Saturday, August 27, 2011

ಹೆಗ್ಡೆ ತನಗೆ ಕಿರಿಕ್ ಮಾಡ ಬಂದ ಕುಮಾರ ಅಣ್ಣನ್ ಬುಡಕ್ಕೆ ಕೈ ಹಾಕಿದ್ರಂತೆ!!!!!!!!

              .         ಸಂತೋಷ್ ಹೆಗ್ಡೆ ತಮ್ಮ ಬಗ್ಗೆ ಕಿರಿಕ್ ತೆಗ್ದ ಕುಮರಸ್ವಾಮ್ಯಿಗೆ ಸರಿಯಾದ ಗೂಸಾ ಈ ದಿನ ಫ್ರೀಡಂ ಪಾರ್ಕ್ನಾಗೆ ಕೊಟ್ಟವ್ರೆ ಅನ್ನ ಸುದ್ದಿ ಬಂದೈತೆ.ಅಷ್ಟಕ್ಕೂ ಕಿರಿಕ್ಕ್ ಏನೆಂದರೆ ಈ ಕುಮಾರ್ಸ್ವಾಮಿ , "ಸಂತೋಷ್ ಹೆಗ್ಡೆಯವರು ತಮ್ಮ ರಾತ್ರಿ ಕೆಲಸಕ್ಕೆ ಎಷ್ಟು ಖರ್ಚು ಮಾಡುತ್ತಾರೆ. ಅದರ ಲೆಕ್ಕ ಕೊಡ್ತಾರಾ? ಅಕ್ರಮ ಸಂಪಾದಿಸಿದ ಹಣವನ್ನು ರಾತ್ರಿ ಚಟುವಟಿಕೆಗಳಿಗೆ ವಿನಿಯೋಗಿಸುತ್ತಿದ್ದಾರಾ? ಅಂದಿತ್ತಂತೆ.
 ಅದಕ್ಕೆ ಸಂತೋಷ್ಹೆಗ್ಡೆ "ನನಗೆ 42 ವರ್ಷಗಳಿಂದ ಇರುವವಳು ಒಬ್ಬಳೇ ಹೆಂಡತಿ, ಒಂದೇ ಸಂಸಾರ. ನನಗಿರುವುದು ಒಂದೇ ಮನೆ. ನನಗೆ ರಾತ್ರಿ ಕೆಲಸ ಮಾಡುವ ಅವಶ್ಯಕತೆ ಇಲ್ಲವೇ ಇಲ್ಲ. ನನಗೆ ಯಾವುದೇ ಕೆಟ್ಟ ಚಟಗಳೂ ಇಲ್ಲ. ಇಲ್ಲಿಯವರೆಗೆ 1 ರು. ಕೂಡ ಲಂಚ ಪಡೆದಿಲ್ಲ."ಅಂತ ಅನ್ಬೇಕೆ,ಈ ಸ್ವಾಮಿ ರಾಧಿಕಾ  ಹಾಗು ತನ್ನ ಪಾಪು ನೆನಸ್ಕೊಂಡು ಮುಕ ಮೂತಿ ಒರೆಸ್ಕೊಂದು ಕುತಿದೆಯಂತೆ.ಅಲ್ಲ ಒಂದು ಸ್ವಲ್ಪ ದುಬಾರಿ ಎಣ್ಣೆ ಏನೋ ರಾತ್ರಿ ಊಟಕ್ಕ್ ಮುಂಚೆ ಟಾನಿಕ್ ತೆಗೊಳ್ಳ ವಿಸಿಯ ತೆಗೊಂಡು ಭಜನೆ ಮಾಡೋಣ ಅನ್ಕೊಂಡಿದ್ದಕ್ಕೆ ನನ್ನ ಬುಡಕ್ಕೆ ಕೈ ಹಾಕಿ ಏಳಿತಾರಪ್ಪೋ ಈ ಹೆಗ್ಡೆ ಅಂತ ತಲೆ ಮೇಲೆ ಕೈಯ ಹೊತಕೊಂಡು ಕುಂತೈತೆ ಅಂತೆ ಕುಮಾರ.


ಅಲ್ಲ ಯಾಕ್ಬೇಕಿತ್ತು ಅಂತೀನಿ ತನ್ನದೇ ಹರ್ದು ಉರ್ರ್ ಬಾಗ್ಲಗಿರ್ಬೇಕದ್ರೆ ಅಂತ ಸಿದ್ದನ್ ಹತ್ರ ಕೇಳಲಾಗಿ ಸಿದ್ದ ವಿಸಿಯಕ್ಕೆ ಎಂಟ್ರಿ ಕೊಟ್ಟ. ನಿಂಗ್ ಗೊತ್ತಾಗಲ್ಲಲೇ ಅವೆಲ್ಲ ಒಂದು ರಾಜಕೀಯ ತಂತ್ರ ಅಂದಾ,  ಸಿದ್ದ ಮುಂದುವರಿಸಿ ಈ ಕುಮಾರ
ಎಲ್ಲರೆದುರಿಗೆ ನಾ ಸಾಚಾ ಅಂತ ತೋರಿಸ್ಕೊಂದಿಲ್ವೇನ್ಲ? ಅವ್ರ ಮಾಗ್ನೇ ಈ ಹೆಗ್ಡೆ ಗಣಿ ಆರೋಪ ಹೊರಿಸಿಲ್ವೇನ್ಲ? ಈಗಲೋ ಆಗಲೋ ಅಂತ ಜೈಲ್ಗೆ ಹೋಗ್ತೀನಿ ಅನ್ನೋ ಪರಿಸ್ಥಿತಿ ತಂದ ಹೆಗ್ಡೆ  ಮ್ಯಾಗೆ ಕೋಪ್ ದಿಂದ  ಮಾತಿಗ್ ಬಂದು ಏನೋ ಅನ್ದೈತೆ.ಬದಲಾಗಿ ಸರಿಯಾಗಿ ಹೆಗ್ದೆರಿಂದ ಮಾತಿನ ತಪರಾಕಿ ತಿನ್ದೈತೆ ಕುಮಾರ ಅಷ್ಟೇ ಕಣ್ಲ ವಿಸಿಯ ಅಂದ. ನಮ್ಮ್ಜೋತೇನೆ ಕಟ್ಟೆ ಕಡೆಗ್ ಹೊಂಟ ಅಜ್ಜ ಒಂದು ಸಮಾದಾನ!!!!! ಅಂತ ಅನ್ತು ,ಏನಜ್ಜ ?ಅಂದೇ,ಅದೇ ಕುಮಾರ ಜೈಲ್  ಕಡೆ ತನ್ನ ಹೆಂಡ್ತಿ  ಕೂಡೆ ಹೋಗ್ತನಲ್ಲ ಪಾಪ ಯೆಡಿಯುರಪ್ಪಂಗೆ ಆ ಭಾಗ್ಯಾನು ಇಲ್ಲವಲ್ಲ !!!!!!!!ಅಂತ ಕಣ್ಣು ಮಂಜು ಮಾಡ್ಕೊಂಡ್ತು. 
ಸಿದ್ದ, ಪಾಪ........ ರಾಧಿಕಾ ಹಾಗು ಶೋಬಕ್ಕನ್ ಕತೆ ಏನೋ? ಅಂತ ನನ್ನೇ ಪ್ರಶ್ನೆ ಮಾಡ್ದ.
 ಇಂತೂ ಸಿದ್ದನ್ ಗೆಳೆಯ ರಾಘ್ಯ.

No comments:

Post a Comment