Tuesday, September 13, 2011

ಫೇಸ್ ಬುಕ್ ಗೆ ಹಲವಾರು ಮುಖಗಳಿವೆ ಎಂಬ ಎಚ್ಚರ ಇದ ಬಳಸುವ ಮುಂದು ನಮಗಿರಲಿ.

ಮಾರ್ಕ್ ಎಲಿಟ್ಟೋ ಜುಕೆರ್ಬೇರ್ಗ್
Face Book. ಇದು ಎಲ್ಲರಿಗೆ ಗೊತ್ತಿರುವದೆ.ಮಾರ್ಕ್ ಎಲಿಟ್ಟೋ ಜುಕೆರ್ಬೇರ್ಗ್ ಅನ್ನುವ ಕಂಪ್ಯೂಟರ್ ಪ್ರೋಗ್ರಮ್ಮೆರ್ ಒಬ್ಬ ತನ್ನ ಸಹಪಾಟಿಗಳೊಂದಿಗೆ ಮೊದಲಿಗೆ ಕಂಡುಕೊಂಡಿದ್ದು.ಹವಾರ್ಡ್ ವಿಶ್ವವಿದ್ಯಾನಿಲಯದವರಿಗಷ್ಟೇ ಸೀಮಿತವಾಗಿದ್ದ ಈ ಅಂತರ್ಜಾಲ ತಾಣ ನಂತರ ಸಾರ್ವತ್ರಿಕವಾಗಿ ಈಗ ಹೆಮ್ಮರವಾಗಿ ಬೆಳೆದು ನಿಂತಿದ್ದನ್ನು ನೋಡುತಿದ್ದೇವೆ.ಯುವಜನತೆ ಇದರತ್ತ ಮುಗಿಬೀಳುವದನ್ನ ನೋಡುತಿದ್ದೇವೆ.ನನಗೆ ಫೇಸ್ ಬುಕ್ ಹಲವಷ್ಟು ಗೆಳೆಯರು ಇನ್ನೇನು ಅವರೆಲ್ಲ ಸಿಗುವದೆ ಇಲ್ಲವೆಂಬವರನ್ನು ಮತ್ತೆ ಕಾಣಸಿಗುವಂತೆ ಮಾಡಿದೆ. ಹೊಸ ಗೆಳೆಯರು ದೊರಕುವಂತೆ ಮಾಡಿದೆ. ಹಲವಷ್ಟು ಮಾಹಿತಿಗಳು ದೊರಕಿದೆ.ಸಾಮಾಜಿಕ ತಾಣವಾಗಿರುವ ಇಲ್ಲಿ ನನ್ನ ಸಾಮಜಿಕ ಕಳಕಳಿಯ  ದೃಷ್ಟಿಕೋನಗಳನ್ನು ಪ್ರಚುರ ಪಡಿಸಲು ವೇದಿಕೆ ಕೊಟ್ಟಿದೆ.ದೊರದಲ್ಲಿರುವ ಗೆಳೆಯರ ಜೊತೆ ಹರಟೆ ಹೊಡೆಯಲು ಅನುಕೂಲ ಮಾಡಿ ಕೊಟ್ಟಿದೆ. ಮನದ ದುಗುಡ ಕಳೆಯಲು ಸಹಕಾರಿಯಾಗಿದೆ.ವ್ಯರ್ಥ ಕಾಲಹರಣ ಅಂತ ಒಮ್ಮೊಮ್ಮೆ ಅನ್ದುಕೊಂಡಿದ್ದಿದೆ.ಅದು ಕೆಲವೊಮ್ಮೆ ಹೌದು ಕೂಡ.ಆದರೆ ಬಳಸುವಂತೆ ಬಳಸಿದರೆ ಫೇಸ್ ಬುಕ್ ಕೂಡ ವ್ಯರ್ತವಾಗಲಾರದು ಅನ್ನುವದು ನನ್ನ ಅಭಿಪ್ರಾಯ.ಫೇಸ್ ಬುಕ್ ಬಗ್ಗೆ ಹೀಗೆ ಅಭಿಪ್ರಾಯ ಹೊಂದಿದ್ದ ನನಗೆ ಕೆಲ ದಿನಗಳ ಹಿಂದೆ ನನಗೊಗ್ಗದ ಹಾಗು ಫೇಸ್ ಬುಕ್ ನ ಮತ್ತೊಂದು ಮುಖ ಪರಿಚಯ ಆಯಿತು.ಅದು ಕಲಿಸಿದ ಅನುಬವವೆ ಈ ಲೇಖನಕ್ಕೆ ಮೂಲ ಕಾರಣ.


ಹೀಗೆ ಒಂದು ದಿನ ಪರಿಚಯದವರು ಸಿಗುತ್ತಾರೋ ವೆಂಬ ಕುತೂಹಲದೊಂದಿಗೆ ಫೇಸ್ ಬುಕ್ ನ ಗೆಳೆಯರ ಅಂಕಣಗಳಲ್ಲಿ ಜಾಲಾಡುತಿದ್ದೆ. ಒಂದು ಆಕರ್ಷಕ ಹೆಸರು ವೆಲ್ ವಿಷರ್ ಅನ್ನುವ ಹೆಸರನ್ನು ನೋಡಿದೆ ಇವನ್ಯಾರು ಎಂಬ ಕುತೂಹಲದಿಂದ ಫ್ರೆಂಡ್ ರಿಕ್ವೆಸ್ಟ್ ಕಳಿಸಿದೆ ಮರುಕ್ಷಣದಲ್ಲೇ ಅಪ್ಪ್ರೋವ್ ಕೂಡ ಆಯಿತು.ಅವ ಯಾರು ಅನ್ನುವದನ್ನು ತಿಳಿದುಕೊಳ್ಳುವ ಕುತೂಹಲ ಹೊಂದಿದ್ದ ನಾನು ಅವನ ಪ್ರೊಫೈಲ್ ನಲ್ಲಿ ಯಾವುದೇ ಮಾಹಿತಿ ಸಿಗದೇ ನಿರಾಶನಾಗಿ ಲಾಗ್ ಔಟ್ ಮಾಡಿದ್ದೆ.ಆದರೆ ಮರುದಿನ ಲಾಗ್ ಇನ್ ಅದಾವಾಗ ಇದೆ ವೆಲ್ ವಿಷರ್ ನನ್ನನ್ನು ಒಂದು ಗ್ರೌಪ್ಗೆ ಸೇರಿಸಿದ್ದ, ಹೆಸರು ಸ್ನೇಹ ಸಂವಾದ.ಹೆಸರು ನೋಡಿ ಕುಶಿಯೋ ಕುಶಿ ಫೇಸ್ ಬುಕ್ ಗೆ ಹೇಳಿ ಮಾಡಿಸಿದ ಹೆಸರು. ಸದಸ್ಯರು ೨೫೦೦ ಕ್ಕೂ ಮೇಲ್ಪಟ್ಟವರಿದ್ದರು.ಸ್ನೇಹ ಜೀವಿಯಾದ ನನಗೆ ಇನ್ನಸ್ಟು ಸ್ನೇಹಿತರು ದೊರಕುವರೆಂಬ ಬರವಸೆಯೊಂದಿಗೆ ಅಲ್ಲಿ ಚರ್ಚೆಗೆ ತಂದಿದ್ದ ವಿಚಾರಗಳನ್ನು ಓದುತ್ತ ಸಾಗಿದೆ.ಗ್ರೂಪ್ ಸೇರುವಾಗ ಇದ್ದ ಕುಶಿ ಅಲ್ಲಿನ ಕೆಲವೇ ಕೆಲವು ಪೋಸ್ಟ್ಗಳನ್ನು  ಓದಿದ ತಕ್ಷಣವೇ ಜರ್ರಂತ ಇಳಿದಿತ್ತು. ನನ್ನ ಧರ್ಮವೇ ಶ್ರೇಷ್ಟ ಉಳಿದೆಲ್ಲವೂ ಕಾಲ ಕಸದಂತೆ ಎಂದು  ಸಂಬೋದಿಸಿದ ಕಾಮ್ಮೆಂಟ್ಗಳು ,ಪೋಸ್ಟ್ಗಳು .ಗಾಂಧಿ ಮತ್ತು ಗೋಡ್ಸೆ ಯನ್ನು ಒಂದೇ ತಕ್ಕಡಿಯಲ್ಲಿ ತೂಗುವ ವಿಕೃತ ಮನಸ್ಥಿತಿಗಳು.ಟೆರರಿಸ್ಟ್ ಸಮರ್ತಿಸಿಕೊಳ್ಳುವ ಕಾಮ್ಮೆನ್ತುಗಳು.ಒಂದಷ್ಟು ಒಳ್ಳೆ ವಿಚಾರಗಳು ಪೇಜ್ ಕೊನೆಯಲ್ಲಿ ಯಾವುದೇ ಚರ್ಚೆಗಳಿಲ್ಲದೆ ಅನಾತವಾಗಿ ಬಿದ್ದಿರುವದು.ಅವಾಚ್ಯ ಶಬ್ದಗಳ ಬೈದಾಟ.ರಾಜಕೀಯ ವಿಷಯಗಳಲ್ಲೂ ಜಾತಿಯತೆಯ ಅಬ್ಬರ.ವ್ಯಕ್ತಿಗತ ಹೀಯಳಿಕೆಗಳು,ಒಂದ ಎರಡ ಅರ್ಧ ಘಂಟೆಯಲ್ಲೇ ಹುಚ್ಚನಾಗಿದ್ದೆ.ಗ್ರೂಪ್ ಬಿಟ್ಟು ಹೊರಬರಬೇಕು ಎಂಬ ಮನಸ್ಸು ಬಂದರು ಕೂಡ,(ಬಹುಶಃ ಅವತ್ತು ಹಾಗೆ ಮಾಡಿದ್ದರೆ ಒಳ್ಳೆಯದಿತ್ತು ಅಂತ ಈಗ ಅನ್ನಿಸುತ್ತಿದೆ.)ಇಂಥ ಚಟುವಟಿಕೆ ಒಲ್ಲದ ನಾನು ಅಲ್ಲಿನ ಪರಿಸ್ಥಿತಿ ಸುದಾರಿಸುವಲ್ಲಿ ಸಣ್ಣ ಪ್ರಯತ್ನವನ್ನು ತೋರದೆ ಹೊರಬರುವದು ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರ ಕಾಣದಾಗಿ ಅಲ್ಲಿಯೇ ಒಂದಷ್ಟು ದಿನವಿದ್ದು ಗ್ರೂಪ್ ಸುದಾರಿಸುವ ಹುಂಬ ನಿರ್ದಾರಕ್ಕೆ ಅಣಿಯಾದೆ. ಇದನ್ನೇ ಹೇಳುವದೇನೋ ತಾನೇ ಗುಣಿ ತೋಡಿದ ಹಳ್ಳಕ್ಕೆ ಬೀಳುವದು ಎಂದು.ಒಟ್ಟಿನಲ್ಲಿ ನನಗೆ ಗೊತ್ತಿಲ್ಲದಂತೆ ಸ್ನೇಹ ಸಂವಾದವೆಂಬ ಗುಣಿಗೆ ಬಿದ್ದೆ.
ಸರಿ ಮರುದಿವಸದಿಂದ ಈ ನಿಟ್ಟಿನಲ್ಲಿ ಪ್ರಯತ್ನಗಳು ಅಲ್ಲೇ ಸಿಕ್ಕಿದ ಸಹೃದಯ ಮಿತ್ರರೋಡಗುಡಿ ನಡಯಿತು. ಇದು ಸ್ನೇಹಕ್ಕಿರುವ (ನಾವು ತಿಳಿದುಕೊಂಡಂತೆ)ತಾಣ ಇಲ್ಲಿ ಧರ್ಮ ಜಾತಿಗೆ ಅದ ಮೂಲಕ ಕಚ್ಚಾಟಕ್ಕೆ ಆಸ್ಪದ ಬೇಡ ಯಾರು ಈ ಬಗ್ಗೆ ಇಲ್ಲಿ ಮಾತನಾಡುವದು ಬೇಡ ಹೀಗೆ ನಿರ್ದರಿಸಿ ಆ ಬಗ್ಗೆ ಪೋಸ್ಟ್ ಮಾಡಿದೆವು.ಹಾಗು ಅದನ್ನು ಆ ವಿಚಾರಗಳ ಚರ್ಚೆಯ ಎಲ್ಲ ಪೋಸ್ಟ್ನಲ್ಲಿ ಲಗತ್ತಿಸಿದೆವು. ಆದರೆ ಮರುದಿನವೇ ಆ ಪೋಸ್ಟ್ ಅಲ್ಲಿಂದ ಮಾಯವಾಗಿತ್ತು.ಮೊದಲ ಬಾರಿಗೆ ಅಡ್ಮಿನ್ ಬಗ್ಗೆ ಗುಮಾನಿ ಹುಟ್ಟಿತ್ತು.ಸ್ವಲ್ಪ ದಿನ ನೋಡೋಣವೆಂದು ಅಡ್ಮಿನ್ ಗೆ  ಕೆಲವೊಂದು ಕಾಮೆಂಟ್ ಗಳಲ್ಲೇ ಎಚ್ಚರಿಸುತ್ತ ಮನುಜರಾಗಿ ಅನ್ನುವ ನೀತಿ ಪಾಠ ವನ್ನು ಧರ್ಮ ಕರ್ಮ ಅಂತ ಮುಳುಗಿಹೊದವರಿಗೆ ಎಚ್ಚರಿಸುತ್ತಾ ಸಾಗಿದೆವು.ಅಲ್ಲಿನ ಕೆಲ ಸಹೃದಯ ನನ್ನ ಮಿತ್ರರು ಅವರದೇ ರೀತಿಯಲ್ಲಿ ಎಚ್ಚರಿಸ ಪ್ರಾರಂಬಿಸಿದರು.ದಿನ ಕಳೆದಂತೆ ಫೇಕ್ ಪ್ರೊಫೈಲ್ ಅದ ಮೂಲಕ ಕೀಳು ಮಟ್ಟದ ಸಂಭಾಷಣೆಯಲ್ಲಿ ತೊಡಗುವ ಮಂದಿ ,ಯಾರು ಧರ್ಮಚರ್ಚೆಗೆ ಅಡ್ಡಿಯಗುತ್ತರೋ ಅವರಿಗೆ ಏನೋ ಪಟ್ಟ ಕಟ್ಟಿ ಹೀಯಾಳಿಸುವದು ಇಂತದ್ದನ್ನು ತಡೆಯಲು ನನ್ನೊಬ್ಬ ಮಿತ್ರ ಅಂತಹ ಮಂದಿಯನ್ನು ನಿಗ್ರಹಿಸಲು ಸ್ನೇಹಮಯ ವಾತಾವರಣ ರೂಪಿಸಲು ಅಂತ ಮಂದಿಯನ್ನು ಎತ್ತಿ ತೋರಿಸಲು ಬ್ಲಾಕ್ ಲಿಸ್ಟ್ ಡಾಕುಮೆಂಟ್ ಮಾಡಿದರು .ಅದಕ್ಕೆ ನಮ್ಮದೊಂದಿಷ್ಟು ಮಂದಿಯ ಸಹಕಾರವು ಇತ್ತು.ಇದರ ಮೂಲಕ ಒಂದಷ್ಟು ಹಿಡಿತ ಸಿಕ್ಕರೂ ಕೂಡ ಫೇಕ್ ಪ್ರೊಫೈಲ್ ತಡೆಯುವ ನಿಟ್ಟಿನಲ್ಲಿ ಯಶಸ್ವಿ ಆಗಲಿಲ್ಲ.ಈ ಮದ್ಯೆ ಗ್ರೌಪಿನ ಅಡ್ಮಿನ್ ಜೊತೆ ನೇರ ನೇರ ಚರ್ಚೆಗೆ ಇಳಿದ ನಾನು ಸಮಾಜದ ಸ್ವಾಸ್ತ್ಯ ಹಾಳಾಗುತ್ತಿದೆ ಎಂಬುದನ್ನು ಅಡ್ಮಿನ್ಗೆ ತಿಳಿಹೇಳಲು ಹೊರಟೆ.ಅದಕ್ಕೆ ಇಲ್ಲಿ ಆಗುತ್ತಿರುವದೆಲ್ಲ ಸರಿ. ನಿಮಗೆ ಇಷ್ಟವಿದ್ದರೆ ಇರಬಹುದು ಇಲ್ಲಾಂದ್ರೆ ಜಾಗ ಖಾಲಿ ಮಾಡಿ, ನಾವು ಸತ್ಯವನ್ನು ಕಂಡುಕೊಳ್ಳುತಿದ್ದೇವೆ ಎಂಬ ಹಾಸ್ಯಾಸ್ಪದ ಉತ್ತರ ಸಿಕ್ಕಿತು.ಅಂದರೆ ಒಂದು ಸಾಮಾಜಿಕ ತಾಣದ ಒಂದು ಗುಂಪಿನ ಅಡ್ಮಿನ್ಗೆ ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಯಾವುದೇ ಇಚ್ಛೆ ಇಲ್ಲವೆಂಬುದು ಸ್ಪಷ್ಟ ಆಯಿತು.ಅದಕ್ಕಾಗಿ ಕೆಲವು ಕಠಿಣ ಪ್ರಶ್ನೆ ಅಡ್ಮಿನ್ ಮುಂದಿರಿಸಿದೆ ಅದಕ್ಕೆ ಉತ್ತರ ಕೊನೆಗೂ ಸಿಗಲೇ ಇಲ್ಲ.ಸ್ನೇಹ ಬಯಕೆ ಇಂದ ಗ್ರೂಪ್ ಒಳಬರುವ ಯುವಜನತೆ ದ್ವೇಷ ಬಾವನೆಯನ್ನು ತನ್ನದಾಗಿಸಿಕೊಂಡು ಮನುಷತ್ವವವೆ ಮರೆಯಾಗುತ್ತಿರುವದು ಸಮಾಜದ ಸ್ವಾಸ್ತ ಕೆಡಲು ಈ ಗ್ರೂಪ್ ದೊಡ್ಡ ಕೊಡುಗೆಯನ್ನೇ ನೀಡುತ್ತದೆ ವೆಂಬ ನಿರ್ಧಾರ ತಳೆಯಲು ನಮಗೆ ಪುರಾವೆಗಳನ್ನು ಒದಗಿಸುತ್ತಿತ್ತು.ಈ ಬಗ್ಗೆ ಸಹೃದಯ ಮಿತ್ರರೆಲ್ಲ ಸೇರಿ ಚರ್ಚಿಸಬೇಕು ಅಂತಿರುವಾಗಲೇ ಬ್ಲಾಕ್ ಲಿಸ್ಟ್ ಎಂಬ ಸಂಸ್ಕೃತಿ ಗ್ರೌಪಿನಲ್ಲಿ ಹುಟ್ಟುಹಾಕಿ ಗ್ರುಪಿನ ಸ್ವಾಸ್ಥತೆ ಅದ ಮೂಲಕ ಸಮಾಜದ ಸ್ವಾಸ್ಥತೆ ಕಾಪಾಡ ಹೊರಟ ಗೆಳೆಯನನ್ನು ಗ್ರೌಪಿನಿಂದ ಹೊರದಬ್ಬಲಾಯಿತು ಅಲ್ಲದೆ ಬೆದರಿಕೆ ಮೆಸೇಜ್ ಅನುಬವವನ್ನು ಪಡೆಯುವಂತೆ ಆಯಿತು.ಅಲ್ಲಿಗೆ ಓಹೋ!!! ಈ ಗ್ರೂಪ್ ಆಶಯ ಸ್ನೇಹವಲ್ಲ ಬೇರೇನೋ ಇದೆ ಅನ್ನುವದು ಮನದಟ್ಟುಗೊಳಿಸಿತು.

ಗ್ರೂಪ್ ಅಡ್ಮಿನ್ ವೆಲ್ ವಿಷರ್ ನ ಈ ನಡೆಯನ್ನು ಸಹೃದಯ ಬಾಂದವರೆಲ್ಲ ಸೇರಿ ಖಂಡಿಸಿದೆವು.ಸ್ನೇಹ ಸಂವಾದ ರೀತಿ ನೀತಿಗಳನ್ನು ಮುಂದೆ ಬಂದು ತಿಳಿಸುವಂತೆ ಅಡ್ಮಿನ್ಗೆ ಮನವಿಯನ್ನು ಮಾಡಿದೆವು.ಆ ಮನವಿಗೂ ಅಡ್ಮಿನ್ನ ಪುರಸ್ಕಾರ ದೊರೆಯಲಿಲ್ಲ.ಆಗ ಅವನ ಬಗ್ಗೆ ಮಾಹಿತಿ ಕಲೆ ಹಾಕಲು ನಿಂತೆವು.ಸಿಕ್ಕಿದ ಮಾಹಿತಿಗಳು ನಿಜವಾಗಿಯೂ ಆಘಾತಕಾರಿಯಾಗಿತ್ತು.
ವೆಲ್ ವಿಷರ್ ಅನ್ನುವದು ಒಂದಷ್ಟು ಧರ್ಮಪ್ರಚಾರಕರು ಧರ್ಮ ಪ್ರಚಾರದ ಉದ್ದೇಶ ಹೊಂದೆ ರಚಿಸಿದ ಅಡ್ಮಿನ್ ಆಗಿದ್ದ.ಸ್ನೇಹ ಸಂವಾದ ವೆಂಬ ಗ್ರೂಪ್ ಹೆಸರು ಜನರನ್ನು ಆಕರ್ಷಿಸುವ ಸಲುವಾಗಿ ಇಡಲಾಗಿತ್ತು.ಅದಕ್ಕಾಗಿ ಅಲ್ಲಿ ಮಾನವೀಯ ಸಂವೇದನ ಪೋಸ್ಟ್ಗಳು ಮಾಯವಾಗುತಿದ್ದವು.ಸಿಕ್ಕಿದ ಮಾಹಿತಿಗಳನ್ನು ಸಂಬಂದ ಪಟ್ಟವರಿಗೆ ಒಪ್ಪಿಸಿ ಸಮಾಜದ ಸ್ವಾಸ್ತ ಕಾಪಾಡುವಲ್ಲಿ ಇತ್ತ  ಗಮನ ಹರಿಸಿ ಎಂಬ ಮಾಹಿತಿಯನ್ನು ಕೊಟ್ಟಿದ್ದೇವೆ.ಒಂದಷ್ಟು ಫೇಕ್ ಪ್ರೊಫೈಲ್ ಮಾಹಿತಿ ಬಹಿರಂಗ ಗೊಂಡಿತು. ಇತರ ಧರ್ಮಗಳನ್ನು ಕೀಳಾಗಿ ಸಂಬೋದಿಸುವದನ್ನು ನೋಡಿಯೇ ಅದ ತಡೆಯಲು ಈ ದಾರಿಯನ್ನು ತನ್ನದಾಗಿಸಿ ಕೊಂಡಿದ್ದರು.ಅಲ್ಲದೆ ಈ ಗ್ರೂಪ್ ಅಡ್ಮಿನ್ ಮಂದಿಯೇ ಇದೆ ತರದ ಇನ್ನಸ್ಟು ಧರ್ಮ ಪ್ರಚಾರಕ ಗ್ರೂಪ್ ಹೊಂದಿದ್ದಾರೆ ಎಂಬ ಮಾಹಿತಿ ಸಿಕ್ಕಿತು.


ಅಷ್ಟಕ್ಕೂ ನಾವಲ್ಲಿ ಪ್ರತಿಪಾದಿಸಿದ್ದು ಧರ್ಮ ವಿರೋದಿ ನೀತಿಯಲ್ಲ.ಧರ್ಮಗಳ ಬಗ್ಗೆ ಸಹ್ಯವಾಗಿ ಚರ್ಚೆಗಳು ಸಾಮಜಿಕ  ತಾಣದಲ್ಲಿ ನಡೆಯುವದು ಸಾದ್ಯವಿಲ್ಲ ಅನ್ನುವದನ್ನು ಅಲ್ಲಿನ ಸ್ಥಿತಿ ಗತಿ ನೋಡಿ ಮನಗಂಡು ಅದರದೇ ಆದ ವೇದಿಕೆಯಲ್ಲಿ ಚರ್ಚಿಸುವದು ಉತ್ತಮ .ಸಾಮಾಜಿಕ ತಾಣಗಳು ಇದಕ್ಕೆ ವೇದಿಕೆಯಲ್ಲ.ಪರಸ್ಪರ ಧರ್ಮ ದೂಷಣೆ ದ್ವೇಷ ಬಾವಕ್ಕೆ ನಾಂದಿ ಹಾಡುತ್ತದೆ ಧರ್ಮದ ಅಮಲಿನಲ್ಲಿ ಮಾನವೀಯ ಮೌಲ್ಯಗಳು ಮರೆಯಾಗದಿರಲಿ ಎಂಬುದಾಗಿತ್ತು.ಹೇಳಿ ನಾವು ದಿನವು ನೋಡುವಂತ ಫೇಸ್ ಬುಕ್ ನಲ್ಲಿ ಇಂತ  ಸಮಾಜ ಸ್ವಾಸ್ತ್ಯ ಕೆಡಿಸುವಂತ ಚಟುವಟಿಕೆಗಳು ಎಷ್ಟು ಸಮಂಜಸ?ನಾವು ಹಳಿಗೆ ಬಿದ್ದಿರುವದು ಫೇಸ್ ಬುಕ್ ನ ಒಂದು ಗ್ರೌಪ್ನಲ್ಲಿ.ಇನ್ನು ಇಲ್ಲಿ ನಡೆಯುತ್ತಿರುವ ಇಂತಹ ಚಟುವಟಿಕೆ ಇನ್ನೆಷ್ಟೋ!!ಇವತ್ತು ಫೇಸ್ ಬುಕ್,ಟ್ವಿಟ್ಟರ್ ಮುಂತಾದ ಸಾಕಸ್ಟು ಅಂತರ್ಜಾಲದ ತಾಣಗಳು ಸಣ್ಣ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರ ತನಕ ಸುಲಭವಾಗಿ ಕೈಗೆ ನಿಲುಕುತ್ತಿದೆ.ಯುವ ಜನತೆಯಂತು ಇಂತ ತಾಣಗಳಿಗೆ ಫಿಧಾ ಆಗಿದ್ದಾರೆ.ಇಲ್ಲಿ ನಡೆಯುವ ಅನಾಗರಿಕ ಚಟುವಟಿಕೆಗಳಿಗೆ ಕಡಿವಾಣದ ಅಗತ್ಯವಿದೆ.ಎಲ್ಲರೂ ಈ ನಿಟ್ಟಿನಲ್ಲಿ ಯೋಚಿಸಿದರೆ ಸ್ವಲ್ಪ ಮಟ್ಟಿನಲ್ಲಿ ಇಂತ ಚಟುವಟಿಕೆಗಳನ್ನು ತಡೆಯಬಹುದೇನೋ?ಒಟ್ಟಿನಲ್ಲಿ ಫೇಸ್ ಬುಕ್ ಗೆ ಹಲವಾರು ಮುಖಗಳಿವೆ ಎಂಬ ಎಚ್ಚರ ಇದ ಬಳಸುವ ಮುಂದು ನಮಗಿರಲಿ.
ನಿಮ್ಮವ.............
ರಾಘವೇಂದ್ರ ತೆಕ್ಕಾರ್ 

No comments:

Post a Comment