Monday, July 30, 2012

ನಗೆಪಾಟಲಿಗೀಡಾದ ಬುದ್ದಿವಂತರೆಂದು ಕರೆಸಿಕೊಂಡ ಮೂರ್ಖನಾಡು

ಥೋ ದರ್ಬೇಸಿಗಳ ನಿಮ್ಗೇನಾದ್ರೂ ಮಾನ ಮರ್ಯಾದೆ ಇದೆಯಾ, ಅಲ್ಲಾ ಆ ಹುಡುಗರು ನಿಮ್ಮ ಅಕ್ಕ ತಂಗಿರ ಹೊತ್ತೊಯ್ದಿದ್ರಾ?ಅಲ್ಲಾ ಬೀದಿಲಿ ಬಿದ್ದು ಇತರರಿಗೆ ತೊಂದರೆ ಮಾಡ್ತಿದ್ರಾ?ಅವ್ರೆನೂ ಬಿಕಿನಿಯಲ್ಲಿ ಅಥವಾ ಬೆತ್ತಲೆಯಾಗಿ ನಿಂತಿದ್ರಾ? ನಿಮ್ಮ ಅಕ್ಕ ತಂಗಿ, ಮದುವೆ ಆಗಿದ್ರೆ ನಿಮ್ಮಗಳ ಹೆಂಡತಿ ತೊಡುವ ಬಟ್ಟೆನೆ ಹಾಕೊಂಡಿದ್ರು, ಅದುಕ್ಕೆ ಶೂರ್ಪನಕಿ ಅನ್ನೊ ಪಟ್ಟ ಕಟ್ತಿರಾ??? ನಿಮ್ಮಗಳ ಮನೆ ಹಾಳಾಗೋಗ. ಅಲ್ಲಾ ಸಂಸ್ಕೃತಿ ಅಂತಾ ವರಾತ ಶುರುವಿಟ್ರಲ್ಲ ಯಾವ ಮನೆ ಹಾಳು ಸಂಸ್ಕೃತಿ ನಿಮ್ದು?ಇದು ತಾಲಿಬಾನ್ ರಾಷ್ಟ್ರಾನಾ ಮುಖ ಮುಚ್ಕೊಂಡು ದೇಹ ಮುಚ್ಕೋಂಡು ಬುರ್ಕಾ ಹಾಕಿ ಓಡಾಡಕ್ಕೆ?ಕಚ್ಚೆ ಹರುಕರಾ ಕೇಳಿ ಇಲ್ಲಿ ಸ್ವ ಇಚ್ಚೆಯಿಂದ ಭಾಗಿಯಾಗಬಹುದಾದ ಕಾಮ ಕೇಳಿ ಕೂಡ ವ್ಯಭಿಚಾರ ಅತ್ಯಾಚಾರ ಅನ್ನೋ ಹೆಸರು ಪಡೆಯಲಾರದು.ಅಂತಿದ್ದಲ್ಲಿ ಏನೂ ನಡೆಯದೆ ಇರುವಲ್ಲಿ ರೇವ್ ಪಾರ್ಟಿಯೆಂದು ಹೆಸರು ಕೊಟ್ಟರಲ್ಲ ಷಂಡರೆ??? ನಿಮ್ಮಗಳನ್ನು ಹೆಣ್ಣೂ ಮಕ್ಕಳಿರಿರುವ ಮನೆಗೆ ಬಿಟ್ಟು ಕೊಳ್ಳುವದೆ ಅಸಹ್ಯ, ಯಾಕೆಂದರೆ ನಿಮ್ಮೊಳಗಿರುವದು ಹೆಣ್ಣೆಂಬುದು ಭೋಗ ವಸ್ತು, ಹೆಣ್ಣು ಪ್ರೀತಿ ವಂಚಿತ ಪ್ರೇತಾತ್ಮ ನಿಮ್ಮಗಳದ್ದು.ಹೆಣ್ಣನ್ನು ಕಾಮ ದೃಷ್ಟಿಯಿಂದ ನೋಡೋ ಕಾಮ ಪಿಪಾಸುಗಳು ನೀವು, ಅಪ್ಪ ಅಮ್ಮ ಅಕ್ಕ ತಂಗಿ ಸಂಬಂಧಗಳನ್ನೆ ಕಾಣದ ಹೊಲಸು ಜೀವ ನಿಮ್ಮದಿರಬಹುದು. ನೀತಿ ಕೆಟ್ಟ ಮತೀಯಾವಾದಿಗಳೆ ಕೇಳಿಲ್ಲಿ ನಿಮ್ಮಗಳ ಜನ್ಮ ಸಾರ್ಥಕಾವಾಗಬೇಕಿದ್ದರೆ ಪುರುಷ ಪೌರುಷವ ಕೈಬಿಡಿ ಹೆಣ್ಣಿಗೂ ಸಂಪೂರ್ಣ ಸ್ವಾತಂತ್ರ್ಯವ ಕೊಟ್ಟು ನೋಡಿ, ಆಕೆಗೂ ಉಸಿರಾಡಲೂ ಬಿಡಿ. ಆಕೆ ಬಿಕಿನಿ ಮತ್ತೊಂದು ಡ್ರೆಸ್ ಮಾಡೊ ಹಂತಕ್ಕೆ ಬಂದರೆ ಅದು ನಿನ್ನ/ನಿಮ್ಮ ಮನೆ ಬೆಳೆಸಿದ ಸಂಸ್ಕೃತಿಯ ಹೊರ ಸೂಸುತ್ತದೆಯೆ ಹೊರತಾಗಿ ಆಕೆಯದ್ದಲ್ಲ ಅನ್ನುವ ನಿಜವನ್ನು ಅರಿ.
ಏನ್ ಹಿಂದೂ ?ಮನುಷ್ಯತ್ವವನ್ನು ಹೊರತಾಗಿರೋ ಧರ್ಮ ನಿಮ್ದು?ಸಮರ್ಥಿಸಿಕೊಳ್ತೀರಾ ಹಲ್ಕಟ್ ಗಳಾ??? ನಾಳೆ ನಿಮ್ಗಳ ಹೆತ್ತಾಕೆಯೆ ಪಾರ್ಟಿಯಲ್ಲಿ ಕುಂತಿದ್ದರೆ ಆಕೆಗೆ ಹೊಡೆಯುವದನ್ನೂ ಸಮರ್ಥಿಸಿಕೊಳ್ತೀರಾ??? ಆವಾಗಲೂ ಮೈಸೂರಲ್ಲಿ ಹಿಂದೂ ಹುಡುಗಿಯನ್ನೂ ರೈಲಿಂದ ತಳ್ಳಿದರೂ ಹಾಗೆ ಅಸ್ಸಾಂ ಘಟನೆಯನ್ನೂ ಮುಂದಿಟ್ಟು ಪ್ರಶ್ನಿಸುತ್ತೀರಾ???ಈ ಘಟನೆಗಳನ್ನೂ ಯಾರು ಸಮರ್ಥಿಸಿಕೊಂಡಿಲ್ಲ ಅಥವಾ ಅದರಿಂದ ವಿಕೃತ ಆನಂದವನ್ನೂ ಯಾರು ಪಟ್ಟಿಲ್ಲ ಮೂರುಕಾಸು ಚಿಲ್ರೆಗಳಾ?? ನೂರಾರು ಮೈಲುಗಳ ದೂರ ಕುಳಿತು ಪ್ರಶ್ನಿಸದೆ ಏನೂ ಮಾಡ್ತೀರಾ ಸ್ವಾಮಿ. ದಕ್ಷಿಣ ಕನ್ನಡದ ಪರಿಸ್ಥಿತಿ ನೋಡಿ ಅಲ್ಲೆ ಬಾಳಿ ಬದುಕಿದವರಿಗೆ ಗೊತ್ತು. ಸಮರ್ಥಿಸಿ ಮಾರುದ್ದ ಬರೆಯುವ ಬಿಕನಾಸಿಗೇನ್ ಗೊತ್ತು.ನಿಮ್ಮಗಳ ಈ ರಂಪಾಟದ ಫಲವೆಂಬಂತೆ ಎಲ್ಲಾ ಮೂಲಭೂತ ಸೌಲಭ್ಯವಿದ್ದಾಗಿಯೂ, ನಮ್ಮೂರಿಗೆ ಒಂದೆ ಒಂದು ಔದ್ಯೋದಿಕ ಉದ್ದಿಮೆಗಳೂ ಬರಲ್ಲ, ಮೂಲ ನೆಲೆಯಲ್ಲಿ ಉದ್ಯೋಗ ಸೃಷ್ಟಿಯಾಗ್ತಿಲ್ಲ, ಹೋಗಲಿ ಸಾಂಪ್ರಾದಾಯಿಕ ಕೃಷಿ ವಿಧಾನಗಳಾದರೂ ಉಳುಕೊಂಡಿದೆಯೋ? ಅದೂ ಇಲ್ಲ,ಇದ್ದ ಬದ್ದ ಫಲವತ್ತೂ ಜಮೀನೂಗಳನ್ನೂ ರಬ್ಬರ್ ಬೆಳೆ ಆಕ್ರಮಿಸಿಕೊಂಡಿದೆ ಅಲ್ಲಿಗೆ ಆ ಜಮೀನಿನ ಸಾವೂ. ಮುಂದೆಂದೂ ಒಂದು ಹುಲ್ಲು ಹುಟ್ಟದಾದ ಪರಿಸ್ಥಿತಿ.ಇಲ್ಲಾ ಇದೇನಾದರೂ ಮಾಡದಿದ್ದರೆ ದೂರದ ಊರಿಗೆ ಎಲ್ಲವನ್ನೂ ಬಿಟ್ಟು ಪಯಣಿಸಬೇಕೂ ಉದ್ಯೋಗ ಅರಸುತ್ತಾ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಇಟ್ಟುಕೊಳ್ಳಬಹುದಾದ ಶೋಕಿ ಜೀವನ ಮಂಗಳೂರಿಗರದ್ದು. ರಿಬಕ್ ಶೂ ಬೇಕೂ ಲಿವಿನ್ಸ್ ಪ್ಯಾಂಟ್ ಶರ್ಟ್ ಬೇಕೂ ಹೀಗೆ ಬ್ರಾಂಡ್ ಮೇಲೆ ಜೀವನ,ಈಡೀಯಾ ಪೇಟೆಯಲ್ಲಿ ಒಂದು ಸೈಕಲ್ ಕಾಣಲ್ಲ, ಸ್ಕೂಟಿ ಆಕ್ಟಿವ್ ಹೊಂಡಗಳದೆ ಕಾರುಬಾರು. ಬಡವನಿಗೆ ಜೀವನ ದೂರಾಗಿದೆ!!! ಈ ಬಗ್ಗೆ ತಲೆ ಕೆಡಿಸಿಕೊಂಡಿರಾ ಷಂಡ ಸಂಸ್ಕೃತಿ ಭಕ್ಷಕ/ರಕ್ಷಕರೆ?? ಇವೆಲ್ಲಾ ನಿಮಗೆ ಸಂಸ್ಕೃತಿ, ಆದರೆ ಹುಡುಗೀರೂ ಮಾಡರ್ನ್ ಆಗದೆ ಹಣೆಗೆ ತಿಲಕವಿಟ್ಟು ಮೈ ತುಂಬಾ ಸೀರೆಯುಟ್ಟು ಓಡಾಡಬೇಕೂ ಎಂದೂ ಬಯೋಸೋದು, ದಿನ ಪೂರ್ತಿ ಟೈಟಾಗಿ ಬಾರು ದೊಂಬಿ ಅಂತಾ ಕಾಲಕಳೆಯೋದು, ಮಾತೆತ್ತಿದರೆ ರೌಡಿಸಂ ಅಂಥ ಅವನಿಗೆ ಹೊಡೆದೆ ಆತನ್ನ ನೋಡ್ಕೋತೀನಿ ಅನ್ನೋ ವಿಚಾರದಲ್ಲೆ ಮುಳುಗೀರೋದು, ಪುಂಡು ಪೋಕರಿಗಳಾಗಿ ತಿರುಗುತ್ತಿರುವ, ಸಾವಿರಗಟ್ಟಲೆ ಯುವ ಸಮುದಾಯ ಪೋಷಿಸೋದು ಬೆಳೆಸೋದು ಸಂಸ್ಖೃತಿ ರಕ್ಷಕರೆನ್ನುವ ಸಂಸ್ಥೆಗಳ ಇವತ್ತಿನ ಕಾರ್ಯಾಭಾರ, ಅವರಾದರೂ ಏನ್ ಮಾಡ್ತಾರೆ ಅವುಗಳು ರಾಜಕೀಯ ಹಿತಾಸಕ್ತಿಯನ್ನು ಬೆಳೆಸಲು ಇಂಥಹಃ ಸಮೂದಾಯವನ್ನು ಬೆಳೆಸಲೆಬೇಕಾದ ದರ್ದು.ಮೂರ್ಖ ಶಿಖಾಮಣಿಗಳು ಇವರ ಬಲೆಗೆ ಬೀಳೋರು, ಅತ್ಯಂತ ಎಜುಕೇಟೆಡ್ ಶ್ರೇಣಿಯಲ್ಲೀರೋರನ್ನೂ ಕೂಡ ಬಲೆ ಕೊಡವಿಕೋಳ್ಳುವಲ್ಲಿ ನಿಸ್ಸೀಮಾವಾಗಿ ಬಿಟ್ಟೀವೆ ಈ ಪಾಖಾಂಡಿ ಸಂಸ್ಥೆಗಳು.ಅತ್ಯಂತ ಬುದ್ದಿವಂತರ ನಾಡು ಅಂತ ಕರೆಸಿಕೊಳ್ಳುತಿತ್ತು ಒಂದೊಮ್ಮೆ ನಗೆಯು ಬರುತಿದೆ ಅದ ನೆನಸಿ ಈ ದಿನ ನನಗೆ.

ಬಟ್ಟೆಯನ್ನೆಲ್ಲಾ ಎಳೆದೂ ಬಳೀದು ಚಂದ ನೋಡಿ ಕಥೆ ಕಟ್ತೀರಾ???ಕೈ ಬಿಡಬಹುದಾದಷ್ಟು ಬಿಟ್ಟು ಸಂಸ್ಕೃತಿ ಬಗ್ಗೆ ಮಾತಾಡ್ತೀರಾ? ನೀವೆಲ್ಲೋ ಕಾಡು ಮೃಗಗಳಾಗಿರಬೇಕಷ್ಟೆ, ಇದ ಪೋಟೊ ಹಚ್ಚಿ ಸಮರ್ತಿಸಿಕೊಳ್ಳುವವರೂ ಕೂಡ ಇವರಿಂದ ಹೊರತಲ್ಲ, ಮಂಗಳೂರೇನೂ ಗೋವಾ ಅಗ್ತಿದೆಯಾ??? ಸಂತೋಷ ಪಡ್ತಿದ್ದೆ ಹಂಗಾದರೆ ಹೊಟ್ಟೆಪಾಡಿಗಾಗಿ ನಾನಿಷ್ಟೂ ದೂರ ಬರಬೇಕಾಗಿರಲಿಲ್ಲ, ಗೋವಾದಲ್ಲೇನೂ ಬೆತ್ತಲೆ ಮಲಗ್ತಾರೋ? ಹಂಗಾದ್ರೆ ಗೋಕರ್ಣ, ಓಮ್ ಬೀಚ್ ಗಳನ್ನೂ, ಇತರ ಇದೆ ತರದ ಕರ್ನಾಟಕದ ಸ್ಥಳಗಳನ್ನೂ ಏನಂತ ಕರೀಬೇಕೂ ಹಲ್ಕಟ್ ಸಂಸ್ಕೃತಿಗರೆ.ಯಾಕೆ ಮಂಗಳೂರು ಮಾತ್ರ ನಿಮ್ಮಪ್ಪನ ಊರು, ಖರೀದಿ ಮಾಡಿ ಬಿಟ್ಟಿರೋ? ಮನೆಯೋಳಗೆ ನುಗ್ತೀರಾ?? ಮಾನ ಕೇಡಿಗಳೆ??? ನಿಮ್ಮಗಳ ಕಟ್ಟಿಕೊಂಡು ಬದುಕು ನಡೆಸೋದು ಸಾಧ್ಯನಾ?? ತಂಗಿ, ಅಣ್ಣ, ಅಕ್ಕ, ತಮ್ಮ ಜೊತೆಗೆ ಮನೆಯಿಂದ ಹೊರಬರುವದಕ್ಕೂ ಸಾಧ್ಯವಿಲ್ಲದ ಸ್ಥಿತಿಗೆ ತಳ್ಳುತಿದ್ದೀರಲ್ಲ ಮತಾಂಧ ಬಿಕನಾಸಿಗಳೆ, ಹೊಟ್ಟೆಗೆ ಏನ್ ತಿನ್ತೀರೋ ಏನೊ. ಒಬ್ಬ ಸೂಳೆಯನ್ನೂ ಹೆಣ್ಣೆಂಬ ಕಾರಣಕ್ಕೆ ಕೈ ಎತ್ತಲಾರದ ಮಾನವೀಯತೆ ಕಂಡುಕೊಂಡವರು ನಾವು.ಅಂತದ್ದರಲ್ಲಿ ನೀವುಗಳೂ ಅತೀ ಕೀಳರಲ್ಲಿ ಕೀಳು.ಮನುಷತ್ವದ ಅರ್ಥವೆ ಗೊತ್ತಿಲ್ಲದ ಥರ್ಡ್ ಕ್ಲಾಸ್ಗಳು.ವ್ಯಾಕ್ ಥೂಊಊ ನಿಮ್ಮ ಜನ್ಮಕ್ಕಿಷ್ಟು....

ತೋರಿಸಬೇಕಾದಲ್ಲಿ ತೋರಿಸ್ರಿ ಹೆತ್ತ ಅಡ್ನಾಡಿ ಪೌರುಷವ, ಅಲ್ಲಾ!!! ಎಂದಾದರೂ ಭಾಷೆ ನೆಲದ ಬಗ್ಗೆ ಮಾತೆತ್ತಿದ್ದೂ ಐತಾ?ಭ್ರಷ್ಟಾಚಾರ (ಸಂಘ ಕೃಪಾಪೋಷಿತವಲ್ಲದ್ದೂ) ವಿರೋಧಿ ಹೋರಾಟದಲ್ಲಿ ಸ್ವಂತಿಕೆಯಿಂದ ಭಾಗಿಯಾಗೋ ಪೌರುಷನಾ ನಿಮ್ದು?ಸಾಮಾಜಿಕ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಿ ಹೋರಾಟ ನಡೆಸಿದಾ ಮೂತಿನಾ ನಿಮ್ದು?ಇಲ್ಲಾ ಎಲ್ಲಾ ಒಳ್ಳೆ ವಿಷಯ, ಸ್ಪಂದಿಸಬಹುದಾದ ವಿಷಯದಲ್ಲೂ ನಮ್ಮಗಳ( ನಾನು ದಕ್ಷಿಣ ಕನ್ನಡದವನೆ ಆದುದರಿಂದ ನಮ್ಮಗಳ ಅನ್ನಬೇಕಾಯ್ತು)ನಿಲುವು ಸತ್ತ ಹೆಣದಂತೂ ಅಲ್ಲ ಕೊಳೆತ ಹೆಣದಂತೆ, ಇದೇನಪ್ಪಾ ಈ ಮಂಗಳೂರಿಗರೂ ಹಿಂಗೆ ಅಂತ ದೇಶವೆಲ್ಲಾ ಮಾತಾಡುತಿದ್ದರೂ ನಮ್ಮಗಳ ಜೀವದಲ್ಲಿ ಚಲನೆಯೆ ಇಲ್ಲ.ಅದೆ ಮುಸ್ಲಿಮರೊಬ್ಬ ಗಾಡಿ ತುಂಬಾ ದನ ಸಾಗಿಸಿದ , ಎಲ್ಲೋ ಮಸೀದಿ, ಚರ್ಚು , ದೇವಾಲಯಗಳಿಗೆ ಕಲ್ಲು ಬಿತ್ತು, ಯಾವನೋ ಅಂತರ್ಧರ್ಮೀಯಾ ಹುಡುಗ ಹುಡುಗಿ ಜೊತೆಗಿದ್ದಾರೆ(ಪರಸ್ಪರ ಒಪ್ಪಿಗೆಯಿದ್ದೂ) ಎನ್ನುವ ಪರಿಸ್ಥಿತಿಯಲ್ಲಿ ಸೆಟೆದುಕೊಳ್ಳುತ್ತೇವೆ ನಿಮಿಷದಲ್ಲೆ ಸಾವಿರಾರು ಮಂದಿ ಸೇರಿ ಬಿಡುತ್ತೇವೆ,ಹೊತ್ತಿನ ಊಟಕ್ಕೆ ದುಡಿಯಲಾಗದ, ಬಡವನನ್ನು ಬಾಳಿಸಲಾಗದ, ಸಮಾನತೆಯನ್ನೂ ಕಾಪಾಡಲಾರದ, ಸಹೋದರತೆಯನ್ನೂ ಎತ್ತಿ ಹಿಡಿಯಲಾಗದ ಈ ನಿಗುರುವಿಕೆ ಯಾವ ಕರ್ಮಕ್ಕೆ ."ಬೇಲೆ ಇಜ್ಜಂದಿ ಆಚಾರಿ ಬಾಲೆದ ಪೀಂಕಾನ್ ಕೆತ್ತಿಯೆ" ಅನ್ನೋ ತುಳು ಗಾದೆಯಂತೆ ಕೆಲಸವಿಲ್ಲದವನು, ಇನ್ನೊಬ್ಬರ ಅಣತಿಯಂತೆ ಬದುಕುವವ, ಸ್ವಂತಿಕೆ ಕಳಕೊಂಡ ವ್ಯಕ್ತಿ ಸಮೂಹ ಇನ್ನೇನನ್ನೂ ಮಾಡಲೂ ಸಾಧ್ಯ. ಪುಂಡಾಡಿಕೆಯಲ್ಲಿ ಹೆಸರು ಗಳಿಸೋ ಆಸೆಯನ್ನ ಸಂಘ ಪರಿವಾರಗಳೂ ಮಂಗಳೂರಿನ ಯುವ ಜನತೆಯಲ್ಲಿ ಬಿತ್ತಿದೆ. ಮಂಗಳೂರಿನಲ್ಲಿರುವ ವೈಚಾರಿಕ ನೆಲೆಗಟ್ಟಿನಲ್ಲಿ ಯೋಚಿಸುವ ಎಲ್ಲಾ ಮಂದಿಯೂ ಹೇಳುವ ಮಾತಿದು.ದೇಶಕ್ಕೊಂದು ಪ್ರಜಾಪ್ರಭುತ್ವ ವ್ಯವಸ್ಥೆಯಿದೆ, ಕಾನೂನುಗಳಿವೆ ಎಂಬುದನ್ನೂ ಮರೆತೂ ಅಥವಾ ಅವೆಲ್ಲವನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡು ದಾಂಧಲೆ ಎಬ್ಬಿಸುವ ಈ ಮಂದಿಗೆ ಒಂದು ಖಾರ ಎದ್ದು ನಿಲ್ಲಲಾಗದ ಮೆಸೇಜ್ ತಲುಪಲೇಬೇಕೂ. ಆದರೆ ಸರ್ಕಾರ ಇದೆ ಮತಾಂದ ವ್ಯವಸ್ಥೆಗೆ ಸಿಕ್ಕಿ ನಿರ್ವಿರ್ಯವಾಗಿ ಕುಂತಿದೆ. ಉಪ ಮುಖ್ಯಮಂತ್ರಿಯೆ, ಆಕ್ರೋಶ ಸಹಜ!!! ಅನ್ನಬೇಕಾದರೆ ಈ ಷಂಡರಿಂದ ಹೆಚ್ಚಿನ ಆಸೆ ಇಟ್ಟುಕೊಳ್ಳುವಂತಿಲ್ಲ. ಬರುವ ಚುನಾವಣೆಯನ್ನು ಈ ನಿಟ್ಟಿನಲ್ಲಿ ಯೋಚಿಸಬೇಕಾದುದು ನಮ್ಮೆಲ್ಲ ಪ್ರಜ್ಞಾವಂತರ ಕರ್ತವ್ಯ ಅಲ್ಲಿವರೆಗೆ .................!!!!!!! ಗೊತ್ತಿಲ್ಲ, ವ್ಯವಸ್ಥೆ ಸುಧಾರಣೆಯಾಗುತ್ತೋ ಬಿಡುತ್ತೋ ಮಾತು ದಾಖಲಿಸಬೇಕಷ್ಟೆ. ಇಷ್ಟೊಂದನ್ನ ಬರೆದಿದ್ದೂ ಅದಕ್ಕಾಗೆ ಕಿಂಚಿತ್ತು ಮನದ ಆಕ್ರೋಶಗಳನ್ನ ಹೊರಚೆಲ್ಲುವದಕ್ಕಾಗಿ ಅಷ್ಟೆ.ಬಹಳಷ್ಟೂ ಹೇಳಲಿದ್ದರೂ ಹೆಚ್ಚೇನೂ ಹೇಳುವಂತಿಲ್ಲ ಕಾರಣ ನಾನೂ ನಗೆಪಾಟಲಿಗೀಡಾದ ಬುದ್ದಿವಂತರೆಂದೂ ಕರೆಸಿಕೊಂಡ ಮೂರ್ಖನಾಡಿನ ಸಾಮಾನ್ಯ ಪ್ರಜೆಯಲ್ಲಿ ಅತೀ ಸಾಮಾನ್ಯನಷ್ಟೆ.

2 comments:

  1. ನಿಮ್ಮ ಮಾತುಗಳು ಮನಕ್ಕೆ ಚುರುಕು ಮುಟ್ಟಿಸುವಂತಿವೆ. ಆದರೆ ಏನು ಮಾಡುವುದು ಅಸಹಾಯಕ ಪರಿಸ್ಥಿತಿಯೆಂಬ ಗೊಂದಲದಲ್ಲಿ ನಾವಿಂದು ಬದುಕಬೇಕಾಗಿದೆ. ಮುಂದಿನ ದಿನಗಳಲ್ಲಿ ಜಾಗೃತ ಪ್ರಜೆಗಳಾಗಬೇಕಾಗಿರಿವುದು ಅತ್ಯಂತ ಅನಿವಾರ್ಯ.....

    ReplyDelete