Thursday, February 23, 2012

ಕೆಲ ಸಾಲುಗಳು-ರೈಲ ಪುಸ್ತಕ ವ್ಯಾಪಾರಿ ಕುರಿತು

ತುಂಡ ಹಲಗೆಗೆ ನಾಲ್ಕು ಚಕ್ರವ ಪೋಣಿಸಿ
ತನ್ನ ಕಾಲಾಗಿಸಿ ನಡೆಯುತಿದ್ದ
ತನ್ನೆರಡು ಕಾಲನ್ನು ರೈಲ ಕಂಬಿಗೆ
ಆಚಾನಕ್ ಆಗಿ ಸಿಲುಕಿಸಿ
ಅದುನ ಕಳಕೊಂಡವ..........


ಒಂದಷ್ಟು ಕನ್ನಡ ಪುಸ್ತಕದ ಕಟ್ಟಿನೊಂದಿಗೆ
ಬರುವ ರೈಲುಗಳ ಹಾದಿಯ ನೋಡುತ್ತಾ
ಬದುಕ ಸಂಪಾದನೆಯ ಗಿಟ್ಟಿಸುವ ಬಂಡಿ ಬಂದಾಗ
ತನ್ನ ಸರಂಜಾಮುಗಳನ್ನ ಮೇಲಿಟ್ಟು
ಕೈ ಹಿಡಿಯ ಆಸರೆಯೊಂದಿಗೆ
ಬೇರಾವುದೆ ಸಹಾರವನ್ನು ಬಯಸದೆ
ಕಾಲ ಕಿತ್ತ ಅದೇ ರೈಲನ್ನೇರುತಿದ್ದ ದಿನಾವು
ಹಠ ಸಾಧನೆಗೆ ನಿಂತ ಯೋಗಿಯಂತೆ


ಬೋಗಿಯಿಂದ ಬೋಗಿಗೆ
ಕನ್ನಡ ಪುಸ್ತಕದ ಸೊಗಡನ್ನು ಜನಕ್ಕೀಯುತ್ತಾ
ಇಚ್ಚೆ ಪಟ್ಟವರಿಗೆ ಅದುನ್ನಾ ಮಾರುತ್ತಾ
ತನ್ನ ಕುಟುಂಬ ಪೊರೆಯಲೂ ಬೇಕಾದ
ಸಂಪಾದನೆಯ ಕ್ರಿಯೆಯೂ ನಡೆಯುತಿತ್ತೂ
ಮುಂದಿನ ನಿಲ್ದಾಣಕ್ಕೆ ಬಂಡಿ ತಲುಪುವ ತನಕ
ತಾನೂ ಸೋಲಬಾರದು ಎಂಬ ಕ್ಲೀಷೆಯೊಡೆ


ಮನದ ದೃಷ್ಟಿಯೂ ಬೆರಗೂ ಕಣ್ಣಿನಿಂದ
ಇವನ ನೋಡುತ್ತಿರುತ್ತದೆ
ಪ್ರತಿ ಸಲದ ರೈಲ ಪ್ರಯಾಣದಲ್ಲಿ
ಎಲ್ಲವೂ ಇದ್ದು ಅವನ ದುಡಿಯುವ ಛಲ
ಅವನಲ್ಲಿರುವ ಧೀ ಶಕ್ತಿ ನನ್ನಲೇಕೆ ಇಲ್ಲವೆಂದು?
ಆ ಜಾಗದಲ್ಲಿ ಬಂದು ಕೂತಿದೆ ಆಲಸ್ಯವೆಂಬ
ಜಾಡ್ಯತನ ನನ್ನನ್ನು ಇಂಚಿಂಚೆ ತಿನ್ನಲೆಂದು.
ಆವನ ಆತ್ಮ ಸ್ಥೈರ್ಯ, ಸ್ವಾಭಿಮಾನಕ್ಕೆ ಮೆಚ್ಚಿ
ನನ್ನ ನಾ ಹೋಲಿಸಿಕೊಂಡು ಮನದಲ್ಲೆ ಕೊರಗುತ್ತಿರುತ್ತೇನೆ.



No comments:

Post a Comment