Tuesday, August 21, 2012

ಮುಗ್ದನ ಇಣುಕು

ಮುಗ್ದತೆ ಎಂದರೆ ಎಲ್ಲವೂ ಒಪ್ಪಿಕೊಳ್ಳುವ ಮನಸ್ಥಿತಿ
ಬೆನ್ನಿಗೆ ಬಾಕು ತುದಿ ತಗುಲಿದ್ದರೂ
ಇನ್ನೂ ಒಂದೊತ್ತಲ್ಲಿ ನಂಬಿದವನೆ ಇರಿದು ಕೊಲ್ಲಬಹುದಾಗಿದ್ದರೂ
ನಮ್ಮವರೆಂಬ ವ್ಯಾಮೋಹದೊಳಗೆ ತನ್ನನ್ನೆ ಮರೆತ ನಗಣ್ಯತೆ

ಅರಿವಾಗುವಾಗ ಆತನೆ ಜಗಕೆ ಸಲಾಮು ಹೊಡೆದಿರುತ್ತಾನೆ
ಜೊತೆಗಾರನಾತ ವಿಕಟಹಾಸದಿ ನಗುತ್ತಿರುತ್ತಾನೆ
ಜಗವೆ ಇಷ್ಟೂ ಮನದೊಳಗೆ ಸ್ವಾರ್ಥತೆ ,ಸಭ್ಯತೆ ತೋರ್ಪಡಿಕೆಯ ಕಳಕಳಿ
ಆಗಲೂ ಧರ್ಮಾರ್ಥ ಸತ್ತ ಆತನ ಕಣ್ಣಲ್ಲಿ ನಂಬಿಕೆಯ ಇಣುಕು ಮುಸುಕು ಮುಸುಕು

ಎಲ್ಲಾ ಭ್ರಮೆ, ಆತ ಸಾಯಲ್ಲ ಇದೆಲ್ಲಾ ಕಲ್ಪನೆ
ಸಾಯಬೇಕಾದ್ದೂ ಆತನಿಗೆ ಕಫಟ ಮಾಡಿದ ಮನಸುಗಳೂ
ನಂಬಿಕೆ ಘಾತಕಗಳೂ, ಎರ್ರಾ ಬಿರ್ರಿ ನಂಬುವ ಆತನದೆ ಮುಗ್ದತೆ
ವ್ಯಕ್ತಿಗಳಲ್ಲದೆ ನೆಚ್ಚಿದ ವ್ಯಕ್ತಿ ಗುಣ ಅಣಕಿಣಂತೆ ಕಂಡರೂ ಅದು ಬದುಕಬೇಕು.

ಇಲ್ಲಾ!!! ಕಪಟದೊಳಗಿನ ಮನಸುಗಳಿಗೆ ಬದುಕಿಲ್ಲ
ದಿನವೊಂದು ಕಾದಿರುತ್ತೆ ಕುಳಿತು ದುಃಖಿಸಲು
ಸಂತೈಸಲೂ ನರ ಹುಳವೂ ಇಲ್ಲದ ಪರಿಸ್ಥಿತಿಯೊಳಗೆ
ಬದುಕು ತುಂಬಾ ಕತ್ತಲನ್ನೆ ಹೊದ್ದು ಮಲಗಬೇಕೂ, ಬದುಕು ಮುಗಿಸಲೂ.

ನೈತಿಕೆಯೊಳಗೆ ಅನೈತಿಕತೆ ಹೊದ್ದು ಮಲಗಿದವರೆ
ಎಚ್ಚೆತ್ತೂಕೊಳ್ಳಿ ಎಲ್ಲವ ಕಳಕೊಳ್ಳುವ ಮೊದಲೂ,
ನೈತಿಕತೆ ಅನ್ನೋದು ಮಾರಾಟಕ್ಕಿಡೋ ವಸ್ತುವಲ್ಲ
ಅರಿತರೆ ಜೊತೆಗಿದ್ದವರೊಂದಿಗೆ ಎಲ್ಲರದೂ ಬಾಳು ಸ್ವರ್ಗ
ಇದಲ್ಲದಿದ್ದರೆ ಕೊಲೆಗಾರನಿಗೂ ಇವರೀಗೂ ವ್ಯತ್ಯಾಸ ನಾ ಹುಡುಕಲಾರೆ
ಕಾರಣ ಜೀವ ಕೊಲೆಗಿಂತ ಜೀವಂತಿಕೆಯ ಕೊಲೆ ಭರ್ಭರ.

No comments:

Post a Comment