Sunday, March 4, 2012

ಮೂರು ವ್ಯವಸ್ಥೆಯ ಮಧ್ಯೆ ನಡೆದ ದೊಂಬಿ ಹುಟ್ಟಿಸಿದ ಪ್ರಶ್ನೆಗಳು


ಇತ್ತೀಚೆಗೆ ರಾಜ್ಯದಲ್ಲಿ ಎಲ್ಲವೂ ಹೊಸ ಬೆಳವಣಿಗೆ, ರಾಜ್ಯದ ಮುಖ್ಯಮಂತ್ರಿ ಆಗಿರೋವವರೊಬ್ಬರು ಜೈಲು ಸೇರಿದ್ದೂ ಆಯಿತು, ಸದನದಲ್ಲೆ ನೀಲಿ ಚಿತ್ರ ವೀಕ್ಷಿಸಿದ್ದೂ ಆಯಿತು ಹೀಗೆ ಪಟ್ಟಿ ಬಹಳ ಬೆಳೆಯುತ್ತಾ ಸಾಗುತ್ತೆ.ಇದಕ್ಕೆ ಹೊಸ ಸೇರ್ಪಡೆ ಇತ್ತೀಚೆಗೆ ಅತ್ಯಂತ ಅಸಹ್ಯಕರವಾಗಿ ನಡೆದ ಮೂರು ವ್ಯವಸ್ಥೆಗಳ ನಡುವಿನ ತಿಕ್ಕಾಟ. ವಕೀಲರು, ಮಾಧ್ಯಮ ಮತ್ತು ಪೋಲಿಸ್ ವ್ಯವಸ್ಥೆಯ ನಡುವೆ ನಡೆದ ದೊಂಬಿಗೆ(ಕ್ಷಮಿಸಿ ದೊಂಬಿ ಅಲ್ಲದೆ ಬೇರೆ ಪದ ಬಳಸೋದು ಸೂಕ್ತ ಅನ್ನಿಸಲಿಲ್ಲ) ಕರ್ನಾಟಕ ಸಾಕ್ಷಿಯಾಗಿದ್ದು ನಾಚಿಕೆಗೇಡಿನ ವಿಷಯ.ಯಾವ ವ್ಯವಸ್ಥೆಯನ್ನ ಪ್ರಜಾಪ್ರಭುತ್ವದ ಜವಬ್ದಾರಿ ವ್ಯವಸ್ಥೆ ಎನ್ನುತ್ತೇವೋ ಅವುಗಳೆ ಪ್ರಭುತ್ವ ಮೆರೆಯುವದಕ್ಕಾಗಿ ಈ ಪರಿಸ್ಥಿತಿಯನ್ನು ತಂದೊಡ್ಡಿದ್ದನ್ನು ನಾವು ಅನಿವಾರ್ಯವಾಗಿ ನೋಡಬೇಕಾಯಿತು.ಈ ಘಟನೆಯ ನಂತರ ಸುಮ್ಮನೆ ಇದನ್ನ ಅವಲೋಕಿಸಿದಾಗ ಕೆಲವೊಂದು ಗಂಭೀರ ಪ್ರಶ್ನೆಗಳೂ ಎದ್ದು ನಿಂತಿದೆ.ಇಲ್ಲಿ ಘಟನೆಗೆ ಕಾರಣಕರ್ತರೂ ಯಾರೆ ಆಗಿರಬಹುದು ಆದರೆ ಮಾಧ್ಯಮವು ಇದನ್ನು ತೋರ್ಪಡಿಸಿದ ರೀತಿ, ಕಾನೂನು ಸುವ್ಯವಸ್ಥೆಗಳನ್ನು ಕಾಪಾಡಬೇಕಾದ ಪೋಲಿಸರು ನಡೆದುಕೊಂಡ ರೀತಿ, ಪುಂಡತನ ಮೆರೆದ ವಕೀಲರ ಬಳಗ, ಎಲ್ಲಾರೂ ಒಂದಿಲ್ಲೊಂದು ರೀತಿಯಲ್ಲಿ ಜನತೆಯ ಮುಂದೆ ಅನುಮಾನಾಸ್ಪದವಾಗಿ ನಡೆದು ಪ್ರಶ್ನೆಗಳ ಹುಟ್ಟುವಿಕೆಗೆ ಕಾರಣರಾಗಿರುತ್ತಾರೆ.

ಸುಪ್ರಿಂಕೋರ್ಟ್ ಮತ್ತು ಹೈಕೋರ್ಟ್ ನಲ್ಲಿ ಮಾಧ್ಯಮ ಮಿತ್ರರ ಸಂವಾದಕ್ಕಾಗೆ ಸೂಕ್ತ ಸ್ಥಳವಿರುತ್ತದೆ.ಆದರೆ ಸಿಟಿ ಸಿವಿಲ್ ಕೋರ್ಟ್ನಲ್ಲಿ ಈ ವ್ಯವಸ್ಥೆ ಇಲ್ಲದುದರಿಂದಾಗಿ ಮಾಧ್ಯಮದವರು ಜನಾರ್ಧನ ರೆಡ್ಡಿ ವಿಚಾರಣೆಗೆ ಸಂಬಂಧಿಸಿದ ದೃಶ್ಯಗಳನ್ನು ಸೆರೆ ಹಿಡಿಯಲು ಕೋರ್ಟ್ ಆವರಣದೊಳಗೆ ಪ್ರವೇಶಿಸಿದ್ದೇವೆ ಅನ್ನೋದು ಮಾಧ್ಯಮದವರ ವಾದ.ಹೈಕೋರ್ಟ್ ಅದೇಶದಂತೆ ಇದು ತಪ್ಪು ಅದಕ್ಕಾಗೆ ನಾವು ಪ್ರಶ್ನೆ ಮಾಡಲಾಗಿ ವಾಗ್ವಾದ ಶುರುವಾಗಿ ಜಗಳ ಶುರುವಾಯಿತು ಅನ್ನೋದು ವಕೀಲರ ವಾದ.ಸಭ್ಯತೆ ಮೆರೆಯಬೇಕಾದ ವಕೀಲರು ಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿದ್ದು ತಪ್ಪೆ.ಅದು ಸರಿ ಎಂದು ವಾದಿಸಲು ಬರುವದಿಲ್ಲ ಆದರೆ ಮಾಧ್ಯಮದವರಿಗೆ ಈ ತಿಳುವಳಿಕೆ ಇಲ್ಲವಾಗಿತ್ತೆ?ಆಥವಾ ಪ್ರಚೋದನೆಗಾಗಿ ಈ ರೀತಿ ಆಯಿತ? ಮಾಧ್ಯಮಕ್ಕೆ ಇಂತದ್ದೋಂದು ಜಗಳ ಬೇಕಿತ್ತಾ? ಅನ್ನೋದು ಇಲ್ಲಿ ಎದ್ದಿರುವ ಪ್ರಶ್ನೆ ಯಾಕೆ ಅನ್ನೋದನ್ನ ಜಗಳ ಎದ್ದ ಇನ್ನೊಂದು ಕಾರಣ ಇದೆಂದು ಸುದ್ದಿಯಾದ ಇನ್ನೊಂದು ಸುದ್ದಿಯನ್ನು ತಿಳಿಯುತ್ತಾ ಪ್ರಶ್ನೆಗಳನ್ನ ಹಾಕೋಣ.

ಜನಾರ್ಧನ ರೆಡ್ಡಿಯನ್ನ ಕೋರ್ಟ್ ಆವರಣದೊಳಗೆ ತರುವ ಸಮಯಕ್ಕೆ ಸರಿಯಾಗಿ ಕೋರ್ಟ್ ಆವರಣದ ಪಾರ್ಕಿಂಗ್ ಜಾಗದಲ್ಲಿ ಇಬ್ಬರೂ ವಕೀಲರ ನಡುವೆ ಜಗಳವಾಗುತಿತ್ತು, ಇದನ್ನೂ ಚಿತ್ರಿಕರಿಸಲೂ ಬಂದ ಮಾಧ್ಯಮ ಮಂದಿಯನ್ನು ಕಂಡ ವಕೀಲರೂ ತಮ್ಮ ಜಗಳ ಮರೆತು ಮಾಧ್ಯಮ ಮಂದಿಯನ್ನೂ ಆಟ್ಟಾಡಿಸಿ ಹೊಡೆದಿದ್ದರೂ ಹಾಗೆ ಇನ್ನಷ್ಟೂ ವಕೀಲರೂ ಈ ಕೃತ್ಯದಲ್ಲಿ ಪಾಲ್ಗೊಂಡು ಜಗಳ ಶುರುವಾಗಿತ್ತು, ಇಲ್ಲಿ ಕೆಲವು ತಿಂಗಳ ಹಿಂದೆ ನಗರದ ಮೈಸೂರ್ ಬ್ಯಾಂಕ್ ವೃತ್ತವನ್ನು ತಮ್ಮ ಸ್ವ- ಸಮಸ್ಯಗೆ ೬ ಘಂಟೆ ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದನ್ನೂ ಮಾಧ್ಯಮ ಮಂದಿ ತೀವ್ರವಾಗಿ ಖಂಡಿಸಿದ್ದಕ್ಕೆ ನೀವು ಕೋರ್ಟ್ ಆವರಣ ಪ್ರವೇಶಿಸಿ ಆವಾಗ ನೋಡುತ್ತೇವೆ ಎಂದು ಮಾಧ್ಯಮಗಳಿಗೆ ಧಮಕಿ ಹಾಕಿದ ವಕೀಲರು ಸಮಯಕ್ಕಾಗಿ ಕಾದು ಈ ಸಮಯವನ್ನು ಅದಕ್ಕಾಗಿ ಬಳಸಿದರೆ?ದೊಂಬಿಯಲ್ಲಿ ತೊಡಗಿದ ಕರಿಕೋಟಿನವರೆಲ್ಲ ವಕೀಲರೆ ಆಗಿದ್ದರೆ? ಅನ್ನೋ ಪ್ರಶ್ನೆ ಮೂಡುತ್ತದೆ. ಮೇಲಿನೆರಡೂ ಘಟನೆ ಜಗಳ ಪ್ರಾರಂಭಕ್ಕೆ ಕಾರಣವೆ?ಅದರ ಹಿಂದಿನ ಉದ್ದೇಶ ಮೈಸೂರ್ ಬ್ಯಾಂಕ್ ವೃತ್ತದ ಪ್ರತಿಭಟನೆಯೆ?ಅಥವಾ ಬೇರೆ ಏನಾದರೂ ಕಾಣದ ಕೈ ಇದರ ಹಿಂದೆ ಕೆಲಸ ಮಾಡಿದೆಯೆ? ಗೊತ್ತಿಲ್ಲ ತಿಳಿಸಬೇಕಾದ ಮಾಧ್ಯಮ, ಪೋಲಿಸ್ ವ್ಯವಸ್ಥೆ ದ್ವೇಷ ಸಾಧನೆಯನ್ನ ಮಾತ್ರ ಮಾಡಿದೆ. ಒಂದು ಕೋನದ ವಿಷಯಗಳಷ್ಟೆ ನಮ್ಮ ಅರುಹಿಗೆ ಬಂದಿದೆ.

ಒಂದು ಐವತ್ತೋ ಅರುವತ್ತೋ ಮಂದಿ ವಕೀಲರ ಪುಂಡಾಟಿಕೆಯನ್ನು ತಡೆಯಲು ಪೋಲಿಸರು ಗಂಡು-ಹೆಣ್ಣು ಹಿರಿಯರು-ಕಿರಿಯರು ಬೇಧ ನೋಡದೆ ಕರಿಕೋಟು ಹೊಂದಿದ್ದವರೆಲ್ಲವನ್ನೂ ಅಟ್ಟಾಡಿಸಿ ಹೊಡೆದರಲ್ಲ ಇದು ಎಷ್ಟರ ಮಟ್ಟಿಗೆ ಸರಿ?ಹಾಗೆ ಘಟನೆಯನ್ನು ನಿಯಂತ್ರಿಸಲು ಮನತೋರಿದ್ದರೆ ಮಾಧ್ಯಮ ಮಂದಿಯ ಮೇಲೆ ವಕೀಲರು ಪುಂಡಾಟಿಕೆ ತೋರಿಸಬೇಕಾದರೆ ಪೋಲಿಸರೆನಿಸಿಕೊಂಡವರೆಲ್ಲ ಕೈ ಕಟ್ಟಿ ಕೂತಿದ್ದು ಯಾಕೆ?ಇನ್ನೋಂದು ಗಂಭೀರ ಪ್ರಶ್ನೆ ಏನೆಂದರೆ ರಾಜ್ಯದ ಕ್ಯಾಬಿನೇಟ್ ಮಂತ್ರಿ ಜೈಲು ಸೇರಿದ್ದರೂ,ಮುಖ್ಯಮಂತ್ರಿಯಾಗಿದ್ದವರೂ ಜೈಲೂ ಸೇರಿದ್ದರೂ,ವಕೀಲರೂ,ಮಾಧ್ಯಮದವರೂ,ಪೋಲಿಸರೂ ಏಲ್ಲರೂ ಅವಾಗಲೂ ಇದ್ದರಾದರೂ ಅವಾಗೆಲ್ಲ ಏನೂ ನಡೆದಿಲ್ಲ. ಯಾಕೆ ಜನಾರ್ಧನ ರೆಡ್ಡಿ ಕರ್ನಾಟಕದ ಕೋರ್ಟಿಗೆ ಹಾಜರಾಗಬೇಕಾದರೆ ಈ ಘಟನೆ ನಡೆಯಿತು? ಪೋಲಿಸರು ಯಾಕೆ ರೌಡಿಗಳ ತರ ವರ್ತಿಸಿದರೂ, ಯಾಕೆ ಅವರೆ ಕಾರು ಬೈಕು ಸುಟ್ಟರೂ? ಇವುಗಳ ಹಿಂದೆ ಬೇರೇನಾದರೂ ಕಾರಣ ಇರಬಹುದೇ? ಮೇಲಿನ ಕಾರಣಗಳಷ್ಟೆ ಅಲ್ಲದೆ ಬೇರೇನಾದರೂ ಶಕ್ತಿ ಕೆಲಸ ಮಾಡಿದೆಯೆ?ಇದ್ದರೂ ಇರಬಹುದು ಇಲ್ಲದೆಯೂ ಇರಬಹುದು ಪತ್ತೆ ಹಚ್ಚಬಹುದಾದ ಮಾಧ್ಯಮ ತಮ್ಮ ಮೇಲೆ ಹಲ್ಲೆಯಾಗಿದೆಯೆಂದು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಗೆ ನಿಂತಿದೆ.ಸದ್ಯಕ್ಕೆ ಅದರ ಮುಂದಿರುವದು ವಕೀಲರ ಮೇಲೆ ಸೇಡು ತೀರಿಸುವದಷ್ಟೆ.
ಗಾಯಾಳು ವಕೀಲರೊಬ್ಬರ ಚಿತ್ರ
ಬಡಪಾಯಿ ಹಲವು ವಕೀಲರು ಏಟು ತಿಂದು ಆಸ್ಪತ್ರೆ ಸೇರಿದರೂ, ಮಾಧ್ಯಮ ಮಂದಿ ಪೋಲಿಸರು ಏಟು ತಿಂದರೂ ಆದರೆ ಮಾಧ್ಯಮದಲ್ಲಿ ಪೋಲೀಸರಿಗೆ ಹಾಗೂ ತನ್ನ ಮಂದಿ ಹೊಡೆಸಿಕೊಳ್ಳುತ್ತಿರುವದಷ್ಟೆ ಎಡೆಬಿಡದೆ ಪ್ರಸಾರವಾಯಿತು.ಒಂದು ಹಂತದಲ್ಲಿ ಎಲ್ಲಿಯವರೆಗೆ ಅಂದರೆ ಪೋಲಿಸನೋರ್ವನನ್ನ ವಕೀಲರೂ ಕೊಂದೆ ಬಿಟ್ಟರೆಂಬ ಮಟ್ಟಕ್ಕೆ ಪ್ರಚಾರಮಾಡಲಾಗಿ ಜನತೆ ವಕೀಲರ ವಿರುದ್ದ ತಿರುಗಿ ಬೀಳುವಂತೆ ಮಾಡಿತು. ಗೃಹ ಸಚಿವರು ಅಂತದ್ದೇನಾಗಿಲ್ಲ ಅನ್ನೋ ಸ್ಪಷ್ಟನೆ ಕೊಡಬೇಕಾಯಿತು.ಯಾಕೆ ವಕೀಲರ ಮೇಲೆ ಪೋಲೀಸ್ ದೌರ್ಜನ್ಯ ನಡೆದಿದ್ದು ಮಾಧ್ಯಮದಲ್ಲಿ ಪ್ರಸಾರವಾಗಲಿಲ್ಲ ಅನ್ನೋದನ್ನ ಮಾಧ್ಯಮದವರಿಗೆ ಪ್ರಶ್ನೆ ಮಾಡಿದರೆ ಅದಾಗಲೆ ಎಲ್ಲಾ ಕ್ಯಾಮಾರಗಳು ಪುಡಿಯಾಗಿದ್ದವೂ ಹಾಗಾಗಿ ವರದಿ ಮಾಡಲಾಗಲಿಲ್ಲ ಅನ್ನೋ ಹಾರಿಕೆಯ ಉತ್ತರ ಸಿದ್ದವಾಗಿತ್ತು.ಸರಿ ನಮ್ಮಲ್ಲೆ ಆ ಬಗ್ಗೆ ದೃಶ್ಯಗಳಿವೆ ಪ್ರಸಾರ ಮಾಡುತ್ತೀರೋ? ಕೇಳಿದಾಗ ಯಾಕೆ ಮೊದಲಾಗಿ ವಕೀಲರು ನಮ್ಮ ಮೇಲೆ ಕೈ ಮಾಡಿದರೂ ಅನ್ನೋದನ್ನ ಅಷ್ಟು ಮಂದಿ ಬಂದು ಹೇಳಿದಲ್ಲಿ ಪ್ರಸಾರಿಸಬಹುದು ಎನ್ನುವ ಅಸಾಧ್ಯ ನಿಭಂದನೆ ಮಾಧ್ಯಮ ಮಂದಿಯಿಂದ ಬಂದಿತ್ತು. ವಕೀಲರ ಮೇಲಿನ ಪೋಲಿಸ್ ದೌರ್ಜನ್ಯದ ಒಂದು ಚಕಾರ ಕೂಡ ಟೀವಿ ಪರದೆಯ ಅಂಡರ್ ಲೈನ್ ನನ್ನೂ ತುಂಬಲಿಲ್ಲ.ವಿಷಯ ಸ್ಪಷ್ಟ ಮಾಧ್ಯಮದ ಮಂದಿ ಕುದ್ದು ಹೋಗಿದ್ದರೂ, ವಕೀಲರ ಮೇಲೆ ಈರ್ಷೆಗೆ ಬಿದ್ದಿದ್ದರೂ ಅವರಿಗೆ ವಕೀಲ ಸಮೂದಾಯವನ್ನೆ ಕೆಟ್ಟದ್ದೆಂದು ತೋರಿಸಬೇಕಾಗಿತ್ತು, ತೋರಿಸಿದರೂ ಕೂಡ ಆದರೆ ಇಲ್ಲಿ ಹುಟ್ಟುವ ಪ್ರಶ್ನೆ ಮಾಧ್ಯಮ ನೀತಿಯ ನೈತಿಕತೆಯ ಪ್ರಶ್ನೆ? ನೈಜ ಸುದ್ದಿಯನ್ನು ಬಿತ್ತರಿಸುತಿದ್ದೇವೆ ಎಂದು ಹೇಳೂತ್ತಾ ಜನತೆಯನ್ನೂ ಮೂರ್ಖರಾಗಿಸುವದು ಯಾಕೆ ಎಂಬ ಪ್ರಶ್ನೆ?ಜನತೆಯಲ್ಲಿ ಭಯ ಭೀತಿ ಹುಟ್ಟು ಹಾಕಿದ್ದೂ ಯಾಕೆಂಬ ಪ್ರಶ್ನೆ?

ಸರ್ಕಾರವೇನೋ ಎಲ್ಲಾ ಮುಗಿದ ಮೇಲೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿದೆ.ಗಾಯಾಳುಗಳೂ ಚೇತರಿಸಿಕೊಳ್ಳುತಿದ್ದಾರೆ,ಆದರೆ ಪ್ರಶ್ನೆ ಇದೂ ಇಲ್ಲಿಗೆ ಮುಗಿಯುತ್ತಾ? ಎಂಬುದು.ಒಂದು ವೇಳೆ ಈ ದ್ವೇಷ ಅಸೂಹೆಗಳೂ ಅಹಂಗಳೂ ಹೀಗೆ ಮುಂದುವರಿದರೆ ಮೊದಲಿಗೆ ದೊಡ್ಡ ಕೊಡಲಿ ಏಟು ಬೀಳುವದು ಪ್ರಜಾಪ್ರಭುತ್ವ ಮೌಲ್ಯಗಳಿಗೆ. ಅಂದು ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಪೋಲಿಸರು ಒಂದು ಸಣ್ಣ ಕಣ್ಣ ಸನ್ನೆಯ ಮೂಲಕ ಬರೀಯ ಜನತೆಯನ್ನ ಪ್ರಚೋದಿಸಿದ್ದರೂ ಸಾಕಿತ್ತು ವಕೀಲರನ್ನ ಸಾರ್ವಜನಿಕರೆ ವಿಚಾರಿಸುತಿದ್ದರೂ. ಸಂಯಮ ಮೆರೆದ ಪೋಲೀಸರ ಬಗ್ಗೆ ಅಂದು ಗೌರವ ಮೂಡಿತ್ತು ಅದೇ ಈ ಪ್ರಕರಣ ಅದೆ ಪೋಲಿಸರ ಮೇಲೆ ಅಸಹ್ಯ ಮೂಡಿಸುತ್ತಿದೆ.ಮಾಧ್ಯಮಗಳೂ ಸುಭಗರಲ್ಲ ಅನ್ನುವದೂ ಎಲ್ಲರೀಗೂ ಗೊತ್ತಿರುವ ವಿಷಯವೆ.ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಪ್ರಸಾರವನ್ನೂ ನಿಲ್ಲಿಸಿ ಒಟ್ಟಾಗಿ ನಿಂತು ಪ್ರತಿಭಟಿಸಿದ ಇಲೆಕ್ಟ್ರಾನಿಕ್ ಮಾಧ್ಯಮ ಈ ನೆಲದ, ಜಲದ,ಜನದ ಸಮಸ್ಯೆ ಬಂದಾಗಲೂ ಹೀಗೆ ಒಗ್ಗಾಟ್ಟಾಗಿ ನಿಲ್ಲುವದೆ?ಹಿಂದೆ ಎಂದೂ ನಿಂತಿಲ್ಲ ಮುಂದೆ ಗೊತ್ತಿಲ್ಲ ನಿಲ್ಲಲಿ ಅನ್ನೋ ಆಶಯ ಇಟ್ಟುಕೊಳ್ಳೋಣ.ಇತ್ತೀಚೆಗೆ ವಕೀಲರ ಪುಂಡಾಟಿಕೆಯೂ ಈ ಪ್ರಕರಣದ ಹೊರತಾಗಿಯೂ ಅತಿಯಾಗಿದೆ.ಹೆಚ್ಚಿನೆಲ್ಲ ಹಿರಿಯರೂ ತಮಗ್ಯಾಕೆ ಅನ್ನೋ ನಿಲುವು ತಾವಾಯಿತು ತಮ್ಮ ಕೆಲಸವಾಯಿತು ಅಂತಿರಬೇಕಾದರೆ ಕಿರಿಯ ವಕೀಲರಿಗೆ ಮಾರ್ಗದರ್ಶನ ಕೊರತೆಯಿಂದ ಹೀಗಾಗುತ್ತಿದೆಯೆ? ಗೊತ್ತಿಲ್ಲ ಇದಲ್ಲದೆ ಬೇರೆ ಬೇರೆ ಕಾರಣಗಳೂ ಇರಬಹುದು.ಒಂದಂತೂ ಸ್ಪಷ್ಟ ಇಲ್ಲಿ ಪರಸ್ಪರ ಅಹಂ ಎಲ್ಲಕ್ಕಿಂತ ಹೆಚ್ಚಾಗಿ ಕೆಲಸ ಮಾಡಿದೆ ಅನ್ನಬಹುದು.ಪ್ರಜಾಪ್ರಭುತ್ವದ ಆಶಯಗಳನ್ನು ಸ್ವೇಚ್ಚೆಯೆಂದು ಅನುಭವಿಸ ಹೊರಟಾಗ ಇಂತಹ ಸಮಸ್ಯೆಗಳೂ ಉದ್ಬವವಾಗುತ್ತೆ.ಪರಸ್ಪರ ವೃತ್ತಿ ದ್ವೇಷಗಳೂ,ಅಹಂಗಳೂ ಅದಷ್ಟೂ ಬೇಗನೆ ಪರಸ್ಪರ ಬಗೆಹರಿಯಲಿ. ಅದರೆ ಈ ಕೂಡಲೆ ಈರ್ಷೆಗಳೂ ಕೊನೆಯಾಗುವದೆ ಎಂಬುದು ಪ್ರಶ್ನೆ?ನಿಜ ತಪ್ಪಿದಸ್ಥರಿಗೆ ಶಿಕ್ಷೆಯಾಗುತ್ತಾ ಅನ್ನುವದು ಪ್ರಶ್ನೆ?


No comments:

Post a Comment