಲಿ ವಿಧ್ಯಾಭ್ಯಾಸ ಮುಂದುವರಿಸಿದ್ದಳು. ಪಿ ಯು ಸಿ ಮುಗಿದ ಕೂಡಲೆ ಮಗಳಿಗೊಂದು ಮದುವೆ ಮಾಡುವ ಯೋಚನೆ ಸುಬ್ರಾಯಭಟ್ಟ ಹಾಗು ಪತ್ನಿ ಸುಶೀಲ ಅಮ್ಮನದು.ಅದಕ್ಕಾಗಿ ದೂರದ ಮೈಸೂರಿನ ಅಡಿಗರ ಮಗ ಪೌರೋಹಿತ್ಯ ವೃತ್ತಿಯಲ್ಲೇ ಇರುವ ವಾಸುದೇವ ಅನ್ನುವ ವರನನ್ನು ಗೊತ್ತು ಮಾಡಿದ್ದರು.ಆದರೆ ಪಿ ಯು ಸಿ ಮುಗಿಸಿದ ಕಾವ್ಯ ತಾನು ಪದವಿ ಶಿಕ್ಷಣ ಪಡೆಯಲೆಬೇಕೆಂದು ದುಂಬಾಲು ಬಿದ್ದಿದ್ದರಿಂದ ಅನಿವಾರ್ಯವಾಗಿ ಒಪ್ಪಿದ್ದರು ಸುಬ್ರಾಯ ಭಟ್ಟರು.ದೂರದ ಮೈಸೂರ್ ನಲ್ಲೆ ಒಂದು ವಿದ್ಯಾರ್ಥಿನಿ ನಿಲಯಕ್ಕೆ ಸೇರ್ಪಡಿಸಿ ಕಾಲೇಜ್ ಸೇರಿಸಿ ಬಂದಿದ್ದರು.ಕಾವ್ಯ ಓದಿನಲ್ಲಿ ಜಾಣೆ,ಅವಳು ಸೇರಿದ ಕಾಲೇಜ್ ಪ್ರಭಾವವೋ ಏನೋ!!! ಪ್ರಬುದ್ದಳಾಗುತ್ತ ಸಾಗಿದ್ದಳು,ಹಲವಾರು ವಿಚಾರ ಬಗ್ಗೆ ಲೇಖನಗಳನ್ನು ಬರೆಯುತ್ತ ,ಹಲವಾರು ಸಾಮಾಜಿಕ ವಿಷಯಗಳ ಗೋಷ್ಠಿಗಳಲ್ಲಿ ಭಾಗವಹಿಸುತ್ತ ಉತ್ತಮ ವಾಗ್ಮಿಯಾಗಿಯೂ ಆಗಿ ರೂಪುಗೊಂಡಿದ್ದಳು.ಪದವಿ ಶಿಕ್ಷಣ ಮುಗಿಸಿ ಅದೆ ವಾಸುದೇವನ ಪ್ರಸ್ತಾಪ ಮನೆ ಇಂದ ಬಂದರು ಕೂಡಾ ಲೆಕ್ಕಿಸದೆ ತನ್ನ ಇಷ್ಟದ ಎಂ ಎಸ್ ಡಬ್ಲು ಉನ್ನತ ಶಿಕ್ಷಣಕ್ಕೆ ಸೇರಿಕೊಂಡಳು.ಆ ಮೂಲಕ ಸಾಮಾಜಿಕವಾಗಿ ತಾನು ಗುರುತಿಸಿಕೊಳ್ಳಬೇಕೆಂಬ ಹಾಗು ಸಮಾಜಕ್ಕೆ ನೆರವಾಗಬೇಕೆಂಬ ಉತ್ಕಟ ಹಂಬಲ ಅವಳದಿತ್ತು.ಹೀಗಿರಬೇಕಾದರೆ ತನ್ನ ಈ ಹಂತದಲ್ಲಿ ಪರಿಚಯವಾದ ಪೀಟರ್ ಇವಳ ಈ ಕನಸಿಗೆ ಬೆನ್ನೆಲುಬಾಗಿ ನಿಂತ.ಪೀಟರ್ ದೂರದ ಅಮೆರಿಕೆಯ ಕ್ಯಾಲಿಫೋರ್ನಿಯದವ,ವಿಶ್ವದಾದ್ಯಂತ ಸಾಮಾಜಿಕ ಕಾರ್ಯಗಳಿಗಾಗಿ ಎನ್ ಜಿ ಓ ಗಳನ್ನೂ ಸ್ಥಾಪಿಸಿದ್ದ.ಬದುಕು ಮತ್ತು ಮಾನವತೆ ಎಂಭ ವಿಚಾರ ಗೋಷ್ಠಿಗೆ ಆ ಕಾಲೇಜ್ ನವರು ಇವನನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿಸಿದ್ದರು.8 ದಿನ ನಡೆದ ಆ ಗೋಷ್ಠಿಯಲ್ಲಿ ಅವನ ವಿಚಾರಗಳು ಅನುಭವಗಳು ಕಾವ್ಯಳನ್ನು ಅತಿಯಾಗಿ ಸೆಳೆಯಿತು,ಪೀಟರ್ಗೂ ಅಷ್ಟೆ ಕಾವ್ಯಳು ಗೋಷ್ಠಿಯಲ್ಲಿ ಎತ್ತುತ್ತಿದ್ದ ಪ್ರಶ್ನೆ,ಕೆಲವೊಂದು ವಿಚಾರ ಮಂಡನೆಗಳ ಶೈಲಿ ನೋಡಿ,ತಾನೆಲ್ಲು ಕಾವ್ಯಳಂತ ಪ್ರತಿಭೆಯನ್ನು ಈ ಹಿಂದೆ ಕಂಡಿಲ್ಲ ಎಂದು ಎಲ್ಲರೆದುರೆ ಹೇಳಿದ್ದ.ತದ ನಂತರ ಇವರುಗಳ ನಡುವೆ ಫೋನ್,ಇಮೇಲ್ ಮುಂತಾದವು ಸಾಮಾನ್ಯವಾಗಿತ್ತು, ಹೆಚ್ಚಿನೆಲ್ಲ ವಿಚಾರಗಳು ತಮ್ಮ ವಿಷಯಾಧಾರಿತವಾಗೆ ಇರುತಿದ್ದವು.ಹೀಗೆ ಮುಂದುವರಿದ ಕಾವ್ಯಳ ವಿದ್ಯಾಭ್ಯಾಸ ಒಂದು ದಿನ ಕೊನೆಗೊಳ್ಳುತ್ತದೆ. ಕೂಡಲೆ ಪೀಟರ್ ನಿಂದ ತನ್ನ ಸಂಸ್ಥೆಗೆ ಸಂಭಂದ ಪಟ್ಟ ಒಂದು ರಿಸರ್ಚ್ಗೆ ಸಂಬಂಧಿಸಿದಂತೆ ಮುಕ್ತ ಆಹ್ವಾನ ಬರುತ್ತದೆ.ಖುಷಿ ಇಂದಲೆ ತನ್ನ ವಿದ್ಯಾರ್ಥಿನಿ ನಿಲಯವನ್ನು ಖಾಲಿ ಮಾಡಿ ತನ್ನ ಸಹಪಾಠಿಗಳನ್ನೆಲ್ಲ ಬೀಳ್ಕೊಟ್ಟು ಹೆಗಡೆ ಹಳ್ಳಿ ತನ್ನ ಮನೆಗೆ ತಲುಪಿದ್ದಳು ಕಾವ್ಯ.

ಮನೆಯಲ್ಲಿ ಸಂಭ್ರಮವೋ ಸಂಭ್ರಮ,ಶುಶೀಲ ಅಮ್ಮನಂತೂ ಮಗಳಿಗೆ ಇಷ್ಟವಾದ ಅಡುಗೆ ತಯಾರಿಕೆಯಲ್ಲಿ ಮುಳುಗಿದ್ದರು.ಸುಬ್ರಾಯ ಭಟ್ಟರು ಅಡಿಗರ ಮನೆಗೆ ಫೋನಾಯಿಸಿದ್ದರು , ಮಗ ವಾಸುದೇವನನ್ನು ಕರಕೊಂಡು ಊರ ಕಡೆ ಬಂದು ಹೋಗಿ ಎಂಬ ಆಮಂತ್ರಣವನ್ನು ನೀಡಿದ್ದರು.ವಾಸುದೇವ ಇನ್ನು ಮದುವೆಯಾಗದೆ ಕುಂತಿದ್ದ ಕಾರಣ ಕಾವ್ಯಗಾಗಿ ಅಲ್ಲ,ಬ್ರಾಹ್ಮಣ ಅದರಲ್ಲೂ ಪೌರೋಹಿತ್ಯ ವೃತ್ತಿಯವನಿಗೆ ಹೆಣ್ಣು ಸಿಗುತ್ತಿರಲಿಲ್ಲ.ಆದರೆ ಸುಬ್ರಾಯ ಭಟ್ಟರಿಗೆ ಅದೆಲ್ಲ ಯೋಚನೆಗೆ ಬರುತ್ತಿರಲಿಲ್ಲ.ಏನಾದರಾಗಲಿ ಈ ಸಾರಿ ಮದುವೆ ಮುಗಿಸಿಯೆ ತೀರಬೇಕೆಂದು ಧೃಡ ಸಂಕಲ್ಪ ತೊಟ್ಟಿದ್ದರು ಹಾಗು ಈ ಬಗ್ಗೆ ನಿನ್ನ ಮಗಳಿಗೂ ತಿಳಿಹೇಳು ಎಂದು ಶುಶೀಲ ಅಮ್ಮನಿಗೂ ಎಚ್ಚರಿಸಿದ್ದರು.ಈ ವಿಷಯ ಕಾವ್ಯಳಿಗೆ ತನ್ನ ಅಮ್ಮನ ಮೂಲಕ ತಿಳಿದಾಗ ನಿಜವಾಗಿಯೂ ಧೃತಿ ಕೆಟ್ಟು ಕುಳಿತಿದ್ದಳು.ಅವಳ ಕಣ್ಣೆದುರು ಇದ್ದುದು ಒಂದೆ ಅದು ತಾನು ಕಟ್ಟಿಕೊಳ್ಳುವ ಭವಿಷ್ಯ,ತನ್ನ ತಂದೆ ನೋಡಿದ ವರ ಈ ನಿಟ್ಟಿನಲ್ಲಿ ಯಾವುದಕ್ಕೂ ನಿಲುಕದವನು ಆಗಿದ್ದ,ಜೀವ ಬಿಟ್ಟೆನೆಯೆ ಹೊರತಾಗಿ ಈ ಮದುವೆಗೆ ಒಪ್ಪಿಗೆ ನೀಡಲಾರೆ ಅನ್ನುವ ನಿರ್ಧಾರಕ್ಕೆ ಬಂದಿದ್ದಳು.ಆದರೆ ತನ್ನ ತಂದೆ ತಾಯಿಗೆ ಇದ ತಿಳಿಸುವದೆ೦ತು ......? ದಿಕ್ಕು ತೋಚದಾಗಿತ್ತು ಕಾವ್ಯಳಿಗೆ.ಹೀಗಿರಬೇಕಾದರೆ ಅಡಿಗರ ಆಗಮನವಾಗಿತ್ತು ಮಗ ವಾಸುದೇವನೊಂದಿಗೆ.ಹುಡುಗಿ ನೋಡುವ ಶಾಸ್ತ್ರ ನಡೆಯಿತು ತದ ನಂತರ ಅಡಿಗರು ಏನಮ್ಮ ಈ ಮದುವೆಗೆ ನಿನ್ನ ಒಪ್ಪಿಗೆಯೂ?ಎಂದು ಕಾವ್ಯಳ ಮುಂದೆ ಪ್ರಶ್ನೆ ಇಟ್ಟಿದ್ದರು.ಹೂಂ...........ಒಪ್ಪಿಗೆ ಆದರೆ ಒಂದು ಶರತ್ತಿನ ಮೇಲೆ ಅಂದು ಪ್ರತಿಕ್ರಿಯೆ ತಿಳಿಯುವದಕ್ಕಾಗಿ ಎಲ್ಲರ ಮುಖವನ್ನೊಮ್ಮೆ ನೋಡಿದಳು.ಸುಬ್ರಾಯ ಭಟ್ಟರು ಏನು ತಿಳಿಯದೆ ಮಗಳ ಈ ಮಾತನ್ನು ಕೇಳಿ ಪ್ರತಿಕ್ರಿಯಿಸಲು ಆಗದೆ ಅಡಿಗರ ಮುಖ ನೋಡಿ,ಕಷ್ಟದಿಂದ ನಗು ಮೊಗದ ನಾಟಕವನ್ನಾಡಿದರು,ಅದೇನಮ್ಮ?ಹೇಳು.................!!!!!ಅಡಿಗರು ಮಾತು ಮುಂದುವರಿಸಿದ್ದರು.ಏನಿಲ್ಲ ನನಗೊಂದು ರಿಸರ್ಚ್ ಮಾಡಬೇಕಿದೆ ಅದಕ್ಕಾಗಿ ಅಮೆರಿಕೆಗೆ ಹೋಗಬೇಕು ಒಂದೆರಡು ವರ್ಷ ಅಷ್ಟೆ.ಆಮೇಲೆ ಮದುವೆ ಇಟ್ಟುಕೊಂಡರೆ ನನ್ನದೇನು ಅಭ್ಯಂತರವಿಲ್ಲ,ನಿಮಗೆ ಭರವಸೆ ಇಲ್ಲಾಂದ್ರೆ ಈಗಲೇ ನಿಶ್ಚಿತಾರ್ಥ ಬೇಕಾದರೆ ಮುಗಿಸಿ.ತಾನು ಅದಾಗಲೆ ಈ ಬಗ್ಗೆ ಒಪ್ಪಿಗೆ ಸೂಚಿಸಿರುವದರಿಂದ ಅನಿವಾರ್ಯತೆಗೆ ಸಿಲುಕಿದ್ದೇನೆ.ದಯವಿಟ್ಟು ಒಪ್ಪಿಕೊಳ್ಳಿ ಎಂದು ಬೀಸುವ ದೊಣ್ಣೆ ಏಟು ತಪ್ಪಿಸಿಕೊಳ್ಳಲು ಒಂದು ನಾಟಕವಾಡಿದ್ದಳು ಕಾವ್ಯ.ಸುಬ್ರಾಯ ಭಟ್ಟರು ಸುಮ್ನಿರು ನೀನು.......!! ಅಮೇರಿಕೆಯು ಇಲ್ಲ ಎಂತದು ಇಲ್ಲ,ತೆಪ್ಪಗೆ ಮದುವೆ ಆಗಬೇಕು ಅಷ್ಟೇ ಅಂತ ಅಬ್ಬರಿಸಿದ್ದರು.ಅಡಿಗರು ಒಂದು ನಿಮಿಷ ತೆಪ್ಪಗಾಗಿ ಸುಬ್ರಾಯ ಭಟ್ಟರಲ್ಲಿ ಬಹಳ ಏನು ವಯಸ್ಸು ಇಬ್ಬರಿಗೂ ಆಗಿಲ್ಲ.30- 31 ವರುಷಕ್ಕೆ ಈಗ ಮದುವೆಯಾಗುವದು ಮಾಮೂಲಿ .ನಮಗೂ ನಮ್ಮ ಸೊಸೆ ಅಮೆರಿಕೆಯಲ್ಲಿ ಇದ್ದು ಬಂದವಳು ಅನ್ನೊ ಹೆಮ್ಮೆ ಇರುತ್ತದೆ.ಹಾಗೆ ಅಗಲಿ ಬಿಡಮ್ಮ.ಅಷ್ಟಕ್ಕೂ 2 ವರುಷಗಳ ಮಾತು ತಾನೆ.ಹಾಗೆ ಆಗಲಿ ಬಿಡಮ್ಮ,ನಿಶ್ಚಿತಾರ್ಥ ಈಗಲೆ ಮುಗಿಸಿ ಬಿಡೋಣ ಅಂದರು.ಬೀಗರೆ ಹೀಗನ್ನಬೇಕಾದರೆ ಸುಬ್ರಾಯ ಭಟ್ಟರು ಮೌನರಾಗಿದ್ದರು,ಹಾಗೆ ಮುಂದಿನ ಕೆಲವೆ ಘಂಟೆಯಲ್ಲಿ ಆ ಊರಿನ ಬ್ರಾಹ್ಮಣ ಸಮುದಾಯದವರ ಎದುರು ವಾಸುದೇವ ಮತ್ತು ಕಾವ್ಯರುಗಳ ನಿಶ್ಚಿತಾರ್ಥ ನೆರವೇರಿತ್ತು.ಕಾರ್ಯಕ್ರಮ ಮುಗಿಸಿ ತೆರಳಬೇಕಾದರೆ ವಾಸುದೇವ ಕಾವ್ಯಳ ಮೊಗ ನೋಡಿ ಕಿರು ನಗೆ ಬೀರಿದ್ದ,ಕಾವ್ಯಳು ನಗೆ ತಡೆಯಲಾಗದೆ ಜೋರಾಗೆ ನಕ್ಕಿದ್ದಳು.ಅವಳಿಗೆ ಹರಕೆಯ ಕುರಿಯಂತೆ ಅವನ ಮೊಗ ಕಂಡಿತ್ತು,ಒಂದು ಸಣ್ಣ ಆತಂಕದೊಂದಿಗೆ ಏನನ್ನೊ ನೆನೆಸುತ್ತ ಹಾಗೆಲ್ಲ ಆಗಲಾರದು ಎಂದು ತನಗೆ ತಾನೇ ಸಮಾಧಾನ ಪಟ್ಟಿದ್ದೆಂದರೆ ಅದು ಆ ಹೊತ್ತಿನಲ್ಲಿ ಶುಶೀಲ ಅಮ್ಮ ಮಾತ್ರ.

ಹೀಗೆ ಅಮೆರಿಕ ಸೇರಿದ ಕಾವ್ಯ ಮೊದ ಮೊದಲಿಗೆ ತಿಂಗಳಿಗೆ ಒಮ್ಮೆಯಾದರು ಮನೆಗೆ ಫೋನಾಯಿಸುತಿದ್ದಳು.ಪತ್ರ ಬರೆಯುತಿದ್ದಳು.ಶುಶೀಲ ಅಮ್ಮನಿಗೆ ಮಗಳು ದೂರದಲ್ಲಿ ಇದ್ದಾಳೆ ಅನ್ನುವದೆ ದುಃಖದ ವಿಷಯವಾಗಿತ್ತು,ಮಗಳನ್ನು ನೆನಸಿ ಒಬ್ಬರೆ ಕೂತು ಅಳುತಿದ್ದರು ಕ್ರಮೇಣ ಪರಿಸ್ಥಿತಿಗೆ ಹೊಂದಿಕೊಂಡರು.ಅಡಿಗರು ಅವಾಗಾವಾಗ ಬಂದು ಹೋಗುತಿದ್ದರು,ಸುಬ್ರಾಯ ಭಟ್ಟರ ಅದೆ ವೈದಿಕತೆ ಮುಂದುವರಿದಿತ್ತು.ತನ್ನ ಮಗಳು ಅಮೆರಿಕೆಯಲ್ಲಿರುವದು ಊರಿಗೆ ಹೆಮ್ಮೆಯ ವಿಚಾರ ಅಂತ ಅವರೆ ಹೇಳಿಕೊಳ್ಳುತಿದ್ದರು.ಅದ್ಯಾಕೋ ಅವರ ಹೀಯಾಳಿಕೆ ನುಡಿಗಳಲ್ಲಿ ನಾಡಿಗರು ಅಗತ್ಯವಾಗಿ ಬಂದು ಹೋಗುತಿದ್ದರು.ಅದೆಲ್ಲವನ್ನು ಕಿವಿಗೆ ಹಾಕಿಕೊಳ್ಳದ ನಾಡಿಗರು ಮಾತ್ರ ಅದೇ ಚೋಮ,ರಾಮಣ್ಣ,ನೋಣಯ ಮುಂತಾದವರ ಒಡಗೂಡಿ ಪ್ರಕೃತಿ ಜೊತೆ ಲೀನವಾಗಿ ಅರುಣಳೊಂದಿಗಿನ ಸುಖ ಸಂಸಾರದಲ್ಲಿ ಮುಳುಗಿದ್ದರು.ಹೀಗಿರಬೇಕಾದರೆನೆ ಒಂದು ದಿನ ಪೋಸ್ಟ್ ಮ್ಯಾನ್ ವಸಂತ ಸುಬ್ರಾಯ ಭಟ್ಟರ ಮನೆ ಬಾಗಿಲು ಬಡಿದದ್ದು ಹಾಗು ಆ ಪತ್ರ ನೀಡಿದ್ದು.ಸುಬ್ರಾಯ ಭಟ್ಟರು ಕಾರ್ಯ ನಿಮಿತ್ತ ಸೋಮವಾರ ಪೇಟೆಗೆ ಹೋದುದರಿಂದ ಪತ್ರ ಪಡೆದ ಶುಶೀಲಮ್ಮ ಅದ ಓದಲು ತಿಳಿಯದೆ ವಸಂತನಲ್ಲೇ ಓದಲು ಹೇಳಿದರು.ಪತ್ರ ಕಾವ್ಯ ಬರೆದುದಾಗಿತ್ತು...............!!!!!!!!.ಆ ದಿನದ ಮುಬ್ಬು ಕತ್ತಲ ಸಂಜೆ ಭಟ್ಟರ ಆಗಮನವಾಗಿತ್ತು,ದೀಪಗಳ ಬೆಳಗದೆ ಇದ್ದ ತನ್ನ ಮನೆಯನ್ನು ನೋಡಿ ಅಚ್ಚರಿ ಪಟ್ಟಿದ್ದರು.ಶುಶೀ ........ಎಂದು ಕೂಗುತ್ತ ದೀಪ ಬೆಳಗಿದ್ದರು ಭಟ್ಟರು,ಪಡಸಾಲೆಯ ಕಂಬದ ಬದಿ ಕುಸಿದು ಕೂತಿದ್ದ ಶುಶೀಲ ಅಮ್ಮನನ್ನು ಅವರ ಮಡುಗಟ್ಟಿದ ದುಃಖದ ಮೊಗ ನೋಡಿ ಗಾಬರಿ ಇಂದ ಏನಾಯ್ತು ಶುಶೀ.........ಅಂದಿದ್ದರು.ತಡೆಯದ ದುಃಖದೊಂದಿಗೆ ಭಟ್ಟರನ್ನು ಅಪ್ಪಿ ಹಿಡಿದು ಅವರ ಕೈಯಲ್ಲಿ ಕಾವ್ಯಳ ಪತ್ರವನ್ನು ಇರಿಸಿದ್ದರು.ಭರದಿಂದಲೆ ಪತ್ರ ಬಿಡಿಸಿ ಓದಿದ್ದರು ಭಟ್ಟರು.ಪತ್ರದ ಒಕ್ಕಣೆ ಹೀಗಿತ್ತು.
"ಅಪ್ಪಾ.........ಹೇಗಿದ್ದೀರಿ?,ಅಮ್ಮನನ್ನ ನಿಮ್ಮನ್ನು ಇನ್ನು ಮುಂದೆ ಜೀವನ ಪೂರ್ತಿ ಮಿಸ್ ಮಾಡ್ಕೊತೀನಿ. ಕಾರಣ ಇಷ್ಟೇ ನಾನು ನಿಮ್ಮ ಜಾತಿಯ ವಾದಗಳ ಹಿಡಿತಕ್ಕೆ ಸಿಕ್ಕಿ ಒದ್ದಾಡುವದಕ್ಕೆ ಮನಸಿಲ್ಲ,ಅದೆಲ್ಲವನ್ನು ಮೆಟ್ಟಿ ನಿಂತು ಬಡವರ ಹಸಿವು ನೀಗಿಸಬೇಕೂಂತ ಹೊರಟವಳು ನಾನಪ್ಪ.ನಾನಿಲ್ಲಿ ಒಂದು ಎನ್ ಜಿ ಓ ಪ್ರಾರಂಭಿಸಿದ್ದೇನೆ ಅದ ಮೂಲಕ ಹಲವು ದೇಶಗಳ ಹಳ್ಳಿಯ ಜನಕ್ಕೆ ಅನುಕೂಲ ಮಾಡಿಕೊಡಬೇಕೆಂಬುದು ನನ್ನ ಉದ್ದೇಶ.ಬೇಸರಿಸದಿರಪ್ಪ ನೀನು ನೋಡಿದ ಆ ಹುಡುಗ ನನ್ನ ಈ ನಿರ್ಧಾರಗಳಿಗೆ ಬೆಂಬಲಿಸಲಾರ,ಆ ಮಟ್ಟಿನ ತಿಳುವಳಿಕೆಗಳು ಅವನಿಗಿರದು,ಅದಕ್ಕಾಗಿ ನಾನು ಈ ದಿನ ಇಲ್ಲಿಯೆ ನನ್ನ ಗೆಳೆಯ ಪೀಟರ್ ಅನ್ನುವವನ ಜೊತೆ ವಿವಾಹವಾಗಿದ್ದೇನೆ.ನಿನ್ನ ಬ್ಯಾಂಕ್ ಖಾತೆಗೆ ೨೦ ಲಕ್ಷ ನಗದನ್ನು ಹಾಕಿರುತ್ತೇನೆ.ಮುಂದೆ ಬೇಕಾದಲ್ಲಿ ಇಷ್ಟವಿದ್ದಲ್ಲಿ ತಿಳಿಸಬಹುದು.ದುಖಿಃಸದಿರಿ,ಒಂದು ವೇಳೆ ನಿಮಗೆ ಮನಶಾಂತಿ ಬೇಕಿದ್ದಲ್ಲಿ ನನ್ನ ತಿಥಿ ನೆರವೇರಿಸಿ ನಿಮ್ಮ ಪ್ರಕಾರ ಶ್ರಾದ್ದ ಕ್ರಿಯೆಯನ್ನು ನಡೆಸಬಹುದು.ವೈಧಿಕತನದಿಂದಲೆ ನಿಮಗೆ ಸಂತೋಷ ಸಿಗುವದಾದರೆ ಹೀಗೆ ಮಾಡಲು ನನ್ನ ಅಭ್ಯಂತರವಿಲ್ಲ.ನಾನು ನಿಮ್ಮ ಮಗಳಾಗಿಯೆ ಇರುತ್ತೇನೆ.ಆದರೆ ಮತ್ತೆ ನಿಮ್ಮಲ್ಲಿಗೆ ಹಿಂದಿರುಗಲಾರೆ, ಜೀವನದ ನಿರ್ಧಾರಘಟ್ಟಗಳೆ ಹಾಗಲ್ಲವೇನಪ್ಪ?ಇತರರಿಗೆ ದುಖಃವಾದರೂ ಸೈ ಒಳ್ಳೆ ಕಾರ್ಯದಲ್ಲಿ ಮುಂದುವರಿಯಬೇಕೆಂದು ನೀನೆ ಕಲಿಸಿರುವುದು ತಾನೆ.ನಿನ್ನ ದೃಷ್ಟಿಯಲ್ಲಿ ನಿನ್ನ ವೈಧಿಕತನವೆ ದೊಡ್ಡದು ಆದರೆ ನನಗೆ ಬಡವರ ಹಸಿವ ನೀಗೀಸೋದೆ ವೈಧಿಕತನ, ನಾನು ಅಮ್ಮ ನಿನ್ನನ್ನೂ ನೆನೆದು ಬರೀಯ ಅಳುತಿದ್ದೇನೆ, ಕಣ್ಣಿರ ಒಂದೆರಡು ಹನಿ    ಪತ್ರದಲ್ಲು ಕಾಣಬಹುದು,ದೇವರ ಕೋಣೆ ಅಂತ ಏನೂ ಇಲ್ಲಪ್ಪ ಇಲ್ಲಿ ,ನನ್ನ ಬೆಡ್ಡಿನ ಮೇಲೆ ನಿಮ್ಮ ಪೊಟೋ ತೂಗು ಹಾಕಿರುವೆ, ಮಲಗುವಾಗಲೆಲ್ಲ ನಿಮ್ಮಗಳ ಬೆಚ್ಚಗಿನ ಕೈ ನನ್ನ ತಟ್ಟುತ್ತಿರುವಂತೆ ಭಾಸವಾಗುತ್ತೆ, ಅದೆ ಭಾವನೆಗಳಲ್ಲಿ ಬದುಕುವೆ, ಮುಂದೆ ಬರೆಯಲಾಗುತ್ತಿಲ್ಲ ಪಪ್ಪ, ಅಮ್ಮನನ್ನೂ..................!!!ಮುಂದೆ ಪತ್ರವೂ ಏನೊಂದು ವಿಷಯಗಳಿಲ್ಲದೆ ಖಾಲಿಯಾಗಿತ್ತು, ಇದ್ದರು ಭಟ್ಟರು ಓದಲಾಗುತ್ತಿರಲಿಲ್ಲ, ಪತ್ರ ಓದಿದ ಎದೆಗೆ ಯಾರೊ ರಭಸದಿಂದ ಚಾಕು ಇರಿದಂತಾಗಿತ್ತು ಭಟ್ಟರೀಗೆ!!!!!,ಅಲ್ಲೇ ಕುಸಿದು ಕೂತಿದ್ದರು,ಆ ದಿನ ರಾತ್ರಿ ದಂಪತಿಗಳಿಬ್ಬರು ಇಹ ಲೋಕದ ಪರಿವೆಯೆ ಇಲ್ಲದೆ ಮಲಗಿದ್ದರು,ಅವರಿಂದ ನಿದ್ರೆ ಅದೆಷ್ಟೋ ಮಾರು ದೂರ ಮಲಗಿತ್ತು!!!!!!!!.ಈ ವಿಷಯ ಕಾಳ್ಗಿಚ್ಚಿನಂತೆ ಪೋಸ್ಟ್ ಮ್ಯಾನ್ ವಸಂತನಿಂದಾಗಿ ಊರಲ್ಲಿ ಹಬ್ಬಿತ್ತು.ಹೆಚ್ಚಿನವರು ಕನಿಕರಿಸತೊಡಗಿದ್ದರು.ಅದು ಹೇಗೋ ಅಡಿಗರಿಗೂ ವಿಷಯ ತಿಳಿದಿತ್ತು,ಸುಬ್ರಾಯ ಭಟ್ಟ ತನ್ನ ಮಗನ ಭವಿಷ್ಯಕ್ಕೆ ಕೊಳ್ಳಿ ಇಟ್ಟವ ಅಂತ ಜರೆದು ಊರ ದೇಗುಲದಲ್ಲಿ ಬ್ರಾಹ್ಮಣ ಸಮುದಾಯದ ಪಂಚಾಯತಿ ಸೇರಿಸಿದ್ದರು ಅಡಿಗರು.ಬ್ರಾಹ್ಮಣ ಸಮುದಾಯದ ನಿರ್ಧಾರದಂತೆ ಇಷ್ಟೆಲ್ಲಾ ನಡೆದ ಮೇಲೆ ಭಟ್ಟರು ಪೂಜೆ ನಡೆಸಲು ಯೋಗ್ಯರಲ್ಲ.ಇನ್ನು ಮುಂದೆ ಈ ದೇಗುಲದ ಅರ್ಚಕರು ಅಡಿಗರ ಮಗ ವಾಸುದೇವ ಅನ್ನುವದು ನಿರ್ಧಾರ ಆಯಿತು.ಸುಟ್ಟ ಬರೆ ಮೇಲೆ ಉಪ್ಪು ಸುರಿದಂತ ಅನುಭವ ಭಟ್ಟರದ್ದು.ಯಾಕೊ ತಾನು ಪರಕೀಯ, ಏಕಾಂಗಿ ಅನಿಸತೊಡಗಿತ್ತು.ತೀರ ಭಟ್ಟರಿಗೆ ನಾವಡರು ನೆನಪಾಗಿ ಅವರ ಮನೆ ಮುಂದೆ ಮೊತ್ತ ಮೊದಲು ನಿಂತಿದ್ದರು ಆಚಾರ್ಯ ಸುಬ್ರಾಯ ಭಟ್ಟರು.ನಾವಡರು ಅತ್ಮೀಯತೆ ಇಂದಲೆ ಸ್ವಾಗತಿಸಿದ್ದರು,ಅವರ ಅತ್ಮೀಯತೆಯನ್ನು ನೋಡಿ ದುಖಃದಿಂದ ಭಟ್ಟರ ಬಾಯಿಂದ ಹೊರಟ ಒಂದೆ ಮಾತು "ಸಾಧ್ಯವಾದರೆ ಕ್ಷಮಿಸಿ ಬಿಡು ನಾವಡ"!!!!!ಅಷ್ಟೇ .........! ಹಿಂತುರಿಗಿ ನೋಡದೆ ತನ್ನ ಮನೆ ದಾರಿ ಹಿಡಿದಿದ್ದರು ಭಟ್ಟರು.

ಇತ್ತೀಚಿಗೆ ಭಟ್ಟರು ಮನೆ ಬಿಟ್ಟು ಹೊರಬರುವದೆ ಅಪರೂಪವಾಗಿ ಬಿಟ್ಟಿತ್ತು.ಸುಶೀಲಮ್ಮ ಇದೆ ವ್ಯಥೆಯಲ್ಲಿ ಕೊರಗಿ ಕೊರಗಿ ಕೃಶರಾಗಿದ್ದರು.ನಾವಡರು ಆಗಾಗ ಬಂದು ವಿಚಾರಿಸಿಕೊಂಡು ಹೋಗುತ್ತಿದ್ದರು,ಅವರ ಮನೆಗೆ ಬೇಕಾದ ಅಗತ್ಯ ಸಾಮಾಗ್ರಿ ಎಲ್ಲವನ್ನು ರಾಮಣ್ಣ ವಾರ ವಾರ ಕೊಟ್ಟು ಹೋಗುತಿದ್ದ.ಇಷ್ಟೆಲ್ಲಾ ನಡೆದ ಒಂದು ವರುಷದ ಒಳಗಾಗಿ ಶುಶೀಲಮ್ಮ ಇದೆ ಕೊರಗಲ್ಲಿ ಪ್ರಾಣ ಬಿಟ್ಟಿದ್ದರು.ಹೆಣಕ್ಕೆ ಹೆಗಲು ಕೊಟ್ಟವರು ಇದೆ ಚೋಮ,ಮಾದ, ನೋಣಯ್ಯ ಹಾಗು ನಾವಡರು.ತೂತು ಮಡಿಕೆ ಹಿಡಿದುಕೊಂಡು ಮುಂದೆ ಸಾಗುತಿದ್ದ ಭಟ್ಟರಲ್ಲಿ ಕಾಡುತಿದ್ದುದು ಒಂದೇ ಪ್ರಶ್ನೆ,ತಾನು ದಿನ ನಿತ್ಯ ಪೂಜೆಗಯ್ಯುತಿದ್ದ ದೇವಿ ನನ್ನ ಕೈಬಿಟ್ಟಳೆ!!!!!ಇದೆಲ್ಲ ಕಳೆದ ನಂತರ ಇವರಿಗೆ ನಾವಡರ ಹೆಂಡತಿ ಅರುಣ ತಂದು ಕೊಡುವ ಎರಡು ಹೊತ್ತಿನ ಊಟವೆ ಪರಮಾನ್ನವಾಗಿತ್ತು, ಮನೆ ಕೆಲಸವನ್ನು ಇದೆ ಚೋಮನ ಹೆಂಡತಿ ಪಾರ್ವತಿ ಮಾಡಿ ಮುಗಿಸುತಿದ್ದಳು,ದಿನವು 2 ಬಾರಿ ನಾವಡರು ಬಂದು ವಿಚಾರಿಸತೊಡಗಿದರು,ಭಟ್ಟರ ತೋಟದ ಕೆಲಸವನ್ನು ನೋಣಯ ಅಚ್ಚು ಕಟ್ಟಾಗಿ ಮುಗಿಸುತಿದ್ದ.ಇಷ್ಟೆಲ್ಲಾ ಆದರು ಕೂಡ ಒಂದು ಕಾಲದ ಬ್ರಾಹ್ಮಣ ಸಮುದಾಯದ ನೇತ್ರತ್ವ ವಹಿಸಿದ್ದ ಇವರನ್ನು ಯಾವೊಬ್ಬ ಬ್ರಾಹ್ಮಣನು ಹೇಗಿದ್ದೀರಿ? ಎಂದು ವಿಚಾರಿಸಲು ಇವರತ್ತ ಸುಳಿಯಲಿಲ್ಲ.ಜಾತೀಯತೆಯ ಹುಂಬತನ ನನ್ನನ್ನು ಹೇಗೆ ಮೂಡನನನ್ನಾಗಿಸಿತ್ತು!!,ನಾನು ಎಷ್ಟೆಲ್ಲಾ ಎಲ್ಲಾ ಇದ್ದು ಕಳಕೊಂಡೆ?ನನ್ನವರು ಯಾರು?ಪರಕೀಯರು ಯಾರು? ತಿಳಿದುಕೊಳ್ಳಲು ನನ್ನ 65 ವಯಸ್ಸು ಸಾಕಾಗಲಿಲ್ಲ ಅಲ್ಲವೆ ?ಅದ್ಯಾಕೆ ಈ ಎರಡು ವರ್ಷ ಇವೆಲ್ಲವನ್ನೂ ನನಗೆ ಕಲಿಸಿಕೊಡುತ್ತಿದೆ!!!!!?ಸಾವಿರಾರು ಉತ್ತರ ದೊರಕದ ಪ್ರಶ್ನೆಗಳನ್ನ ಪ್ರಶ್ನಿಸುತ್ತಲೆ ತನ್ನ ಏಕಾಂತವನ್ನು ಕಳೆಯುತಿದ್ದರು ಭಟ್ಟರು.ಅದೇನು ಅನಿಸಿತೊ ಏನೊ ಒಂದು ದಿನ ಮುಂಜಾನೆಯೆ ಎದ್ದ ಭಟ್ಟರು ಸೋಮವಾರ ಪೇಟೆ ಕಡೆ ಬಹಳ ತಿಂಗಳುಗಳ ನಂತರ ಹೆಜ್ಜೆ ಹಾಕಿದ್ದರು.ಸಂಜೆ ವಾಪಸಾದ ಮೇಲೆ ನಾವಡರನ್ನು ಕರೆಸಿ ಒಂದು ವಿಲ್ ಬರೆದಿಟ್ಟಿದ್ದೇನೆ ನನ್ನ ಮರಣದ ನಂತರ ಇದ ಓದತಕ್ಕದ್ದು ಅಂತ ಅವ್ರ ಕೈಗೆ ಇಟ್ಟಿದ್ದರು ಭಟ್ಟರು.ಇದಾದ ಮೂರೆ ವಾರಗಳಲ್ಲಿ ಭಟ್ಟರು ಕೂಡ ಇಹ ಲೋಕದ ಯಾತ್ರೆ ಮುಗಿಸಿ ಪರ ಲೋಕದ ಕಡೆ ಹೆಜ್ಜೆ ಹಾಕಿದ್ದರು,ಯಥಾ ಪ್ರಕಾರ ನಾವಡರು ಮುಂದೆ ನಿಂತು ಮಗನಾಗಿ ಎಲ್ಲ ಕಾರ್ಯಗಳನ್ನು ಪೂರೈಸಿ ಕಷ್ಟದಿಂದ ಕಾವ್ಯಳ ವಿಳಾಸ ಪತ್ತೆ ಹಚ್ಚಿ ವಿಷಯಗಳನ್ನು ತಿಳಿಸುವ ಸಲುವಾಗಿ ಒಂದು ಪತ್ರ ಗೀಚಿ ಸುಮ್ಮನಾಗಿದ್ದರು.

ಇದೆಲ್ಲ ಆಗಿ ೬ ವರುಷ ಕಳೆದಿದೆ.ಈಗ ಹಗ್ಗಡೆ ಹಳ್ಳಿಗೆ ಒಂದು ಸುಸಜ್ಜಿತ ರಸ್ತೆ ಇದೆ ,ಕಿರಿಯ ಪ್ರಾಥಮಿಕ ಶಾಲೆ ಹಿರಿಯ ಪ್ರಾಥಮಿಕ ಶಾಲೆಯಾಗಿದೆ.ಫ್ರೌಢ ಹಾಗು ಪದವಿ ಪೂರ್ವ ಕಾಲೇಜ್ ಇದೆ.ಗ್ರಂಥಾಲಯ,ಅರೋಗ್ಯ ಕೇಂದ್ರ ,ಸಮುದಾಯ ಭವನ.ಕುಡಿಯುವ ನೀರು ಹೀಗೆ ಎಲ್ಲ ಸೌಲಭ್ಯವನ್ನು ಪಡೆದಿದೆ.ಇವೆಲ್ಲ ಕೆಲಸಗಳ ನಡುವೆ ಒಂದು ಬೋರ್ಡ್ ತಗುಲಿ ಹಾಕಿಕೊಂಡಿದೆ.ಎಲ್ಲ ಬೋರ್ಡ್ ನಲ್ಲೂ ಇರುವ ಒಂದು ಸಾಮಾನ್ಯ ಪದ "ಕೊಡುಗೆ ದಿ||ಸುಶೀಲ ಸುಬ್ರಾಯ ಭಟ್ಟರ ಸ್ಮಾರಕ ಟ್ರಷ್ಠ್ "ಎಂಬುದು. ಹೌದು ಸುಬ್ರಾಯ ಭಟ್ಟರ ವಿಲ್ ನಲ್ಲಿ ತನ್ನ ಸಕಲ ಚರಾಚರ ಅಸ್ತಿಯನ್ನು ಊರ ಜನಕ್ಕೆ ದಾನ ಮಾಡಿದ್ದರು, ಅದ ಪರಭಾರೆ ನಡೆಸುವ ಅಧಿಕಾರವನ್ನು ನಾವಡರಿಗೆ ಬಿಡಲಾಗಿತ್ತು.ಆ ಮೂಲಕ "ದಿ||ಸುಶೀಲ ಸುಬ್ರಾಯ ಭಟ್ಟರ ಸ್ಮಾರಕ ಟ್ರಷ್ಠ್" ರೂಪು ಪಡೆದು ತನ್ನ ಕೆಲಸ ಪ್ರಾರಂಭಿಸಿತ್ತು.ಮುಂದಿನ ವರ್ಷಗಳಲ್ಲಿ 15 ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ ಸಿದ್ದತೆಯಲ್ಲೂ ತೊಡಗಿತ್ತು. ಈ ಮೂಲಕ ಸುಬ್ರಾಯ ಭಟ್ಟರ ವೈಧಿಕತನ ಮೆರೆದಿತ್ತು.ಇದೆಲ್ಲದರ ಹಿಂದೆ ಬಲವಾಗಿ ನಿಂತಿದ್ದು ಇದೆ ನಾವಡರು, ಚೋಮ, ರಾಮಣ್ಣ, ನೋಣಯ ಅಲ್ಲದೆ ದೂರದ ಊರಿನಲ್ಲಿದ್ದು ಅರ್ಥಿಕ ಹಾಗು ಆಡಳಿತಾತ್ಮಕ ಬೆನ್ನೆಲುಬಾಗಿ ನಿಂತವರು ಇದೆ ಸುಬ್ರಾಯ ಭಟ್ಟರ ಮಗಳು ಕಾವ್ಯ.ಮೂಕ ಸಾಕ್ಷಿಯಾಗಿ ನಿಂತು ಮಂಜಿನಾಟದಲ್ಲಿ ತಲ್ಲಿನವಾಗಿದ್ದು ಅದೆ ಕೊಡು ಕಲ್ಲ ಗುಡ್ಡ , ಹಾಗು ಅದರ ಹಿಂದಿನ ಕುಮಾರ ಪರ್ವತ.

Wednesday, September 28, 2011

ಪ್ರೀಯ ಭಗತ್ ಗೆ ಜನುಮ ದಿನದ ಶುಭಾಶಯಗಳು.

ನಾವೇನೋ ಸಾದಿಸಿ ಬಿಡುತ್ತೇವೆ,ನಮ್ಮಿ ನಡೆ ಅದೆಷ್ಟೋ ಜನರಿಗೆ ಸ್ಪೂರ್ತಿಯಾಗುತ್ತದೆ,ಇದರಿಂದ ನಾವು ಅಂದುಕೊಂಡಿದ್ದು ಪಡೆಯುವಲ್ಲಿ ನೆರವಾಗುತ್ತದೆ, ನಾವು ಇತಿಹಾಸ ಪುಠ ಸೇರುತ್ತೇವೆ,ಇದೆ ಅಲ್ಲವೇ ಭಗತ್........? ನಿನ್ನ ಸಾವನ್ನು ಎದುರು ನೋಡುತಿದ್ದಾವಾಗ ನಿನ್ನ ಮನಸಲ್ಲಿ ಇದ್ದದ್ದು.ನೀನು ನೇಣು ಕಂಭ ಏರುವ ಮೊದಲು ಅಲ್ಲಿ ಸೇರಿದ್ದ ದೇಶವಾಸಿ ಗಳನ್ನೂ ಹಾಗು ನೆರದಿದ್ದ ಮಕ್ಕಳನ್ನು ಉದ್ದೇಶಿಸಿ ಹೇಳಿದಂತ.... "ನನ್ನ ಪ್ರಿಯ ದೇಶವಾಸಿಗಳೇ... ಈ ನಮ್ಮ ಬಲಿದಾನ ವ್ಯರ್ಥವಲ್ಲ.ಒಬ್ಬ ಭಗತ್ ನೇಣು ಕಂಭ ಏರಬಹುದು.ಆದರೆ ಈ ನನ್ನ ಭಾರತದ ಅಸಂಖ್ಯ ಯುವ ಭಗತ್ ಗಳು ಅಖಂಡ ಭಾರತದ ಸ್ವಾತಂತ್ರ್ಯಕನಸನ್ನು ನನಸಾಗಿಸುವ ಕಾಲ ದೂರವಿಲ್ಲ.ಒಬ್ಬಭಗತ್ ಬಲಿದಾನ ಈ ಮಕ್ಕಳಿಗೆ ಸ್ವಚಂದ ದೇಶವನ್ನು ಕಟ್ಟಿ ಕೊಡುತ್ತದೆ ಎಂದಾದ ಮೇಲೆ ನೇಣು ನನ್ನ ಪಾಲಿನ ಸೌಭಾಗ್ಯ",ನಿನ್ನ ಆಶಯಗಳು ಮೇಲಿನಂತೆಯೇ ಇದ್ದವು ಅನ್ನುವದನ್ನು ನಿನ್ನ ಈ ವಾಖ್ಯಗಳು ನಿರೂಪಿಸುತ್ತವೆ ಅಲ್ಲವೇ.ನೀನಂದು ಕೊಂಡಂತೆ ಭಾರತ ಸ್ವಾತಂತ್ರ್ಯವನ್ನೇನೋ ಪಡೆಯಿತು ಆದರೆ ನಿನಗೆ ಗೊತ್ತಿದೆಯೇ ಭಗತ್......?,ನಿನ್ನ ಅಂತವರ ಅದೆಷ್ಟೋ ಬಲಿದಾನಗಳು , ನಿನ್ನ ವಿಚಾರಗಳು ಉದ್ದೇಶ ಪೂರ್ವಕವಾಗಿಯೇ ಇತಿಹಾಸ ದಿಂದ ಮರೆಯಾಗಿತ್ತು,ಪಕ್ಷ ರಾಜಕಾರಣ ಇದಕ್ಕೆ ಕಾರಣವಾಗಿತ್ತು,ಅದು ಇಂದಿಗೂ ಮುಂದುವರಿದಿದೆ ಭಗತ್.......,ನೀನೊಬ್ಬನೇ ಅಲ್ಲ ನಿನ್ನ ಹಾಗೆ ಹಲವಷ್ಟು ಮಂದಿ ಮರೆಯಾಗಿದ್ದಾರೆ.ನಾವೇನಿದ್ದರೂ ನಮ್ಮ ಶಾಲಾ ಕಲಿಕೆ ಇಂದ ತಿಳಿದುಕೊಂಡಿದ್ದು ನಿನ್ನ ಬಗ್ಗೆಯ ಒಂದೆರಡು ಸಾಲುಗಳನ್ನಷ್ಟೇ.ಉಳಿದೆಲ್ಲವನ್ನೂ ನಾವಾಗಿ ಸಂಗ್ರಹಿಸಿ ಓದಿದ ವಿಚಾರಗಳಿ೦ದಲೆ  ನಿನ್ನ ಬಗ್ಗೆ ಹೆಚ್ಚಿನದನ್ನು ತಿಳಿದು ಕೊಂಡಿದ್ದು ಅಂದರೆ ನಂಬಲೇಬೇಕು ಭಗತ್...... ನೀನು ನಿನ್ನ ಬಾಲ್ಯದಲ್ಲಿ ಆಟಿಕೆ ಪಿಸ್ತೂಲನ್ನು ಮಣ್ಣಲ್ಲಿ ಹೂತು ಈ ಪಿಸ್ಥುಲ್ ಮರವಾಗಿ ಬಹಳಷ್ಟು ಪಿಸ್ತೂಲನ್ನು ಕೊಡುತ್ತದೆ, ಆ ಪಿಸ್ತುಲುಗಳಿಂದ ಬ್ರಿಟಿಷರನ್ನು ಓಡಿಸುತಿದ್ದೇನೆ ಅನ್ನುತಿದ್ದಿಯಂತೆ.....? , ಈಗ ಇದ ಕೇಳಿ ರೋಮಾಂಚನ!!!! ಆಗುತ್ತಿದೆ ನಮಗೆ.ಅಷ್ಟಕ್ಕೂ ನೀನು ಸ್ವಾತಂತ್ರ್ಯ ಹೋರಾಟಕ್ಕೆ ಧುಮಿಕಿದ್ದೆ ೧೩ ನೆ ವಯಸ್ಸಿನಲ್ಲಿ ಅಲ್ಲವ? ನೀನು ಹಾಗಾದರೆ ಆವಾಗಲೇ ಪ್ರೌಡ ನಾಗಿದ್ದೆ ಅಂತಾಯ್ತು,ನೀನು ಕನಸಿದ ಸ್ವಚಂದ ಭಾರತದ ೧೩ ನೆ ವಯಸ್ಸಿನ ಎಳೆ ಕುಸುಗಳಿಗೆ ದೇಶದ ಬಗ್ಗೆ ಅರಿವು ಬದಿಗಿರಲಿ ತನ್ನ ಬಗ್ಗೆ ಅರಿವನ್ನು ಸಂಪಾದಿಸುವಲ್ಲಿ ಒದ್ದಾಡುತ್ತಿವೆ!!!!! ಅನ್ನುವದನ್ನು ತಿಳಿದು ಬೇಸರಿಸದಿರು.ನಮಗೀಗ ಅರಿವಾಗುತ್ತಿದೆ ಭಗತ್,ನಿನ್ನ ವಯಸ್ಸು , ನಿನ್ನ ಪರಿಸ್ಥಿತಿ ಮತ್ತು ನಿನ್ನ ಉತ್ಕಟ ದೇಶ ಪ್ರೇಮ ದಿಂದಾಗಿ ನೀನು ಕ್ರಾಂತಿಕಾರಿ ನಿಲುವಿಗೆ ಬಹಳ ಸುಲಭದಲ್ಲಿ ಜಾರಿದೆ ಎಂದು.ಆದರೆ ನನ್ನ ಕಲಿಕೆಯ ಇತಿಹಾಸ ನಿನ್ನ ತೀವ್ರಗಾಮಿ ಅಂತ ಕರೆದು ಸುಮ್ಮನಾಗಿತ್ತು!!!.ನಿನ್ನ ೨೪ ನೆ ವಯಸ್ಸಲ್ಲೇ ನೇಣು ಕಂಭ ದೇಶಕ್ಕಾಗಿ ಎದುರು ನೋಡಿದೆಯಲ್ಲ,ನಿನ್ನಂತವರ ಚಿಂತನೆಗಳು ನಮ್ಮ ೨೪ ವರ್ಷದ ನಂತರ ನಮಗೆ ದೊರೆಯಲು ಪ್ರಾರಂಭ ವಾಗಿದ್ದು,ಹೌದು ಭಗತ್... ನೀನಿದನ್ನ ನಂಬಲೇ ಬೇಕು,ನಿನ್ನ ಹಾಗು ಸಂಗಡಿಗರ ಬಲಿದಾನಗಳು ಸ್ವಾರ್ಥ ರಾಜಕಾರಣಕ್ಕೆ ಉಪಯೋಗವಾಗಿದೆ,ನಿನ್ನ ಕನಸಿನ ನಿಜ ಅರ್ಥದ ಸ್ವಾತಂತ್ರ್ಯ ನಮಗಿನ್ನು ದೊರೆತಿಲ್ಲ.ನಿನ್ನ ಕೀರ್ತಿಯನ್ನು ಕಂಡು ನಡುಗಿದ ಬ್ರಿಟಿಷರು ನಿನ್ನನ್ನು ನಿನ್ನ ಸಂಗಡಿಗರನ್ನು ಹುತಾತ್ಮರು ಎಂದು ಘೋಷಿಸಿದ್ದರು,ಆದರೆ ನಿನ್ನದೇ ಸ್ವಾತಂತ್ರ್ಯ ಭಾರತದಲ್ಲಿ ನಿನ್ನ ಜನ್ಮ ದಿನವನ್ನು ನೆನಪಿಸುವ ಒಂದು ಸಣ್ಣ ಕಾರ್ಯಕ್ರಮವು ಇಲ್ಲ.ಆದ್ರೆ ಒಂದಷ್ಟು ಬದಲಾವಣೆ ಸ್ವಾತಂತ್ರ್ಯ ಬಂದ ಆರು ದಶಕಗಳ ನಂತರ ನಡೆಯುತ್ತಿದೆ.ದೇಶದಲ್ಲಿನ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಯುವಕರು ಜಾಗೃತಿ ಗೋಳ್ಳುತಿದ್ದಾರೆ,ಅಣ್ಣಾ ಹಜಾರೆ ಅಂತ ಗಾಂಧಿ ಮತ್ತು ನಿಮ್ಮೆಲ್ಲ ಹೋರಟಗಾರನ್ನು ಸಮಾನವಾಗಿ ಗೌರವಿಸುವಂತ ವ್ಯಕ್ತಿಗಳ ಮಾರ್ಗದರ್ಶನ ನಮಗೆ ಲಭಿಸುತ್ತಿದೆ, ಬ್ರಷ್ಟರೆಲ್ಲ ಜೈಲು ಪಾಲಾಗುತ್ತಿದ್ದಾರೆ.ನಿಜ ಅರ್ಥದ ಸ್ವಾತಂತ್ರ್ಯ ಪಡೆಯಲು ಚಿಂತನೆಗಳು ಪ್ರತಿಯೊಬ್ಬ ಪ್ರಜೆಯಲ್ಲೂ ಮೂಡುತ್ತಿದೆ,ನಿನ್ನ ಅರ್ಥದ ಸ್ವಚಂದ ಸ್ವಾತಂತ್ರ್ಯದ ಸವಿಯು ದೇಶಕ್ಕೆ ದೊರಕುವ ಕಾಲ ಹತ್ತಿರವಾಗುತ್ತಿದೆ ವೆಂಬುದನ್ನು ಕೇಳಿ ಸದ್ಯಕ್ಕೆ ಖುಷಿ ಪಡು ಭಗತ್.......ಅದೇನೇ ಇರಲಿ ಈ ದಿನ ೧೦೪ ನೆ ವರುಷದ ಜನ್ಮ ದಿನವನ್ನು ಆಚರಿಸಿ ಕೊಳ್ಳುತ್ತಿದ್ದಿಯ.ನಿನಗೆ ಪ್ರೀತಿ ತುಂಬಿದ ಜನುಮ ದಿನದ ಶುಭಾಶಯಗಳು.ಇನ್ಕಿಲಾಬ್ ಜಿಂದಾಬಾದ್ ನಿನ್ನ ವಾಕ್ಯ ನಮ್ಮದಾಗಿಸಿದ್ದೇವೆ ಮುಂದೆಯೂ ಇರುತ್ತದೆ ಆ ಮೂಲಕ ನೀನು ನಮ್ಮೊಳಗೇ ಅಮರ.

ಇಂತೂ ನಿನ್ನ ಪ್ರೀಯ ದೇಶವಾಸಿಗಳ ಪರವಾಗಿ.

Friday, September 23, 2011

ಮುಂಜಾವಿನ ಚಾನೆಲ್ ಕಿರಿ ಕಿರಿ.


ತಿರುವಿದ ಚಾನೆಲ್ ಗಳೆಲ್ಲ  ತುಂಬಿತ್ತು ಜ್ಯೋತಿಷ್ಯ ಕಿರಿ ಕಿರಿ,
ಮುಂಜಾವಿನ ಮನದ ನೀನಾದ ಮರೆಸುವಂತೆ !!
ಸುತ್ತಲಿನ ಮನೆ ಎಲ್ಲರ ಟಿ ವಿ ಒದರುತಿತ್ತು ದಿನ ಭವಿಷ್ಯ ತರಾ ತರಿ,
ಮನದ ದುಗುಡವ ಮತ್ತೆ ಬಡಿದೆಬ್ಬಿಸುವಂತೆ!!
ದಿನ ವಿಶೇಷ,ವಾರ ಭವಿಷ್ಯ!
ಹುಟ್ಟಿದ ದಿನಾಂಕ,ನಕ್ಷತ್ರ,ಘಳಿಗೆ,!
ರಾಹು ಕೇತು ವಿಚಿತ್ರ ಗ್ರಹ ಸಂಗಮ,!
ಚಂದ್ರನೂ,ಸೂರ್ಯನೂ ಗ್ರಹವಾದ ಪರಿ,!
ಯೋಚಿಸ ಬಿದ್ದೆ ತಲೆ ಕೆಟ್ಟು ,ಒಂದು ಗುಟುಕು ಕಾಫಿ ಹೀರಿ.!!!!!!!!!!!

Tuesday, September 20, 2011

ಕಣ್ಣೀರ ಹನಿಯಲೂ ಶಾಖವಾದ ಕಂಬಾರರ ಸಾಹಿತ್ಯ-ಕಂಬಾರರ ಭಾಷೆ ಗರಡಿ ಮನೆಯ ಸ್ತಬ್ಧ ಚಿತ್ರದಂತೆ.

ಅಂಜಲಿ ರಾಮಣ್ಣ, ಬೆಂಗಳೂರು ಬರೆದ ಥಟ್ಸ್ ಕನ್ನಡದಲ್ಲಿ ಪ್ರಕಟವಾದ ಚಂದ್ರಶೇಕರ ಕಂಬಾರರ ಬಗ್ಗೆ ಬರೆದ ಲೇಖನ ಅವರಿಗೆ ಜ್ನ್ಯಾನ ಪೀಠ ಪ್ರಶಸ್ತಿ ದೊರಕಿದ ಈ ಶುಭ ಸಂದರ್ಬದಲ್ಲಿ ನಿಮಗಾಗಿ.(ಪತ್ರಿಕೆಯ ಹೆಸರನ್ನೇ ಬಳಸಿ ಪ್ರಕಟಿಸುವದರಲ್ಲಿ  ತಪ್ಪಿಲ್ಲ ಅಂದುಕೊಂಡಿರುವೆ,ತಪ್ಪಿದ್ದರೆ ಕ್ಸಮಿಸುತ್ತಿರಿ ಅನ್ನುವ ಭರವಸೆಯೊಂದಿಗೆ)



ಅದು ಕಂಬಾರರ ’ಜೈಸಿದ ನಾಯ್ಕ’ ನಾಟಕ. ಮೊದಲ ಬಾರಿಗೆ ರಂಗದ ಮೇಲೆ ತರಲಾಗ್ತಿತ್ತು. ಅದರಲ್ಲಿ ಬರೋದೇ ಎರಡು ಹೆಣ್ಣು ಪಾತ್ರ. ನಾನು ನಾಯಕಿ. ಗಂಗಾಧರಸ್ವಾಮಿಯವರ ನಿರ್ದೇಶನ. ಎರಡು ತಿಂಗಳುಗಳ ಕಾಲದ ಹಗಲಿರುಳಿನ ಅಭ್ಯಾಸ. ಆ ದಿನ ಪ್ರಥಮ ಪ್ರದರ್ಶನ ಮೈಸೂರಿನ ಕಲಾಮಂದಿರದಲ್ಲಿ. ಮೊದಲ ಸಾಲಿನ ಪ್ರೇಕ್ಷಕರಾಗಿ ಕುಳಿತ್ತಿದ್ದಾರೆ ಡಾ.ಚಂದ್ರಶೇಖರ ಕಂಬಾರ, ಕೀರ್ತಿನಾಥ ಕುರ್ತುಕೋಟಿ, ಡಾ.ಗಿರೀಶ್ ಕಾರ್ನಾರ್ಡ್ ಮತ್ತೆಲ್ಲಾ ಉತ್ತಮೋತ್ತಮರು. ಆಗ ಚೆಲುವಿನ ಅಹಂವುಳ್ಳ ಆತ್ಮ, ವಿಶ್ವಾಸದ ಉತ್ತುಂಗದಲ್ಲಿದ್ದ ವಯಸ್ಸದು ನೋಡಿ ಅದಕ್ಕೆ ಅವರ್ಯಾರೂ ನನ್ನ ಟಾರ್ಗೆಟ್ ವೀಕ್ಷಕರಲ್ಲ! ನಾಟಕದ ಕೊನೆ ಚಪ್ಪಾಳೆಗಳ ಸುರಿಮಳೆ. ಮೇಲೆದ್ದ ಕುರ್ತುಕೋಟಿಯವರು “ನೀನು ಧಾರವಾಡ್ದವಳೇನು?” ಅಂತ ಕೇಳಿದ್ರು ಅದಕ್ಕೆ ಕಂಬಾರರು “ಆಕೀ ಒಡೆಯರ್ರ ಮಗಳು ನೋಡ್ರೀ” ಅಂತ್ಹೇಳಿ ನಕ್ಕರು. ನನಗೆ ಹೆಮ್ಮೆಯೂ ಇಲ್ಲ ಹೆಚ್ಚುಗಾರಿಕೆಯೂ ಅಲ್ಲ. ಹರೆಯದ ಕೈಯಲ್ಲಿತ್ತಲ್ಲ ಬುದ್ಧಿ ಅಂದ್ಮೇಲೆ ಯಾವುದರ ಬೆಲೆತಾನೇ ತಿಳಿದೀತು?

ಬಣ್ಣ ಕಳಚಿತು. ಕಣ್ಣ್ತುಂಬಾ ನಿದ್ದೆಯೂ ಆಯ್ತು. ಮಾರನೆಯ ಸಂಜೆ ಖಾಲೀ ಖಾಲೀ. ನಾಟಕ ತಾಲೀಮು ಇಲ್ಲವಲ್ಲ?! ಆಗ ನನ್ನೊಳಗೆ ಆವಾಹನೆಯಾಗಿದ್ದು ಕಂಬಾರರ “ಅಕ್ಕಕ್ಕು ಹಾಡುಗಳೇ”. “ಬರಗಾಲ ಬಂತೆಂದು ಬರವೇನೋ ಹಾಡಿಗೆ, ಮನಸಿಗೆ ನಿನ್ನ ಕನಸಿಗೆ; ಹರಿಯುವ ಹಾಡನ್ನ ಕತ್ತಲ್ಲಿ ಅಮುಕದೆ ಬಿಡಬೇಕೋ ತಮ್ಮ ಬಯಲಿಗೆ....” ಓಹ್, ಇದನ್ನು ಹಾಡಾಗಿಸಿದ ದೇವರಲ್ಲವೇ ನೆನ್ನೆ ನನ್ನೆದುರು ಇದ್ದದ್ದು? ತಡಾವಾಗಾದ ಜ್ಞಾನೋದಯಕ್ಕೆ ಮರುಕವೇ ಶಿಕ್ಷೆ. ಆಗ ಮನೆಯಲ್ಲಿ ವೆರಾಂಡದಿಂದ ಅಡುಗೆ ಕೋಣೆಯವರೆಗೂ ಪುಸ್ತಕವೇ ಆಸ್ತಿ ಆಗಿದ್ದರೂ ಎಲ್ಲೂ ಕಂಬಾರರ ಒಂದು ವಾಕ್ಯವೂ ಸಿಗದ್ದು. ಅಮ್ಮನಿಗೆ ದುಂಬಾಲು ಬಿದ್ದೆ. ಲೈಬ್ರರಿಯಿಂದ ಅದೇನೆನೋ ಲೇಖನಗಳು ಮನೆಗೆ ಬಂದವು. ಲ್ಯಾಂಡ್ಸ್ಡೌನ್ ಕಟ್ಟಡದ ಮಳಿಗೆಗಳನ್ನೂ ಸುತ್ತಿದ್ದಾಯ್ತು, ಪ್ರಸಾರಾಂಗವನ್ನೂ ಇಣುಕಿದ್ದಾಯ್ತು. ಆದರೂ ಸಮಾಧಾನವಿಲ್ಲ. “ಕ್ಷಿತಿಜದ ಕಣ್ಣಲ್ಲಿ ಬೆಳಕು ಹೊಳೆಯೋ ಹಾಂಗ ಹಾಡಬೇಕೋ ತಮ್ಮ ಹಾಡಬೇಕು; ಆಕಾಶದಂಗಳ ಬೆಳದಿಂಗಳೂ ಕೂಡಾ ಕಂಗಾಲಾಗುವ ಹಾಡು ಹಾಡಬೇಕೋ....” ಹೀಗೇ ನಿರಂತರವಾಗಿ ಹಾಡ್ಕೋತಾ ಹಾಡ್ಕೋತಾ ಕಂಬಾರರ ಪದಗಳೊಂದಿಗೆ ಪ್ರೀತಿಗೆ ಬಿದ್ದೆ. ಅವರ ಅಕ್ಷರದೆಡೆಗಿನ ನನ್ನ ಮೋಹ ಕಾಡುಕುದುರೆಯಂತೆ.ಅದ್ಯಾವ ಲೋಕದಲ್ಲಿ ನನ್ನ ಪಯಣ? : “ಮುಗಿಲಿನಿಂದ ಜಾರಿಬಿದ್ದ ಉಲ್ಕೀ ಹಾಂಗ ಕಾಡಿನಿಂದ ಚಂಗನೆ ನೆಗೆದಿತ್ತ” ನನ್ನನ್ನು “ಏಳಕೊಳ್ಳ ತಿಳ್ಳೀ ಆಡಿ ಕಳ್ಳೆಮಳ್ಳೆ ಆಡಿಸಿ ಕೆಡವಿತ್ತ...” ಆಮೆಲೆ ಸಿಕ್ಕಿದ್ದು “ಮರೆತೇನಂದರ ಮರೆಯಲಿ ಹೆಂಗಾ ಮಾವೊತ್ಸೆ ತುಂಗಾ” ಅಂತಿದ್ದ ಕಂಬಾರರು. “ಸೊನ್ನಿಗೆ ಆಕಾರ ಬರೆದೇನಂದಿ, ಬಯಲಿಗೆ ಗೋಡೆ ಕಟ್ಟೇನಂದಿ......ಮರೆಯಲಿ ಹೆಂಗಾ ಮಾವೊತ್ಸೆ ತುಂಗಾ” ಸಾಲುಗಳು ನನ್ನೆಲ್ಲಾ ಅಂತಃಸತ್ತ್ವವನ್ನು ಪ್ರತಿಫಲಿಸುತ್ತಿತ್ತು ಆ ದಿನಗಳಲ್ಲಿ. ಮತ್ತೊಮ್ಮೆ ರಂಗದ ದಿನಗಳು. ಕಂಬಾರರ ಕರಿಮಾಯಿ ತಾಯೇ ಸಾಲುಗಳನ್ನು, ಬಿ.ಜಯಶ್ರೀ ಧ್ವನಿಪೆಟ್ಟಿಗೆಯ ಕಂಚು ಉಜ್ಜಿತೆಂದರೆ ಆಹಾ, ಅದ್ಯಾವ ಲೋಕದಲ್ಲಿ ನನ್ನ ಪಯಣ? “ಗುಂಡ ತೇಲಿಸಿದೆವ್ವ ಬೆಂಡ ಮುಳುಗಿಸಿದಿ; ಗಂಡಗಂಡರನೆಲ್ಲ ಹೆಂಡಿರ ಮಾಡಿ....ಸಾವಿರದ ಶರಣವ್ವ ಕರಿಮಾಯಿ ತಾಯೇ....” ಸಾಲುಗಳ ಮುತ್ತುದುರಿಸುತ್ತಾ ಭಾಷಣಗಳಲ್ಲಿ ಮೇಜುಗುದ್ದುತ್ತಿದ್ದ ದಿನಗಳವು. ಇವರ ಮತ್ತೊಂದು ಪದ್ಯ “ಗಿಣಿರಾಮ ಹೇಳಿತು” ಅದಕ್ಕೆ ಬಿ.ವಿ ಕಾರಂತರ ಸಂಗೀತ “ಗಿಣಿರಾಮ ಹೇಳಿದ ರೇಪಿನ ಕಥೆಯೊಂದ; ರಾಮಾ ಹರಿ ರಾಮಾ, ಮಾನಭಂಗಿತಳಾಗಿ ಕನಸೊಂದು ಬಿದ್ದಿದೆ; ರಾಮಾ ಹರಿ ರಾಮಾ” ಅಂತ ಕಾರಂತರು ಹಾಡ್ತಿದ್ದರೆ ಅದೆಲ್ಲಿರುತ್ತಿತ್ತೋ ನನ್ನ ಕಣ್ಣೀರು ಝುಳು ಝುಳು ಹರೀತಿತ್ತು.ಚುಂಚದ ಹಕ್ಕಿ ಗಕ್ಕನೆ ಹಾರಿ ಬಂತು : ಹೀಗೆ ಒಂದೊಂದು ಕಣ್ಣೀರಿನ ಹನಿಯಲ್ಲೂ ಕಂಬಾರರ ಸಾಹಿತ್ಯ, ಭಾಷೆ ಎಲ್ಲವೂ ನನ್ನೊಳಗೇ ಶಾಖವಾಗ್ತಾ ಹೋಯ್ತು. “ಸ್ವಂತಚಿತ್ರ ಬರೆಯೋದು ಕಷ್ಟವಲ್ಲ ಮಿತ್ರ”, "ಇಬ್ಬರ ತಕರಾರಿಗೆ ಹುಟ್ಟಿ ಹಲವರ ತಕರಾರಲ್ಲಿ ಬೆಳೆದವರು ನಾವು ತಕರಾರಿನವರು” ಎನ್ನುತ್ತಾ ಕಥೆಗೆ ಶುರುವಿಟ್ಟ ಕಂಬಾರರು, “ನನ್ನ ಮನದಾಗರೆ ಇದು ಏನ ಬೆಳೆದೈತಿ? ತುಂಬ ಮಲ್ಲೀಗಿ ಹೂಬಳ್ಳಿ; ಉದುರೀಸಿ ನಿನ್ನ ಪಾತಾಳ ತುಳುಕಲಿ” ಎಂದೆನ್ನುವ ಅರಗೊಡ್ಡಿಯ ಪ್ರೇಮಗೀತೆಯಾಗಿಸತೊಡಗಿದರು ನನ್ನನ್ನು. ಋಷ್ಯಶೃಂಗನ ನಾಟಕೀಯತೆಯಲ್ಲಿ “ಅಪ್ಪ ಸೂತ್ರಧಾರ ಕೇಳೋ ಕನಸ ಕಂಡಿನೆ, ಸುಖದ ನೋವ ಸದ್ದ ಮಾಡಿ ಹೆಂಗ ಹೇಳಲೆ” ಎಂದು ಉನ್ಮಾದಕ್ಕೆ ತಳ್ಳುತ್ತಾ, ಕಲೆಗಾರಣ್ಣನ ಲಾವಣಿಯಲ್ಲಿ “ಇಷ್ಟೆ ಕಣ್ಣಿನ ಇಷ್ಟಿಷ್ಟೆ ಚುಂಚದ ಹಕ್ಕಿ ಗಕ್ಕನೆ ಹಾರಿ ಬಂತು ಮೇಲಕ್ಕೆ ಕೆಳಕ್ಕೆ ರೆಂಬೆ ರೆಂಬೆಗೆ, ಕೊಂಬೆ ಕೊಂಬೆಗೆ ಸೋಂಕಿನ ಸೊಗಸ ಬೀರುತ, ಕಲೆಗಾರನ ಕಲ್ಪನೆಗೆ ಶರಣೆನ್ನಿರಿ” ಎಂದು ಕುಣಿಸುತ್ತಾ, “ವ್ಯರ್ಥಗಳ ಸಮರ್ಥಿಸಿಕೊಳ್ಳುತ್ತಾ, ಅಪಾರ್ಥದಲ್ಲಿ ಅರ್ಥಗಳ ಸೃಷ್ಟಿಸುತ್ತಾ, ಇಲ್ಲಾ ರಾಮಾಯಣದ ಮಹಿಮೆ ಜಪಿಸುತ್ತಾ” ಗೋದೂ ತಾಯಾಗಿಸಿ ನನ್ನೊಡನೆ ನನ್ನನ್ನು ಇಬ್ಬರಾಗಿಸಿ “ರೆಕ್ಕೆಯೊಳಗಿನ ಹಕ್ಕಿಯ ಥರ ನಮ್ಮ ನೆರಳುಗಳನ್ನೇ ಮೈಗೂ ಮನಸ್ಸಿಗೂ ಸುತ್ತಿಕೊಂಡು ಉರಿವ ಬೆಂಕಿಯ ಬಳಿ ಕೂತೆವು” ಎಂದೆಂದುಕೊಳ್ಳುವಂತೆ ಮಾಡಿಟ್ಟರು. ನಾನು ಒಳಗೇ ಹೇಳುತ್ತಾ ಹೋದೆ ಅವರದೇ ನುಡಿಯಾಗಿ “ಒಂದಾನೊಂದು ಕಾಲದಲ್ಲಿ ಏಸೊಂದ ಮುದವಿತ್ತಾ, ಮುದಕೊಂದು ಹದವಿತ್ತಾ, ಹದಕ ಹಂಗಾಮಿತ್ತಾ, ಅದಕೊಂದ ಶಿವನ ಲಗಾಮಿತ್ತಾ” “ನಾನೀಗ ನನ್ನ ಖಾಸಗಿಯನ್ನು ಕಾಣಬೇಕು. ಮಾತಾಡಬೇಕು ಅದರೊಂದಿಗೆ ನಿಜ ನೋಡಬೇಕು, ಶಬ್ದವೇ ಶಬ್ದವೆ ತೋರು ನಿಜವನ್ನ,ನನ್ನಳತೆಯ ಮನುಷ್ಯನಳತೆಯ ಸತ್ಯವನ್ನ.” “ಜೋಲಿ ತಪ್ಪಿದ ಪೋರಿ ಬಿದ್ದಾಳ ತೆಕ್ಕೀಗಿ, ಸಂದ ಉಳಿಯದ ಹಾಂಗ ಒಂದಾಗಿ ಮೈಮುರದಾ” ಅನ್ನೋ ಹಾಗೆ ನನ್ನನ್ನು ಜೀವನದೊಳಗೆ ಒಂದು ಮಾಡಿ “ಮಂದಾರ ಮರದಲ್ಲಿ ಪಾರ್ವತಿ ಹಣ್ಣು ತಿಂದದ್ದೇ ದೇವಲೋಕಕ್ಕೂ ಬಂತು ಹಸಿವಿನ ಬಾಧೆ” ಅದಕ್ಕೇ, “ಹಾವಲ್ಲ ಅದು ಹಗ್ಗ ಎನ್ನುವರು ಕೆಲಮಂದಿ ಹಗ್ಗದಲ್ಲೂ ಹರ್ಷ ಚಿಮ್ಮುವಾಕೆ ಈ ಮಾಯೆ” ಎನ್ನುವ ಅರಿವು ನನಗೆ ಮೂಡಿಸಿದ್ದು ಈ ಸೂರ್ಯ ಶಿಖರನ ಸಾಹಿತ್ಯ. “ಲೂಟಿ ಮಾಡಾಕ ಬಂದ ಮಾಟಗಾರೇನ ಸುಖದ ಶಿಖರದ ಮ್ಯಾಲ ಹತ್ತಿನಿಂತಾನ ಇಕ್ಕಟ್ಟೀನ ಬಿಕ್ಕಟ್ಟೆಲ್ಲಾ ಒಟ್ಟಿಗಿ ದೂರ ಮಾಡಿದ್ದ” “ಯಾರವ್ವ ಈ ಚೆಲುವ ತಂತಾನೆ ರಂಜಿಸುವ ಸೂರ್ಯನ ಥರ ಹೊಳೆಯುವ” ಅಂತ ಮನಸ್ಸಿನಲ್ಲೇ ನಾನು ಮುಲುಗುತ್ತಿರುವಾಗಲೇ ನಾಳಿನ ಸತ್ಯವನ್ನು ಇಂದೇ ಬಯಲಾಗಿಸಿಕೊಟ್ಟದ್ದು ಅವರ ಮಾತು ““ಅಜ್ಜ ಅಜ್ಜಿಗೆ ಬೇಜಾರು ನೆನಪೂ ಬೋರು, ಕುರುಡ ಮುದುಕ ಕೈಯಾಡಿಸಿ ಹುಡುಕುತ್ತಾನೆ ಎಲ್ಲಿದ್ದೀಯೆ ಮುದುಕಿ ಎಲ್ಲಿದ್ದೀಯೆ?”

“ಸಿಟಿಯ ಕಗ್ಗತ್ತಲೆಯಿಂದ ಪಾರಾಗಲು ಯತ್ನಿಸಿದವರ ಹಾಡು” “ಕೀಟ್ಸನ ಸಾವನ್ನು ನೆನೆದು-ಒಣಗುತ್ತಿತ್ತು ಗಿಡ ತೊಟಕು ನೀರು ಸಹ ಯಾರೂ ಹನಿಸಲಿಲ್ಲ ಸತ್ತಮೇಲೆ ಕಣ್ಣೀರ ಸುರಿಸಿದರು ವಿಧಿಯ ಆಟವೆಲ್ಲ” ಇಂದಿಗೂ ಬದಲಾಗದ “ದಿನಪತ್ರಿಕೆಯ ಸುದ್ಧಿ ಹಣೆಬರಹ “ಅಲ್ಲಿರುವ ನೆಲ, ನೀರು ಹಳದಿ, ಮುಗಿಲೂ ಹಳದಿ, ಜನ ನಕ್ಕರೂ ಹಳದಿ, ಏನು ಮಂದಿ! “ ಈ ನಡುವೆ ನಾವಿದ್ದೇವೆ-ಅದೇ ರಂಗಭೂಮಿ ಮತ್ತು ನಾನು, ಆಪಾದಿಸುತ್ತಾ, ಸಮರ್ಥಿಸಿಕೊಳ್ಳುತ್ತಾ ಪರಸ್ಪರ ನೋವಿನಲ್ಲಿ ಬೆರಳಾಡಿಸುತ್ತಾ....” ಹೀಗೆಲ್ಲಾ ಹೃದಯಕಾಂತಿಗೆ ಸೂರ್ಯನಾಗಿ ದಿಕ್ಕು ತೋರಿಸಿದ ನನ್ನ ಪ್ರೀತಿಯ ಕಂಬಾರರಿಗೆ ಜ್ಞಾನಪೀಠ ಸನ್ಮಾನವಾಗಿದೆ. 8 ಕವನ ಸಂಕಲನ, 22 ನಾಟಕ, 3 ಬೃಹತ್ ಕಾದಂಬರಿಗಳು, ಎಷ್ಟೆಷ್ಟೋ ಕಥೆಗಳು, ಚಿತ್ರಗಳು ಹಾಡುಗಳು ಇನ್ನೂ ಏನೇನೋ ಇವೆಯಂತೆ ಅವರ ಹೆಮ್ಮೆಯ ಮುಡಿಗೆ, ಆದರೆ ನನಗೆ ಮಾತ್ರ ಚಂದ್ರಶೇಖರ ಕಂಬಾರರ ಬರವಣಿಗೆ, ಭಾಷೆ, ಭಾವವೆಂದರೆ ಗರಡಿ ಮನೆಯ ಸ್ತಬ್ಧ ಚಿತ್ರದಂತೆ. ನನ್ನಂತರಂಗದಂತೆ. ಶ್ರೀರಾಮಚಂದ್ರನ ಧರ್ಮದಂತೆ, ಸೀತೆಯ ನಿಷ್ಠೆಯಂತೆ.

ಊರಿನ ಮುದ್ದು, ಮನೆಯವರ ಕಣ್ಮಣಿ, ಮುಂದೊಂದು ದಿನ ಭೂಮಂಡಲದ ಹಾಹಾಕಾರವ ನೀಗುವ ಶಕ್ತಿಯಾದರೂ ಅಮ್ಮನಿಗೆ ಮಾತ್ರ ಮಗು “ನನ್ನ ಬಂಗಾರ” ತಾನೆ? ಹಾಗೇ, ಬೇಂದ್ರೆ ಅಜ್ಜನ ನಂತರ ಭಾಷೆಯನ್ನು ಅದ್ಭುತವಾಗಿ ಕಟ್ಟಿಕೊಟ್ಟವರು ಕಂಬಾರರು ಅಂತ ಪಂಡಿತರು ಹೇಳುತ್ತಿದ್ದರೂ ನನಗೆ ಮಾತ್ರ ತೀರ್ಥರೂಪು “ನನ್ನ ಕಂಬಾರರು” ಅಷ್ಟೆ. ಅದಕ್ಕೆ ಒಂದಷ್ಟು ದಿನಗಳ ಹಿಂದೆ ಪಾಂಡಿತ್ಯ ಪ್ರಖರರೊಬ್ಬರೊಂದಿಗೆ ಸರಿಸುಮಾರು ಯುದ್ಧವನ್ನೇ ಮಾಡಿದ್ದೆ. ಅವರ ಪ್ರಕಾರ ಇಂಗ್ಲಿಷಿಗೆ ಅಸಾಧ್ಯವೆಂಬುದೇ ಇಲ್ಲ! ನಾನು ಕೇಳಿದ್ದು ಸಣ್ಣ ಪ್ರಶ್ನೆಯಷ್ಟೆ, ಕಂಬಾರರ “ಗೌತಮ ಕಂಡ ಪ್ರಥಮ ದರ್ಶನ” ಪದ್ಯದ ಈ ಸಾಲುಗಳನ್ನು ಇಂಗ್ಲಿಷಿಗೆ ತನ್ನಿ ಅಂತ “ಗದಬಡಿಸಿ ಗದಬಡಿಸಿದವನೆ ಹುಡುಕಾಡಿ, ಹುಡುಕಾಡಿದವನೆ ಕೊನೆಗೆ ಹಾಸಿಗೆಗೆ ಬಂದು ನೋಡುತ್ತೇನೆ: ನನ್ನ ಪಾಲಿನ ಹುಡುಗಿ ಇದಕೆ ಹಾಸುಗೆಯಾಗಿ, ಅರೆಗಣ್ಣ ತುದಿಯ ಸೂರು ಜತಿಯಗುಂಟ ಸ್ವರ್ಗದುಯ್ಯಾಲೆ ಕಟ್ಟಿದಹಲ್ಯೆ.” “ತಪ್ಪಿದ್ದರೆ ಕ್ಷಮಿಸಿ ನಾನು ಅಧಮಳು” ಅಂದರೂ ಉತ್ತಮರ ಸಿಟ್ಟು ಇಂದಿಗೂ ಇಳಿದಿಲ್ಲ!ಕನ್ನಡವೆಂದರೆ ಕಂಬಾರರು ಅಷ್ಟೆ : ಅಂದಹಾಗೆ, ಆ ದಿನ ಬಾಗಿಲು ತೆರೆದಾಗ ಅಯ್ಯರ್ ಮಾಮ ಜೋರಾಗಿ ನಗುತ್ತಾ ಒಳಬಂದರು. ಮಾಮಿಗೆ ಸಂಕೋಚ. ಸೆರಗು ಸರಿ ಮಾಡ್ಕೊಳ್ಳುತ್ತಾ ಗಂಡ ಆಗಲೇ ಪಟ್ಟಾಂಗ ಹಾಕಿಕೊಂಡಿದ್ದ ಸೋಫಾ ಮೆಲೆ ಕುಳಿತರು. ಸೌಜನ್ಯಕ್ಕೆ “ತೊಟ್ಟು ಹಾಲು ಕೊಡಲೇ” ಎಂದೇ. ಅಷ್ಟೇ ಸಾಕು ಮಾಮಾ ತಮಿಳು ಮಿಶ್ರಿತ ಇಂಗ್ಲಿಷ್ನಲ್ಲಿ ಹೇಳ್ತಾ ಹೋದರು “ಕೆಳಜಾತಿಯ ತಮಿಳರಿಗೆ ನಾಲಿಗೆ ಹೊರಳದೆ ತಮಿಳನ್ನು ಅಪಭ್ರಂಶಗೊಳಿಸಿದರು. ಅದೇ ಕನ್ನಡವಾಯ್ತು. ಪಾಲು ಹಾಲಾಯ್ತು. ಇಲ್ಲದಿದ್ದರೆ ಕನ್ನಡಕ್ಕೆ ಸ್ವಂತ ಅಸ್ತಿತ್ತ್ವವೆ ಇಲ್ಲ. ಅದು ಭಾಷೆಯೇ ಅಲ್ಲ. ನಿನಗೆ ಗೊತ್ತಾ? ಸರಸ್ವತಿ ತಮಿಳರ ದೇವತೆ” ಹೀಗೆ ಇನ್ನೂ ಏನೇನೋ. ನನಗೆ ಅದೆಲ್ಲಾ ತಿಳಿಯೋಲ್ಲ. ನನಗೆ ಕನ್ನಡವೆಂದರೆ ಶಾಲೆಯಲ್ಲಿ ಮುದ್ದಣನ ಶ್ರೀಮತಿ ಸ್ವಯಂವರ ಹೇಳಿಕೊಟ್ಟ ಪದ್ಮಾ ಮಿಸ್ ಮತ್ತು ಚಂದ್ರಶೇಖರ ಕಂಬಾರರು ಅಷ್ಟೆ! ಮಾಮಿಗೆ ಮುಜುಗರವಾಗ್ತಿತ್ತು. ಹಿರಿಯರನ್ನು ಹೀಗೆಳೆಯುವುದು ನಮ್ಮ ಸಂಸ್ಕೃತಿಯಲ್ಲ್ವಲ್ಲಾ? ಅದಕ್ಕೆ ವಾತಾವರಣ ತಿಳಿ ಮಾಡಲು, ಒಳಗೆ ಹೋಗಿ ಮಾಡಿದ್ದ ಹೆಸರುಬೇಳೆ ಕೋಸಂಬರಿಯನ್ನು ಬಟ್ಟಲುಗಳಿಗೆ ಹಾಕಿ ತಂದುಕೊಟ್ಟೆ. ತತ್ಕ್ಷಣ ಮಾಮಾ “ಅರೆ, ಇದು ತಮಿಳರ ತಿಂಡಿ. ನೀನು ಹೇಗೆ ಕಲಿತೆ?” ಅಂದು ಬಿಡೋದೇ? ಸಿಟ್ಟು ಕ್ರೂರ ಸೂರ್ಯನಂತೆ ನೆತ್ತಿ ಸುಡುತ್ತಿದ್ದರೂ, ನಾನು ಪ್ರತಿಭಟಿಸಲಿಲ್ಲ. ಇತ್ತೀಚೆಗೆ ಕಂಬಾರರೇ ನನ್ನ ಮೌನಕ್ಕೂ ಕನ್ನಡದಲ್ಲಿ ಮಾತನಾಡುವ ಸೊಗಡನ್ನು ಪರಿಚಯಿಸಿಕೊಟ್ಟಿದ್ದಾರೆ. ಹಾಗಾಗಿ ನನ್ನ ನಾಳೆಗಳು ಅವರೇ ಹೇಳಿದಂತೆ ಸಂಸ್ಕೃತಿಯಿಂದ ವಿಸ್ಮೃತಿಗೊಳ್ಳಲಾರದೆಂಬ ಭರವಸೆಯಿದೆ, ಹೇಗೆಂದಿರಾ? ಅವರ ಶಿವಾಪುರದ ಪ್ರತಿಮೆಗಳಲ್ಲಿ ಒಂದಾದ ಪದ್ಯ ಸಾಲುಗಳು ಕೇಳುತ್ತ್ವೆ “ಬೇಕಾದಷ್ಟು ಕನಸುಗಳಿವೆಯಲ್ಲಾ ಬದುಕಕ್ಕೆ ಇನ್ನೇನು ಬೇಕು ಗೆಳತಿ...?” ಹೀಗೆ ಕಂಡ ಕನಸೊಂದು ಇಂದು ನನಸಾಗಿದೆ. ಕಂಬಾರರ ಪಾದಕ್ಕೆರಗಿ ಪೀಠದ ಜ್ಞಾನ ಸ್ಫಟಿಕದಂತೆ ಸ್ಫುರಿಸಿದೆ. ಜ್ಞಾನಪೀಠದ ಔನತ್ಯವನ್ನು ಹೆಚ್ಚಿಸಿರುವ ಹಿರಿಯರ ಚರಣಸ್ಪರ್ಶಿಸುತ್ತಿರುವ ಈ ಸಮಯದಲ್ಲಿ ನನ್ನ ಮನಸ್ಸಿನಲ್ಲಿ ಕಂಬಾರರು ಹಾದುಹೋದದ್ದು ಹೀಗೆ!(ಕೃಪೆ:-ಧಟ್ಸ್ ಕನ್ನಡ)

ಪತ್ರಿಕೋದ್ಯಮದ ಒಳಗಿನ ಬ್ರಷ್ಟಾಚಾರಗಳು ಉಳಿದೆಲ್ಲವುಗಳಂತೆ ಅಷ್ಟು ಸುಲಭದಲ್ಲಿ ಸಮಾಜದ ಮುಂದೆ ಬರಲಾರದು.

ಪತ್ರಿಕೋದ್ಯಮ ಇದು ಪ್ರಜಾಪಭುತ್ವ  ವ್ಯವಸ್ಥೆಯಲ್ಲಿ ಅತ್ಯಂತ ಪ್ರಭಲ, ಸಂವಿಧಾನದ  ನಾಲ್ಕನೆ ಅಂಗವೇನೋ ಎಂಬಂತೆ ಬೆಳೆದು ನಿಂತಿದೆ.ದೇಶದ ಅದೆಷ್ಟೋ ಬ್ರಷ್ಟಾಚಾರವನ್ನು  ಬೆಳೆಕಿಗೆ ತಂದು ಪರಿಣಾಮಕಾರಿ ಜನಾಭಿಪ್ರಾಯ ರೂಪಿಸಿ ಆ ಮೂಲಕ ಆರೋಪಿಗಳಿಗೆ ಶಿಕ್ಷೆಯಾಗುವಲ್ಲಿ ಹಾಗು ಜನಜಾಗೃತಿ ರೂಪಿಸುವಲ್ಲಿ ಸಹಕಾರಿಯಾಗಿದೆ.ಬ್ರಷ್ಟಾಚಾರದ  ಬೆಳೆಕಿಗೆ ಹಾಗು  ಅದ  ಸಮಾಜಕ್ಕೆ ತಿಳಿಸುವಲ್ಲಿ ಇಂದಿನ ಪತ್ರಿಕೆ ಹಾಗು ದೃಶ್ಯ ಮಾಧ್ಯಮಗಳು ಸಹಕಾರಿಯಾಗಿದೆ ಅಂದರೆ ಉಳಿದ ವಿಹಿತಗಳು ಇದರಿಂದ ಆಗಿಲ್ಲವೆಂಬುದು ಅಲ್ಲ.ನಾನು ಇಲ್ಲಿ  ಹೇಳ ಬಯಸಿರುವದು ಬ್ರಷ್ಟಚಾರದ ವಿರುದ್ದ ಮಾಧ್ಯಮಗಳ ಸಮರದ ನೈತಿಕತೆಯನ್ನು ಪ್ರಶ್ನಿಸುವ ನಿಟ್ಟಿನದ್ದು  ಆದುದರಿಂದ ಮಾಧ್ಯಮದ ಇತರ ವಿಹಿತಗಳ ಬಗ್ಗೆ ಪ್ರಸ್ತಾಪಿಸುತ್ತಿಲ್ಲ.ಅತ್ಯಂತ ಸಾಮಾನ್ಯನಲ್ಲಿ ಸಾಮಾನ್ಯನಾದ ಈ ದೇಶದ ಪ್ರಜೆ ನಾನು,ಪತ್ರಿಕೋದ್ಯಮದ ಬಗ್ಗೆ ಗೌರವ  ಹೊಂದಿರುವವನು,ದೇಶದ ಒಟ್ಟು ಪತ್ರಿಕೋದ್ಯಮದ ಬಗ್ಗೆ ಮಾತನಾಡುವ ಅಷ್ಟು ತಿಳುವಳಿಕೆಗಳು ನನ್ನಲ್ಲಿ ಇಲ್ಲ.ಆದರೆ ನನ್ನ ಕನ್ನಡ ಪತ್ರಿಕೋದ್ಯಮದ ಬಗ್ಗೆ ಒಂದಷ್ಟು ಸಂಶಯ ಅಸಹನೀಯತೆಗಳು ನನ್ನಲ್ಲಿ ಇತ್ತೀಚಿಗೆ  ಬೆಳೆಯುತ್ತಿದೆ.ಆ ಮೂಲಕ ಉತ್ತರಗಳೇ ದೊರಕದ ಹಲವು ಪ್ರಶ್ನೆಗಳು ಬ್ರಷ್ಟಾಚರವನ್ನು  ಬೆಳೆಕಿಗೆ ತರುತ್ತೇವೆ ಎಂದು ಸೋಗಲಾಡಿತನವನ್ನು ಹೊತ್ತುಕೊಂಡ ಪತ್ರಿಕೋದ್ಯಮದ ಮೇಲೆ ಮೂಡಿದೆ.

ಇತ್ತೀಚಿಗೆ ಕರ್ನಾಟಕದಲ್ಲಿ ಬೆಳಕಿಗೆ ಬಂದ ಭೂ ಹಗರಣ ,ಗಣಿ ಹಗರಣಗಳಲ್ಲೀ ಪತ್ರಿಕೋದ್ಯಮದ ಒಂದಷ್ಟು ಮಂದಿಯ ಪಾಲ್ಗೊಳ್ಳುವಿಕೆ ಇದೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.ಆ ಮೂಲಕ ಪತ್ರಿಕೋದ್ಯಮದ ಮಂದಿಯೇ ಪತ್ರಿಕೋದ್ಯಮ ಅಂತಹ ಪವಿತ್ರ ಕ್ಷೇತ್ರಕ್ಕೆ ಮಸಿಬಳಿದಿರುವದು ದುರಂತ.ಆದರೆ ನನ್ನ ವಿಚಾರಗಳು ಈ ನಿಟ್ಟಿನದ್ದಲ್ಲ.ರಾಜಕೀಯ ,ಜನಸಾಮಾನ್ಯ ,ಯಾಕೆ ನಿನ್ನೆ ರಾಜೀನಾಮೆಯನ್ನು ಕೊಟ್ಟಂತ ಲೋಕಾಯುಕ್ತರನ್ನು ಬಿಡದ ಬ್ರಷ್ಟಚಾರಿಕೆಯ ಮಾಹಿತಿ ಒದಗಿಸಿದ ಪತ್ರಿಕೋಧ್ಯಮ ತನ್ನದೇ  ಮಂದಿಯ ತನ್ನದೇ ಕ್ಷೇತ್ರದ ಬ್ರಷ್ಟಚಾರಿ  ಹುಳುಗಳನ್ನು ಸಮಾಜದ ಎದುರು ನಿಲ್ಲಿಸುವದನ್ನು ಮರೆತಿದೆ ಯಾಕೆ?ಈ ಬಗ್ಗೆ ಬೆರಳೆಣಿಕೆ ವರದಿಗಳು ಬಂದಿರಬಹುದು ಆದರೆ ಪ್ರಜಾವಾಣಿ  ಇಬ್ಬರನ್ನು ನೇರ ನೇರ ಹೆಸರು ಕೊಟ್ಟು ಕರೆದು ವರದಿ ಕೊಟ್ಟಿದ್ದು ಬಿಟ್ಟರೆ ಉಳಿದ ವರದಿಗಳೆಲ್ಲ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ!!!!!!!!!!! ಬೇರೆ ಕ್ಷೇತ್ರದ ಬ್ರಷ್ಟರನ್ನು ಹೆಸರು ಹಾಗು ಒಂದಿಷ್ಟು ಅಡ್ಡ ಹೆಸರಿತ್ತು ತೆಜೋವದೆ ನಡೆಸಿ ಅವರ ಪ್ರಕರಣವನ್ನು ಬೆಳಕಿಗೆ ತರುವ ಮಾಧ್ಯಮಗಳು ತನ್ನದೇ ಮಂದಿಯನ್ನು ಹೆಸರು ಕೊಟ್ಟು ಪ್ರಸ್ತಾಪಿಸುವದಕ್ಕು ಹಿಂಜರಿಯುತ್ತಿರುವದು ಯಾಕೆ?ಅಷ್ಟಕ್ಕೂ ಪ್ರಜಾವಾಣಿ ವರದಿಯಲ್ಲಿ ಇದ್ದ ಇಬ್ಬರೇ ಪತ್ರಿಕೋದ್ಯಮದಲ್ಲಿ ಬ್ರಷ್ಟರು ಉಳಿದವರೆಲ್ಲ ಸಾಚಾಗಳು ಅಂದರೆ ನಂಬುವದು ಸಾಧ್ಯವೇ?ರೆಡ್ಡಿಗಳ ಮನೆ ಮುಂದು ಸಿ ಬಿ ಐ ಮಂದಿ ವಾಹನಗಳಿಂದ ಇಳಿಯುತಿದ್ದಂತೆ ವರದಿ ಶುರು ಹಚ್ಚಿಕೊಂಡ ಪತ್ರಿಕೋಧ್ಯಮ ಅದೇ ಭಯದಿಂದ ದಿನ ದೂಡುತ್ತ ಇರುವ ಕೆಲವು ಪತ್ರಿಕೋದ್ಯಮ ಮಂದಿಯನ್ನು ಸಮಾಜದ ಎದುರು ತೆರೆದಿಡಲು ಮನಸ್ಸು ಮಾಡದೇ ಇರುವದು  ಯಾಕೆ?ಯಾಕೆ ಭೂ ಹಗರಣ ಮತ್ತು ಗಣಿ ಹಗರಣದ ನಂತರವೇ ತನ್ನಲ್ಲಿರುವ ಪತ್ರಿಕೋದ್ಯಮದ ಬ್ರಷ್ಟ ಕ್ರಿಮಿಗಳು ಪತ್ರಿಕೊಧ್ಯಮದ ಮಂದಿಗೆ ಅರಿವಿಗೆ ಬಂದಿದ್ದು, ಈ ಮೊದಲು ಹಾಗಾದರೆ ಇವರೆಲ್ಲ ಸಾಚಗಳೇ?ಇಲ್ಲ ಪತ್ರಿಕೋಧ್ಯಮ ಮಂದಿಗೆ ಇವೆಲ್ಲ ಗೊತ್ತೇ ಇದೆ ಬೇಕಂತಲೇ ಮುಚ್ಚಿಟ್ಟಿರುವದು ಸ್ಪಷ್ಟ.ನಿನ್ನೆಯಷ್ಟೇ ಮಾಧ್ಯಮ ಬ್ರಷ್ಟಚಾರವನ್ನು ಸಮಾಜ ಏಕೆ ಅರಗಿಸಿಕೊಳ್ಳುತ್ತಿದೆ? ಎಂಬ ಬ್ಲಾಗ್ ಬರಹ ಓದಿದೆ.ಬರೆದವರು ಓರ್ವ ಪತ್ರಕರ್ತ.ತನ್ನ ಹೆಸರನ್ನು ಪ್ರಕಟಿಸುವದಕ್ಕು ಸ್ವಾತಂತ್ರ್ಯ ಕಳೆದುಕೊಂಡ ಪತ್ರಕರ್ತನ  ಬಗ್ಗೆ  ಹಾಗು ಇಂತಹ ವಾತಾವರಣ ನಿರ್ಮಿತಗೊಳಿಸಿದ  ಪತ್ರಿಕೋದ್ಯಮದ ಬಗ್ಗೆ ಖೇದವಿದೆ.ಆದರೆ ಈ ಪತ್ರಿಕೋದ್ಯಮವು ಪ್ರಜಾಪ್ರಭುತ್ವವನ್ನು ಕಾಯುವ ಬೆಳೆಸುವ ನೈತಿಕತೆ ಹೊಂದಿರುವವರು ಅನ್ನುವದು ಈ ನಿಟ್ಟಿನಲ್ಲಿ ಯೋಚಿಸಿದವಾಗ ಕುಚೋದ್ಯ ದಂತೆ ಕಂಡು ಬರುವದು ಪ್ರಜಾಪ್ರಭುತ್ವದ ವಿಪರ್ಯಾಸ!!!!!!!!!!.ಯಾವುದೇ ಸಮಾಜ ಬ್ರಷ್ಟಚಾರವನ್ನು ಅರಗಿಸಿಕೊಳ್ಳುವದಿಲ್ಲ.ಆದರೆ ಮಾಧ್ಯಮ ಬ್ರಷ್ಟಾಚಾರವನ್ನು  ಮಾಧ್ಯಮಗಳೆ ಸರಿಯಾಗಿ ಸಮಾಜಕ್ಕೆ ತಲುಪಿಸುವಲ್ಲಿ, ಹಾಗು ಆ ಮೂಲಕ  ಜನಾಭಿಪ್ರಾಯ ರೂಪಿಸುವಲ್ಲಿ ವಿಫಲ ಗೊಂಡಿದೆ ಅಂದರೆ ತಪ್ಪಿಲ್ಲ.
 ವಾಕ್ ಸ್ವಾತಂತ್ರ್ಯ ಪತ್ರಕರ್ತರಿಗೆ ದೊರೆಯಲಿ.
ಮೊದಲೇ ಹೇಳಿದಂತೆ ಪತ್ರಿಕೋದ್ಯಮದಲ್ಲಿ ಗೌರವ ಇರಿಸಿದವ ನಾನು.ಪತ್ರಿಕಾರಂಗದಲ್ಲಿ ಬೇಕಾಬಿಟ್ಟಿ ಬರೆಯುವದು ಸಾಧ್ಯವಿಲ್ಲವೆಂದು ಅಂದುಕೊಂಡವ.ಸೂಕ್ತ ಆಧಾರಗಳು ಇದ್ದಾಗಲೂ ಸಮಾಜದ ಮುಂದೆ ತಮ್ಮ ಮಿತ್ರರ ಬ್ರಷ್ಟ ವಿವರಗಳನ್ನು ಸಮಾಜದ ಮುಂದೆ ಇರಿಸಲು ದ್ವಂದ್ವ ನೀತಿ ಅನುಸರಿತ್ತಿರುವದನ್ನು ಬಿಡಬೇಕು.ತನ್ನ ಕಣ್ಣಿಗೆ ಬೆಣ್ಣೆ,ಇತರರ ಕಣ್ಣಿಗೆ ಸುಣ್ಣ ವೆಂಬ ನೀತಿ ಎಷ್ಟು ಸರಿ?.ಪತ್ರಿಕಾರಂಗ ಪತ್ರಿಕೊಧ್ಯಮದ ನೀತಿಯನ್ನು ಮರೆತಿರುವದು ಸಲ್ಲ.ಇಲ್ಲಿ ಪತ್ರಕರ್ತರು ಈ ಬಗ್ಗೆ ವರದಿ ಬಿತ್ತರಿಸಲು ರೆಡಿ ಇಲ್ಲವೆಂಬುದು ಅಲ್ಲ.ಎಷ್ಟೋ ಸಜ್ಜನ ಪತ್ರಕರ್ತರು ಪತ್ರಿಕೋದ್ಯಮದಲ್ಲಿ ಇದ್ದಾರೆ.ಆದರೆ ಪತ್ರಿಕಾ ಆಡಳಿತ ಮಂದಿಗಳು ಅವರ ದ್ವಂದ ನೀತಿಗಳಿಂದ ಹೇಳಬೇಕಾದ್ದನ್ನು ಜನರ ಮುಂದೆ ಹೇಳಲಾಗದೆ ಒದ್ದಾಡುತಿದ್ದಾರೆ!!!!!.ನಿನ್ನ ವಿಷಯ ನಾನು ತರಲ್ಲ ನನ್ನ ವಿಷಯ ನೀನು ತರಬೇಡ ಎಂಬ ಪ್ರೊಟೆಕ್ಟ್ ನೀತಿಗಳನ್ನು ತಮ್ಮದಾಗಿಸಿಕೊಂಡಿರುವ ಪತ್ರಿಕೆಗಳೇ ಹೆಚ್ಚು.ನೇರ ನೇರ ವಿಷಯ ಪ್ರಸ್ತಾಪಿಸಿ ರಿಸ್ಕ್ ತೆಗೆದುಕೊಳ್ಳಲು ಯಾರು ಬಯಸುತ್ತಿಲ್ಲ,ಯಾಕೆಂದರೆ ಪತ್ರಿಕೋದ್ಯಮದ ಖಡ್ಗ ವೆಂಬ ಅಸ್ತ್ರ ಇಬ್ಬರಲ್ಲೂ ಇದೆ.ಆದುದರಿಂದ ಪತ್ರಿಕೋದ್ಯಮದ ಒಳಗಿನ ಬ್ರಷ್ಟಾಚಾರಗಳು ಉಳಿದೆಲ್ಲವುಗಳಂತೆ ಅಷ್ಟು ಸುಲಭದಲ್ಲಿ ಸಮಾಜದ ಮುಂದೆ ಬರಲಾರದು.ಗುಮ್ಮನಂತೆ ಭಾಸವಗುತ್ತಿರುವ ಕನ್ನಡ ಪತ್ರಿಕೋದ್ಯಮ ಈ ಎಲ್ಲ ಮಜಲುಗಳನ್ನು ದಾಟಿ ತನ್ನ ಮನೆ ಕಸ ಗುಡಿಸಿ ಸ್ವಚ ಗೊಳಿಸಲಿ, ಯಾವತ್ತಾದರೂ ಸತ್ಯ ಹೊರಗೆ ಬಂದೆ ಬರುತ್ತದೆ,ಪತ್ರಿಕೋದ್ಯಮದಲ್ಲೂ ಪತ್ರಿಕಾ ಸ್ವಾತಂತ್ರ್ಯ ಮೆರೆಯುತ್ತದೆ ಎಂಬ ಆಶಯಗಳನ್ನು ಇಟ್ಟುಕೊಂಡು ಮುಂದುವರಿಯುವದು ಅಷ್ಟೇ ಸದ್ಯಕ್ಕೆ ನಮ್ಮ ಮುಂದಿರುವ ದಾರಿ.

ನಿಮ್ಮವ..................
ರಾಘವೇಂದ್ರ ತೆಕ್ಕಾರ್