Tuesday, October 18, 2011

ವ್ಯವಸ್ಥೆಯ ಬಾಹುಬಂದನದಲ್ಲಿ ಬಂದಿಯಾಗಿರುವ ಮಾನವೀಯತೆ.


ಮನುಕುಲದ ಸಂಸ್ಕೃತಿ ಏನು?ಎಲ್ಲ ಧರ್ಮಗಳನ್ನು ಮೀರಿದ ಆ ಸಂಸ್ಕೃತಿಯ ಅರಿವು ನಮಗೆ ಇರುವದಿಲ್ಲ ಯಾಕೆ? ನಾವು ಇನ್ನೊಬ್ಬನನ್ನು ಗುರುತಿಸಬೇಕಾದರೆ ಅವನ ಜಾತಿ ಧರ್ಮದ ಆಧಾರದಲ್ಲೇ ಗುರುತಿಸತೋಡಗುತ್ತೆವಲ್ಲ , ಅವನು ತನ್ನಂತೆ ಒಬ್ಬ ಮಾನವ, ಮೊದಲು ಆ ದೃಷ್ಟಿಯಲ್ಲಿ ಇನ್ನೊಬ್ಬರನ್ನು ನೋಡುವದಿಲ್ಲ ಯಾಕೆ?ಜಾತಿ-ಮತ-ಕುಲ-ಪಂಥಗಳ ಎಲ್ಲೆಗಳನ್ನು ಮೀರಿ ಸಮಾಜಮುಖಿಯಾಗಿ ಮುನ್ನಡೆಯುವ ನಿಜವಾದ ಮಾನವ ಅಂತಃಸತ್ವ ಅಡಗಿರುವ ಸುಖ ನಮ್ಮದಾಗುವದಿಲ್ಲ ಏಕೆ? ಯಾರಾದರು ಮಾನವತೆಯತ್ತ ನಡೆಯೋಣ ಎಂಭ ಸಲಹೆ ಇಟ್ಟಾಗ ಅವ ಧರ್ಮಗಳ ದ್ವೇಷಿ ಆಗುತ್ತಾನೋ? ನಾನಿಲ್ಲಿ ಎತ್ತಿರುವ ಪ್ರಶ್ನೆಗಳು ವಿಚಿತ್ರ ಅನಿಸಬಹುದಲ್ವೆ !!!!!! ಇತ್ತೀಚಿಗೆ ಕಾಡುತ್ತಿರುವ ಬಹಳಷ್ಟು ಪ್ರಶ್ನೆಗಳಲ್ಲಿ ಮೇಲಿನವುಗಳು ಕೆಲವೊಂದು ಅಷ್ಟೇ.ಸಮಾಜದ ವಿವಿದ ಸ್ಥರಗಳಲ್ಲಿ ನನ್ನಂತೆ ಯೋಚಿಸಬಲ್ಲ ಹಲವು ಮಂದಿಗಳಿಗೆ ಎದುರಾಗುವ ಪ್ರಶ್ನೆಗಳು ಇವು.

ಹಾಗಾದರೆ ಮೇಲಿನ ಪ್ರಶ್ನೆಗಳಿಗೆ ಉತ್ತರ ಇಲ್ಲವೇ ಖಂಡಿತ ಇದೆ.ಆದರೆ ಅವನ್ನು ಹೇಳುವದರಲ್ಲಿ ಆಗುವ ಒಳಿತಿಗಿಂತ ಹೇಳಲು ಹೊರಟ ವ್ಯಕ್ತಿಗೆ ಅಪವಾದ ಎದುರಾಗುವದೆ ಹೆಚ್ಚು.ಹುಟ್ಟಿನಿಂದಲೇ ಧರ್ಮ ಆಚಾರಗಳು ನಮ್ಮದಾಗಿರುವದಿಲ್ಲ, ಅವನ್ನು ಬೆಳೆಯುತ್ತ ಪಡೆಯುತ್ತೇವೆ ಯಾಕೆಂದರೆ ಉತ್ತಮ ವ್ಯಕ್ತಿಯಾಗಿ ರುಪಿತವಗುವದಕ್ಕೆ ಮತ್ತು ಜೀವನಕ್ಕೆ ಒಂದು ನೀತಿ ನಿಯಮದ ಅನುಸ್ಟಾನಕ್ಕೆ ಮಾರ್ಗದರ್ಶಿ  ಆಗುವದಕ್ಕೆ!!!! ಅನ್ನೋದು ಕೆಲವೊಂದು ಧರ್ಮ ವಿದ್ವಾಂಸರಲ್ಲಿ ಹೀಗೆ ಕೆಲವೊಂದು ಚರ್ಚೆ ನಡೆಸುತ್ತಾ ಕೇಳಿ ತಿಳಿದುಕೊಂಡೆ.,ಹಾಗಾದರೆ ಧರ್ಮಗಳನ್ನು  ಆ ನಿಟ್ಟಿನಲ್ಲಿ ನಾವು  ಎಷ್ಟು ಜನ ಅರ್ತೈಸಿಕೊಂಡಿದ್ದೇವೆ?ಹೀಗೆ ಹೇಳುವ ವಿದ್ವಾಂಸರನ್ನು ಒಳಗೂಡಿ, ರಾಜಕೀಯ ಕ್ಷೇತ್ರದಿಂದ ಹಿಡಿದು ಬಯೋತ್ಪಾದನೆಯೋರಗೆ ಧರ್ಮ ವಿಚಾರಗಳು ಹಬ್ಬಿದೆಯಲ್ಲ ಇದಕ್ಕೆಲ್ಲ ಹಾಗಾದರೆ ಕಾರಣ ನಾವೇ ಅಲ್ಲವೇ?? ಧರ್ಮಗಳು  ಉತ್ತಮ ವ್ಯಕ್ತಿಯಾಗಿ ರುಪಿತವಗುವದಕ್ಕೆ ಮತ್ತು ಜೀವನಕ್ಕೆ ಒಂದು ನೀತಿ ನಿಯಮದ ಅನುಸ್ಟಾನಕ್ಕೆ ಮಾರ್ಗದರ್ಶಿ  ಅನ್ನುವದೇ ಸತ್ಯವಾದರೆ ಅದನ್ನು ನಾವು ಅಳವಡಿಸಿಕೊಂಡಿದ್ದೆ ನಿಜವಾದಲ್ಲಿ ಧರ್ಮದ ಹೆಸರಲ್ಲಿ ಅನಾಚಾರ ರುಪಿತಗೊಂಡಿದ್ದನ್ನು ನೋಡಿದಲ್ಲಿ ಇದನ್ನು ಎಲ್ಲರೂ ಸರಿಯಾಗಿ ಅರ್ತಯೇಸಿಲ್ಲ ಅನ್ನುವ ನಿರ್ಧಾರವೇ ಸರಿ ಅನ್ನೋದು ನನ್ನ ಅನಿಸಿಕೆ.ಇಷ್ಟಕ್ಕೂ ಧರ್ಮವಿಚಾರ ಬೇಕೇ ಬೇಡವೇ ಅನ್ನೋದು ಇನ್ನೊಂದು ತೆರನಾದ ತರ್ಕ. ಪರಸ್ಪರ ವ್ಯಕ್ತಿಗೌರವವೇ ಮಾನವತೆಯ ಮೊದಲ ಪಾಠ , ಇದೆ ಸಾಮಾಜಿಕ ನ್ಯಾಯದ ಮೊದಲ ಮೈಲಿಗಲ್ಲು ಆದುದರಿಂದ ಧರ್ಮ ನಿಟ್ಟಿನಲ್ಲಿ ಸಾಗುವವರು ಹಾಗು ತನ್ನದೇ ಅತ್ಮಬಲದ ಮೂಲಕ ಸಾಗುವವರು ಯಾರನ್ನು ದೂರಲು ಆ ಅರ್ಹತೆ ಯಾರಿಗೂ ಇಲ್ಲ.

ನಾನು ಕಂಡು ಕೊಂಡಂತೆ ಭಯೋತ್ಪಾದನೆಯು ರಾಜಕೀಯ ಲಾಭಕ್ಕಾಗಿ ನೆಡೆಸುವ ಹಿಂಸೆಯ ಪ್ರಯೋಗ. ಸಾಮಾನ್ಯವಾಗಿ ಯುದ್ಧಗಳಲ್ಲಿರುವಂತೆ ಯಾವುದೂ ನೀತಿ ನಿಯಮಗಳು ಭಯೋತ್ಪಾದನೆಯಲ್ಲಿರುವುದಿಲ್ಲ. ಇದರಿಂದಾಗಿ ಯಾವುದೇ ಸಮಾಜದ ನೀತಿ ನಿಯಮಗಳನ್ನು ಧಿಕ್ಕರಿಸಿ ವ್ಯವಸ್ಥೆಯನ್ನು ಬುಡಮೇಲು ಮಾಡಲು ವ್ಯವಸ್ಥಿತವಾಗಿ ನೆಡೆಸಲ್ಪಡುವ ಕ್ರಿಯೆ.
ಭಯೋತ್ಪದಕರ ಧಾಳಿಯು ಸಮಾಜದ ಎಲ್ಲ ವರ್ಗ ಮತ್ತು ಪಂಗಡಗಳನ್ನು ಭೇದ ಭಾವವಿಲ್ಲದೆ ನಾಶಪಡಿಸುವುದರಿಂದ "ಭಯೋತ್ಪಾದನೆ" ಎಂಬ ಪದವು, "ಅನ್ಯಾಯ", "ಅನೀತಿ", "ದೋಷಪೂರಿತ", "ವಿತಂಡ", "ಹೇಯ" ಮತ್ತು "ಹಿಂಸಾತ್ಮಕ" ಎಂಬ ಅರ್ಥ ಕೊಡುವ ಎಲ್ಲ ಪದಗಳ ಜೊತೆ ತಾಳೆ ಹೊಂದುತ್ತದೆ. ವಿಶ್ವದ ಸರ್ಕಾರಿ, ಅಸರ್ಕಾರಿ ಸಂಸ್ಥೆಗಳು ಮತ್ತು ವಿದ್ವಾಂಸರು "ಭಯೋತ್ಪಾದನೆ ಅಥವಾ ಭಯೋತ್ಪಾದಕ" ಎಂಬ ಪದವನ್ನು ವಿಶ್ವ ಮಾನ್ಯತೆ ಹೊಂದದ ಸೈನಿಕ ಶಕ್ತಿ ಎಂದೇ ಪರಿಗಣಿಸುತ್ತಾರೆ. ಯಾಕೆಂದರೆ ವಿಶ್ವದ ಎಲ್ಲ ದೇಶಗಳ ಸೈನ್ಯ ಸಂಸ್ಥೆಗಳು ವಿಶ್ವಸಂಸ್ಥೆಯ ಸಾಮಾನ್ಯ ಸೈನಿಕ ನಿಯಮಗಳಿದೆ ಬಧ್ಧರಾಗಿರುತ್ತಾರೆ. ಆದ್ಧರಿಂದ ಭಯೋತ್ಪಾದಕರು ಯಾವಾಗಲೂ ವಿಶ್ವದ ಖಂಡನೆಗೆ ಒಳಗಾಗುವ "ದುರ್ಜನರು".ಹೀಗಿರಬೇಕಾದರೆ ಧರ್ಮಗಳು ರಾಜಕೀಯ  ಮತ್ತು  ಬಯೋತ್ಪಾದನೆ ಜೊತೆಗೆ ತಳುಕು ಹಾಕಿಕೊಳ್ಳುತ್ತವಲ್ಲ ಯಾಕೆ?ಎಲ್ಲರಿಗೂ ತಮ್ಮ ನಿಲುಕಿಗೆ ಸಿಗುವ ವಿಚಾರ ಆಗಿದ್ದರು ಕೂಡ ಮತ್ತೆ ಮತ್ತೆ ನೆನಪಿಸಿಕೊಳ್ಳುವ ಅನಿವಾರ್ಯತೆ ಇವತ್ತಿನ ದಿನಗಳಲ್ಲಿ  ಇದೆ.

ರಾಜಕಿಯತೆಗೆ ಧರ್ಮ ಜಾತಿ ಯಾಕೆಂದರೆ ವೋಟ್ ಬ್ಯಾಂಕ್ ರಚಿಸಿಕೊಳ್ಳುವದಕಷ್ಟೇ.ಆದರೆ ನಮ್ಮ ಹಲವಷ್ಟು ರಾಜಕಾರಣಿಗಳಿಗೆ ಸಮಾಜದಲ್ಲಿ ಈ ಮೂಲಕ ಒಡಕನ್ನು ಬಿತ್ತುತಿದ್ದೇವೆ ಅನ್ನುವದು  ಗೊತ್ತಿಲ್ಲ ಅಂತ ಅಲ್ಲ ,ತಮ್ಮ ಸ್ವಾರ್ಥಕ್ಕಾಗಿ ಈ ವಿಚಾರ ಅವರಿಗೆ ಗೌಣ.ಇದಕ್ಕೆ ಪ್ರಜೆಗಳು ಆದ ನಮ್ಮದು ಬಹಳಷ್ಟು ಪಾಲು ಇದೆ.ನಾವಿನ್ನು ಪಕ್ಷಾತೀತವಾಗಿ ಯೋಚನೆ ಮಾಡುವದನ್ನು ರೂಡಿಸಿಕೊಂಡೆ  ಇಲ್ಲ.ಕಾರಣ ಇಷ್ಟೇ ನಾವು ಮೊದಲು ಮಾನವ ಅನ್ನುವ ದೃಷ್ಟಿಕೋನವೇ ನಮ್ಮಲ್ಲಿ ಇಲ್ಲ. ನಾವು ಜಾತಿ ಧರ್ಮ ಹೆಸರಿನಲ್ಲೇ ಗುರುತಿಸಿಕೊಳ್ಳಲು ಇಚ್ಛೆ ಪಡುತ್ತೇವೆ ಆದುದರಿಂದ ನಮ್ಮ ಈ ತನವನ್ನು ರಾಜಕಾರಣಿಗಳು  ಸುಲಬದಲ್ಲಿ  ತಮ್ಮ ಸ್ವಾರ್ಥಕ್ಕಾಗಿ  ಬಳಸಲು ನಾವೇ ಅನುವು ಮಾಡಿಕೊಟ್ಟಿದ್ದೇವೆ.ಹೀಗಿದ್ದಾವಾಗ ರಾಜಕಾರಣಿಗಳನ್ನು ದೂರುವದು ಎಂತು?ಈ ರೀತಿಯಲ್ಲಿ ಮೂಲವನ್ನು ಅವಲೋಕಿಸುತ್ತಾ ನಡೆದಲ್ಲಿ ಸಮಾಜ ಒಡೆಯುವ ಕೆಲಸದಲ್ಲಿ ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ಒಂದು ಪಾತ್ರವಗಿದ್ದ್ದೇವೆ ಅಂದರು ತಪ್ಪಿಲ್ಲ ಅಲ್ಲವೇ?
ಬಯೋತ್ಪಾದನೆ ಎಂಬುದು ಒಬ್ಬ ವ್ಯಕ್ತಿ ಇಂದ ರೂಪುಗೊಳ್ಳಲು ಸಾಧ್ಯವೇ ಇಲ್ಲ , ಅದಕ್ಕೊಂದು ಸಂಘಟನೆ ಬೇಕು ಅದರ ಕ್ರಿಯೆಯನ್ನು ಜಾರಿಗೊಳಿಸಲು ಒಂದಷ್ಟು ಸಾವಿರ ಮಂದಿ ಅವರಿಗೆ ಬೇಕು.ಸಾಮಾಜಿಕ  ಸಮಾನತೆ ಎಂಬೋ ನಿಟ್ಟಿನ ಹಿಂಸಾ  ರೂಪಕ!! ಬಯೋತ್ಪದನೆಯ ಒಂದು ಮುಖವಾದರೆ ಧರ್ಮ ನ್ಯಾಯ!!ಅನ್ನುವದು ಇದರ  ಇನ್ನೊಂದು ಹಿಂಸಾ ಮುಖ.ಇವೆರಡು ಕ್ರಿಯೆಗಳು ಮೇಲೆ ಹೇಳಿದಂತೆ "ಅನ್ಯಾಯ", "ಅನೀತಿ", "ದೋಷಪೂರಿತ", "ವಿತಂಡ", "ಹೇಯ" ಮತ್ತು "ಹಿಂಸಾತ್ಮಕ" ಎಂಬ ಅರ್ಥ ಕೊಡುವ ಎಲ್ಲ ಪದಗಳ ಜೊತೆ ತಾಳೆ ಹೊಂದುವ ಭಯೋತ್ಪಾದನೆ ಕ್ರಿಯೆಯೇ.ಧರ್ಮದ ಹೆಸರು ತೆಗೆದು ಒಂದಷ್ಟು ಜನರನ್ನು ಒಟ್ಟುಗೂಡಿಸುವದು ಬಹಳ ಸುಲಭದ ದಾರಿ.ಆ ಮೂಲಕ ತನ್ನ ಕ್ರಿಯೆಯನ್ನು ಜಾರಿಗೆ ತರುವಾಗ ಎಲ್ಲ ಧರ್ಮಿಕರನ್ನು ಸೇರಿಸಿಯೇ ಕೊಲ್ಲುತ್ತಾರಲ್ಲವೇ ಈ ಬಯೋತ್ಪಾದಕರು ಅಂದರೆ ಅವರು ಧರ್ಮದ ಹೆಸರನ್ನು ಬಳಸುವದು ತಮ್ಮ ಸ್ವಾರ್ಥಕ್ಕೆ ಬಳಸುವದು.ತಮ್ಮ ರಾಜಕೀಯ ಇತರ ಉದ್ದೇಶಗಳ ಯಶಸ್ವಿಯಾಗಿ ಧರ್ಮದ ಹೆಸರನ್ನು ಅವಲಂಭಿಸಿ ಮಾಡುವ ಹೇಯ ಕೃತ್ಯ.ಇವರು ಯಾವ ಜಾತಿ ಧರ್ಮಕ್ಕೂ ಸೇರಿದವರಲ್ಲ ಇವರ ಜಾತಿ ಧರ್ಮ ಒಂದೇ ಅದು ರಕ್ತ ಪಿಪಾಸುತನ.ಅಂದರೆ ಭಯೋತ್ಪಾದನೆಗೆ ಸಂಸ್ಕೃತಿಯೂ ಇರುವುದಿಲ್ಲ. ಸಂವೇದನೆ ಇರುವುದಿಲ್ಲ. ಮಾನವತೆಗೆ ಅಲ್ಲಿ ಅವಕಾಶವಿರುವುದಿಲ್ಲ. ಏಕೆಂದರೆ ಭಯೋತ್ಪಾದನೆಯ ಮೂಲ ತಳಹದಿ ದ್ವೇಷ, ಅಸಹನೆ, ಹಿಂಸೆ, ಮತ್ಸರ, ಮತಾಂಧತೆ, ಸಮರಶೀಲತೆ ಮತ್ತು ಮಹತ್ವಾಕಾಂಕ್ಷೆ ಈ ಅರಿಷಡ್ವರ್ಗಗಳನ್ನು ಹೊಂದಿರುವ ಯಾವುದೇ ಸಂಘಟನೆ ಅಥವಾ ವ್ಯಕ್ತಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ,ಮತ್ತೆ ಇದರ ಮೂಲವನ್ನು ಕೆದಕುತ್ತಾ ಸಾಗಿದಲ್ಲಿ ನಮಗೆ ಅರಿವಾಗುವದು ನಮ್ಮಲ್ಲಿ ಮಾನವೀಯತೆ ,  ಮನುಕುಲ ಸಂಸ್ಕೃತಿ ಮರೆ ಅದುದೇ ಕಾರಣ ಅನ್ನುವದು ಸ್ಪಷ್ಟ ಅಲ್ಲವೇ?


ಇಂದಿನ ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಮೂಢ ಆಚರಣೆಗಳನ್ನು ಕಾಣಬಹುದು , ಇದು ಉತ್ತಮ ಸಮಾಜಕ್ಕೆ ಖಂಡಿತ ಯಾವುದೇ ಕೊಡುಗೆಯನ್ನು ನೀಡುತ್ತಿಲ್ಲ  ಬದಲಾಗಿ ಜಾತಿ ವೈಷಮ್ಯಗಳಿಗೆ ನಾಂದಿ ಹಾಡಿದೆ.ಪರಸ್ಪರ ಅಪನಂಬಿಕೆಗಳು ಸಂಶಯ ದೃಷ್ಟಿಗಳು ಜಾತಿ ವ್ಯವಸ್ತೆಯ ಮೂಲಕ ಮೆರೆದಿದೆ.ಮಾನವೀಯ ಸಂವೆದನನೆಗಳು ಅಪರೂಪವಾಗುತ್ತಿದೆ ,ಹಾಗೆ ನೋಡಿದಲ್ಲಿ ನಮ್ಮೆಲ್ಲ ಜ್ವಲಂತ ಸಮಸ್ಯೆಗಳನ್ನು ಪರಹರಿಸಿಕೊಳ್ಳುವಲ್ಲಿ ನಮ್ಮ ಮನುಕುಲ ಸಂಸ್ಕೃತಿಯನ್ನು ಎಲ್ಲರೂ ಮೆರೆದರೆ ಅದೇ ದೊಡ್ಡ ಪರಿಹಾರ ಆಗಬಲ್ಲುದು. ದೇಶ ಗಡಿ ದಾಟಿ ಮಾನವ ಕುಲಕೋಟಿಗಳು  ಇದ ಅರ್ತೈಸಿಕೋಳ್ಳಬೇಕಿದೆ , ಹರಿಯುವ ನೀರು ಯಾವತ್ತು ಕೊಳದಲ್ಲಿ ತುಂಬಿರುವ ನೀರಿಗಿಂತ ಸ್ವಚ್ಹ. ಧರ್ಮಗಳಿಗೆ ಅಂಟಿಕೊಂಡಾದರು ಸರಿ, ಧರ್ಮಬಾದಿತರಾಗಿ ಇಲ್ಲದಿದ್ದರೂ ಸರಿ. ಅದೆಲ್ಲದವನ್ನು ಮೀರಿ ಪರಸ್ಪರ ಮಾನವ ಮಾತ್ರರಿಂದ ವ್ಯಕ್ತಿಗಳನ್ನು ಗುರುತಿಸೋಣ,ಪರಸ್ಪರ ವ್ಯಕ್ತಿ ಗೌರವಗಳು ಮೆರೆಯಲಿ. ಆ ಮೂಲಕ ಸಮಾಜದ ಮೂಲ ವಾಹಿನಿಯಲ್ಲಿ ನಿಂತು ಒಂದಷ್ಟು ನಮಗಾಗುವ ಸಮಾಜಮುಕಿ ಕೆಲಸಗಳಲ್ಲಿ ತೊಡಗೋಣ.ಆ ಮೂಲಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ. ಇದು ಇವತ್ತಿಂದ ನಾಳೆಗೆ ಬದಲಾವಣೆ ತರುತ್ತದೆಂದಲ್ಲ, ಆದರೆ ಇದಕ್ಕಿಂತ ಸೂಕ್ತ ದಾರಿಗಳು ಬೇರೆ ಕಾಣುತ್ತಿಲ್ಲ. ಧರ್ಮ ಪಂಡಿತರು , ವಿವಿದ ಧರ್ಮದ ಶ್ರ್ಹದ್ದಾ ಕೇಂದ್ರಗಳು ಧರ್ಮ ಬೊದನೆ ಜೊತೆ ಜೊತೆಗೆ ಮಾನವೀಯ ಸಂವೇದನೆ ಕಾರ್ಯಗಳನ್ನು ಹಮ್ಮಿಕೊಳ್ಳಲಿ.ಈ ಕಾರ್ಯಗಳು ಸಕಲ ಮಾನವ ಜೀವರಾಶಿಗೂ ಸಿಗಲಿ.ಆ ಮೂಲಕ ಮಾನವ ಜನ್ಮದ ಸುಖಾಮೃತ ನಮ್ಮೆಲ್ಲರದ್ದಾಗಲಿ.
ನಿಮ್ಮವ ..................
ರಾಘವೇಂದ್ರ ತೆಕ್ಕಾರ್ 





No comments:

Post a Comment