Thursday, July 5, 2012

ವೇರ್ ಆರ್ ಯೂ ಸಂಪಾದಕೀಯಾ??????

ಕನ್ನಡಪ್ರಭದ ಸಂಪಾದಕರೂ ಆದ ವಿಶ್ವೇಶ್ ಭಟ್ ರವರು ಇತ್ತೀಚೆಗೆ ಆರೆಷ್ಟ್ ಆಗಿದ್ದರೂ.ಮಾಧ್ಯಮಗಳಲ್ಲಿ ಅದು ದೊಡ್ಡ ಸುದ್ದಿಯೆ ಆಗಿಲ್ಲ ಬಿಡಿ, ಬದಲಾಗಿ ರವಿ ಬೆಳೆಗೆರೆಯವರಿಗೆ ಆಹಾರ ಸಿಕ್ಕಿಂದಂತಾಗಿತ್ತು.ಇರಲಿ!!! ಇವತ್ತೂ ಮೀಡೀಯಾ ಅನ್ನುವದೂ ಕೆಲವೂ ಮೂಲಭೂತ ಹಿತಾಸಕ್ತಿಗಳ ಕೈಗೆ ಸಿಕ್ಕಿ ನಲುಗುತ್ತಿದೆಯೋ ಅನ್ನುವದೂ ಯಾಕೋ ಪದೆ ಪದೆ ಬರುವ ಸಂದೇಹ.ಹೀಗಿರಬೇಕಾದರೇನೆ ಮೀಡಿಯಾ ವಿಷಯ ಬಂದಾಗ ಯಾಕೋ ಮತ್ತೆ ಮತ್ತೆ ನೆನಪಾಗೋದು ಇತ್ತೀಚೆಗೆ ಮಂಕಾಗಿ ಕುಳಿತಿರುವ ಸಂಪಾದಕೀಯಾ ಬ್ಲಾಗ್. ವಿಷಯ ಸತ್ಯಾ ಸತ್ಯತೆಯನ್ನೂ ಎಳೆದು ತರುತಿದ್ದ ರೀತಿಯೆ ಅಂತಿದ್ದ ಬ್ಲಾಗ್ ನೆನಪಾಗೋದು ಸಹಜವೆ ಹೌದು. ವರ್ತಮಾನ , ಕಾಲಂ ೯ ಅನ್ನುವ ಬ್ಲಾಗ್ ಗಳೂ ಇದ್ದರೂ ಕೂಡ ಸಂಪಾದಕೀಯ ನೆನಪಾಗೋದು ಯಾಕೆಂದರೆ ಮೀಡೀಯಾದೊಳಗಿನ ಹುಳುಕುಗಳನ್ನು ಎಳೆತರುವದಕ್ಕೆ ಪ್ರಾಧಾನ್ಯತೆ ಕೊಟ್ಟುದುದರಿಂದ.ಇದೊಂದು ತರ ಭೂತಕನ್ನಡಿಯೊಳಗಿನ ಹುಳುಕಿನ ಕಣಗಳನ್ನು ಹುಡುಕುವ ಕನ್ನಡಿಯಾಗಿತ್ತೂ.ಸಂಪಾದಕೀಯ ಮಂಕಾದ ದಿನಗಳಿಂದ ಮೀಡೀಯಾ ಹೇಳಿದ್ದೆ ನಿಜ ಎಂದು ನಂಬುವ ಪರಿಸ್ಥಿತಿಗೂ ಒಗ್ಗದೆ ಈ ಕಡೆ ಅದರೊಳಗಿನ ಹುಳುಕುಗಳನ್ನೂ ಪರಾಂಬರಿಸಲೂ ಆಗದೆ ನನ್ನಂತವನೂ ಮಂಕು. ಕೆಲವೊಂದು ಹುಳುಕುಗಳೂ ನಮ್ಮರಿವಿಗೆ ಬಂದರೂ ಬಿಚ್ಚಿಲಿಡಲಾಗದ ಪರಿಸ್ಥಿತಿ, ನೇರಾ ನೇರಾ ಎದುರು ಹಾಕಿಕೊಳ್ಳಲಾಗದ ನಮ್ಮೊಳಗಿನ ಕಪಟತನ,ಸ್ವಾರ್ಥತೆಯ ಮೆರೆಯುವಿಕೆ ಅಂತಲಾದರೂ ಅಂದುಕೊಳ್ಳೋಣವೆ??.ಇರಬಹುದು.


ಅನಾಮಿಕನಾಗಿದ್ದೂಕೊಂಡೆ ಸಂಪಾದಕೀಯಾ ಬ್ಲಾಗ್ ತೆರೆದಿಟ್ಟ ಸತ್ಯಗಳೆಲ್ಲವೂ ನಿರ್ಭಿಯತೆಯಿಂದ ಕೂಡಿದ್ದೂ ಮತ್ತು ವಾಸ್ತವ ಸತ್ಯಗಳಾಗಿತ್ತು.ಬಹುಶಃ ಆ ಅನಾಮಿಕತನ ಈ ಶಕ್ತಿಯನ್ನೂ ಅದರ ಬ್ಲಾಗ್ ನಿರ್ವಾಹಕನೀಗೆ ಕೊಟ್ಟಿರಬಹುದು, ನಾನೂ ಯಾವಾಗಲೂ ಹೇಳುತಿದ್ದ ಮತ್ತು ನಂಬಿಕೊಂಡಿದ್ದು.... ಮೀಡಿಯಾ ತನ್ನ ಹಿಂದಿರುವ ಕೈಗಳನ್ನೂ ತೋರಿಸದೆ ಆ ಮೀಡಿಯಾ ವಿಷಯಗಳು ಗ್ರಾಸಗೊಳ್ಳಲಾರವೂ ಎಂದು. ಆದರೆ ಇದೂ ಸಂಪೂರ್ಣ ಸುಳ್ಳು ಎಂಬುದನ್ನೂ ತೋರಿಸಿಕೊಟ್ಟಿದ್ದೂ ಸಂಪಾದಕೀಯಾ!!! ಕಾರಣ ವಿಷಯ ಸಾರಯುತವಾಗಿದ್ದಾಗ ವಿಷಯ ಪ್ರಾಮುಖ್ಯತೆ ಪಡೆಯುವದೆ ಹೊರತಾಗಿ ಅದರ ಹಿಂದಿರುವ ಕೈಗಳು ಕೇವಲ ಮೆಚ್ಚುವದಕ್ಕೆ ತಿಳಿದುಕೊಳ್ಳುವ ಕುತೂಹಲಕ್ಕಾಗಿ ಮಾತ್ರ ಸೀಮಿತಗೊಳ್ಳುತ್ತದೆ. ಸಂಪಾದಕೀಯದಿಂದ ನಾನು ಈಗಲೂ ನಿರೀಕ್ಷಿಸೋದು ಅದು ತೆರೆದಿಡಬಹುದಾದ ಸತ್ಯಗಳಿಗೆ ಮತ್ತೂ ಚರ್ಚೆಗಳಿಗಾಗಿಯೆ ಹೊರತು ಅದರ ಹಿಂದಿರುವ ಕೈಗಳನ್ನೂ ನೋಡುವದಕ್ಕಾಗಿಯಲ್ಲ. ಆದರೇನೂ ಮಾಡೋಣ ಇದು ಹಂಬಲವಾಗಿ ಉಳಿದಿದೆ ಹಾಗೂ ಈ ಹಂಬಲ ಅಳಿಯದೆ ಇರುತ್ತೆ ಕೂಡ.

೨೨ ಡಿಸೆಂಬರ್ 2011 ನಲ್ಲಿ ತನ್ನ ಒಂದು ವರುಷವನ್ನು ಪೂರೈಸುದುದಕ್ಕಾಗಿ ಸಂಪಾದಕೀಯದಲ್ಲಿ ಒಂದು ಪೋಷ್ಟ್ ಬೀಳುತ್ತೆ ಇದಾದ ನಂತರ ಕೊನೆಯ ಪೋಷ್ಟ್ ಕಂಡಿದ್ದು ೨ ಫೆಬ್ರವರಿ ೨೦೧೨. ಅಲ್ಲಿಂದ ನಂತರ ಒಂದೆ ಒಂದು ಪೋಷ್ಟ್ ಬಿದ್ದಿಲ್ಲ!!! ಕಾರಣಗಳೂ ಗೊತ್ತಿಲ್ಲ.ವರುಷದ ಪೋಷ್ಟಲ್ಲಿ ಸಂಪಾದಕೀಯನೆ ಹೇಳಿಕೊಂಡಂತೆ "ಸಾರ್ವಜನಿಕ ವಿಮರ್ಶೆ, ಟೀಕೆ, ಟಿಪ್ಪಣಿಗಳಿಂದ ಮೀಡಿಯಾ ಕ್ಷೇತ್ರವೊಂದು ಹೊರಗೆ ಉಳಿಯಬಾರದು ಎಂಬುದು ನಮ್ಮ ಕಾಳಜಿಯಾಗಿತ್ತು. ಆತ್ಮವಿಮರ್ಶೆ-ವಿಮರ್ಶೆಗಳಿಲ್ಲದ ಕ್ಷೇತ್ರಗಳು ಸರ್ವಾಧಿಕಾರದ ರೋಗವನ್ನು, ಮೂಲಭೂತವಾದಿ ಗುಣಗಳನ್ನು ಆವಾಹಿಸಿಕೊಂಡುಬಿಡುತ್ತವೆ. ಅದು ಸಮಾಜಕ್ಕೆ ಯಾವತ್ತೂ ಅಪಾಯಕಾರಿ. ಮೀಡಿಯಾವನ್ನು ಮೀಡಿಯಾಗಳೇ ವಿಮರ್ಶಿಸುವ ಆರೋಗ್ಯಕರ ಪರಿಪಾಠವೂ ಎಲ್ಲೂ ಕಾಣದ ಹಿನ್ನೆಲೆಯಲ್ಲಿ ನಾವು ಒಂದು ಸಣ್ಣ ಪ್ರಯತ್ನ ಶುರು ಮಾಡಿದೆವು".ಎಂದು ತನ್ನುದ್ದೇಶವನ್ನೂ ತಿಳಿಸುತ್ತಾ...........
"ಒಂದು ಸಮಾಧಾನದ ಸಂಗತಿಯೆಂದರೆ ಎಷ್ಟೋ ಸಂದರ್ಭಗಳಲ್ಲಿ ನಾವು ಬರೆದದ್ದು, ನೀವು ಬರೆದದ್ದು ಸಂಬಂಧಪಟ್ಟವರನ್ನು ನೇರವಾಗಿ ತಲುಪಿದವು. ಕ್ರಿಯೆಗೆ ಪ್ರತಿಕ್ರಿಯೆಗಳು ಆರಂಭಗೊಂಡವು. ಸಣ್ಣಪುಟ್ಟ ಬದಲಾವಣೆಗಳು ನಮ್ಮ ಕಣ್ಣೆದುರಿಗೇ ಘಟಿಸಿದವು. ಸಂಪಾದಕೀಯದ ಚರ್ಚೆಗಳು ಮೀಡಿಯಾ ಸಂಸ್ಥೆಗಳ ಮ್ಯಾನೇಜ್ ಮೆಂಟ್ ಸಭೆಗಳಲ್ಲೂ ಚರ್ಚೆಯಾಗತೊಡಗಿದವು.
ಇದೆಲ್ಲ ನಡೆಯುತ್ತಿದ್ದಂತೆ ನಮ್ಮ ಜವಾಬ್ದಾರಿಗಳೂ ಹೆಚ್ಚುತ್ತ ಹೋದವು. ಈ ಒಂದು ವರ್ಷದಲ್ಲಿ ನಾವು ಬರೆದ ಒಂದೇ ಒಂದು ಲೇಖನವನ್ನೂ ಡಿಲೀಟ್ ಮಾಡಿಲ್ಲ. ವೈಯಕ್ತಿಕ ತೇಜೋವಧೆ, ಕಪೋಲ ಕಲ್ಪಿತ ಆರೋಪಗಳು, ಪೂರ್ವಾಗ್ರಹ ಪೀಡಿತ ನಿಲುವುಗಳಿಂದ ಮುಕ್ತವಾಗಿಯೇ ಬರೆದ ಪರಿಣಾಮ ನಾವು ಬರೆದ ಯಾವುದನ್ನೂ ಹಿಂದಕ್ಕೆ ಪಡೆದುಕೊಳ್ಳುವಂಥ ಸಂದರ್ಭವೇ ಸೃಷ್ಟಿಯಾಗಲಿಲ್ಲ. ಈ ಎಚ್ಚರ ಮತ್ತು ಪ್ರಜ್ಞೆ ಇದ್ದ ಪರಿಣಾಮವಾಗಿಯೇ ಇದನ್ನು ನೀವು ನಿಮ್ಮದೆಂದು ಭಾವಿಸಿದಿರಿ. ಸದಾ ನಮ್ಮ ಜತೆ ಹೆಗಲಿಗೆ ಹೆಗಲು ಕೊಟ್ಟು ನಿಂತಿರಿ.
ಮೀಡಿಯಾ ವಿಶ್ಲೇಷಣೆ ಒಮ್ಮೊಮ್ಮೆ ಮಗ್ಗುಲು ಬದಲಿಸಿ ಸಾಮಾಜಿಕ ಸಮಸ್ಯೆಗಳ ಕುರಿತ ಸಾಕಷ್ಟು ಚರ್ಚೆಗಳೂ ಇಲ್ಲಿ ನಡೆದಿವೆ. ಒಮ್ಮೊಮ್ಮೆ ಇದು ಪ್ರಜ್ಞಾಪೂರ್ವಕವಾಗಿಯೂ, ಮತ್ತೆ ಕೆಲವೊಮ್ಮೆ ಅಪ್ರಜ್ಞಾಪೂರ್ವಕವಾಗಿಯೂ ನಡೆದಿದೆ. ಒಟ್ಟು ಫಲಿತ ಸಮಾಧಾನ ತಂದಿದೆ. ಕಪಟ ಜ್ಯೋತಿಷಿಗಳ ವಿರುದ್ಧ ನಡೆದ ಅಭಿಯಾನ, ಮಲ ಹೊರುವ ಪದ್ಧತಿ ವಿರುದ್ಧ ನಡೆದ ಜಾಗೃತಿ ಕಾರ್ಯ, ಮಡೆಸ್ನಾನ-ಪಂಕ್ತಿಬೇಧ-ಪ್ರಾಣಿಬಲಿ-ಭ್ರಷ್ಟಾಚಾರ ಇತ್ಯಾದಿ ವಿಷಯಗಳ ಕುರಿತ ಚರ್ಚೆಯೂ ಆರೋಗ್ಯಕರವಾಗಿ ನಡೆಯಿತು. ಕೆಲವೊಮ್ಮೆ ನಾವು ಬರೆದದ್ದನ್ನು ಆ ಕ್ಷಣಕ್ಕೆ ಒಪ್ಪಿಕೊಳ್ಳಲು ಸಿದ್ಧರಿಲ್ಲದ ಓದುಗರು ಕ್ರಮೇಣ ಹೌದು, ನೀವು ಬರೆದಿದ್ದು ಸರಿಯಾಗಿತ್ತು ಎಂದು ಒಪ್ಪಿಕೊಂಡದ್ದನ್ನು ನಾವು ಗಮನಿಸಿದ್ದೇವೆ". ಎಂದೂ ತನ್ನ ಸಫಲತೆಯನ್ನೂ ಈ ತೆರನಾಗಿ ಈ ಪೋಷ್ಟ್ ತೆರೆದಿಡುತ್ತದೆ.

ಮೀಡಿಯಾ ಕುರಿತು ಸಾಕಷ್ಟು ಚರ್ಚೆಗಳನ್ನೂ ಮಾಡಿದ್ದೇವೆ ಇತರ ವಿಷಯಗಳನ್ನೂ ಕೈಗೆತ್ತಿಕೊಳ್ಳುತ್ತೇವೆ ಆದರೆ ನಮ್ಮ ಅದ್ಯತೆ ಮೀಡಿಯಾ ಅಗಿರುತ್ತದೆ ಅಂದ ಸಂಪಾದಕೀಯದ ಆ ಪೋಷ್ಟಿನಲ್ಲಿ ನನ್ನಂತವ ಕಂಡ ನಿರೀಕ್ಷೆಗಳೂ ಹಲವಾರೂ!!!, ಆದರೆ  ೨ ತಿಂಗಳ ನಂತರದಲ್ಲಿ ಯಾಕೋ ಸಂಪಾದಕೀಯಾ ಪತ್ತೆನೆ ಇಲ್ಲ, ಹೀಗಾಗಬಾರದಿತ್ತು. ಆದರೆ ಒಂದಂತೂ ಸತ್ಯ ಸಂಪಾದಕೀಯಾ ಹುಟ್ಟು ಹಾಕಿದ ಚರ್ಚೆಗಳೂ ಅದು ಸೂಚಿಸಿದ ದೃಷ್ಟಿಕೋನ ಸಾಯಲ್ಲ. ಮತ್ತೆ ಕೊಡವೆದ್ದು ಬಾ ಸಂಪಾದಕೀಯಾ ಅನ್ನುತ್ತಲೆ ಈ ತೆರನಾದ ಶಕ್ತಿಯುತ ಪರ್ಯಾಯ ಮಾಧ್ಯಮ ಸಮಾಜದ ಒಳಿತಿಗಾಗಿ ಇನ್ನಷ್ಟೂ ಮತ್ತಷ್ಟೂ ಹುಟ್ಟಲಿ ಅನ್ನುವದನ್ನೂ ಆಶಿಸೋಣ.


ಕೊನೆ ಪಂಚ್:-"ಸಂಪಾದಕೀಯದ ಗಂಭೀರ ಲೇಖನಗಳನ್ನು ಪುಸ್ತಕರೂಪದಲ್ಲಿ ತರುವ ಯೋಜನೆಯೂ ಇದೆ. ಇದಕ್ಕಾಗಿ ಪ್ರಕಾಶಕರ ಬೆಂಬಲವನ್ನು ಯಾಚಿಸುತ್ತಿದ್ದೇವೆ. ಪ್ರಕಾಶಕರು ಮುಂದೆ ಬಂದಲ್ಲಿ ಈ ಕಾರ್ಯವೂ ನಡೆಯಲಿದೆ."
-ಸಂಪಾದಕೀಯ.
ಪುಸ್ತಕ ಬಿಡುಗಡೆಯ ದಿನವಾದರೂ ತಮ್ಮ ಮುಖಾರವಿಂದದ ದರ್ಶನ, ಆ ಕೀ ಬೋರ್ಡ್ ಕುಟ್ಟುವಿಕೆಯ ಕೈಗಳ ಸ್ಪರ್ಷವನ್ನು ನಿರೀಕ್ಷಿಸಬಹುದೇನೊ??.ಸಂಪಾದಕೀಯ ಎಚ್ಚರ!!!ಆ ದಿನ ನಿಮ್ಮ ಕೈ ಬೆಚ್ಚಗಾಗಿಸುವ ಜನರೂ ಇರಬಹುದು :)


ಸಂಪಾದಕೀಯಾ ಬ್ಲಾಗ್ ಕೊಂಡಿಗೆ ಇಲ್ಲಿ ಕ್ಲಿಕ್ಕಿಸಿ

3 comments:

  1. ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲವಿದೆ ಮುಂದುವರೆಸಿ.
    ರಾಜು ವಿನಯ್ ದಾವಣಗೆರೆ
    rajudavanagere@gmail.com

    ReplyDelete
  2. ಪುಸ್ತಕ ರೂಪದಲ್ಲಿ ಹೊರತರಲು ಪ್ರಕಾಶಕರನ್ನು ಕಾಯಬೇಕಾಗಿಲ್ಲ. ಪ್ರಯತ್ನಪಟ್ರೆ ನೀವೇ ಹೊರತರಬಹುದು ಮುದ್ರಣಕ್ಕೆ ಸಂಬಂಧಿಸಿದ ವಿವರಗಳನ್ನು ನನ್ನಿಂದ ಸಹಕಾರ ಪಡೆಯಬಹುದು.

    ReplyDelete
  3. ರಾಘವೇಂದ್ರ, ಚೆನ್ನಾಗಿ ಬರೆದಿದೀರಿ. ನಾನೂ ಕೂಡ ಸಂಪಾದಕೀಯವನ್ನ ಮಿಸ್ ಮಾಡ್ಕೋತಿದ್ದೆ. ಸುದ್ದಿಮಾಧ್ಯಮ ಪ್ರಪಂಚದ ಲೇಟೆಸ್ಟ್ ಆಗುಹೋಗುಗಳು, ಒಳ್ಳೆಯ ವಿಚಾರ-ವಿನಿಮಯ, ಬಿಸಿಬಿಸಿ ಚರ್ಚೆ ಇದನ್ನೆಲ್ಲ ಬಹಳ ಡಿಗ್ನಿಟಿಯಿಂದ ನಿಭಾಯಿಸಿಕೊಂಡು ಹೋಗುತ್ತಿದ್ದ ಅಪರೂಪದ ತಾಣ. ನಿಮ್ಮ ಜತೆ ನನ್ನದೂ ಒಂದು ವಿನಂತಿ: ವಾಪಸ್ ಬನ್ನಿ ಸಂಪಾದಕೀಯದ ಸಂಪಾದಕರೆ!! - ಟೀನಾ.

    ReplyDelete