Tuesday, September 20, 2011

ಪತ್ರಿಕೋದ್ಯಮದ ಒಳಗಿನ ಬ್ರಷ್ಟಾಚಾರಗಳು ಉಳಿದೆಲ್ಲವುಗಳಂತೆ ಅಷ್ಟು ಸುಲಭದಲ್ಲಿ ಸಮಾಜದ ಮುಂದೆ ಬರಲಾರದು.

ಪತ್ರಿಕೋದ್ಯಮ ಇದು ಪ್ರಜಾಪಭುತ್ವ  ವ್ಯವಸ್ಥೆಯಲ್ಲಿ ಅತ್ಯಂತ ಪ್ರಭಲ, ಸಂವಿಧಾನದ  ನಾಲ್ಕನೆ ಅಂಗವೇನೋ ಎಂಬಂತೆ ಬೆಳೆದು ನಿಂತಿದೆ.ದೇಶದ ಅದೆಷ್ಟೋ ಬ್ರಷ್ಟಾಚಾರವನ್ನು  ಬೆಳೆಕಿಗೆ ತಂದು ಪರಿಣಾಮಕಾರಿ ಜನಾಭಿಪ್ರಾಯ ರೂಪಿಸಿ ಆ ಮೂಲಕ ಆರೋಪಿಗಳಿಗೆ ಶಿಕ್ಷೆಯಾಗುವಲ್ಲಿ ಹಾಗು ಜನಜಾಗೃತಿ ರೂಪಿಸುವಲ್ಲಿ ಸಹಕಾರಿಯಾಗಿದೆ.ಬ್ರಷ್ಟಾಚಾರದ  ಬೆಳೆಕಿಗೆ ಹಾಗು  ಅದ  ಸಮಾಜಕ್ಕೆ ತಿಳಿಸುವಲ್ಲಿ ಇಂದಿನ ಪತ್ರಿಕೆ ಹಾಗು ದೃಶ್ಯ ಮಾಧ್ಯಮಗಳು ಸಹಕಾರಿಯಾಗಿದೆ ಅಂದರೆ ಉಳಿದ ವಿಹಿತಗಳು ಇದರಿಂದ ಆಗಿಲ್ಲವೆಂಬುದು ಅಲ್ಲ.ನಾನು ಇಲ್ಲಿ  ಹೇಳ ಬಯಸಿರುವದು ಬ್ರಷ್ಟಚಾರದ ವಿರುದ್ದ ಮಾಧ್ಯಮಗಳ ಸಮರದ ನೈತಿಕತೆಯನ್ನು ಪ್ರಶ್ನಿಸುವ ನಿಟ್ಟಿನದ್ದು  ಆದುದರಿಂದ ಮಾಧ್ಯಮದ ಇತರ ವಿಹಿತಗಳ ಬಗ್ಗೆ ಪ್ರಸ್ತಾಪಿಸುತ್ತಿಲ್ಲ.ಅತ್ಯಂತ ಸಾಮಾನ್ಯನಲ್ಲಿ ಸಾಮಾನ್ಯನಾದ ಈ ದೇಶದ ಪ್ರಜೆ ನಾನು,ಪತ್ರಿಕೋದ್ಯಮದ ಬಗ್ಗೆ ಗೌರವ  ಹೊಂದಿರುವವನು,ದೇಶದ ಒಟ್ಟು ಪತ್ರಿಕೋದ್ಯಮದ ಬಗ್ಗೆ ಮಾತನಾಡುವ ಅಷ್ಟು ತಿಳುವಳಿಕೆಗಳು ನನ್ನಲ್ಲಿ ಇಲ್ಲ.ಆದರೆ ನನ್ನ ಕನ್ನಡ ಪತ್ರಿಕೋದ್ಯಮದ ಬಗ್ಗೆ ಒಂದಷ್ಟು ಸಂಶಯ ಅಸಹನೀಯತೆಗಳು ನನ್ನಲ್ಲಿ ಇತ್ತೀಚಿಗೆ  ಬೆಳೆಯುತ್ತಿದೆ.ಆ ಮೂಲಕ ಉತ್ತರಗಳೇ ದೊರಕದ ಹಲವು ಪ್ರಶ್ನೆಗಳು ಬ್ರಷ್ಟಾಚರವನ್ನು  ಬೆಳೆಕಿಗೆ ತರುತ್ತೇವೆ ಎಂದು ಸೋಗಲಾಡಿತನವನ್ನು ಹೊತ್ತುಕೊಂಡ ಪತ್ರಿಕೋದ್ಯಮದ ಮೇಲೆ ಮೂಡಿದೆ.

ಇತ್ತೀಚಿಗೆ ಕರ್ನಾಟಕದಲ್ಲಿ ಬೆಳಕಿಗೆ ಬಂದ ಭೂ ಹಗರಣ ,ಗಣಿ ಹಗರಣಗಳಲ್ಲೀ ಪತ್ರಿಕೋದ್ಯಮದ ಒಂದಷ್ಟು ಮಂದಿಯ ಪಾಲ್ಗೊಳ್ಳುವಿಕೆ ಇದೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.ಆ ಮೂಲಕ ಪತ್ರಿಕೋದ್ಯಮದ ಮಂದಿಯೇ ಪತ್ರಿಕೋದ್ಯಮ ಅಂತಹ ಪವಿತ್ರ ಕ್ಷೇತ್ರಕ್ಕೆ ಮಸಿಬಳಿದಿರುವದು ದುರಂತ.ಆದರೆ ನನ್ನ ವಿಚಾರಗಳು ಈ ನಿಟ್ಟಿನದ್ದಲ್ಲ.ರಾಜಕೀಯ ,ಜನಸಾಮಾನ್ಯ ,ಯಾಕೆ ನಿನ್ನೆ ರಾಜೀನಾಮೆಯನ್ನು ಕೊಟ್ಟಂತ ಲೋಕಾಯುಕ್ತರನ್ನು ಬಿಡದ ಬ್ರಷ್ಟಚಾರಿಕೆಯ ಮಾಹಿತಿ ಒದಗಿಸಿದ ಪತ್ರಿಕೋಧ್ಯಮ ತನ್ನದೇ  ಮಂದಿಯ ತನ್ನದೇ ಕ್ಷೇತ್ರದ ಬ್ರಷ್ಟಚಾರಿ  ಹುಳುಗಳನ್ನು ಸಮಾಜದ ಎದುರು ನಿಲ್ಲಿಸುವದನ್ನು ಮರೆತಿದೆ ಯಾಕೆ?ಈ ಬಗ್ಗೆ ಬೆರಳೆಣಿಕೆ ವರದಿಗಳು ಬಂದಿರಬಹುದು ಆದರೆ ಪ್ರಜಾವಾಣಿ  ಇಬ್ಬರನ್ನು ನೇರ ನೇರ ಹೆಸರು ಕೊಟ್ಟು ಕರೆದು ವರದಿ ಕೊಟ್ಟಿದ್ದು ಬಿಟ್ಟರೆ ಉಳಿದ ವರದಿಗಳೆಲ್ಲ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ!!!!!!!!!!! ಬೇರೆ ಕ್ಷೇತ್ರದ ಬ್ರಷ್ಟರನ್ನು ಹೆಸರು ಹಾಗು ಒಂದಿಷ್ಟು ಅಡ್ಡ ಹೆಸರಿತ್ತು ತೆಜೋವದೆ ನಡೆಸಿ ಅವರ ಪ್ರಕರಣವನ್ನು ಬೆಳಕಿಗೆ ತರುವ ಮಾಧ್ಯಮಗಳು ತನ್ನದೇ ಮಂದಿಯನ್ನು ಹೆಸರು ಕೊಟ್ಟು ಪ್ರಸ್ತಾಪಿಸುವದಕ್ಕು ಹಿಂಜರಿಯುತ್ತಿರುವದು ಯಾಕೆ?ಅಷ್ಟಕ್ಕೂ ಪ್ರಜಾವಾಣಿ ವರದಿಯಲ್ಲಿ ಇದ್ದ ಇಬ್ಬರೇ ಪತ್ರಿಕೋದ್ಯಮದಲ್ಲಿ ಬ್ರಷ್ಟರು ಉಳಿದವರೆಲ್ಲ ಸಾಚಾಗಳು ಅಂದರೆ ನಂಬುವದು ಸಾಧ್ಯವೇ?ರೆಡ್ಡಿಗಳ ಮನೆ ಮುಂದು ಸಿ ಬಿ ಐ ಮಂದಿ ವಾಹನಗಳಿಂದ ಇಳಿಯುತಿದ್ದಂತೆ ವರದಿ ಶುರು ಹಚ್ಚಿಕೊಂಡ ಪತ್ರಿಕೋಧ್ಯಮ ಅದೇ ಭಯದಿಂದ ದಿನ ದೂಡುತ್ತ ಇರುವ ಕೆಲವು ಪತ್ರಿಕೋದ್ಯಮ ಮಂದಿಯನ್ನು ಸಮಾಜದ ಎದುರು ತೆರೆದಿಡಲು ಮನಸ್ಸು ಮಾಡದೇ ಇರುವದು  ಯಾಕೆ?ಯಾಕೆ ಭೂ ಹಗರಣ ಮತ್ತು ಗಣಿ ಹಗರಣದ ನಂತರವೇ ತನ್ನಲ್ಲಿರುವ ಪತ್ರಿಕೋದ್ಯಮದ ಬ್ರಷ್ಟ ಕ್ರಿಮಿಗಳು ಪತ್ರಿಕೊಧ್ಯಮದ ಮಂದಿಗೆ ಅರಿವಿಗೆ ಬಂದಿದ್ದು, ಈ ಮೊದಲು ಹಾಗಾದರೆ ಇವರೆಲ್ಲ ಸಾಚಗಳೇ?ಇಲ್ಲ ಪತ್ರಿಕೋಧ್ಯಮ ಮಂದಿಗೆ ಇವೆಲ್ಲ ಗೊತ್ತೇ ಇದೆ ಬೇಕಂತಲೇ ಮುಚ್ಚಿಟ್ಟಿರುವದು ಸ್ಪಷ್ಟ.ನಿನ್ನೆಯಷ್ಟೇ ಮಾಧ್ಯಮ ಬ್ರಷ್ಟಚಾರವನ್ನು ಸಮಾಜ ಏಕೆ ಅರಗಿಸಿಕೊಳ್ಳುತ್ತಿದೆ? ಎಂಬ ಬ್ಲಾಗ್ ಬರಹ ಓದಿದೆ.ಬರೆದವರು ಓರ್ವ ಪತ್ರಕರ್ತ.ತನ್ನ ಹೆಸರನ್ನು ಪ್ರಕಟಿಸುವದಕ್ಕು ಸ್ವಾತಂತ್ರ್ಯ ಕಳೆದುಕೊಂಡ ಪತ್ರಕರ್ತನ  ಬಗ್ಗೆ  ಹಾಗು ಇಂತಹ ವಾತಾವರಣ ನಿರ್ಮಿತಗೊಳಿಸಿದ  ಪತ್ರಿಕೋದ್ಯಮದ ಬಗ್ಗೆ ಖೇದವಿದೆ.ಆದರೆ ಈ ಪತ್ರಿಕೋದ್ಯಮವು ಪ್ರಜಾಪ್ರಭುತ್ವವನ್ನು ಕಾಯುವ ಬೆಳೆಸುವ ನೈತಿಕತೆ ಹೊಂದಿರುವವರು ಅನ್ನುವದು ಈ ನಿಟ್ಟಿನಲ್ಲಿ ಯೋಚಿಸಿದವಾಗ ಕುಚೋದ್ಯ ದಂತೆ ಕಂಡು ಬರುವದು ಪ್ರಜಾಪ್ರಭುತ್ವದ ವಿಪರ್ಯಾಸ!!!!!!!!!!.ಯಾವುದೇ ಸಮಾಜ ಬ್ರಷ್ಟಚಾರವನ್ನು ಅರಗಿಸಿಕೊಳ್ಳುವದಿಲ್ಲ.ಆದರೆ ಮಾಧ್ಯಮ ಬ್ರಷ್ಟಾಚಾರವನ್ನು  ಮಾಧ್ಯಮಗಳೆ ಸರಿಯಾಗಿ ಸಮಾಜಕ್ಕೆ ತಲುಪಿಸುವಲ್ಲಿ, ಹಾಗು ಆ ಮೂಲಕ  ಜನಾಭಿಪ್ರಾಯ ರೂಪಿಸುವಲ್ಲಿ ವಿಫಲ ಗೊಂಡಿದೆ ಅಂದರೆ ತಪ್ಪಿಲ್ಲ.
 ವಾಕ್ ಸ್ವಾತಂತ್ರ್ಯ ಪತ್ರಕರ್ತರಿಗೆ ದೊರೆಯಲಿ.
ಮೊದಲೇ ಹೇಳಿದಂತೆ ಪತ್ರಿಕೋದ್ಯಮದಲ್ಲಿ ಗೌರವ ಇರಿಸಿದವ ನಾನು.ಪತ್ರಿಕಾರಂಗದಲ್ಲಿ ಬೇಕಾಬಿಟ್ಟಿ ಬರೆಯುವದು ಸಾಧ್ಯವಿಲ್ಲವೆಂದು ಅಂದುಕೊಂಡವ.ಸೂಕ್ತ ಆಧಾರಗಳು ಇದ್ದಾಗಲೂ ಸಮಾಜದ ಮುಂದೆ ತಮ್ಮ ಮಿತ್ರರ ಬ್ರಷ್ಟ ವಿವರಗಳನ್ನು ಸಮಾಜದ ಮುಂದೆ ಇರಿಸಲು ದ್ವಂದ್ವ ನೀತಿ ಅನುಸರಿತ್ತಿರುವದನ್ನು ಬಿಡಬೇಕು.ತನ್ನ ಕಣ್ಣಿಗೆ ಬೆಣ್ಣೆ,ಇತರರ ಕಣ್ಣಿಗೆ ಸುಣ್ಣ ವೆಂಬ ನೀತಿ ಎಷ್ಟು ಸರಿ?.ಪತ್ರಿಕಾರಂಗ ಪತ್ರಿಕೊಧ್ಯಮದ ನೀತಿಯನ್ನು ಮರೆತಿರುವದು ಸಲ್ಲ.ಇಲ್ಲಿ ಪತ್ರಕರ್ತರು ಈ ಬಗ್ಗೆ ವರದಿ ಬಿತ್ತರಿಸಲು ರೆಡಿ ಇಲ್ಲವೆಂಬುದು ಅಲ್ಲ.ಎಷ್ಟೋ ಸಜ್ಜನ ಪತ್ರಕರ್ತರು ಪತ್ರಿಕೋದ್ಯಮದಲ್ಲಿ ಇದ್ದಾರೆ.ಆದರೆ ಪತ್ರಿಕಾ ಆಡಳಿತ ಮಂದಿಗಳು ಅವರ ದ್ವಂದ ನೀತಿಗಳಿಂದ ಹೇಳಬೇಕಾದ್ದನ್ನು ಜನರ ಮುಂದೆ ಹೇಳಲಾಗದೆ ಒದ್ದಾಡುತಿದ್ದಾರೆ!!!!!.ನಿನ್ನ ವಿಷಯ ನಾನು ತರಲ್ಲ ನನ್ನ ವಿಷಯ ನೀನು ತರಬೇಡ ಎಂಬ ಪ್ರೊಟೆಕ್ಟ್ ನೀತಿಗಳನ್ನು ತಮ್ಮದಾಗಿಸಿಕೊಂಡಿರುವ ಪತ್ರಿಕೆಗಳೇ ಹೆಚ್ಚು.ನೇರ ನೇರ ವಿಷಯ ಪ್ರಸ್ತಾಪಿಸಿ ರಿಸ್ಕ್ ತೆಗೆದುಕೊಳ್ಳಲು ಯಾರು ಬಯಸುತ್ತಿಲ್ಲ,ಯಾಕೆಂದರೆ ಪತ್ರಿಕೋದ್ಯಮದ ಖಡ್ಗ ವೆಂಬ ಅಸ್ತ್ರ ಇಬ್ಬರಲ್ಲೂ ಇದೆ.ಆದುದರಿಂದ ಪತ್ರಿಕೋದ್ಯಮದ ಒಳಗಿನ ಬ್ರಷ್ಟಾಚಾರಗಳು ಉಳಿದೆಲ್ಲವುಗಳಂತೆ ಅಷ್ಟು ಸುಲಭದಲ್ಲಿ ಸಮಾಜದ ಮುಂದೆ ಬರಲಾರದು.ಗುಮ್ಮನಂತೆ ಭಾಸವಗುತ್ತಿರುವ ಕನ್ನಡ ಪತ್ರಿಕೋದ್ಯಮ ಈ ಎಲ್ಲ ಮಜಲುಗಳನ್ನು ದಾಟಿ ತನ್ನ ಮನೆ ಕಸ ಗುಡಿಸಿ ಸ್ವಚ ಗೊಳಿಸಲಿ, ಯಾವತ್ತಾದರೂ ಸತ್ಯ ಹೊರಗೆ ಬಂದೆ ಬರುತ್ತದೆ,ಪತ್ರಿಕೋದ್ಯಮದಲ್ಲೂ ಪತ್ರಿಕಾ ಸ್ವಾತಂತ್ರ್ಯ ಮೆರೆಯುತ್ತದೆ ಎಂಬ ಆಶಯಗಳನ್ನು ಇಟ್ಟುಕೊಂಡು ಮುಂದುವರಿಯುವದು ಅಷ್ಟೇ ಸದ್ಯಕ್ಕೆ ನಮ್ಮ ಮುಂದಿರುವ ದಾರಿ.

ನಿಮ್ಮವ..................
ರಾಘವೇಂದ್ರ ತೆಕ್ಕಾರ್ 

No comments:

Post a Comment