Friday, August 3, 2012

ನೋವ ರಂಗಿನಾಟ.

ಮಾತೆಂಬುದು ಕರುಳ ಸುತ್ತ ಮುರುಟಿದಾಗ
ನಾಲಗೆಯ ಬುಡದಲ್ಲಿ ನೋವೆದ್ದು ಎಲ್ಲವೂ ಸ್ಥಬ್ದ
ಹಿಡಿದಿಟ್ಟ ಗಂಟಲ ಪಸೆಯಾರಿ ಅದು ಬರಡು .

ಯೋಚನೆಗಳು ನೆತ್ತಿ ಸುತ್ತ ಹುಟ್ಟುತ್ತಲೆ ಸತ್ತಾಗ
ನರನಾಡಿಯೆಲ್ಲ ಹಿಡಿದು ಬಿಗಿದಪ್ಪಿದ ಅನುಭವ
ನೋವು ಕಂಡ ಹಣೆ ತುಂಬಾ ಬೆವರ ಪನಿ .

ವಿಶ್ರಾಂ
ತಿ ಬಯಸಿದ ಬೆನ್ನ ಅಡ್ಡವಾಗಿಸಿದಾಗ
ಬೆನ್ನು ಮೂಳೆಯಲ್ಲೆ ಮುರಿದ ನೋವು
ಕೀಲಸಂಧಿಯ ನೇರವಾಗಿಸಲಾಗದೆ ನಾನೆ ವಕ್ರ.

ಪಾದದಡಿಯ ಧೃಡ ಹೆಜ್ಜೆಯಲ್ಲೂ
ಬೆಂಕಿಯ ಉರಿ, ಬೆಳೆಯುತ್ತೆ ತೊಡೆಯೆತ್ತರಕ್ಕೆ
ಕುಸಿದರೆ ಮತ್ತೇಳಕೊಡದ ಮೊಣಗಂಟು.

ಕೂತಲ್ಲಿ ನಿಂತಲ್ಲಿ ಇದ್ದಕ್ಕಿದ್ದಂತೆ ಕಾಡುವ ನೋವ
ಹೊಕ್ಕುಳ ಸುತ್ತಲೂ ಹೊತ್ತು ನಾ ವಿಲ ವಿಲ
ನರ ಎಳೆದು ಹೃದಯ ಬಡಿತವ ಕೊಂದಂತ ಘಳಿಗೆ

ದೇಹದ ತುಂಬಾ ಇಂಚಿಂಚೂ ಗಾಯ
ಅದು ದೈಹಿಕ ನೋವಾದರೂ ನೋವಲ್ಲ
ಭಾಧಿಸದೆ ಅವು ಗುಣಗೊಂಡು ಪ್ರಶಾಂತ.
ಹೆಣ ಭಾರವೆನಿಸಿದ್ದೂ ನೋವುಗಳ ಮೂಲ
ಅದು ಮನಸಿನೊಳಗೆ ನಡೆವ ತುಮುಲ
ಹೃದಯವ ಬಾಧಿಸಿದ ನನ್ನ ಸುತ್ತಲಿನ ಪ್ರವರ.




No comments:

Post a Comment