Friday, September 16, 2011

" ಹುಟ್ಟುಗುಣ ಸುಟ್ಟರು ಹೋಗುವದಿಲ್ಲ"!!!!!ಯಾಕೆಂದರೆ ಅದು ಮನುಜಗುಣ.


ಸಮಾಜದಲ್ಲಿ ತಮಗೇನು ಅರಿವಿಲ್ಲದಿದ್ದರೂ ತಮ್ಮ ಪೊಳ್ಳು ವಾದಗಳಲ್ಲಿ ಇನ್ನೊಬ್ಬರನ್ನು ಹಳಿಯುತ್ತಾ ವಿಕೃತ ಸಂತೋಷ ಪಡುವ ಒಂದಷ್ಟು ಮಂದಿ ಸಿಗುತ್ತಾರೆ.ಆ ಸಾಲಲ್ಲೇ ಗುರುತಿಸಿಕೊಳ್ಳುವ ನನ್ನ ಒಬ್ಬ ಗೆಳೆಯನು ಇದ್ದಾನೆ.ಯಾರನ್ನಾದರು ದುಷಿಸದಿದ್ದರೆ ಆ ದಿನ ಸುಖ ನಿದ್ರೆ ಪಡೆಯಲಾರ.ಇತ್ತೀಚಿಗೆ ಅದೇ ನನ್ನ ಗೆಳೆಯ ಸಮಾಜದ ಒಂದು ವರ್ಗದ ಬಗ್ಗೆ ಮಾತನಾಡುತ್ತ ಅವರನ್ನು ಅವಹೇಳಿಸುತ್ತ ಅವರ "ಹುಟ್ಟು ಗುಣ ಸುಟ್ಟರು ಹೋಗುವದಿಲ್ಲ"ಎಂಬ ಗಾದೆ ಮಾತು ಮೂಲಕ ತನ್ನನ್ನು ತಾನೇ ಸಮರ್ತಿಸಿಕೊಳ್ಳುತಿದ್ದ.ಸರಿ ಗೆಳೆಯ ಹಂಗಾದರೆ ನಿನ್ನ ಪ್ರಕಾರ ಹುಟ್ಟು ಗುಣ ಅಂದರೇನು?ಅಂತ ಒಂದು ಪ್ರಶ್ನೆ ಅವನ ಮುಂದೆ ಇಟ್ಟೆ.ಅದೇ ಅವ್ರ ಜಾತಿ, ಮತ ಧರ್ಮ ಅದರಿಂದ ಕಲಿತ ಪಾಠ ಮುಂತಾದುವು ಎಂದು ತನ್ನ ವಿತಂಡ ವಾದವನ್ನು ನನ್ನೆದುರು ಮಂಡಿಸಿ ವಾಗ್ವಾದಕ್ಕೆ ಇಳಿದ.ಅಲ್ಲ ಗೆಳೆಯ ಜಾತಿ ಮತ ಧರ್ಮ ಇವುಗಳು ಹುಟ್ಟು ಗುಣ ಅನ್ನುವದಕ್ಕೆ ಎತ್ತಣ ಸಂಭದ ಒದಗಿಸುವದು?ಇವೆಲ್ಲದರ ಮುಂಚಿನ ಕ್ರಿಯೆಯೇ ಹುಟ್ಟು ಅಲ್ಲವೇ?ಎಂಬ ನನ್ನ ಅಧಿಕಪ್ರಸಂಗಿತನವನ್ನು ಅವನೊಂದಿಗೆ ಮುಂದುವರಿಸಿದೆ.ಈಗ ಆ ನನ್ನ ಗೆಳೆಯ ತನ್ನ ಅಲ್ಪ ಜ್ಯಾನದ ವೈಜ್ಞಾನಿಕ ತಿಳುವಳಿಕೆ ಇಂದ ವಿವರಿಸುವ ಮೂರ್ಖ ಪ್ರಯತ್ನಕ್ಕೆ ಕೈ ಹಾಕಿದ!!!!!!ಅವನ ವಾದ ಹೀಗಿತ್ತು, ಗಂಡು-ಹೆಣ್ಣು ಕ್ರಿಯೆ ಇಂದ ನಮ್ಮ ಹುಟ್ಟು ಅಂದರೆ ಅವರಿಬ್ಬರ ಜೀನ್ಸ್ ಮಿಳಿತವು ಹುಟ್ಟಿಗೆ ಕಾರಣವಾಗುತ್ತದೆ ಎಂದ!!!!!!ಅವರಿಬ್ಬರ ಗುಣಗಳು ಹುಟ್ಟುವ ಮಗುವಿನಲ್ಲಿ ಬರುತ್ತದೆ ಎಂಬ ವಾದಕ್ಕೆ ಇಳಿದಿದ್ದನ್ನು ಮನಗಂಡು ಅರ್ದದಲ್ಲೇ ಬಾಯಿ ಹಾಕಿ ಹಾಗಾದರೆ ಜೀನ್ಸ್ ಅನ್ನುವದು ಧರ್ಮ, ಜಾತಿ,ಮತಗಳಿಂದ ರುಪುಗೊಂಡಿದ್ದೆ!!!!!!!?ಅರ್ಥವಾಗಲಿಲ್ಲ ಅಂದೆ.ಅವನಿಗೂ ತನ್ನ ವಾದದ ಅರ್ಥ ತಿಳಿಯದಾಗಿ ತಲೆ ಸವರುತ್ತ ಕೋಪದಿಂದ ಹೋಗಿ ಹೋಗಿ ನಿನ್ನಂತ ಮೂಲಭೂತವಾದಿ ಜೊತೆ ಮಾತಾಡ್ತಿನಲ್ಲ!.......ಸುಮ್ಮನೆ ವ್ಯರ್ಥ ಕಾಲಹರಣ ಸ್ಟುಪಿಡ್......!!!!!!!ಅಂತ ನನ್ನನ್ನು ಬೈದು ತನ್ನ ಕೆಲಸದಲ್ಲಿ ಮಗ್ನನಾದ.ಮುಖದಲ್ಲಿ ಅಸಹನೆ ಮಡುಗಟ್ಟಿತ್ತು.ನನ್ನನ್ನು ಮೂಲಭೂತವಾದಿ ಅಂತ ಸಂಬೋದಿಸಿ,ನನ್ನಲ್ಲೇ ವಿಚಾರಮಂಥನ ಕೈಗೊಳ್ಳಲು ವಿಷಯ ಒದಗಿಸಿದ ಗೆಳೆಯನ ಮೊಗನೋಡಿ ಸಣ್ಣ ಕಿರು ನಗೆ ಬೀರಿ ಸುಮ್ಮನಾಗಿದ್ದೆ.ಆಗ ಕಾಡುತಿದ್ದ ವಿಚಾರ ಇಷ್ಟೇ ಹುಟ್ಟುಗುಣ ಅಂದರೇನು?

            ನನ್ನ ಪ್ರಕಾರ ಹುಟ್ಟು ಗುಣ ಅನ್ನುವದು ಮನುಜ ಗುಣ.ಅದೆಂದರೆ ಅಳುವದು,ನಗುವದು, ಕೋಪಿಸುವದು,ಸಂಕೋಚಿಸುವದು,ಸಂತೋಷ ಪಡುವದು,ನೆಮ್ಮದಿ ಬಯಸುವದು ಇತ್ಯಾದಿ.ಇತರ ಪ್ರಾಣಿಗಳಿಗಿಂತ ಸ್ವಲ್ಪ ಬುದ್ದಿವಂತಿಕೆಯನ್ನು ಹೊಂದಿರುವ ಮನುಷ್ಯ ಪ್ರಾಣಿಯ ಸಾಮಾನ್ಯ ಚಟುವಟಿಕೆಗಳು ಅಂತಲೂ ಕರೆಯಬಹುದು.ಮುಂದೆ ಬೆಳೆಯುತ್ತ ವಿಚಾರ ಸಂಮಿಳಿತಗಳಿಂದ ತನ್ನ ಬುದ್ದಿವಂತಿಕೆಯನ್ನು ಬೆಳೆಸುತ್ತಾ ಮುಂದುವರಿಯುತ್ತಾನೆ.ಒಳ್ಳೆಯ ವಿಚಾರಗಳನ್ನು ತನ್ನದಾಗಿಸಿಕೊಂಡರೆ ಸಮಾಜದ ಉತ್ತಮ ಮನುಜನಾಗುತ್ತಾನೆ.ನಮ್ಮಲ್ಲಿ ನಿಜ ಅರ್ಥದ ಮನುಷ್ಯ ಗುಣಗಳು ಬೆಳೆಯಬೇಕಾದರೆ ವಿಚಾರದ ಆಯ್ಕೆಯಲ್ಲಿ ಸ್ವಲ್ಪ ಚ್ಯೂಸಿ ಆಗಿರಬೇಕು, ಒಳ್ಳೆಯ ಪರಿಸರ ನಮ್ಮದಿರಬೇಕು ಅಷ್ಟೇ.ಮನುಜ ಗುಣಗಳ ಸಂವೇದನೆಯನ್ನು ಅರಿತುಕೊಂಡು ನಡೆಯುವವ ನೆಮ್ಮದಿ ಪಡೆದು ಮಾದರಿಯಾಗಿ ಸಮಾಜದಲ್ಲಿ ಗುರುತಿಸಲ್ಪಡುತ್ತಾನೆ,ಅದೇ ಮನುಜ ಗುಣಗಳ ಸಂವೇದನೆಯನ್ನು ಅರಿಯಲಾಗದೆ ಅದ ಮರೆತು ನಡೆವವ ಜೀವನದ ದಿಕ್ಕನ್ನು ಕಳೆದುಕೊಂಡು ಒಂದಷ್ಟು ಜನರ ದ್ವೇಷ,ತಾತ್ಸಾರ ತನ್ನದಾಗಿಸಿಕೊಂಡು ಪ್ರೀತಿ ವಿಶ್ವಾಸ ಕಳೆದು ಕೊಂಡು ತನ್ನ ನೆಮ್ಮದಿಯ ಬಾಳಿಗೂ ಭಂಗ ತಂದುಕೊಂಡು ಸಮಾಜ ಕಂಟಕನಾಗಿ ಸಮಾಜದಲ್ಲೇ ಇರುತ್ತಾನೆ ಆದರೆ ನಿಜ ಅರ್ಥದ ಮನುಷ್ಯನಾಗಿ ಅಲ್ಲ.

                               ನಾನು ಇಲ್ಲಿ ವಿವರಿಸುತ್ತಿರುವ ಮಾನವ ಗುಣ ನಮ್ಮೆಲ್ಲರಲ್ಲಿಯು ಇರುವಂತದ್ದೆ ಅಲ್ಲದೆ ಅವುಗಳು ಆಗಾಗ್ಯೆ ಬೆಳಕಿಗೂ ಬರುತ್ತಿರುತ್ತದೆ .ಒಂದು ಕ್ರೌರ್ಯ ಅಥವಾ ಒಂದು ಅಫಘಾತ ನಮ್ಮ ಕಣ್ಣೆದುರು ನಡೆಯುತ್ತಿರುತ್ತದೆ ಅಂದುಕೊಳ್ಳಿ,ನಮೆಗೆ ಗೊತ್ತಿಲ್ಲದಂತೆ ನಮ್ಮ ಹೃದಯಾಂತರಾಳ ದಿಂದ ಹೊರಡುವ ನೋವಿನ ಉದ್ಗಾರ ಅಥವಾ ಅದ ನೋಡಲಾಗದೆ ಮುಖಕ್ಕೆ ಅಡ್ಡವಾಗಿ ಕೈ ಹಿಡಿಯುವದು ಇಂತಹ ಒಂದು ಕ್ರಿಯೆ ನಡೆದುಬಿಡುತ್ತದೆ.ಯಾರೋ ಒಬ್ಬರು ಕಷ್ಟಕಾಲದಲ್ಲಿ ನೆರವಾದಾವಾಗ ಕಣ್ಣಂಚಿನಲ್ಲಿ ಒಂದು ಕೃತಜ್ಞತಾ ಪೂರ್ವಕ ಒಂದು ಹನಿ ಕಣ್ಣೀರ ಪನಿ ಮೂಡುತ್ತದೆ ಅಲ್ಲವೇ?ಹಸಿವಾದವನಿಗೆ ಒಂದು ಹೊತ್ತಿನ ಊಟ ಕೊಟ್ಟಾಗ ಮನಸ್ಸಿಗಾಗುವ ಸಂತೋಷ?ಹೀಗೆ ಬೇಕಾದಷ್ಟು ಮಾನವ ಗುಣ ನಮ್ಮಲ್ಲಿ ಗೋಚರವಾಗದೆ ಹುದುಗಿರುತ್ತದೆ.ಮನಸ್ಸಿನಾಳದಲ್ಲಿರುವ ಮಾನವೀಯ ಸಂವೇದನೆಯನ್ನು ಬಡಿದೆಬ್ಬಿಸಬೇಕು, ಅದ ಅರ್ಥಿಸಿಕೊಂಡು ನಡೆದರೆ,ನೆಮ್ಮದಿ,ಸಂತೋಷದ,ಸೌಹಾರ್ದಯುತ ಜೀವನ ನಮ್ಮದಾಗುತ್ತದೆ.ಆ ಮೂಲಕ ಸಮಾಜವು ಸುಧಾರಿಸುತ್ತದೆ.ಮಾನವಗುಣಗಳಿಗೆ ಇರುವ ಧರ್ಮ ಪ್ರಕೃತಿ,ಅದರ ಜಾತಿ ಹಸಿವು ಅಷ್ಟೇ.ಹೌದು"ಹುಟ್ಟುಗುಣ ಸುಟ್ಟರು ಹೋಗುವದಿಲ್ಲ"!!!!!ಯಾಕೆಂದರೆ ಅದು ಮನುಜಗುಣ.

No comments:

Post a Comment