Sunday, March 11, 2012

ನೋವು ಹಾಡಾಗಿದ್ದೇಕೆ?

ಹೃದಯದೊಲುಮೆ ತಾಳ ಹಾಕಿ
ಮನದ ತುಂಬ ರಾಗವಾಗಿ
ನುಡಿಯ ಕೇಳಿ ಹಾಡು ಎಂದು
ಅರ್ಥೈಸಿದ್ದೇಕೆ?

ಬೀದಿ ಬದಿಯ ಜೋಪಡಿಯೊಳಗೆ
ತನ್ನ ಪಾಡು ಹಳಿದುಕೊಂಡು
ಮನದ ಮಾತು ನುಡಿದಾಗ
ಹಾಡಾಗಿದ್ದೇಕೆ?

ಬಿಸುಟು ಗಂಡ ತೊರೆದಾಗ
ಹೊಟೇಲ ಮುಸುರೆ ಚಾಕರಿ ಸೇರಿ
ಮಗನ ಎತ್ತಿ ಬೆಳೆಸಿ ಕಲಿಸಿ
ಬೆಳೆಸಿದ್ದು ಏಕೆ?

ನೋವು ತುಂಬ ಒಡಲಾಗಿಸಿ
ಸಹಜ ಮುಪ್ಪು ಬಂದೊದಗಲು
ಬೆಳೆದ ಮಗಂಗೆ ತನ್ನ ತಾಯಿ
ಹುಚ್ಚಿಯಾಗಿದ್ದೇಕೆ?

ಬೀದಿಗೆ ಬಿದ್ದ ಮುದಿ ಜೀವ
ಜೋಪಡಿಯೊಳ ಸೇರಿಕೊಂಡು
ಕರುಳಬಳ್ಳಿಯ ನೆನವ ನುಡಿಗಳು
ಕಣ್ಣ ಮಂಜಾಗಿಸುವದೇಕೆ?

ನೋವಿನಿಂದ ಬದುಕ ನಡೆಸಿ
ಅದರಲ್ಲೆ ಬದುಕ ಮುಗಿಪ
ಈ ಜೀವದೊಳಗೆ ಮಮತೆಯೆಂಬುದು
ಉಳಿದಿದ್ದು ಹೇಗೆ?

ಮಾನವತೆಯು ಅಳಿದಿಲ್ಲ
ಅದಿರುವ ಮನುಜರಿಂದ
ಚೂರು ಪಾರು ಹಿಟ್ಟು ಸಿಕ್ಕಿ
ಹೊಟ್ಟೆ ತುಂಬ ತುಂಬಿಕೊಂಡ ಜೀವ
ನಗೆಯಾಡುವದೇಕೆ?

ಗೊತ್ತಿಲ್ಲದ ದ್ವಂದ್ವದೊಡನೆ
ಉತ್ತರವಿಲ್ಲದ ಪ್ರಶ್ನೆಗಳೊಡನೆ
ಕಷ್ಟಗಳ ಅರಿವಿರುಪವರಿಗೆ
ನೋವು ಅದ ಪಿಸುಟುಗಳೂ
ಹಾಡಾಗಿ ಇಂಪಾಗುವದೇಕೆ?
ಕರುಳಕುಡಿಗೆ ಇಲ್ಲದ ಒಲವು
ನಮಗಾನಿಪುದು ಏಕೆ?

ಚಿತ್ರ ಕೃಪೆ:-kanaja.in

No comments:

Post a Comment