Tuesday, February 7, 2012

ಯಪ್ಪಾ ಕ್ಯಾಮಾರ ಕಣ್ಣುಗಳಿಗೆ ಸಿಗೆ ಬಿದ್ದ...


ಥೋ .......ಒಡುಸುರ್ಲಾ ದರಬೇಸಿನಾ ಅಂತಾ ಕಿರುಚಾಡುತ್ತ ಯಾವುದೋ ನ್ಯೂಸ್ ನೋಡ್ ಬಂದ ಮಾದ ಕಿರುಚಹತ್ತಿದ್ದ.ಯಾಕ್ಲ ಏನಾತು ಅಂದೆ?ಬಾಯೋಳಗೆ ತುಂಬಿಸಿಟ್ಟ ವೀಳ್ಯರಸವನ್ನ ಕ್ಯಾಕ್ ಥೋ ಅಂತುಗಿದು ಭುವಿಯಲ್ಲಿ ಬಯಸದೆ ಚಿತ್ತಾರ ಮೂಡಿಸಿದ  ಮಾದ ಒದರಕ್ಕೆ ಶುರು ಹಚ್ಚ್ ಕೊಂಡ. 
ಅಲ್ಲಲೆ ವಿಧಾನ ಸೌಧ ಅನ್ನೋದು ಏನ್ಲ? ಆದು ಸರ್ಕಾರದ ಹೃದಯ ಭಾಗ ಅಂತ ನಾನಂದೆ. ಸರಿ ತಿಳಿದೋನು ನೀನ್ ಹೇಳಪ್ಪ ಅಲ್ಲಿ ಎರಡೆರಡು ಮನೆ ಅಂದ್ರೆ ಅದೇ ವಿಧಾನ ಸಭೆ ,ವಿಧಾನ ಪರಿಷತ್ತು ಅಂತ ಐತೇನ್ಲಾ? ಹೂಂ ಇದೆ ಅಂದೆ.ಅಲ್ಲಿ ರಾಜ್ಯದ ಮಂತ್ರಿಗಳು ಸದಸ್ಯರು ಸಚಿವರು ರಾಜ್ಯದ ಸಮಸ್ಯೆ ಬಗ್ಗೆ ಚರುಚೆ ನಡೆಸ್ಬೇಕು ತಾನೆ.? ಹೌದಪ್ಪಾ ಅಹುದು ಏನಾತೀಗ ಅಂದೆ. ಥೂ ದರಬೇಸಿ .................... ಇವ್ನನ್ಯಾಕೆ ಬೆದೆಗೆ ಬಂದೊನಂಗೆ ಆಡ್ದಾ ಈ ವಯಸ್ಸಿನಾಗು ಹರುಕು ಕಚ್ಚೆ ಅವ್ವ್ ನಿಗೆ ಅಲ್ಲೇನ್ ಕೆಲಸ ಅಂತ ಇವ್ನಿಗೆ ಹೆಂಡರು ಮಕ್ಕಳಿಲ್ವೇನ್ಲ     ? ಅಕ್ಕ ತಂಗಿರು ಅಂತಾ ಇಲ್ವೇನ್ಲಾ? ಥಥ್ತೇರಿಕೆ ಅಂತ ಗೊಣಗಿದ. ಲೇ ಸಿಸ್ಯ ಯಾಕ್ಲ ಏನಾತ್ಲ ಯಾಕ್ ಹಿಂಗೆ ಗೊಣಗಕ್ಕೆ ಹತ್ತಿ ಒಸಿ ಬಿಡಿಸಿ ಹೇಳ್ಲ , ಥೋ ಹೇಳಕ್ಕೆ ಅಸಹ್ಯ ಕಣ್ಲ ಬೇಕಾರೆ ನೀನೆ ನೋಡು ಟಿವಿನಾಗೆ ಕೊರೆದಿದ್ದೆ ಕೊರಿತಾವ್ರೆ ಆ ಬಗ್ಗೆ ಅಂದು ಪೈಜಾಮದಲ್ಲಿದ್ದ ಬೀಡಿ ಕಟ್ಟ ತೆಗೆದು ಅದರಲ್ಲೋಂದು ಆಯ್ದು ಹಚ್ಚಿ ದೂಮ್ ಅಂತ ಹೊಗೆ ಮುಖಕ್ಕೆ ರಾಚಿಸುವಂತೆ ಬಿಟ್ಟು ಹೊರಟೆ ಹೋದ.........

ಮನೆಗೆ ಬಂದು ಟಿವಿ ಹಚ್ಚಿದಾಗಲೆ ವಿಷಯ ಗೊತ್ತಾಗಿದ್ದು.ಬಿಜೆಪಿ ಶಾಸಕ ಲಕ್ಷ್ಮಣ ಸವದಿ ಸದನದೊಳಗೆ ಸಿಂಧಗಿ ಪಾಕ್ ಧ್ವಜ ವಿವಾದದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ತಮ್ಮ ಮೊಬೈಲ್ ನಲ್ಲಿ "ಬ್ಲೂಫಿಲ್ಮ್" ನೋಡುತ್ತ ಸಿಗೆಬಿದ್ದವರೆ ಅಂತ.ಮ್ಮ ಮೊಬೈಲ್ ಫೋನಿನಲ್ಲಿ ಇಂತಹ ನೀಲಿ ಚಿತ್ರವನ್ನು ಸುಮಾರು 5 ನಿಮಿಷಗಳ ಕಾಲ ನೋಡಿ ಆನಂದಿಸುತ್ತಾ, ತಮ್ಮ ತೆವಲನ್ನು ತೀರಿಸಿಕೊಂಡ ಹೇಯ ಘಟನೆಗೆ ಕಾರಣರಾದ ಈ ಲಕ್ಮಣ ಸವದಿ ಕ್ಯಾಮಾರ ಕಣ್ಣುಗಳಿಗೆ ಸಿಕ್ಕಿ ಬಿದ್ದಿದ್ದ.ಅಲ್ಲಾ ಕ್ಯಾಮಾರ ಇದೆ ಅನ್ನೋದು ಈ ಯಪ್ಪಾಂಗೆ ಗೊತ್ತಿಲ್ದೇ ಇರೋ ವಿಚಾರಾನ? ಆದರೂ ತೆವಲಿಗೆ ಬಲಿಯಾಗಿ ಇಕ್ಕಟ್ಟಿಗೆ ಸಿಕಬಿದ್ದುಕೋಂಡಿರೋದು ನೋಡುದ್ರೆ ಸಿವ ಸಿವ ಅನ್ಬೇಕಷ್ಟೆ. ಅಲ್ಲ ನೆಟ್ಟಗೆ ಸದನ ಕಲಾಪದಲ್ಲಿ ಭಾಗವಹಿಸಲಾಗದ ಈ ಮಂದಿ ತನ್ನನ್ನೆ ತಾನು ಉದ್ದಾರ ಮಾಡ್ಕೋಳಲಾಗದ ಈ ಮಂದಿ ಅದೆಂಗೆ ಜನಸೇವೆ ಮಾಡ್ತಾರೋ ದೇವನೇ ಬಲ್ಲ.ನರ್ಸ್ ಮೂತಿವರೆಸಿ ಅಂದು ಅವನೋಬ್ಬ ಸಿಕ್ಕಿ ಬಿದ್ದ.ಮತ್ತೋಬ್ಬ ಸ್ನೇಹಿತನ ಹೆಂಡತಿ ಮ್ಯಾಗೆ ತನ್ನ ವಕ್ರ ದೃಷ್ಟಿ ಹರೀಬಿಟ್ಟು ಹಸಿಯಾಗೋದ, ಇವತ್ತು ಈ ಯಪ್ಪಾ!!!!ಅಂದಂಗೆ ಪರಿಸರ  ಸಚಿವರು ಸೆಂಡ್ ಮಾಡಿರೋ ವೀಡಿಯೋ ನೋಡ್ತಿದ್ದೆ ಅನ್ನೋದು ಈ ಯಪ್ಪನ್ ರಾಗ.ಇವಂಗೆ ಸಾಥ್ ಕೊಟ್ಟವ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಮಾಡೋ ಸಚಿವ. ಇವಕ್ಕೇನು ಇದೇ ಕೇಮೆನೋ? ಹೆಂಗೈತೆ ನಮ್ಮ ಆಳುವ ಮಂದಿ ಕಚ್ಚೆ ಹರುಕತನ. ಕೆಂಗಲ್ ಹನುಮಂತಯ್ಯನವರು ಕಟ್ಟಿದ, ಗೋಪಾಲಗೌಡರಂಥವರು ಓಡಾಡಿದ ವಿಧಾನಸೌಧದಲ್ಲಿ ಎಂಥ ಹುಳುಗಳು ಬಂದು ಸೇರಿಕೊಂಡವು ನೋಡಿ. ಇಂಥ ಅಸಹ್ಯಗಳೆಲ್ಲ ನಮ್ಮನ್ನು ಆಳುವ ಸಚಿವರುಗಳು.ಇಲ್ಲ ನಮ್ಮ ಹಳ್ಳಿಗ ಮಾದ ಹೇಳೋದೆ ಸರಿ ಥೋ .......ಒಡುಸುರ್ಲಾ ದರಬೇಸಿನಾ ಅಂತ ಬೈಕೊಂಡು ನಾನು ಹೊಂಟೆ ಅಡ್ಡಾಡಕ್ಕೆ............

No comments:

Post a Comment