Sunday, October 21, 2012

ತನ್ನೊಳಗಿನ ಪ್ರಶ್ನೋತ್ತರ

ಪ್ರಶ್ನೆ ಎದುರಿಸಬೇಕಾ? ಹೌದು ಪ್ರಶ್ನೆಗಳೂ ನಮ್ಮಲ್ಲಿ ಹುಟ್ಟಿಕೊಳ್ಳುತ್ತಲೆ ಇರಬೇಕು ಉತ್ತರ ಕಂಡುಕೊಳ್ಳುತ್ತಲೆ ಇರಬೇಕು ಆ ಮೂಲಕ ಮಗದೊಂದು ಮಜಲಿನ ಪ್ರಶ್ನೆಗಳ ಎಡತಾಕಲು ಸಿದ್ದತೆ ನಡೆಯುತ್ತಲೆ ಇರಬೇಕು, ಇದೆ ಜೀವನದ ಚಲನಶೀಲತೆ, ಸುಲಭಾರ್ಥದಲ್ಲಿ ಜೀವನೋತ್ಸಾಹದ ಜೀವಂತಿಕೆಯನ್ನು ಸಜೀವವಾಗಿರುಸುವಲ್ಲಿನ ರಹದಾರಿ. ಉತ್ತರವಿಲ್ಲದ ಪ್ರಶ್ನೆಗಳೆ ಇಲ್ಲವೆಂದಾದ ಮೇಲೆ ಉತ್ತರಕ್ಕಾಗಿ ನಡೆಯುವ ನಮ್ಮೊಳಗಿನ ಹುಡುಕಾಟ ನಮ್ಮನ್ನು ನಾವು ಜಾಡ್ಯದ ಬಲೆಗೆ ಬೀಳದಂತೆ ಕಾಯೊ ರಿಪ್ರೆಶ್ ಮೆಂಟ್ ಕ್ರಿಯೆ ಹಾಗೂ ಪ್ರೌಢತೆಯತ್ತ ಸಾಗುವ ಸುಲಭದ ಬೆಳವಣಿಗೆ.

ಪ್ರಶ್ನೆಗಳು ಇತರರಿಂದಲೂ ಬರಬಹುದು, ಸ್ವಿಕರಿಸಬಹುದಾದ ಆಯ್ಕೆ ನಮ್ಮದೆ, ಇದು ನನ್ನ ಒಳಿತಿಗಾಗಿನ ಪ್ರಶ್ನೆಯೆ? ಉತ್ತರಿಸಬೇಕಾದ ಜರೂರಿಗಳಿವೆಯೆ? ಪ್ರಶ್ನೆಕಾರನ ಕಾಳಾಜಿ ಎಂತದ್ದೂ? ಎಂಭಿತ್ಯಾದಿ ವಿಮರ್ಶೆ ನಮ್ಮಲ್ಲಿ ಹುಟ್ಟಬೇಕಾಗುತ್ತದೆ, ಈ ಪ್ರೌಢತೆಯನ್ನೂ ಗಳಿಸಬಲ್ಲುದಾದ ನಮ್ಮೊಳಗಿನ ಸಿದ್ದತೆ ಮೇಲೆ ಹೇಳಿದಂತೆ ನಮ್ಮನ್ನೆ ನಾವೂ ಪ್ರಶ್ನೆ ಮಾಡಿಕೊಳ್ಳುವದರಿಂದ ಹುಟ್ಟಿಕೊಳ್ಳುವಂತದ್ದು.ಪ್ರಶ್ನೆಗಳು ಕೆಲವೊಮ್ಮೆ ಸಲಹೆಗಳಾಗಿಯು ರೂಪುಗೊಳ್ಳುತ್ತದೆ ಅಥವಾ ಪ್ರಶ್ನೆಗಳ ಕೊನೆಯಲ್ಲಿ ಮಾರ್ಗದರ್ಶಿ ಸಲಹೆಗಳು ಅಡಗಿಕೊಂಡಿರುತ್ತದೆ ಇದ ಗುರುತಿಸಬಹುದಾದ ಮೆಚ್ಯೂರಿಟಿ ನಮ್ಮಲ್ಲಿ ಬೇಕಷ್ಟೆ. ಒಂದು ಮಗು ಪ್ರಶ್ನೆ ಮಾಡುತ್ತನೆ ಬೆಳೆಯುತ್ತೆ, ಬಾಲ್ಯ ಕಳೆದು ಪ್ರೌಢತೆಯನ್ನು ಪಡೆಯುತ್ತೆ ಅನ್ನುವದನ್ನು ನಾವು ಮರೆಯಬಾರದು.

ಇದಷ್ಟೆ ಅಲ್ಲದೆ ಪ್ರಶ್ನೆಗಳು ತನ್ನ ಜೊತೆ ಹಲವು ಭಾವಗಳನ್ನೂ ಹೊರ ಸೂಸುತ್ತವೆ, ಪ್ರಮುಖವಾದುವುಗಳೆಂದರೆ ಕೋಪ, ದರ್ಪ, ಅಹಂಕಾರ,ಸಹನೆ, ಕರುಣೆ ಇತ್ಯಾದಿ, ಇವುಗಳಲ್ಲಿ ಸೂಕ್ತವಾದುದಕ್ಕೆ ಉತ್ತರಿಸಬೇಕಾದಕ್ಕೆ ಉತ್ತರಿಸಿ ಮೌನಕ್ಕೆ ಶರಣಾಗುವದೂ ಮಾನಸಿಕ ನೆಮ್ಮದಿ ದೃಷ್ಟಿಯಿಂದ ನಮ್ಮ ಚೈತನ್ಯಗಳನ್ನೂ ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಸೂಕ್ತ. ಕೆಲ ಪ್ರಶ್ನೆಗಳಿಗೆ ಮೌನ ಕೂಡ ಸೂಕ್ತ ಉತ್ತರವಾಗಬಲ್ಲುದು.ಪ್ರಶ್ನೆಗಳಿಗೆ ಉತ್ತರಿಸಬೇಕಾದಲ್ಲಿ ಪ್ರಮುಖವಾಗಿ ಅಳವಡಿಸಿಕೊಳ್ಳಬೇಕಾದುದು ಏನೆಂದರೆ "ಕಡಿಮೆ ಮಾತು ಸ್ಪಷ್ಟ ಸಂದೇಶ", ಈ ಸೂತ್ರ ಅಳವಡಿಸಿಕೊಂಡಿದ್ದೆ ಆದರೆ ಇದು ಕೊಡಬಲ್ಲುದಾದ ಉತ್ತರದ ಮೌಲ್ಯವನ್ನ ಹೆಚ್ಚಿಸುತ್ತದೆ ಮತ್ತು ಅನಾವಶ್ಯಕ ಕಿರಿ ಕಿರಿಯನ್ನೂ ಮನ ತಾಕದಂತೆ ದೂರವಿರಿಸುತ್ತದೆ,

ಕೆಲವೊಂದು ಉತ್ತರಗಳೂ ಪ್ರಶ್ನೆಯ ರೂಪದಲ್ಲೆ ಇದ್ದು ಅದರೆ ಅದು ಪ್ರಶ್ನೆಯಾಗಿರದೆ ಉತ್ತರವಾಗಿರುತ್ತದೆ. ಉದಾಹರಣೆಗೆ ನನಗೆ ಗೊತ್ತಿಲ್ಲ ಅನ್ನುವದಕ್ಕೆ ಯಾವನಿಗೊತ್ತು?ಯಾರಿಗೊತ್ತು? ಹಂಗೆ ಆದ್ರೆ ಒಳ್ಳೇದು, ಹಾಗೆಯೆ ಅಗ್ಬೇಕೂ ಅನ್ನೋದಕ್ಕೆ ಯಾಕೆ ಆಗ್ಬಾರ್ದೂ? ಇತ್ಯಾದಿ........ ಅದರೆ ಇವುಗಳಲ್ಲಿ ಒಂದು ಸ್ಪಷ್ಟ ಸಂದೇಶ ಇದ್ದೆ ಇರುತ್ತದೆ, ಅದು ಎದುರಿಗಿದ್ದವನ ಮೈಂಡ್ ರೀಚ್ ಅಗುವಂತದ್ದೂ.ಈ ಸ್ಪಷ್ಟತೆ ಪ್ರಶ್ನೆಯಲ್ಲಾಗಲಿ ಕೊಡುವ ಉತ್ತರದಲ್ಲಾಗಲಿ ಇದ್ದಲ್ಲಿ ಮಾತ್ರ ಯಾವುದೆ ವಿಚಾರ ಮನದಟ್ಟಾಗಬಲ್ಲುದು ಅಥವಾ ತಾರ್ಕಿಕ ಅಂತ್ಯ ಪಡೆಯಬಲ್ಲುದು.ಒಂದು ವೇಳೆ ಉತ್ತರ ಅಥವಾ ಪ್ರಶ್ನೆಗಳಲ್ಲಿ ಸ್ಪಷ್ಟ ಸಂದೇಶವಿಲ್ಲವೆಂದಾದಲ್ಲಿ ತಪ್ಪು ತಿಳುವಳಿಕೆಗೆ ಕಾರಣವಾಗುತ್ತದೆ ಅಥವಾ ಇನ್ನಷ್ಟೂ ಪ್ರಶ್ನೆ -ಉತ್ತರಗಳ ಹುಟ್ಟುವಿಕೆಗೆ ಕಾರಣವಾಗುತ್ತದೆ, ಇದು ಸುಲಭದಲ್ಲಿ ಗುಣವಾಗುವ ವೃಣವೊಂದನ್ನೂ ಕೆರೆದು ದೊಡ್ಡದಾಗಿಸಿದಂತೆ.ಹೀಗಾಗಬಾರದೆಂದರೆ ನಾವು ಕೇಳುವ/ಹೇಳುವ - ಉತ್ತರ/ಪ್ರಶ್ನೆಗಳಲ್ಲಿ ಸಾಚಾತನವಿರಬೇಕು ಅಲ್ಲದೆ ನಮ್ಮ ಮಾತಿನಲ್ಲೊಂದು ತೂಕವಿರಬೇಕು, ಈ ಪ್ರೌಢತೆ ನಮ್ಮಲ್ಲಿ ಬರಬೇಕಾದರೆ ನಾವೂ ನಮ್ಮಲ್ಲೆ ಪ್ರಶ್ನೋತ್ತರ ಕ್ರಿಯೆಯಲ್ಲಿ ತೊಡಗಿರಬೇಕು, ಇನ್ನೊಬ್ಬರು ಹೇಳಿಕೊಟ್ಟು ಬರಲಾರದ , ಪ್ರೌಢತೆಯನ್ನೂ ಸಂಪಾದಿಸುವ ಈ ದಾರಿ ನಮ್ಮನ್ನೂ ನಾವೂ ಅವಲೋಕಿಸುವ ನಿಟ್ಟಿನಲ್ಲಿ ಅತ್ಯಂತ ಸುಲಭದ್ದೂ ಹೌದು.

ಅವನಿಗೆ ಟೈಮ್ ಸೆನ್ಸ್ ಇಲ್ಲಾ! ಹಣಕಾಸು ವ್ಯವಹಾರದಲ್ಲಿ ವೆರಿ ಪುವರ್!! ಶುದ್ದ ಬಾಯಿ ಹರುಕ!! ಅಹಂಕಾರಿ!!! ಮನೆಹಾಳ!!!!ಮುಂತಾದ ಅಪಾದನೆಗಳೂ ಸಮಾಜದಲ್ಲಿ ಸುಲಭವಾಗಿ ನಮ್ಮ ಬೆನ್ನೇರಿಬಿಡಬಹುದು.ಈ ಅಪಾದನೆಗಳಲ್ಲಿ ಹುರುಳಿರಬೇಕೆಂದೇನಿಲ್ಲ,ಅದ್ದರಿಂದ ಅನಗತ್ಯವಾಗಿ ತಲೆಕೆಡಿಸಿಕೊಳ್ಳಬೇಕೆಂದೇನಿಲ್ಲ, ಅಪಾದನೆ ಹೊರಿಸಬಲ್ಲವನಿಗೆ ಅವನದೆ ಅದ ಲಾಭದಾಯಕ ಅಥವಾ ಹವ್ಯಾಸದ ಕಾರಣಗಳಿರಬಹುದು.ಹಾಗಂತ ಈ ಅಪಾದನೆಗಳನ್ನೂ ಏಕಾಏಕಿ ದೂರ ಮಾಡದೆ ಒಂದು ಸಲ ನಮ್ಮದೆ ಮನಸಾಕ್ಷಿಯನ್ನು ಸವರಿ ಬಂದಲ್ಲಿ ಋಣಾತ್ಮಕ ಅಂಶಗಳನ್ನೂ ಧನಾತ್ಮಕವಾಗಿ ಬದಲಾಯಿಸಿಕೊಂಡು ನಾವೂ ಬೆಳೆಯಲು ಪೂರಕವಾಗಿ ಈ ಅಪಾದನೆಗಳು ಸಹಕಾರಿಯಾಗಬಹುದು.ಮನಸಾಕ್ಷಿಗೆ ವಿರುದ್ದವಾಗಿ ಯಾವೂದೆ ಕೆಲಸ ನಮ್ಮಿಂದ ಆಗಿದೆ ಅನ್ನುವ ತೀರ್ಪು ಮನಸಾಕ್ಷಿ ಕೊಟ್ಟಲ್ಲಿ, ಆ ಕ್ಷಣದಲ್ಲೆ ತಪ್ಪನ್ನು ಸರಿಪಡಿಸಿಕೊಂಡರೆ ಒದಗಬಹುದಾದ ದೊಡ್ಡ ಅಪಾಯವನ್ನೂ ಜೀವಂತಿಕೆಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಪ್ಪಿಸಿದಂತೆ. ಈ ಮನಸಾಕ್ಷಿಯನ್ನೂ ಎದುರುಗೊಳ್ಳುವ ದಾರಿಯೂ ಮತ್ತೇನಲ್ಲ ಅದು ನಮ್ಮನ್ನೆ ನಾವೂ ನಮ್ಮ ಬೆಳೆವಣಿಗೆ ನಿಟ್ಟಿನಲ್ಲಿ ಪ್ರಶ್ನಿಸಿಕೊಳ್ಳುವದೆ ಆಗಿರುತ್ತದೆ.

ತಪ್ಪುಗಳನ್ನೂ ಒಪ್ಪಿ ತಿದ್ದಿಕೊಳ್ಳೋದಕ್ಕೆ ಬೇಕಾದ ಮನೋಸ್ಥೈರ್ಯ , ತಪ್ಪೆಂದು ಅರಿವಾಗಬಲ್ಲ ಅರಿವುಗಳು, ನಮ್ಮೊಳಗೆ ನಡೆಯುವ ಪ್ರಶ್ನೊತ್ತರ ಕ್ರಿಯೆಯು ನಮಗೆ ಕೊಡಬಲ್ಲುದು.ನಮ್ಮ ನಡೆವಳಿಕೆಗಳಲ್ಲಿನ ಹುಳುಕುಗಳನ್ನೂ ಸರಿಡಿಸಿಕೊಳ್ಳಬೇಕಾದ್ದೂ ನಾವೆ ಹೊರತಾಗಿ ಇನ್ಯಾರಲ್ಲ. ಈ ನಿಟ್ಟಿನಲ್ಲಿ ಇತರರ ಸಲಹೆಗಿಂತ ಹೆಚ್ಚಿಗೆ ಲಾಭದಾಯಕವೆನಿಸುವದು ನಮಗೆ ನಾವೆ ಒಡ್ಡಿಕೊಳ್ಳಬಹುದಾದ ಪ್ರಶ್ನೆಗಳೂ ಮತ್ತು ಉತ್ತರ ಹುಡುಕಾಟ ಕ್ರಿಯೆಯಲ್ಲಿ ದೊರೆವ ಅರಿವು.ತನ್ನ ಜೀವನವೂ ತನಗೆ ಆದರ್ಶವಾಗಿದ್ದೂ ಹಾಗೂ ತೃಪ್ತಭಾವ ಹೊಂದಿರಬೇಕಾದ್ದೂ ಮೊದಲೂ ತದ ನಂತರವೇ ಉಳಿದದ್ದೆಲ್ಲ, ಹೀಗಿರಬೇಕಾದರೆ ನಮ್ಮ ನಡೆ ನಮ್ಮ ಮನಸಾಕ್ಷಿ ಒಪ್ಪುವಂತಿರಬೇಕು.ಮನಸಾಕ್ಷಿಯನ್ನೂ ತಿಳಿಯುವ ಕ್ರಿಯೆಯೆ ನಮ್ಮೊಳಗೆ ನಡೆವ ಪ್ರಶ್ನೋತ್ತರ.ಒಳ್ಳೆ ಕಾಲಗಳೂ , ಒಳ್ಳೆ ಮಂದಿ ನಮ್ಮ ಜೀವನದಲ್ಲಿ ಬಂದಿದ್ದೂ ಗೊತ್ತಾಗಲ್ಲ ಮುಂದುವರಿದಿದ್ದೂ ಗೊತ್ತಾಗಲ್ಲ ಗೊತ್ತಾಗಬೇಕಾದರೆ ವರುಷಗಳು ಉರುಳಿರುತ್ತವೆ.ಹೀಗಾಗಬಾರದೆಂದರೆ ತನ್ನೊಳಿತಿಗೆ ತನ್ನನ್ನೆ ತಾನೂ ತನ್ನೊಳಗೆ ಪ್ರಶ್ನಿಸಿ ಅವಲೋಕಿಸಿಕೊಳ್ಳುವದು ಶುಭ, ಮನುಷ್ಯ ಮಾತ್ರನಿಂದ ಸಾಧ್ಯವಾಗಬಲ್ಲ ಈ ಕ್ರಿಯೆಯಿಂದ ವಿಮುಖನಾಗುವದಷ್ಟೆ ಅಶುಭ.ಆಯ್ಕೆಯಂತು ನಮ್ಮದೆ. :) :)

No comments:

Post a Comment