ಕಟ್ಟೆ ಪುರಾಣಕ್ಕೆ ಕೊನೆ ಎಲ್ಲಿ ??? ಬೇಡವೆಂದರೂ ಮಾತಾಡಕ್ಕೆ ವಿಷಯವಾಗಬಲ್ಲ ಹಾಳು ಹರಟೆ ಸುದ್ದಿಗಳಿಗೆ ಬರವಿಲ್ಲ. ಹಳ್ಳಿಗರು ಆದರು ರಾಜಕೀಯ ಸುದ್ದಿಗಳಿಗೆ ಚರ್ಚೆಗಳು ತಮ್ಮದೇ ರೀತಿಯಲ್ಲಿ ಒಕ್ಕಣೆಗಳನ್ನು ಒಪ್ಪಿಸೋ ಮಂದಿ ಬಹಳ.ಇಂತಿಪ್ಪ ಹಳ್ಳಿಯ ಕಟ್ಟೆ ಮೇಲೆ ಇದೀಗ ಯಡಿಯೂರಪ್ಪ, ಕಟ್ಟಾ , ಕುಮಾರ ಹೀಗೆ ರಾಜ್ಯ ನಾಯಕರುಗಳದೆ ಸುದ್ದಿ.

ಹಿಂಗೆ ವಿಸಿಯ ಮುಂದುವರಿತಿರಬೇಕಾದರೆ ಕಟ್ಟೆ ಪಕ್ಕ ಕಟ್ಟಿದ್ದ ವಾರಿಜಳ ನಾಯಿ ಗೂಳಿಡ ಪ್ರಾರಂಬಿಸಿತು , ವಾರಿಜ ಥೂ.....!!! ಇದ್ಯಾಕೆ ಹಿಂಗೆ ಅರಚುತ್ತೆ ಎಂದು ಚಿರಿ ಪಿರಿ ಗುಟ್ಟುತ್ತಲೇ ತನ್ನ ಬುಟ್ಟಿ ಮೊಡೆಯಲು ತಂದ ಕಾಡು ಬೀಳ ಹೊರೆಯನ್ನು ದಬಾರಂತ ನೆಲಕ್ಕೆ ಒಗೆದಿದ್ದಳು, ಅಲ್ಲೇ ಪಕ್ಕದಲ್ಲೇ ಹೂಜಿಯಲ್ಲಿ ತುಂಬಿಸಿ ಇಟ್ಟಿದ್ದ ನೀರನ್ನು ಗುಟುಕರಿಸಿ ತನ್ನ ಸೀರೆ ಸೆರಗಿಂದ ಗಾಳಿ ಬೀಸುತ್ತಾ ಕಟ್ಟೆ ಮಂದಿ ಚರ್ಚೆ ಆಲಿಸ ತೊಡಗಿದಳು.ಇದೇನ್ಲೆ ಸಿದ್ದ ನಮ್ಮ ಕುಮಾರನ್ಗೆ ಭೊಮಿ ಗುಳುಂ ಮಾಡಿದ ಆರೋಪದೊಂದಿಗೆ ಬುಡಕ್ಕೆ ತಂದಿಡುವ ಕೇಸು ಒಂದು ತಗುಲಿ ಹಾಕೊಂಡಿದೆಯಲ್ಲ ಅಂದ ವೆಂಕ. ಸಿದ್ದ ಯಾಕೋ ಸಿರಿಯಸ್ ಆಗಿ ನಮಗ್ಯಾಕಲೆ ಹೋಗ್ ಬರೋ ಅವ್ರ ಉಸಾಬರಿ, ಏನಾರ ಮಾಡ್ಕೊಳ್ಳಿ ಪಾಪ ಮಗು ಐತೆ ಅದ್ರ ಬಗ್ಗೆ ಯೋಚನೆ ಮಾಡ್ಲ. ವಿಸಿಯ ಸಿಕ್ತು ಅಂತ ಹೆಂಗೆಂಗೋ ಮತೊಡಿದು ಯಾಕ್ಲ, ಬಿಟ್ಟಾಕಲ ಏನಾರ ಮಾಡ್ಕೊಳ್ಳಿ ,ಅವರವರ ಸಂಸಾರ , ಮಗ ಸೊಸೆ ಇಬ್ಬರು ಜೈಲಿಗೆ ಹೋದ್ರೆ ದೊಡ್ಡ ಗೌಡ್ರ ನೋಡ್ಕೋಳ್ಳಕ್ಕೆ ಒಂದು ಜನ ಆಯಿತು ಅಂತ ಸಂತೋಷ ಪಡ್ಲ, ಥುಕ್ಕ್.....!! ಅಂತ ಎಲೆ ಅಡಿಕೆ ಉಗಿದು ಸೆರಗಿಂದ ಬಾಯಿ ಒರೆಸಿಕೊಂಡಿದ್ಲು ವಾರಿಜ.ನೋಡ್ರಲೇ( ಕಟ್ಟೆ ಮಂದಿಯನ್ನು ಉದ್ದೇಶಿಸಿ ) ಜೈಲಿಗೆ ಹೋಗೋ ಲಿಸ್ಟ್ ಬಹಳ ದೊಡ್ದದಿದಿಯಂತೆ ಅದಕ್ಕೆ ವಿದಾನ ಸೌಧದಿಂದ ಒಂದು ಬಸ್ ಟ್ರಿಪ್ ಹಾಕೊತ್ತರಂತೆ ಹಂಗೆ ಕೆಲವರಿಗೆ ಅಲ್ಲೇ ಸೆಟ್ಟಲ್ ಆಗಕ್ಕೆ ಹೊಗವ್ರು ಹಾಗು ಅಲ್ಲಿರುವವರನ್ನು ವಿಚಾರಿಸಿಕೊಂಡು ಬರೋವರಿಗೂ ಅನುಕೂಲ ಅಗ್ಲಿಂತ .ಒಟ್ಟಲ್ಲಿ ತಿಹಾರ್,ಚಂಚಲಗುಡು,ಪರಪ್ಪನ ಅಗ್ರಹಾರ ಹೊಸ ಆಕರ್ಷಣಿಯ ಸ್ಥಳಗಳಾಗಿವೆ ನೋಡ್ರಿ ಅಂದ ಸಿದ್ದ .ಈ ನಡುವೆ ಈ ಬಿ ಜೆ ಪಿ ಪಕ್ಷದ ಹಿರಿಯ ರಥ ಹೊಂಟ್ಸನಲ್ಲ ಯಾಕ ಬೇಕಿತ್ತು ಇವಂಗೆ ,ನನ್ನಗೆ ಅರಾಂಸೆ ಕೂತ್ಕೋ ಬಹುದಿತ್ತು, ಸಿವನೇ ಏನೆಲ್ಲ ನೋಡಬೇಕೋ ಅಂತ ನಿಟ್ಟುಸಿರು ಬಿಟ್ಟಿತು ಊರ ಹಿರಿಯ ಅಜ್ಜ ಕಟ್ಟೆ ಮರಕ್ಕೆ ಒರಗುತ್ತಾ..........
No comments:
Post a Comment