Thursday, October 20, 2011

ಶಂಕರ್ ನಾಗ್ ಕನಸು ನನಸಾದ ದಿನ - ನಮ್ಮ ಮೆಟ್ರೋ ಇಂದು ಜನತೆಗೆ.


ನನ್ನ ಬೆಂಗಳೂರಿನ ಜನ ಮೆಟ್ರೋದಲ್ಲಿ ಓಡಾಡಬೇಕು , ಆದರೆ ಇದರಿಂದ ನನ್ನ ಬೆಂಗಳೂರಿನ ಸೌಂದರ್ಯ ಹಾಳಾಗಬಾರದು,ಯಾವುದೇ ಕಟ್ಟಡಗಳಿಗೂ ಹಾನಿಯಾಗಬಾರದು,ಮೆಟ್ರೋ ಏನಿದ್ದರು  ಸುರಂಗ ಮಾರ್ಗದಲ್ಲೇ ಸಂಚರಿಸಬೇಕು,ಮೆಟ್ರೋದಲ್ಲಿ ಸಂಚರಿಸುವ ಪಾದಚಾರಿಗಳು ಅಷ್ಟೇ ಸುರಂಗ ಮಾರ್ಗದಲ್ಲೇ ಸಂಚಾರ ವ್ಯವಸ್ಥೆ ಅವರಿಗೆ ಕಲ್ಪಿಸಬೇಕು.ಅದರಿಂದಾಗಿ ಇತರ ಟ್ರಾಫಿಕ್ ವ್ಯವಸ್ಥೆಗಳಿಗೆ  ತೊಂದರೆ ಆಗಬಾರದು. ಇಂಥ ಪ್ರಥಮ ಬೆಂಗಳೂರು ಮೆಟ್ರೋ ಕನಸನ್ನು ಕಂಡವರು ದಿವಂಗತ ಮೆಚ್ಚಿನ ನಟ ಶಂಕರ್ ನಾಗ್ , ೧೯೮೭ ರಲ್ಲಿ ತನ್ನ ಮಾಲ್ಗುಡಿ ಡೇಸ್ ಪ್ರದರ್ಶನಕ್ಕೆ ಲಂಡನ್ ಗೆ ಹೋದಾಗ ಅಲ್ಲಿನ ಮೆಟ್ರೋ ನೋಡಿ ತನ್ನ ಬೆಂಗಳುರಿಗೂ ಇಂತದ್ದೊಂದು ಸಂಚಾರ ವ್ಯವಸ್ಥೆ ಬೇಕು ಅನ್ನೋ ಕನಸು ಕಂಡಿದ್ದ ಶಂಕರ್.ಅದಕ್ಕಾಗಿ ತನ್ನ ಸ್ವಂತ ಹಣದಿಂದ ಜರ್ಮನ್ ಮತ್ತು ಜಪಾನ್ ನಿಂದ ೨ ತಂಡವನ್ನು ಕರೆಸಿ ಸರ್ವೇ ಮಾಡಿಸಿದ್ದ. ಆಗಿನ ಕಾಲದಲ್ಲಿ ಈ ಕಾರ್ಯಕ್ಕೆ ಶಂಕರ್ ಗೆ  ತಗುಲಿದ ವೆಚ್ಚ ಬರೋಬ್ಬರಿ ೮ ಲಕ್ಷ ರುಪೈಗಳು.ಹೀಗೆ ನಡೆಸಿದ ಸರ್ವೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು ಆಗಿನ ಸರ್ಕಾರ ಈ ಬಗ್ಗೆ ಕಾಳಜಿ ತೋರಿಸದ ಕಾರಣ ಅದು ಮೂಲೆಗುಂಪು  ಆಗಿತ್ತು.ಇಲ್ಲದಿದ್ದಲ್ಲಿ ೧೫-೨೦ ವರುಷಗಳ ಹಿಂದೆಯೇ ಬೆಂಗಳೂರಿಗೆ ಮೆಟ್ರೋ ದೊರಕುತ್ತಿತ್ತು. ಶಂಕರ್ ನಾಗ್ ಪ್ಲಾನ್ ಪ್ರಕಾರ ಸಂಪೂರ್ಣ ಮೆಟ್ರೋ ಕಾಮಗಾರಿ ಸಂಪೂರ್ಣ ಬೆಂಗಳೂರು ನಗರಕ್ಕೆ ಸಿಗುವಂತೆ ೩ ವರುಷಗಳಲ್ಲಿ ಪೂರ್ಣ ಗೋಳ್ಳುತಿತ್ತು.೧೩-೧೪ ಸಾವಿರಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಇಂದಿನ ಮೆಟ್ರೋಗು ಶಂಕರ್ ಕನಸಿದ ಮೆಟ್ರೋಗು ವ್ಯವಸ್ತೆಯಲ್ಲಾಗಲಿ, ಖರ್ಚಲ್ಲಾಗಲಿ ಅಜಗಜಾಂತರ ವ್ಯತ್ಯಾಸವಿದೆ.ಆದ್ರೆ ಇಂದಿನ ಪರಿಸ್ತಿತಿಯಲ್ಲಿ ಇದು ಅನಿವಾರ್ಯ, ಬೆಂಗಳೂರಿನ ವ್ಯಾಪ್ತಿ ದೊಡ್ಡದಾಗಿದೆ, ಬಹಳಷ್ಟು ಅಭಿವೃದ್ದಿ ಹೊಂದಿದೆ, ಖರ್ಚು ವೆಚ್ಚಗಳು ಜಾಸ್ತಿಯಾಗಿದೆ,ಶಂಕರ್ ಕನಸಿದಂತೆ ಎಲ್ಲ ಕಡೆ ಸುರಂಗ ಮಾರ್ಗ ನಿರ್ಮಿಸಿದಲ್ಲಿ ವೆಚ್ಚ ದ್ವಿಗುಣ ಗೊಳ್ಳುತ್ತದೆ,ಈ ನಡುವೆ ಕಾಣದ ರಾಜಕೀಯ(ಅ)ಇಚ್ಚಾಶಕ್ತಿ ಕೂಡ ಕೆಲಸ ಮಾಡಿರಬಹುದೇ ಗೊತ್ತಿಲ್ಲ ,ಈ ಎಲ್ಲ ನಿಟ್ಟಿನಲ್ಲಿ ಯೋಚಿಸಿದಾಗ ಶಂಕರ್ ನಾಗ್ ಮೆಟ್ರೋ ಕನಸು ಅವ ಕನಸಿದಂತೆ ಅಲ್ಲದಿದ್ದರೂ ಬೇರೆ ರೂಪದಲ್ಲಾದರೂ ಸಾಕಾರಗೊಳ್ಳುತ್ತಿದೆಯಲ್ಲ ಎಂದು ಖುಷಿ ಪಡಲು ಅಡ್ಡಿ ಇಲ್ಲ. 

ಇವತ್ತು ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಅತ್ಯಾದುನಿಕ ಸೌಲಭ್ಯ ಹೊಂದಿದ ಹೈಸ್ಪೀಡ್ ಮೆಟ್ರೋ ರೈಲು ಸಂಪರ್ಕ ಬೆಂಗಳೂರಲ್ಲಿ ಕೇಂದ್ರ ನಗರಾಬಿವ್ರುದ್ದಿ ಸಚಿವ ಕಮಲನಾಥ್ , ಕೇಂದ್ರ ರೈಲ್ವೆ ಸಚಿವ ದಿನೇಶ್ ದ್ವಿವೇದಿ,ಹಾಗು ರಾಜ್ಯದ ಮುಖ್ಯಮಂತ್ರಿ ಡಿ, ವಿ , ಸದಾನಂದ ಗೌಡ ಅವರ ನೇತ್ರತ್ವದಲ್ಲಿ ಉದ್ಘಾಟನೆ ಗೊಳ್ಳಲಿದೆ.ಆ ಮೂಲಕ ಶಂಕರ್ ನಾಗ್ ಕಂಡಿದ್ದ ಕನಸು ನನಸಾಗುತ್ತಿದೆ.ಸಂಜೆ ೪ ಘಂಟೆಯ ನಂತರ ಸಾರ್ವಜನಿಕರಿಗೆ ಈ ಸೇವೆ ಲಭ್ಯವಾಗಲಿದೆ.ನಮ್ಮ ಮೆಟ್ರೋ ನಿರ್ದೇಶಕ ಕೆ ಏನ್ ಶ್ರೀವಾಸ್ತವ್,ವಿ . ಮಧು ,ದಿಲ್ಲಿ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಇ ಶ್ರೀಧರನ್ ಈ ಯೋಜನೆಯ ಆರಂಭಿಕ ರೂವಾರಿಗಳು.ಹಾಲಿ ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಏನ್ . ಶಿವ ಶೈಲಂ ಹಾಗು ಅವರ ಟೀಂ , ೨೦೦೪ ರಿಂದ ಕರ್ತವ್ಯ ಮೆರೆದ ಎಲ್ಲ ರಾಜಕಾರಣಿಗಳು ಹಾಗು ಸಂಭದಪಟ್ಟ ಸರ್ಕಾರಗಳು , ಅಪಾರ ಸಂಖ್ಯೆಯ ಕಾರ್ಮಿಕ ವರ್ಗ ,ಟ್ರಾಫಿಕ್ ಕಿರಿ ಕಿರಿ ಯನ್ನು ನಮ್ಮ ಮೆಟ್ರೋ ಸಲುವಾಗಿ ಆತ್ಮೀಯತೆ ಇಂದಲೇ ಅನಿವಾರ್ಯವಾಗಿ ಸ್ವೀಕರಿಸಿದ ಬೆಂಗಳೂರು ಜನತೆ, ಸಾವಿರಾರು ಜನರು  ಮೆಟ್ರೋ ಕಾಮಗಾರಿಗಾಗಿ ತಮ್ಮ ಆಸ್ತಿ ಪಾಸ್ಥಿಯನ್ನು ಅನಿವಾರ್ಯವಾಗಿ ಒಪ್ಪಿಯೋ,ಒಪ್ಪದೆಯೋ ಕಳಕೊಂಡವರು  ಎಲ್ಲರೂ ಈ ನಿಟ್ಟಿನಲ್ಲಿ ಅಭಿನಂದನೆಗೆ ಅರ್ಹರು.ಈ ಸಂದರ್ಬದಲ್ಲಿ ಸುಮಾರು ೨೦ ವರುಷಗಳ ಹಿಂದೇನೆ ಈ ಬಗ್ಗೆ ಕನಸು ಕಂಡ ಶಂಕರ್ ನಾಗ್ ನೆನಪಾಗುತಿದ್ದಾನೆ,ಅವನ ದೂರ ದೃಷ್ಟಿ ಮೆಚ್ಚುವಂತದ್ದು, ಈ ದಿನ ಇದ್ದರೆ ಅದೆಷ್ಟು ಸಂತಸ ಪಡುತಿದ್ದನೋ......!!!!!!!!! ಅಥವಾ ಈ ಪರಿ ರಾದ್ದಾಂತ ಕಾಮಗಾರಿ , ಉದ್ಘಾಟನೆ ಗೆಂದು ನಡೆವ ದುಂದುವೆಚ್ಚ , ೪೬  ಕಿಲೋ ಮೀಟರ್ ಪೂರ್ಣಗೊಳ್ಳಬೇಕಿರುವ ಮೆಟ್ರೋ ಬರಿಯ ೬ ಕಿಮಿ ಪೂರ್ಣಗೊಂಡು ಅದ ಉದ್ಘಾಟನೆ ನಡೆಸುತ್ತಿರುವದನ್ನು ನೋಡಿ ಮರುಕ ಪಡುತಿದ್ದನೋ !!!!!!! ಗೊತ್ತಿಲ್ಲ.

ಸಂಪೂರ್ಣ ಬೆಂಗಳೂರು  ಮೆಟ್ರೋ ಪಡೆಯಲು ಇನ್ನು ೪-೫ ವರುಷ ಬೇಕಾಗಬಹುದು.ಅಲ್ಲದೆ ಮೆಟ್ರೋದಿಂದ ಸಂಪೂರ್ಣ ಟ್ರಾಫಿಕ್ ಕಂಟ್ರೋಲ್ ಆಗಬಹುದು ಎಂಬುದನ್ನು ನಿರೀಕ್ಷಿಸಲು ಸಾದ್ಯವಿಲ್ಲ.  ಅದೇನೇ ಇರಲಿ ಈ ಮೂಲಕ ಕರ್ನಾಟಕ ಒಂದು ಹಿರಿಮೆಯನ್ನು ತನ್ನ ಮುಡಿಗೇರಿಸಿಕೊಂಡಿದೆ  ಶುಭವಾಗಲಿ.

No comments:

Post a Comment