Sunday, September 4, 2011

ಗಮ್ಯದೆಡೆಗೆ ಪಯಣ

ಧರ್ಮ, ಜಾತಿ, ಮುಂತಾದವು ನಮಗೆ ಅವಶ್ಯಕವೆ? ಅಂತ ಇಲ್ಲೇ ಹಿಂದೊಮ್ಮೆ ನನ್ನ ವಿಚಾರಗಳನ್ನು ಬರೆದಿದ್ದೆ.ಇದೇನಪ್ಪ ಇವ್ನು ಧರ್ಮ ಜಾತಿಯತೆಗೆ ಒಳಪಡದ ತಾಣ ಅಂತ ಟಾಗ್ ಹಾಕಿಕೊಂಡು ಅದೇ ವಿಚಾರ ಗಳನ್ನೂ ಚರ್ಚಿಸುತ್ತಿದ್ದಾನೆ ಅಂತ ಅಂದುಕೊಳ್ಳಬೇಡಿ,ಆ ಮಾತುಗಳಿಗೆ ಬದ್ದನಾಗಿಯೇ ನನ್ನ ವಿಚಾರಗಳನ್ನು ಪ್ರಸ್ತುತ ಪಡಿಸುತಿದ್ದೇನೆ.ಏನು ಮಾಡುವದು ಜಾತಿ ಧರ್ಮ ಮುಂತಾದ ಸಂಕೋಲೆಗಳಿಂದ ಹೊರಬಂದು ಮನುಜ ಮತ ನಮ್ಮದು ಎನ್ನಲು ಇದ್ದ ವ್ಯವಸ್ತೆಯ ನಡುವೆಯೇ ಹೋರಾಟ ನಡಿಬೇಕಲ್ಲ.ಅದಕ್ಕಾಗಿ ಧರ್ಮ ಜಾತಿ ಸಂಪ್ರದಾಯ ಇಂತ ಶಬ್ದಗಳು ಬಳಕೆಗೆ ಬರಬೇಕಾಗುತ್ತದೆ ಆದರೆ ವಿಚಾರಗಳು ಇವುಗಳಿಂದ ಹೊರತಾಗಿರಬೇಕು ಅನ್ನುವ ಆಶಯ ನನ್ನದು. 

ಯಾವುದೇ ಧರ್ಮಗಳು ದೇವರಿಂದ ಹೊರತಾಗಿಲ್ಲ.ದೇವರೇ ಇಲ್ಲ ಅನ್ನುವ ನಾಸ್ತಿಕವಾದಿಗಳು ಹಾಗಾದರೆ ಯಾವದೇ ಧರ್ಮಕ್ಕೆ ಸೇರಿದವರು ಅಲ್ಲ ಅಂತವೇ!!!!!!!!!?ವಿಷಯ ಜಟಿಲವಾಗಿದೆ ಅನ್ನಿಸುತ್ತಿಲ್ಲವೇ ಮುಂದೆ ಈ ಬಗ್ಗೆ ನನ್ನ ವಿಚಾರಗಳನ್ನು ತಿಳಿಸುತ್ತಾ ಮುಂದುವರಿಯುತ್ತೇನೆ.ನಾಸ್ತಿಕರನ್ನು ವಿಚಾರ ಅರಗಿಸಿಕೊಂಡವರು ಅನ್ನಬಹುದ!!!!!!!!!,ಬಹುಶಃ ಇದು ದೊಡ್ಡ ಮಾತು. ನನ್ನನ್ನು ನಾಸ್ತಿಕ ಅಂತ ನನ್ನ ಗೆಳೆಯರು ಛೆಡಿಸುವದುಂಟು.ನಾನು ವಿಚಾರಗಳನ್ನು ತಿಳಕೊಂಡ ಪಂಡಿತನಲ್ಲ, ಹಾಗಾದರೆ ನಾನು ಯಾವ ಧರ್ಮಕ್ಕೂ ಸೇರಿದವ ಅಲ್ಲವೇ?!!!!!!!!!!! ಅಲ್ಲವೆಂದು ಆದರೆ ನಾನು ಯಾರು?!!!!!!!! ಯಾಕೆಂದರೆ ನಮ್ಮ ಸಮಾಜದಲ್ಲಿ ಧರ್ಮದ ಐಡೆಂಟಿಟಿ ಇಲ್ಲದವರು ಯಾರು ಇಲ್ಲ.ಹುಟ್ಟಿನಿಂದಲೇ ಅದು ತನ್ನ ಜೊತೆ ಬಂದಿರುತ್ತದೆ ,ಹಾಗಾದರೆ ನಾಸ್ತಿಕನಾದ ನಾನು ಯಾವ ಧರ್ಮದವ?!!!!!!!!!! ಪ್ರಶ್ನೆ ಕಾಡುವದು ಸಹಜ ಅಲ್ವೇ?

ಕೆಲವೊಂದು ಧರ್ಮಕ್ಕೆ ಏಕ ದೇವರು, ಇನ್ನೊಂದಕ್ಕೆ ೩ ದೇವರು,ಇನ್ನು ಕೆಲವಕ್ಕೆ ಕೊಟ್ಯನು ಕೋಟಿ ದೇವರುಗಳು.ಮತ್ತು ಧರ್ಮದಿಂದ ಧರ್ಮಕ್ಕೆ ದೇವರನ್ನು ಪೂಜಿಸುವ ರೀತಿಯಲ್ಲಿನ ವ್ಯತ್ಯಾಸಗಳು , ಇವುಗಳ ಬಗ್ಗೆ ಅನಾವಶ್ಯಕ ಚರ್ಚೆಗಳು ತಲೆಮಾರಿನಿಂದಲೂ ಹಾಗು ಈಗಲೂ ನಡೆಯುತ್ತಿರುವದು ನೋಡುತಿದ್ದೇವೆ. ಅಂದರೆ ದೇವರು ಅನ್ನುವ ದೃಷ್ಟಿಕೋನ ಬದಲಾಗಬೇಕಿದೆ.ಶಿವ,ಬ್ರಹ್ಮ,ವಿಷ್ಣು,ಅಲ್ಲ,ಯೇಸು,ಮಹಾವೀರ ಹೀಗೆ ಎಲ್ಲ ದೇವರು ಆಯಾಯ ಧರ್ಮಗಳಿಗೆ ಮಾತ್ರ ಸೀಮಿತ ಅನ್ನುವ ದೃಷ್ಟಿ ಕೊನವೇ ಬದಲಾಗಬೇಕಿದೆ!!!.ಧರ್ಮದ ನಿಜವಾದ ಉದ್ದೇಶ ಹಾಗು ಕಳಕಳಿಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ!!!.ನಮ್ಮ ದೃಷ್ಟಿಕೋನ ಬದಲಿಸಲು ಎಲ್ಲ ಧರ್ಮಗಳ ಸ್ವಲ್ಪ ತಿಳುವಳಿಕೆ ಸಾಕು. ಮನಸ್ಸು ವಿಶಾಲತೆಯನ್ನು ಹೊಂದಿರಬೇಕು ಅಷ್ಟೇ!!!!.ಅಷ್ಟಕ್ಕೂ ದೇವರು ಅಂದರೇನು!!!!?ದೇವರು ಅಂದರೆ ಒಂದು ಶಕ್ತಿ,ಅದಕ್ಕೆ ರೂಪವಿಲ್ಲ,ಆಕಾರವಿಲ್ಲ,ಅದು ನಮ್ಮಲ್ಲೇ ನಮ್ಮ ಸುತ್ತಲು ಇರುವಂತದ್ದು.ದೇವರ ಕಡೆ ನಡೆಯುವಂತದ್ದು ಅಂದರೆ ಸತ್ಯ ,ಜ್ಯಾನದ ಕಡೆಗೆ ನಡೆಯುವ ಹಾದಿ.ಅದನ್ನೇ ಪೂಜೆ ಪ್ರಾರ್ಥನೆ ಅನ್ನುವದು.ಎಲ್ಲಾ ಧರ್ಮದ ದೇವರ ಕಲ್ಪನೆಯೂ ಇದೆ ಅಂದರೆ ಬೌತಿಕವಾಗಿ ಕಾಣದ ಅಗೋಚರ ವಸ್ತು.ಇದೇನಪ್ಪ ಮೂರ್ತಿ ಪೂಜೆ ಮಾಡುವ ಹಿಂದೂ ಧರ್ಮದಲ್ಲಿ ಹುಟ್ಟಿ ದೇವರು ಆಕಾರವಿಲ್ಲದವನು ಅನ್ನುತ್ತಾನೆ ಇವನು ಅನ್ನುವ ಪ್ರಶ್ನೆ ನಿಮ್ಮದೇ ಹಾಗಾದರೆ ಮುಂದೆ ಓದಿ.

ಮೂರ್ತಿ ಪೂಜೆ ಶಂಕಾಚಾರ್ಯರು ಹಿಂದೂ ಸನಾತನ ಧರ್ಮಕ್ಕೆ ತಂದಿದ್ದು.ಇದಕ್ಕಿಂತಲೂ ಮುಂಚೆ ಅಗ್ನಿಯ ಉಪಾಸನೆ ಹಾಗು ಆ ಮುಲಕ ದೇವರಿಗೆ ಹವಿಸ್ಸನ್ನು ಅರ್ಪಿಸುವ ಕ್ರಮವಿತ್ತು.ಅದು ಅತಿರೇಕಕ್ಕೆ ತಲುಪಿ ಯಜ್ಞ ಯಾಗದಿಗಳ ಮುಲಕ ನರಬಲಿ,ಪ್ರಾಣಿಬಲಿ ವರೆಗೆ ತಲುಪಿತೋ ಅವಾಗ ಜನ ಭೌದ ಮತದತ್ತ ಹೋಗತೊಡಗಿದರು.ಆಗ ಶಂಕರಾಚಾರ್ಯರು ಸನಾತನ ಧರ್ಮದ ಉಳಿವಿಗಾಗಿ ಮೂರ್ತಿ ಪೂಜೆ ತಂದಿದ್ದು.ಅದು ಕೂಡ ತೀರ ಮುಡತೆಯತ್ತ ಈಗ ತಿರುಗುತ್ತಿರುವದು ವಿಪರ್ಯಾಸವೇ ಸರಿ.ಹಾಗಾದರೆ ಶಂಕರಾಚಾರ್ಯರು ಭೌದ ಮತದತ್ತ ಜನ ಹೋಗದಂತೆ ತಡೆಯಲು ಮೂರ್ತಿ ಪೂಜೆ ಬಳಕೆಗೆ ಯಾವ ಉದ್ದೇಶದಿಂದ ತಂದಿರಬಹುದು ಎಂಬುದನ್ನು ತಿಳಿಯಲು ಹೊರಟಾಗಲೇ ದೇವರು ಅನ್ನುವ ಕಾನ್ಸೆಪ್ಟ್ ಬಿಚ್ಚಿಕೊಳ್ಳುವದು.ಮೂರ್ತಿ ಪೂಜೆಗಿಂತ ಮೊದಲು ಅಗ್ನಿಯನ್ನು ಪೂಜಿಸುತಿದ್ದರು ಯಾಕೆ?ಮೂಲ ಅಗ್ನಿ ಅನ್ನುವದು ನಿರಾಕರ, ಕಣ್ಣಿಗೆ ಕಾಣದ್ದು.ಅದಕ್ಕೆ ಯಾವಾಗ ಮಾಧ್ಯಮಗಳನ್ನು ಕಲ್ಪಿಸಿಕೊಡುತ್ತೆವೋ ಅವಾಗ ಅದು ಬೆಂಕಿ ರೂಪ ತಾಳುವದು.ಆ ಬೆಂಕಿಯ ರೂಪ ಹಲವು ಆದರೆ ಮೂಲ ಮಾತ್ರ ಒಂದೇ.ಅದೇ ರೀತಿ ದೇವರು ಅನ್ನುವ ನಿರಾಕಾರ ,ಕಣ್ಣಿಗೆ ಕಾಣದ ಶಕ್ತಿಯನ್ನು ಪುಜಿಸಲಿರುವ ಮಾಧ್ಯಮವಾಗಿ ಮೂರ್ತಿ ಪೂಜೆ ಜಾರಿಯಾಗಿತ್ತು.ತನ್ಮೂಲಕ ಪೂರ್ಣ ಜ್ಯಾನ,ಸತ್ಯದ ಅರಿವನ್ನು ಪಡೆಯಲು ಅದರದೇ ಅದ ಪೂಜಾ ಕ್ರಮ ರೂಪುಗೊಂಡಿತ್ತು .ಇದು ಹಿಂದೂ ಧರ್ಮ ಬಗ್ಗೆ ಆದರೆ, ಇಸ್ಲಾಂ ದೇವರು ನಿರಾಕರ ಅನ್ನುತ್ತ ಆ ನಿರಾಕರತೆಯನ್ನೇ ಪೂಜಿಸುತ್ತಾರೆ.ಕ್ರಿಸ್ತಿಯನ್ನ್ ಧರ್ಮಕ್ಕೆ ಬಂದರೆ ಪ್ರಭುವಿನ ರೂಪವಾಗಿ ನನ್ನನ್ನು ಪೂಜಿಸಿ ಅಂತ ಕ್ರಿಸ್ತ ನಿರಾಕರತೆಯತ್ತ ಬೆಟ್ಟು ಮಾಡುತ್ತಾನೆ.ಹೀಗೆ ಎಲ್ಲ ಧರ್ಮ ಕೂಡ ದೇವರನ್ನುವದನ್ನು ನಶ್ವರ ದತ್ತ ಬೆಟ್ಟು ಮಾಡುತ್ತದೆ.ಅಂದರೆ ಎಲ್ಲ ಧರ್ಮದ ದೇವರು ಒಬ್ಬನೇ ಅಂತಾಯ್ತು.

ಇನ್ನು ದೇವರು ನಂಬಿಕೆಯಲ್ಲಿ ಆಸ್ತಿಕರು, ನಾಸ್ತಿಕರು ಅಂದವಾಗ ಇವರನ್ನು ವಿಶ್ಲೇಷಿಸುವದು ಎಂತು.ನನ್ನ ಪ್ರಕಾರ ಕೆಳಗಿನಂತೆ
ಎಲ್ಲರೂ ಏನನ್ನೋ ಯಾವಾಗಲು ಹುಡುಕಾಡುತ್ತಲೇ ಇರುತ್ತಾರೆ.ಅದು ವಸ್ತುಗಳನ್ನೂ ಅಥವ ವಸ್ತುವಲ್ಲದ ಮಾನಸಿಕ ವಿಚಾರ ಇರಬಹುದು!!ಈ ನಿರಂತರವಾದ ಹುಡುಕುವಿಕೆಯ ಉದ್ದೇಶ ಶಾಂತಿಯನ್ನು ಸಮಾಧಾನವನ್ನೂ ಹಾಗು ಸಂತೋಷವನ್ನು ನಮ್ಮದಾಗಿಸಿಕೊಳ್ಳುವದು.ತಪ್ಪು ಒಪ್ಪುಗಳ ಆಲೋಚನೆ ಇದರ ಜೊತೆಯಲ್ಲಿ ಪ್ರಾಪಂಚಿಕವಾದ ವ್ಯವಹಾರಿಕ ಚಿಂತನೆ.ಇವುಗಳ ನಡುವೆ ಸಂಧಿಘ್ದತೆ ವಿಪ್ಲವಗಳು ವಿವಾದಗಳು ಸಂಘರ್ಷಗಳ ಸರಮಾಲೆ!!!ಇವಲ್ಲವನ್ನೂ ದಾಟಿ ಹೋದರೆ ಮತ್ತೆ ನಾನು ಯಾರು ಎಂಬ ಪ್ರಶ್ನೆ ನಿರಂತರವಾಗಿ ಕಾಡುವುದು.ಇವಲ್ಲವೂ ನಶ್ವರ ನಾನು ಎನ್ನುವುದು ದೇಹ ದೇಶ ಕಾಲ ವನ್ನೂ ಮೀರಿರುವಂಥದ್ದು ಎಂಬ ಸತ್ಯದ ಕಡೆಗೆ ಪ್ರಯಾಣ ನಮಗೆ ಅರಿವಿದ್ದೋ ಇಲ್ಲದೆಯೋ ನಡೆಯುತ್ತಲೇ ಇರುತ್ತದೆ!!!!!ಈ ಅರಿವಿಗೆ ಧರ್ಮದ ನೆಲಗಟ್ಟಿನಲ್ಲಿ ಸಾಗುವವರನ್ನು ಆಸ್ತಿಕರು ಹಾಗು ತಮ್ಮದೇ ವಿದಾನದಲ್ಲಿ ಪ್ರಕೃತಿ ಶಕ್ತಿ ಯನ್ನು ನಂಬಿಕೊಂಡು ಸಾಗುವವರನ್ನು ನಾಸ್ತಿಕರು ಅನ್ನಬಹುದು.ಅಂದರೆ ಇಬ್ಬರ ಪಯಣವು ಒಂದೇ ಗಮ್ಯದೆಡೆಗೆ.ಸಾಗುವ ದಾರಿಯಲ್ಲಿ ಯಾಡವಟ್ಟು ಮಾಡಿಕೊಳ್ಳುವ ಸಂಭವ ಎರಡು ದಾರಿಯಲ್ಲಿವೆ.ನಾಸ್ತಿಕರಾಗಲಿ, ಅಸ್ತಿಕರಾಗಲಿ ಒಂದು ಶಕ್ತಿಯನ್ನು ನಂಬುವದು ಸತ್ಯ.ಅದು ದೇವರು ಅಂತ ಹೆಸರಿರುವದು ಅಗಬೇಕಂತಿಲ್ಲ. ನಾನು ಯಾರು ಅನ್ನುವದಕ್ಕೆ ಉತ್ತರ ಸಿಕ್ಕಿದಲ್ಲಿ ಅದು ಮೋಕ್ಷ ಅಥವಾ ಪಯಣದ ಕೊನೆ.ಅವ ಕಂಡುಕೊಂಡ ವಿಚಾರಗಳ ಸಾರವೇ ಅವನ ಆತ್ಮ.ಆತ್ಮದ ಮರುಹುಟ್ಟು ಅಂದರೆ ಅವನ ವಿಚಾರಗಳ ಮರು ಹುಟ್ಟು ಅನ್ನುವದು ಅರ್ಥ.ಇವೆಲ್ಲ ಗೊಂದಲಗಳ ನಿವಾರಣೆಗೆ ಮೊದಲು ಮನುಜರಾಗಬೇಕಾಗುತ್ತದೆ.ಕವಿ ಕುವೆಂಪು ರವರ ವಿಶ್ವ ಮಾನವ ಸಂದೇಶ ಇವುಗಳನ್ನೆಲ್ಲ ಸಾದಿಸುವದಿಕ್ಕಿರುವ ಸುಲಭ ಪರಿಹಾರ.ಮುಂದೆ ಈ ಬಗ್ಗೆ ಸಾದ್ಯವಾದರೆ ಬರೆದುಕೊಳ್ಳುತ್ತೇನೆ. 

ನಿಮ್ಮವ...............
ರಾಘವೇಂದ್ರ ತೆಕ್ಕಾರ್ 



No comments:

Post a Comment