Friday, August 24, 2012

ಒಂದು ಹಾದಿ ಪಯಣ


ಅದೊಂದು ಪಯಣದ ಹರಳು ಕಲ್ಲಿನ ಹಾದಿಯಲ್ಲಿ ಜೋಪಾನವಾಗಿ ಅಂಗೈ ಹಿಡಿದು ನಿನ್ನ ಕರೆದೊಯ್ಯುತ್ತಿರುವಾಗ ಅಯಾಸದಿಂದ ನೀನು ಉಸ್ಸಂತ ಉಸಿರೆತ್ತಿ ಕೂತಿದ್ದೆ,ಚಪ್ಪಲಿ ಇಲ್ಲದ ಕಾಲ ತುಂಬಾ ಬೊಬ್ಬೆಗಳ ಮರೆಮಾಚಿ ಮಣ್ಣು ಮೆತ್ತಿಕೊಂಡಿದ್ದೆ,ನೀರ ಉಣಿಸಿ ದಾಹ ತೀರಿಸೋಣವೆಂದು,ಅಲ್ಲೆ ಪಕ್ಕದಲ್ಲೆ ಕಲ್ಲು ಬಂಡೆ ಮೇಲೆ ಕೂರಿಸಿ ಹಳ್ಳದ ಕಡೆಗೋಡಿ ತೆಕ್ಕೆ ಎಲೆಯನ್ನೆ ಬಟ್ಟಲು ಮಾಡಿ ಹರಿಯುವ ಆ ನೀರನ್ನು ತುಂಬಿಕೊಂಡು ಬರುತ್ತಿರಬೇಕಾದರೆನೆ ಎಕ್ಕದ ಹೂವೊಂದನ್ನು ಕಿತ್ತು ತಂದಿದ್ದೆ, ಇನ್ನೇನೂ ನೀರು ಕುಡಿದು ದಾಹ ತೀರಿ ನಿನ್ನ ಮುಖದಲ್ಲಿ ನಗು ಒಸರುತ್ತೆ ಅನ್ನೋ ಹೊತ್ತಲ್ಲೆ ಎಕ್ಕದ ಹೂವ ಫಟ್ ಅನಿಸಿ ತುದಿ ಮುರುದು ಬಟ್ಟಲು ತುದಿಯನ್ನೂ ನಿನ್ನ ಮೂಗುತಿಯಾಗಿಸಿ ನಿನ್ನ ಮುಗುಳ್ನಗೆಗೆ ಕಾದಿದ್ದೆ, ಒಸರಿದ ಮೂಗುತಿಯೊಂದಿಗಿನ ಆ ನಿನ್ನ ನಗು ನನ್ನ ಮನ ತುಂಬಿ ಅಯಾಸ ನೀಗಿತ್ತು.

ಹಾದಿ ಹತ್ತಿರದ್ದೇನಲ್ಲ, ಸಾಗಬೇಕಾದ ದೂರ ಬಹಳಿಷ್ಟಿತ್ತು ಅಲ್ವಾ?ಒಂದು ಅರ್ಧ ದಾರಿಯಷ್ಟೆ ಕ್ರಮಿಸಿಯಾಗಿತ್ತು, ದಾರಿಯುದ್ದಕ್ಕೂ ನೀನು ಕೇಪುಳ ಹೂವ ಕೊಯ್ದು ತುಟಿಗಾನಿಸಿ ಸಿಹಿ ಚೀಪಿ ಎತ್ತೆಸಿದದ್ದನ್ನೆ ಆಯ್ದೂಕೊಂಡು ನಿನಗೆ ಗೊತ್ತಿಲ್ಲದಂತೆ ಚೀಲ ತುಂಬಿಸಿದ್ದೆ,ಹಾರವಾಗಿ ಪೋಣಿಸುವದಕ್ಕಾ ಎತ್ತಿ ಆಯ್ದುಕೊಂಡಿದ್ದು??ಏನಕ್ಕೆ ಅನ್ನೋದು ನನಗೆ ಗೊತ್ತಿರಲಿಲ್ಲ ಆದರೂ ನಿನ್ನ ಹಿಂದೆಯೆ ನಿನ್ನ ಹೆಜ್ಜೆಯಾನಿಸಿ ನಡೆಯೋದು, ಕಠಿಣ ಹಾದಿಯಲ್ಲಿ ಕೈ ಹಿಡಿದು ನಡೆಯೋದು, ನಿನ್ನ ಜೊತೆ ಜೊತೆಯಾಗಿದ್ದುದೆ ಮುದ ಕೊಡುತಿದ್ದ ಕ್ಷಣಗಳವೂ, ಕಲ್ಲು ದಾರಿ ಮುಗಿದು ಗದ್ದೆ ಏರಿ ಮೇಲೆ ಮುಂದಿನ ದಾರಿ ಅಂದಾಗ ಮತ್ತೆ ಅದೆ ಜೋತಾಟ ಸಮತೋಲಿತ ನಡಿಗೆ,ಏರಿ ಪಕ್ಕದ ಎರಡೂ ಬದಿಯ ನೀರ ಮಿಳಿತದ ಗಾಳಿ ಪಾದದಿಂದಲೆ ಚಳಿಯೇರಿಸುತಿತ್ತು ದೇಹ ತುಂಬಾ.ನಿನಗೆಲ್ಲಿತ್ತೋ ಆ ಶಕ್ತಿ ಮೈಯೆಲ್ಲಾ ಗಾಳಿ ತುಂಬಿದಂತೆ ಓಡೆ ಬಿಟ್ಟೆ ನಾನೂ ನಿನ್ನ ಅನಿರೀಕ್ಷಿತ ಈ ನಡಿಗೆಯ ಹಿಂಬಾಲಿಸಿ ಸಮತೋಲನ ತಪ್ಪಿ ಗದ್ದೆ ಕೆಸರಲ್ಲಿದ್ದೆ, ಮೈ ಮುಖದ ಕೆಸರು ತುಂಬಿ ಕಣ್ಣೊರೆಸಿಕೊಂಡು ನಿನ್ನೆದುರು ನಿಂತಾಗಲೆ ನೀ ನನ್ನ ನೋಡಿ ಹೊಟ್ಟೆ ತುಂಬಾ ಬಿದ್ದೂ ಬಿದ್ದೂ ನಕ್ಕಿದ್ದು.ನಾನೂ ನಕ್ಕೆನಾ?ಉಹೂಂ ನೆನಪಿಲ್ಲ.

ಹಾದಿ ಕ್ರಮಿಸುತಿದ್ದಂತೆ ಅದೆಕೊ ನೀನೂ ಚೂರು ಚೂರು ಬದಲಾಗುತ್ತಾ ನಡೆದೆ, ಆಯಾಸವಿರಬೇಕೆಂದೂ ನಾನೂ ಸುಮ್ಮನಾದೆ,ಚೇಪೆ ಕಾಯಿ ಕಿತ್ತು ಹಸಿವ ನೀಗಿಸ ನಾ ಹೊರಟೆ ನೀನು ತಿಂದಿದ್ದು ಕಾಲು ಎಸೆದಿದ್ದು ಮುಕ್ಕಾಲು ಯಾಕೊ ಆ ಎಸೆತ ನನ್ನ ಮುಖಕ್ಕೆ ಎಸೆದಂಗಿತ್ತು.ಆದರೂ ನಿನ್ನ ಮೊಗದಲ್ಲಿ ಕಿರು ನಗು,ಅದ ನೋಡಿ ಸಂಶಯಕ್ಕೆ ಮದ್ದಿಲ್ಲವೆಂದು ನನಗೆ ನಾನೆ ಅಂದುಕೊಂಡೆ ಕಾರಣ ನಿನ್ನ ನಗೆಯಲ್ಲಿ ನನಗೆ ಕಪಠ ಕಾಣೋ ಕಠೋರತೆ ಬಂದಿರಲಿಲ್ಲ.ನೀನೊಮ್ಮೆ ಎಡವಿದೆ ಮಾಮೂಲಿನಂತೆ ಕೈ ಚಾಚಿದೆ ಇಲ್ಲಾ ನನ್ನತ್ತ ನೀನು ತಿರುಗಿಯೂ ನೋಡಲಿಲ್ಲ, ಏನಾಯ್ತೂ ನಿನಗೆ?? ಊಹೂಂ ಅರ್ಥವಾಗುತ್ತಿಲ್ಲ, ಬಹಳಷ್ಟು ಕ್ರಮಿಸಿದ ಹಾದಿ ಮುಂದೆ ಕಿಂಚಿತ್ತೂ ಆದರೆ ಅದೂ ಧೀರ್ಘವಾಗಿ ಅನಿಸತೊಡಗಿತು, ಹೀಗಿರಬೇಕಾದರೆನೆ ನಾವು ಆ ಡಾಂಬಾರು ರಸ್ತೆ ತಲುಪಿದ್ದು ಅಲ್ಲಿ ನಮಗಾಗಿ ಕಾರೊಂದು ಕಾಯುತಿದ್ದುದು ನೀನು ನಾನು ಅದನೇರಿದ್ದು, ಸಾಗಿದ ಕಾರು ಯಾರದೋ ಮನೆಯಂಗಳದಲ್ಲಿ ನಿಂತಿದ್ದು,ನೀನು ಜಿಂಕೆಯಂತೆ ಕಣ್ಣಂಚನ್ನು ಸರಿದು ಮನೆಯೊಳು ಸೇರಿದ್ದೆ,ನಾನಿನ್ನೂ ಅಂಗಳದಲ್ಲಿ ಒಂದು ತಿಳಿಯದೆ ಬಾನ ದಿಟ್ಟಿಸಿ ನಿಂತಿದ್ದೆ, ನಾವೂ ಈ ಊರ ತೊರೆಯೋಣ ಎಲ್ಲಾದರೂ ದೂರ ಹೋಗಿ ಹೊಸ ಜೀವನ ಪ್ರಾರಂಭಿಸೋಣ,ನನ್ನ ಹೊಸ ಜೀವನಕ್ಕೆ ಸಾಥ್ ಕೊಡುತ್ತೀಯಾ? ಎಂದಾಗ ದೂಸ್ರಾ ಮಾತಾಡದೆ ಉಟ್ಟ ಬಟ್ಟೆಲೆ ನಿನ್ ಜೊತೆ ಹೊರಟು ನಿಂತಿದ್ದೆ ನಿನ್ನಂಗೆ, ಆದರೆ ಇಲ್ಲೇನಾಗ್ತಿದೆ ನಾನು ಪರಕೀಯಾ ಎಂಬ ಭಾವನೆ ಅದಾಕೆ ನನ್ನೊಳಗೆ ಗಿರಕಿ ಹೊಡಿತಿದೆ ಉಹೂಂ ತಿಳಿಯದೆ ನಿಂತೆ ಇದ್ದೆ.ಸುಮ್ಮನೆ ಹಂಗೆಲ್ಲಾ ಭಾವನೆಗಳೂ ಹುಟ್ಟಲಾರವೂ ಎಂದುಕೊಳ್ಳುತ್ತಿರಬೇಕಾದರೆನೆ ಮತ್ತೆ ಕಿಲ ಕಿಲ ನಿನ್ನ ನಗೂ ಸಾಥ್ ಗೆ ಮತ್ತೊಂದು ಗಂಡು ಗಡಸು ನಗು ಕಿವಿಗೆ ರಪ್ಪಂತ ಬಡಿದಿದ್ದು, ಆಗಲೆ ನನಗೆ ಮಿಂಚಿನ ಆಘಾತ ನಿಂತಲ್ಲೆ ಗರ ಬಡಿದು, ಮನೆ ಹೊರಗೆ ಬಂದ ನೀನು ಸಂಪೂರ್ಣ ಬದಲಾಗಿದ್ದೆ , ಲಂಗ ದಾವಣಿ ಬದಲಾಗಿ ಜೀನ್ಸ್ ಟೀ ಶರ್ಟ್ ಚಪ್ಪಲಿ ಇಲ್ಲದ ಪಾದಕ್ಕೆ ಹೈಹೀಲ್ಡ್ ಆಕ್ರಮಿಸಿತ್ತು,ನಿನ್ನಾಸರೆಗೆ ಅವನ ತೋಳ್ಗಳಿತ್ತು,ಈತನನ್ನೂ ಸೇರಿಸೋದಕ್ಕೆ ಸಹಕರಿಸಿದ್ದಕ್ಕೆ ಥ್ಯಾಂಕ್ಸ್ ಎಂಬ ಒಂದೆ ಪದವಾಖ್ಯವನ್ನುಸುರಿ ಮತ್ತೆ ಕಾರೇರಿದ್ದಿ ಮುಂದಿನ ಪಯಣಕ್ಕೆ ನೀ ಆತನ ಜೊತೆ ಸಿದ್ದಗೊಂಡಿದ್ದಿ, ನಾನೂ ಗುಡುಗು ಬಡಿಸಿಕೊಂಡವನಂತೆ ಹೆಜ್ಜೆಯ ಮರೆತು ಅದಾರದೊ ಮನೆಯಂಗಳದಲ್ಲೆ ಕುಸಿದಿದ್ದೆ,ಕಾರು ಸ್ಟಾರ್ಟ್ ಆಗೋ ಭರದಲ್ಲಿ ರಾಚಿದ ದೂಳು ಮತ್ತೆ ಮುಖ ಸವರಿತ್ತು.ನಾನು ನನ್ನ ಗುರುತನ್ನೆ ಮರೆತ ಕ್ಷಣ.ಆ ಪರಿಸ್ಥಿತಿಯಲ್ಲೂ ಗಟ್ಟಿಯಾದ ಒಂದು ನಿರ್ಧಾರ ಮೂಡಿದ್ದು ಏನೆಂದರೆ ನಾನಿನ್ನೂ ಏಮಾರಬಾರದೂ ಈ ಏಮಾರುವಿಕೆಯ ಶಕೆ ನನ್ನ ಜೀವನದಲ್ಲಿ ಇಂದಿಗೆ ಕೊನೆಯಾಗಬೇಕು!!!.ಚೀಲದಲ್ಲಿ ಇವಳು ಚೀಪಿ ಎಸೆದಿದ್ದನ್ನೂ ಆಯ್ದು ಇಟ್ಟುಕೊಂಡಿದ್ದ ಕೇಪುಳದ ಕೆಂಪು ಹೂವು ಬಾಡಿ ಮುರುಟಿ ಕಪ್ಪಗಾಗಿತ್ತು.

ಎಲ್ಲೋ ಸೈಕಲ್ ಬೆಲ್ ಸದ್ದು ಕಿವಿಗೆ ಬಿದ್ದು ಮತ್ತೆ ಸ್ಥಬ್ದ ಒಂದರೆಕ್ಷಣದಲ್ಲಿ ಮನೆ ಕಾಲಿಂಗ್ ಬೆಲ್ಲು ರಿಂಗಣಿಸತೊಡಗಿತು.ಹೌದು ಅದು ನಸುಕು ನಾನಿಷ್ಟೂ ಹೊತ್ತು ಕಂಡಿದ್ದು ಕನಸು, ಹಾಲಿನವನೂ ಬಂದು ಸೈಕಲ್ ಬೆಲ್ ಹೊಡಿಯೋದು ನಾನು ಎದ್ದು ಮನೆಕೆಳಗಿಳಿದು ಬಂದು ಹಾಲು ಪಡೆದು ಬರೋದು ಪದ್ದತಿ, ಇವತ್ಯಾಕೋ ನಾ ಬಾರದ್ದನ್ನು ಕಂಡು ಮನೆ ಬಾಗಿಲಿಗೆ ಬಂದು ಬೆಲ್ ಹೊಡೆದಿದ್ದ, ದಡಬಡಾಯಿಸಿ ಹೊದಿಕೆ ಬಿಸುಟು ಹಂಗಂಗೆ ಬೆಡ್ ಮೇಲೆ ಹರವಿ ಎದ್ದು ಹಾಲಿನವನನ್ನ ಎದುರುಗೊಂಡಿದ್ದೆ.ಅಯ್ಯೋ ಕನಸೂ ಕೂಡ ಏಮಾರೋದೆ ಬೀಳುತ್ತಲ್ಲ, ಹಳ್ಳಿಗನಾಗೆ ಗುರುತಿಸೋದು ನನ್ನ ಕನಸುಗಳಿಗೂ ಇಷ್ಟನೆ ಅಲ್ವಾ ಎಂದು ನೆನೆದು ನಸು ನಗುತ್ತಾ, ನಸುಕಿನಲ್ಲಿ ಬಿದ್ದ ಕನಸು ನನಸಾಗುತ್ತೆ ಅನ್ನೋದು ಯಾರೋ ಹೇಳಿದ್ದು ನೆನಪಾಗಿ...... ನನಸಾಗೊದಿದ್ದರೆ ಕನಸಿನ ಕೊನೆ ನಾ ಏಮಾರುವ ನನ್ನ ಜೀವನದ ಶಕೆ ಇಲ್ಲಿಗೆ ಕೊನೆಯಾಗಲಿ ಎಂಬ ಕನಸ ನಿರ್ಧಾರವೆ ನನಸಾಗಲಿ ಎಂದೆಣಿಸುತ್ತಾ ಜಗ್ ತುಂಬಾ ನೀರೆತ್ತಿ ಮುಖಕ್ಕೆ ಚಿಮುಕಿಸಿದೆ.ವಾಸ್ತವಕ್ಕೆ ಕೊಂಚ ಕೊಂಚವೆ ಹಿಂದುರಿಗಿದೆ ಕನಸ ಕೊನೆಗೆ ಹೊರಳಿದಂತೆ. 

ಚಿತ್ರ ಕೃಪೆ :- ಗೂಗಲ್

Tuesday, August 21, 2012

ಈಗೇನ್ ಮಾಡೋಣ?

ಧೋ ಎಂದು ಧರೆಗುರುಳೋ ಮಳೆಯ ನಡುವೆ
ಜೇಬಲ್ಲಿ ಮೊಬೈಲಿನ ಕಿಣ ಕಿಣ, ವೈಬ್ರೆಷನ್ ಕಚಕುಳಿ
ಸಮಯವದೂ ಮಾಮೂಲಿ ಕರೆಯೊಂದರದೂ
ಮೊಬೈಲೆತ್ತಿದರೆ ಮಳೆ ನೀರಿಗೆ ತೊಪ್ಪೆ
ಸುಮ್ಮನಿದ್ದರೆ ಮನಸು ತುಂಬಾ ಹೊಯ್ದಾಟ
ಈಗೇನೂ ಮಾಡೋಣ?

ಮಳೆಯೂ ನನ್ನಿಷ್ಟದ್ದೆ, ಜೊತೆಗೆ ಬಂದ ಕರೆಯೂ ಕೂಡ
ಇಷ್ಟಗಳ ನಡುವೆ ಇವೆರಡನ್ನೂ ಅಪ್ಪಿಕೊಳಲು
ಮಗದೊಂದಿಷ್ಟದ ನನ್ನ ಮೊಬೈಲನ್ನೂ ಆಹುತಿ ಕೊಡಲೆ
ಇಲ್ಲಾ ಒಂದಿಷ್ಟವನ್ನೂ ಒಲ್ಲದೆಯೆ!! ದಕ್ಕಿದ್ದೆ ಇಷ್ಟೆಂದೂ ಬಿಟ್ಟುಕೊಡಲೆ
ಎಲ್ಲವೂ ಬೇಕೆಂಬ ಮನಸ್ಥಿತಿಯೊಳಗೆ ಯೋಚನೆಗೆ ಬಿದ್ದೆ
ಈಗೇನೂ ಮಾಡೋಣ?

ಕರೆ ರಿಂಗಣಿಸಿ ನಿಂತರೂ ಮಳೆ ನಿಂತಿಲ್ಲ
ಮಳೆ ನಿಂತಾಗ ತೊಪ್ಪೆಯಾದ ಜೇಬು ತಡಕಿ ನೊಡಿದರೆ ಮೊಬೈಲೂ ನೆನೆದಿದೆ.
ದಡ್ಡ ನಾನೂ ಕರೆ ಸ್ವಿಕರಿಸಿಯಾದರೂ ತೊಪ್ಪೆಗೊಳಿಸಬಹುದಿತ್ತು
ಆಹುತಿಯಾಗುತ್ತೆ ಉಳಿಸಿಕೊಳ್ಳಬೇಕೆಂಬ ಆಸೆಗೆ ಬಿದ್ದು ಎಡವಿದೆ
ಯಾಕೋ ಸತ್ತು ಮಲಗಿದೆ ರಿಂಗಣಿಪ ಕರೆ ಎಂದುಕೊಂಡಿದ್ದೆ
ಅಯ್ಯೋ ಸಿವ ಸತ್ತಿದ್ದು ಒಂದಿಷ್ಟದ ನನ್ ಮೊಬೈಲೂ
ಈಗೇನೂ ಮಾಡೋಣ?

ಅತ್ತ ಕರೆಯೂ ಸತ್ತಿತೂ, ಇತ್ತ ಮೊಬೈಲೂ ಕೆಟ್ಟಿತೂ
ಮಳೆ ಮತ್ತೆ ಬಂದು ನಿಂತು ತಣಿಸಿ ಆಟವಾಡಿ ಅದೂ ನಿಂತಿತು,
ಹೊಸತೊಂದು ಮೊಬೈಲೂ ಖರೀದಿಸಿದರೂ ಬರಲಾರದ ದೂರ
ಕ್ರಮಿಸಿಯಾಗಿತ್ತು ನವಿರು ನೀಡುತ್ತಲಿದ್ದ ದಿನವೂ ರಿಂಗಣಿಸುತಿದ್ದ ಕರೆ.
ನಾನೆಲ್ಲವೂ ದಕ್ಕಿಸಿಕೊಳ್ಳಬೇಕೆಂಬುದರೊಳಗೆ ಕಳಕೊಂಡಿದ್ದು ಬಹಳ
ಎಲ್ಲದಕ್ಕೂ ಹೆಳೆ ಮಾತ್ರ ಮಳೆ,
ಫಟಾಫಟ್ ನಿರ್ಧಾರ ಶಕ್ತಿ ದೂರಾದಾಗ ಹಿಂಗೆ ಆಗೋದು
ಮಿಂಚಿ ಹೋದ ಕಾಲವಂತೆ ಚಿಂತಿಸಬಾರದಂತೆ.
ಇದನೆಲ್ಲಾ ಹೇಳಿ ಈಗೇನ್ ಮಾಡೋಣ?

ಮುಗ್ದನ ಇಣುಕು

ಮುಗ್ದತೆ ಎಂದರೆ ಎಲ್ಲವೂ ಒಪ್ಪಿಕೊಳ್ಳುವ ಮನಸ್ಥಿತಿ
ಬೆನ್ನಿಗೆ ಬಾಕು ತುದಿ ತಗುಲಿದ್ದರೂ
ಇನ್ನೂ ಒಂದೊತ್ತಲ್ಲಿ ನಂಬಿದವನೆ ಇರಿದು ಕೊಲ್ಲಬಹುದಾಗಿದ್ದರೂ
ನಮ್ಮವರೆಂಬ ವ್ಯಾಮೋಹದೊಳಗೆ ತನ್ನನ್ನೆ ಮರೆತ ನಗಣ್ಯತೆ

ಅರಿವಾಗುವಾಗ ಆತನೆ ಜಗಕೆ ಸಲಾಮು ಹೊಡೆದಿರುತ್ತಾನೆ
ಜೊತೆಗಾರನಾತ ವಿಕಟಹಾಸದಿ ನಗುತ್ತಿರುತ್ತಾನೆ
ಜಗವೆ ಇಷ್ಟೂ ಮನದೊಳಗೆ ಸ್ವಾರ್ಥತೆ ,ಸಭ್ಯತೆ ತೋರ್ಪಡಿಕೆಯ ಕಳಕಳಿ
ಆಗಲೂ ಧರ್ಮಾರ್ಥ ಸತ್ತ ಆತನ ಕಣ್ಣಲ್ಲಿ ನಂಬಿಕೆಯ ಇಣುಕು ಮುಸುಕು ಮುಸುಕು

ಎಲ್ಲಾ ಭ್ರಮೆ, ಆತ ಸಾಯಲ್ಲ ಇದೆಲ್ಲಾ ಕಲ್ಪನೆ
ಸಾಯಬೇಕಾದ್ದೂ ಆತನಿಗೆ ಕಫಟ ಮಾಡಿದ ಮನಸುಗಳೂ
ನಂಬಿಕೆ ಘಾತಕಗಳೂ, ಎರ್ರಾ ಬಿರ್ರಿ ನಂಬುವ ಆತನದೆ ಮುಗ್ದತೆ
ವ್ಯಕ್ತಿಗಳಲ್ಲದೆ ನೆಚ್ಚಿದ ವ್ಯಕ್ತಿ ಗುಣ ಅಣಕಿಣಂತೆ ಕಂಡರೂ ಅದು ಬದುಕಬೇಕು.

ಇಲ್ಲಾ!!! ಕಪಟದೊಳಗಿನ ಮನಸುಗಳಿಗೆ ಬದುಕಿಲ್ಲ
ದಿನವೊಂದು ಕಾದಿರುತ್ತೆ ಕುಳಿತು ದುಃಖಿಸಲು
ಸಂತೈಸಲೂ ನರ ಹುಳವೂ ಇಲ್ಲದ ಪರಿಸ್ಥಿತಿಯೊಳಗೆ
ಬದುಕು ತುಂಬಾ ಕತ್ತಲನ್ನೆ ಹೊದ್ದು ಮಲಗಬೇಕೂ, ಬದುಕು ಮುಗಿಸಲೂ.

ನೈತಿಕೆಯೊಳಗೆ ಅನೈತಿಕತೆ ಹೊದ್ದು ಮಲಗಿದವರೆ
ಎಚ್ಚೆತ್ತೂಕೊಳ್ಳಿ ಎಲ್ಲವ ಕಳಕೊಳ್ಳುವ ಮೊದಲೂ,
ನೈತಿಕತೆ ಅನ್ನೋದು ಮಾರಾಟಕ್ಕಿಡೋ ವಸ್ತುವಲ್ಲ
ಅರಿತರೆ ಜೊತೆಗಿದ್ದವರೊಂದಿಗೆ ಎಲ್ಲರದೂ ಬಾಳು ಸ್ವರ್ಗ
ಇದಲ್ಲದಿದ್ದರೆ ಕೊಲೆಗಾರನಿಗೂ ಇವರೀಗೂ ವ್ಯತ್ಯಾಸ ನಾ ಹುಡುಕಲಾರೆ
ಕಾರಣ ಜೀವ ಕೊಲೆಗಿಂತ ಜೀವಂತಿಕೆಯ ಕೊಲೆ ಭರ್ಭರ.

Friday, August 3, 2012

ನೋವ ರಂಗಿನಾಟ.

ಮಾತೆಂಬುದು ಕರುಳ ಸುತ್ತ ಮುರುಟಿದಾಗ
ನಾಲಗೆಯ ಬುಡದಲ್ಲಿ ನೋವೆದ್ದು ಎಲ್ಲವೂ ಸ್ಥಬ್ದ
ಹಿಡಿದಿಟ್ಟ ಗಂಟಲ ಪಸೆಯಾರಿ ಅದು ಬರಡು .

ಯೋಚನೆಗಳು ನೆತ್ತಿ ಸುತ್ತ ಹುಟ್ಟುತ್ತಲೆ ಸತ್ತಾಗ
ನರನಾಡಿಯೆಲ್ಲ ಹಿಡಿದು ಬಿಗಿದಪ್ಪಿದ ಅನುಭವ
ನೋವು ಕಂಡ ಹಣೆ ತುಂಬಾ ಬೆವರ ಪನಿ .

ವಿಶ್ರಾಂ
ತಿ ಬಯಸಿದ ಬೆನ್ನ ಅಡ್ಡವಾಗಿಸಿದಾಗ
ಬೆನ್ನು ಮೂಳೆಯಲ್ಲೆ ಮುರಿದ ನೋವು
ಕೀಲಸಂಧಿಯ ನೇರವಾಗಿಸಲಾಗದೆ ನಾನೆ ವಕ್ರ.

ಪಾದದಡಿಯ ಧೃಡ ಹೆಜ್ಜೆಯಲ್ಲೂ
ಬೆಂಕಿಯ ಉರಿ, ಬೆಳೆಯುತ್ತೆ ತೊಡೆಯೆತ್ತರಕ್ಕೆ
ಕುಸಿದರೆ ಮತ್ತೇಳಕೊಡದ ಮೊಣಗಂಟು.

ಕೂತಲ್ಲಿ ನಿಂತಲ್ಲಿ ಇದ್ದಕ್ಕಿದ್ದಂತೆ ಕಾಡುವ ನೋವ
ಹೊಕ್ಕುಳ ಸುತ್ತಲೂ ಹೊತ್ತು ನಾ ವಿಲ ವಿಲ
ನರ ಎಳೆದು ಹೃದಯ ಬಡಿತವ ಕೊಂದಂತ ಘಳಿಗೆ

ದೇಹದ ತುಂಬಾ ಇಂಚಿಂಚೂ ಗಾಯ
ಅದು ದೈಹಿಕ ನೋವಾದರೂ ನೋವಲ್ಲ
ಭಾಧಿಸದೆ ಅವು ಗುಣಗೊಂಡು ಪ್ರಶಾಂತ.
ಹೆಣ ಭಾರವೆನಿಸಿದ್ದೂ ನೋವುಗಳ ಮೂಲ
ಅದು ಮನಸಿನೊಳಗೆ ನಡೆವ ತುಮುಲ
ಹೃದಯವ ಬಾಧಿಸಿದ ನನ್ನ ಸುತ್ತಲಿನ ಪ್ರವರ.




Tuesday, July 31, 2012

ಕನಸಿನೊಂದಿಗಿನ ಜೀವ.

ಎಡ ಬಲ ತಿರುಗಿದರೆ ಏಟು
ಮೈ ಕಸುವೂ ಜಾರುತ್ತಿದೆ
ನಂಬಿಕೆ ಎಂಬುದು ನನ್ನನ್ನೆ ನೋಡಿ
ಗಹಗಹಿಸಿ ನಗುತ್ತಿದೆ
ಆದರೂ ನಾನು ಬದುಕುತ್ತಿದ್ದೆನೆ
ಥುತ್ತ್ ಎಂದು ನನಗೆ ಉಗಿದುಕೊಂಡು

ನನ್ನದೆ ಜೀವನದ ತಿರುವುಗಳು
ನನಗೆ ಗೊತ್ತಿಲ್ಲದಂತೆ ಇತರವೂ ಆದಾಗ
ಭಾಸವಾಗುವುದೆನಗೆ ನಾ ತಿರುಗುವ ಬುಗರಿ
ತಿರುಗಿಸುವ ಸೂತ್ರದಾರ
ಅಡ್ಡ ಬಿದ್ದು ನಗುತಿಪ ಖುಷಿಯೊಂದಿಗೆ
ಗಾಳಿಯಲ್ಲಿ ದಾರವ ಬೀಸುತ್ತಾ.

ಇಷ್ಟೆನಾ ಬದುಕು ಸಂಬಂಧ?
ಹೆತ್ತವರಿಂದ ಹೆಚ್ಚು ಅಂದುಕೊಂಡದ್ದು
ಮರೀಚಿಕೆಯಾ................
ತಾಳಲಾಗುತ್ತಿಲ್ಲ ಒತ್ತರಿಪ ದುಃಖ ಬೇರೆ ಜೊತೆಗೆ
ಕರ್ಮ ನಾ ಪಡೆದಿದ್ದೆ ಇಷ್ಟಾ ?

ಎಲ್ಲವನ್ನೂ ಕಳೆಯಲೂ ನಾ
ಚಿಂತೆ ಪಡಲಿಲ್ಲ....
ಸಲಹಬೇಕಿತ್ತು ನಾ ಹೊಸತೊಂದು ಸಂಬಂಧಗಳನ್ನ
ಒಡ ಹುಟ್ಟಿದ ಸ್ಥಾನದಲ್ಲಿ ಎತ್ತಿ ಕೂರಿಸಿದೆ
ಬೇರೆ ಮಾತುಗಳೆ ಇರಲಿಲ್ಲಾ
ಆದರೆ ನಾನೀಗ ಪರಕೀಯ ಜೊತೆಗೆ ಶತ್ರು
ಮಾಡಿದ ತಪ್ಪೇನೂ ??? ಗೊತ್ತಿಲ್ಲ
ಆದರೂ ನಾ ಅಪರಾಧಿ, ಪ್ರೀತಿ ವಂಚಿತ.

ಜೀವಂತ ಮನುಷ್ಯನ ಗ್ರಹಿಕೆ ಮರೆತು
ಕಲ್ಲು ಬೆಂಚು ಅಳುತ್ತಿರುವದರ ಗ್ರಹಿಸಬಲ್ಲರೂ,
ತಾನೆ ಮಾಡಿದ್ದೂ ಸರಿ..
ತನ್ನದೆ ಹಠ ಮೇಲೂ ಅನ್ನೋರರ ಒಳಗೆ
ಈ ಜೀವ ತನಗೊಂದು ತಾವ ಬಯಸಿ
ನಿರೀಕ್ಷಿಸೋದ ಗುರುತಿಸಕ್ಕೆ ಗ್ರಹಿಕೆಗಳ ಕಣ್ಣೆ ಕುರುಡು

ಬಿರುಗಾಳಿಲೆದ್ದ ಸಣ್ಣ ಧೂಳ ಕಣ
ಕಣ್ಣ ಪಾಪೆಗೆ ಸಿಲುಕಿ ಎಲ್ಲಾ ಮಬ್ಬು ಮಬ್ಬು
ಒಂದು ಬಿಂದಿಗೆ ನೀರ ತಂದು
ಕಣ್ಣ ಸಲಹುವವರೂ ಯಾರೂ ಇಲ್ಲ
ಸದ್ಯಕ್ಕೆ ನಾನು ಕುರುಡ
ಎಲ್ಲವೂ ಕಂಡರೂ ನಾನು ಅಸ್ಪಷ್ಟ
ಜಗವೆಲ್ಲವ ಮರೆತ ನನ್ನದೆ ಲೋಕದೊಳಗೆ
ನಾನೊಬ್ಬ ಭ್ರಾಮಕ ಜೀವಿ
ಕನಸುಗಳ ಹೊತ್ತ ಕನಸುಗಾರ.

ಬುದ್ಧಿವಂತರ ಕೂಪ

ಬೆಳೆಯುತ್ತಾ ಸಂಬಂಧಗಳ
ಕವಲುಗಳನ್ನು ಬೆಳೆಸಿಕೊಂಡಿರುವೆ
ಕವಲುಗಳು ಬೇರುಗಳಾಗಿ
ನನ್ನ ಪೋಷಿಸುತ್ತಲಿತ್ತು.
ತಾಯಿ ಬೇರು ಮೂಲವಾದರೆ
ಕವಲೂ ಬೇರೂಗಳು ನನ್ನ ಅಸ್ಥಿತ್ವ
ತೊರೆಯಬಹುದಾದ ಮಾತೆ ಇಲ್ಲ.

ಸುತ್ತಲೂ ಗಲೀಜು
ಅದರಲ್ಲೂ ಸ್ವಚ್ಚ ನೀರ ಹುಡುಕಾಡಿ
ಉಣ ಬಡಿಸುತಲಿತ್ತು ನನ್ನ ಬೇರುಗಳು
ಕ್ರಮೇಣ ಗಲೀಜನ್ನ ಮೆತ್ತಿಸಿಕೊಂಡ
ಬೇರುಗಳಿಗೆ ನೀರ ದಾಹ
ಉಪಾಯವಿಲ್ಲದೆ ಗಟಾರದ ನೀರ ಪಾನ
ನನ್ನ ಅಸ್ತಿತ್ವವೆ ಕೊಚ್ಚೆಯಾದಾಗ
ನಾನೂ ಕೊಚ್ಚೆ ..ಮೈಹತ್ತಿಸಿಕೊಳ್ಳಲಾಗದೆ
ನನ್ನೊಳಗೆ ಹುಟ್ಟಿದ್ದು ಒಂದಷ್ಟು ಆಕ್ರೋಶ.

ಧರ್ಮವೆಂಬ ನೆತ್ತಿ ಶೂಲ
ಜೊತೆಗೊಂದಿಷ್ಟು ಒಣ ಸಂಸ್ಕೃತಿಯ ಭಾರ
ಈ ಕೊಳಕಿನೊಳಗೆ ಹೆಣ್ಣು ಮಾತ್ರ
ಸಂಸ್ಕೃತಿಯ ಹರಿಕಾರಳಾದ ತಮಾಷೆ,
ಯಾವುದೋ ಸಿದ್ದಾಂತ
ಅಸಂಬದ್ದ ನೀತಿ ನಿಯಮ ತರ್ಕದೊಳಗೆ
ಕಣ್ಣು ಮುಚ್ಚಿ ಹೆಣ್ಣ ಭೋಗಿಸಿದ್ದು
ತಮ್ಮ ತೃಷೆಯ ತೀರಿಸಿಕೊಂಡಿದ್ದು
ಲೋಕಕ್ಕೆ ತಿಳಿಯಲಿಲ್ಲವೆಂಬ ಭ್ರಮೆಯಲ್ಲಿ
ಮುಳುಗಿ ಎದ್ದಾಗ ಹುಟ್ಟಿದ ಹೆಸರು ಸಂಸ್ಕೃತಿ.

ಬುದ್ದಿವಂತರು ಎನಿಸಿಕೊಂಡು
ಬುದ್ದಿಹೀನರಾಗಿ ಕೂಪದೊಳಗೆ ಬಿದ್ದೀವಿ
ಮೋರಿಗಳೊಂದಷ್ಟು ಗಟಾರವ ಹೊತ್ತು
ಕೂಪಕ್ಕೆ ಬಂದು ಸೇರುತ್ತೆ
ನಮಗದುವೆ ಅಮೃತ
ಮೊಗೆದಪ್ಪಿ ಕುಡಿಯುತಿದ್ದೇವೆ
ಕೊಳಚೆ ಯಾವೂದೂ ಶುದ್ದ ಯಾವೂದು
ತಿಳಿಯಲಾರದ ಮನಸ್ಥಿತಿ ನಮ್ಮದೂ
ನಮ್ಮ ತಲೆ ತುಂಬಾ ಬುದ್ದಿವಂತರೆಂಬ ಜೊಳ್ಳು.

ತೊಳೆಯಬೇಕಿದೆ ನನ್ನ ಅಸ್ತಿತ್ವದ ಬೇರ ಕೊಳಚೆ
ಅಳಿಯಬೇಕಿದೆ ಸ್ವಾರ್ಥ ಸಾಧಕರು ಹೆಣ್ಣ ಬದುಕ ಮುಂದೆ
ಮಡಿಯಾಗಬೇಕಿದೆ ಸುತ್ತಲೂ ಹಬ್ಬಿರುವ ಗಲೀಜು ಸರಿಸಿ
ಶುದ್ದಿಕರಿಸಬೇಕಿದೆ ನನ್ನ ಉಸಿರು, ನೆಲ, ಜಲವನ್ನೂ
ಅಸ್ತಿತ್ವವನ್ನೂ ಕೊಂದುಕೊಳ್ಳದೆ ಬದುಕಬೇಕಿದೆ
ಅಲ್ಲಿವರೆಗೆ ..........................

ನನ್ನ ಮೇಲಿನ ಅಸಹ್ಯವನ್ನು ನಾನೆ ಸಹಿಸಿಕೊಳ್ಳಬೇಕಿದೆ.

Monday, July 30, 2012

ನಗೆಪಾಟಲಿಗೀಡಾದ ಬುದ್ದಿವಂತರೆಂದು ಕರೆಸಿಕೊಂಡ ಮೂರ್ಖನಾಡು

ಥೋ ದರ್ಬೇಸಿಗಳ ನಿಮ್ಗೇನಾದ್ರೂ ಮಾನ ಮರ್ಯಾದೆ ಇದೆಯಾ, ಅಲ್ಲಾ ಆ ಹುಡುಗರು ನಿಮ್ಮ ಅಕ್ಕ ತಂಗಿರ ಹೊತ್ತೊಯ್ದಿದ್ರಾ?ಅಲ್ಲಾ ಬೀದಿಲಿ ಬಿದ್ದು ಇತರರಿಗೆ ತೊಂದರೆ ಮಾಡ್ತಿದ್ರಾ?ಅವ್ರೆನೂ ಬಿಕಿನಿಯಲ್ಲಿ ಅಥವಾ ಬೆತ್ತಲೆಯಾಗಿ ನಿಂತಿದ್ರಾ? ನಿಮ್ಮ ಅಕ್ಕ ತಂಗಿ, ಮದುವೆ ಆಗಿದ್ರೆ ನಿಮ್ಮಗಳ ಹೆಂಡತಿ ತೊಡುವ ಬಟ್ಟೆನೆ ಹಾಕೊಂಡಿದ್ರು, ಅದುಕ್ಕೆ ಶೂರ್ಪನಕಿ ಅನ್ನೊ ಪಟ್ಟ ಕಟ್ತಿರಾ??? ನಿಮ್ಮಗಳ ಮನೆ ಹಾಳಾಗೋಗ. ಅಲ್ಲಾ ಸಂಸ್ಕೃತಿ ಅಂತಾ ವರಾತ ಶುರುವಿಟ್ರಲ್ಲ ಯಾವ ಮನೆ ಹಾಳು ಸಂಸ್ಕೃತಿ ನಿಮ್ದು?ಇದು ತಾಲಿಬಾನ್ ರಾಷ್ಟ್ರಾನಾ ಮುಖ ಮುಚ್ಕೊಂಡು ದೇಹ ಮುಚ್ಕೋಂಡು ಬುರ್ಕಾ ಹಾಕಿ ಓಡಾಡಕ್ಕೆ?ಕಚ್ಚೆ ಹರುಕರಾ ಕೇಳಿ ಇಲ್ಲಿ ಸ್ವ ಇಚ್ಚೆಯಿಂದ ಭಾಗಿಯಾಗಬಹುದಾದ ಕಾಮ ಕೇಳಿ ಕೂಡ ವ್ಯಭಿಚಾರ ಅತ್ಯಾಚಾರ ಅನ್ನೋ ಹೆಸರು ಪಡೆಯಲಾರದು.ಅಂತಿದ್ದಲ್ಲಿ ಏನೂ ನಡೆಯದೆ ಇರುವಲ್ಲಿ ರೇವ್ ಪಾರ್ಟಿಯೆಂದು ಹೆಸರು ಕೊಟ್ಟರಲ್ಲ ಷಂಡರೆ??? ನಿಮ್ಮಗಳನ್ನು ಹೆಣ್ಣೂ ಮಕ್ಕಳಿರಿರುವ ಮನೆಗೆ ಬಿಟ್ಟು ಕೊಳ್ಳುವದೆ ಅಸಹ್ಯ, ಯಾಕೆಂದರೆ ನಿಮ್ಮೊಳಗಿರುವದು ಹೆಣ್ಣೆಂಬುದು ಭೋಗ ವಸ್ತು, ಹೆಣ್ಣು ಪ್ರೀತಿ ವಂಚಿತ ಪ್ರೇತಾತ್ಮ ನಿಮ್ಮಗಳದ್ದು.ಹೆಣ್ಣನ್ನು ಕಾಮ ದೃಷ್ಟಿಯಿಂದ ನೋಡೋ ಕಾಮ ಪಿಪಾಸುಗಳು ನೀವು, ಅಪ್ಪ ಅಮ್ಮ ಅಕ್ಕ ತಂಗಿ ಸಂಬಂಧಗಳನ್ನೆ ಕಾಣದ ಹೊಲಸು ಜೀವ ನಿಮ್ಮದಿರಬಹುದು. ನೀತಿ ಕೆಟ್ಟ ಮತೀಯಾವಾದಿಗಳೆ ಕೇಳಿಲ್ಲಿ ನಿಮ್ಮಗಳ ಜನ್ಮ ಸಾರ್ಥಕಾವಾಗಬೇಕಿದ್ದರೆ ಪುರುಷ ಪೌರುಷವ ಕೈಬಿಡಿ ಹೆಣ್ಣಿಗೂ ಸಂಪೂರ್ಣ ಸ್ವಾತಂತ್ರ್ಯವ ಕೊಟ್ಟು ನೋಡಿ, ಆಕೆಗೂ ಉಸಿರಾಡಲೂ ಬಿಡಿ. ಆಕೆ ಬಿಕಿನಿ ಮತ್ತೊಂದು ಡ್ರೆಸ್ ಮಾಡೊ ಹಂತಕ್ಕೆ ಬಂದರೆ ಅದು ನಿನ್ನ/ನಿಮ್ಮ ಮನೆ ಬೆಳೆಸಿದ ಸಂಸ್ಕೃತಿಯ ಹೊರ ಸೂಸುತ್ತದೆಯೆ ಹೊರತಾಗಿ ಆಕೆಯದ್ದಲ್ಲ ಅನ್ನುವ ನಿಜವನ್ನು ಅರಿ.
ಏನ್ ಹಿಂದೂ ?ಮನುಷ್ಯತ್ವವನ್ನು ಹೊರತಾಗಿರೋ ಧರ್ಮ ನಿಮ್ದು?ಸಮರ್ಥಿಸಿಕೊಳ್ತೀರಾ ಹಲ್ಕಟ್ ಗಳಾ??? ನಾಳೆ ನಿಮ್ಗಳ ಹೆತ್ತಾಕೆಯೆ ಪಾರ್ಟಿಯಲ್ಲಿ ಕುಂತಿದ್ದರೆ ಆಕೆಗೆ ಹೊಡೆಯುವದನ್ನೂ ಸಮರ್ಥಿಸಿಕೊಳ್ತೀರಾ??? ಆವಾಗಲೂ ಮೈಸೂರಲ್ಲಿ ಹಿಂದೂ ಹುಡುಗಿಯನ್ನೂ ರೈಲಿಂದ ತಳ್ಳಿದರೂ ಹಾಗೆ ಅಸ್ಸಾಂ ಘಟನೆಯನ್ನೂ ಮುಂದಿಟ್ಟು ಪ್ರಶ್ನಿಸುತ್ತೀರಾ???ಈ ಘಟನೆಗಳನ್ನೂ ಯಾರು ಸಮರ್ಥಿಸಿಕೊಂಡಿಲ್ಲ ಅಥವಾ ಅದರಿಂದ ವಿಕೃತ ಆನಂದವನ್ನೂ ಯಾರು ಪಟ್ಟಿಲ್ಲ ಮೂರುಕಾಸು ಚಿಲ್ರೆಗಳಾ?? ನೂರಾರು ಮೈಲುಗಳ ದೂರ ಕುಳಿತು ಪ್ರಶ್ನಿಸದೆ ಏನೂ ಮಾಡ್ತೀರಾ ಸ್ವಾಮಿ. ದಕ್ಷಿಣ ಕನ್ನಡದ ಪರಿಸ್ಥಿತಿ ನೋಡಿ ಅಲ್ಲೆ ಬಾಳಿ ಬದುಕಿದವರಿಗೆ ಗೊತ್ತು. ಸಮರ್ಥಿಸಿ ಮಾರುದ್ದ ಬರೆಯುವ ಬಿಕನಾಸಿಗೇನ್ ಗೊತ್ತು.ನಿಮ್ಮಗಳ ಈ ರಂಪಾಟದ ಫಲವೆಂಬಂತೆ ಎಲ್ಲಾ ಮೂಲಭೂತ ಸೌಲಭ್ಯವಿದ್ದಾಗಿಯೂ, ನಮ್ಮೂರಿಗೆ ಒಂದೆ ಒಂದು ಔದ್ಯೋದಿಕ ಉದ್ದಿಮೆಗಳೂ ಬರಲ್ಲ, ಮೂಲ ನೆಲೆಯಲ್ಲಿ ಉದ್ಯೋಗ ಸೃಷ್ಟಿಯಾಗ್ತಿಲ್ಲ, ಹೋಗಲಿ ಸಾಂಪ್ರಾದಾಯಿಕ ಕೃಷಿ ವಿಧಾನಗಳಾದರೂ ಉಳುಕೊಂಡಿದೆಯೋ? ಅದೂ ಇಲ್ಲ,ಇದ್ದ ಬದ್ದ ಫಲವತ್ತೂ ಜಮೀನೂಗಳನ್ನೂ ರಬ್ಬರ್ ಬೆಳೆ ಆಕ್ರಮಿಸಿಕೊಂಡಿದೆ ಅಲ್ಲಿಗೆ ಆ ಜಮೀನಿನ ಸಾವೂ. ಮುಂದೆಂದೂ ಒಂದು ಹುಲ್ಲು ಹುಟ್ಟದಾದ ಪರಿಸ್ಥಿತಿ.ಇಲ್ಲಾ ಇದೇನಾದರೂ ಮಾಡದಿದ್ದರೆ ದೂರದ ಊರಿಗೆ ಎಲ್ಲವನ್ನೂ ಬಿಟ್ಟು ಪಯಣಿಸಬೇಕೂ ಉದ್ಯೋಗ ಅರಸುತ್ತಾ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಇಟ್ಟುಕೊಳ್ಳಬಹುದಾದ ಶೋಕಿ ಜೀವನ ಮಂಗಳೂರಿಗರದ್ದು. ರಿಬಕ್ ಶೂ ಬೇಕೂ ಲಿವಿನ್ಸ್ ಪ್ಯಾಂಟ್ ಶರ್ಟ್ ಬೇಕೂ ಹೀಗೆ ಬ್ರಾಂಡ್ ಮೇಲೆ ಜೀವನ,ಈಡೀಯಾ ಪೇಟೆಯಲ್ಲಿ ಒಂದು ಸೈಕಲ್ ಕಾಣಲ್ಲ, ಸ್ಕೂಟಿ ಆಕ್ಟಿವ್ ಹೊಂಡಗಳದೆ ಕಾರುಬಾರು. ಬಡವನಿಗೆ ಜೀವನ ದೂರಾಗಿದೆ!!! ಈ ಬಗ್ಗೆ ತಲೆ ಕೆಡಿಸಿಕೊಂಡಿರಾ ಷಂಡ ಸಂಸ್ಕೃತಿ ಭಕ್ಷಕ/ರಕ್ಷಕರೆ?? ಇವೆಲ್ಲಾ ನಿಮಗೆ ಸಂಸ್ಕೃತಿ, ಆದರೆ ಹುಡುಗೀರೂ ಮಾಡರ್ನ್ ಆಗದೆ ಹಣೆಗೆ ತಿಲಕವಿಟ್ಟು ಮೈ ತುಂಬಾ ಸೀರೆಯುಟ್ಟು ಓಡಾಡಬೇಕೂ ಎಂದೂ ಬಯೋಸೋದು, ದಿನ ಪೂರ್ತಿ ಟೈಟಾಗಿ ಬಾರು ದೊಂಬಿ ಅಂತಾ ಕಾಲಕಳೆಯೋದು, ಮಾತೆತ್ತಿದರೆ ರೌಡಿಸಂ ಅಂಥ ಅವನಿಗೆ ಹೊಡೆದೆ ಆತನ್ನ ನೋಡ್ಕೋತೀನಿ ಅನ್ನೋ ವಿಚಾರದಲ್ಲೆ ಮುಳುಗೀರೋದು, ಪುಂಡು ಪೋಕರಿಗಳಾಗಿ ತಿರುಗುತ್ತಿರುವ, ಸಾವಿರಗಟ್ಟಲೆ ಯುವ ಸಮುದಾಯ ಪೋಷಿಸೋದು ಬೆಳೆಸೋದು ಸಂಸ್ಖೃತಿ ರಕ್ಷಕರೆನ್ನುವ ಸಂಸ್ಥೆಗಳ ಇವತ್ತಿನ ಕಾರ್ಯಾಭಾರ, ಅವರಾದರೂ ಏನ್ ಮಾಡ್ತಾರೆ ಅವುಗಳು ರಾಜಕೀಯ ಹಿತಾಸಕ್ತಿಯನ್ನು ಬೆಳೆಸಲು ಇಂಥಹಃ ಸಮೂದಾಯವನ್ನು ಬೆಳೆಸಲೆಬೇಕಾದ ದರ್ದು.ಮೂರ್ಖ ಶಿಖಾಮಣಿಗಳು ಇವರ ಬಲೆಗೆ ಬೀಳೋರು, ಅತ್ಯಂತ ಎಜುಕೇಟೆಡ್ ಶ್ರೇಣಿಯಲ್ಲೀರೋರನ್ನೂ ಕೂಡ ಬಲೆ ಕೊಡವಿಕೋಳ್ಳುವಲ್ಲಿ ನಿಸ್ಸೀಮಾವಾಗಿ ಬಿಟ್ಟೀವೆ ಈ ಪಾಖಾಂಡಿ ಸಂಸ್ಥೆಗಳು.ಅತ್ಯಂತ ಬುದ್ದಿವಂತರ ನಾಡು ಅಂತ ಕರೆಸಿಕೊಳ್ಳುತಿತ್ತು ಒಂದೊಮ್ಮೆ ನಗೆಯು ಬರುತಿದೆ ಅದ ನೆನಸಿ ಈ ದಿನ ನನಗೆ.

ಬಟ್ಟೆಯನ್ನೆಲ್ಲಾ ಎಳೆದೂ ಬಳೀದು ಚಂದ ನೋಡಿ ಕಥೆ ಕಟ್ತೀರಾ???ಕೈ ಬಿಡಬಹುದಾದಷ್ಟು ಬಿಟ್ಟು ಸಂಸ್ಕೃತಿ ಬಗ್ಗೆ ಮಾತಾಡ್ತೀರಾ? ನೀವೆಲ್ಲೋ ಕಾಡು ಮೃಗಗಳಾಗಿರಬೇಕಷ್ಟೆ, ಇದ ಪೋಟೊ ಹಚ್ಚಿ ಸಮರ್ತಿಸಿಕೊಳ್ಳುವವರೂ ಕೂಡ ಇವರಿಂದ ಹೊರತಲ್ಲ, ಮಂಗಳೂರೇನೂ ಗೋವಾ ಅಗ್ತಿದೆಯಾ??? ಸಂತೋಷ ಪಡ್ತಿದ್ದೆ ಹಂಗಾದರೆ ಹೊಟ್ಟೆಪಾಡಿಗಾಗಿ ನಾನಿಷ್ಟೂ ದೂರ ಬರಬೇಕಾಗಿರಲಿಲ್ಲ, ಗೋವಾದಲ್ಲೇನೂ ಬೆತ್ತಲೆ ಮಲಗ್ತಾರೋ? ಹಂಗಾದ್ರೆ ಗೋಕರ್ಣ, ಓಮ್ ಬೀಚ್ ಗಳನ್ನೂ, ಇತರ ಇದೆ ತರದ ಕರ್ನಾಟಕದ ಸ್ಥಳಗಳನ್ನೂ ಏನಂತ ಕರೀಬೇಕೂ ಹಲ್ಕಟ್ ಸಂಸ್ಕೃತಿಗರೆ.ಯಾಕೆ ಮಂಗಳೂರು ಮಾತ್ರ ನಿಮ್ಮಪ್ಪನ ಊರು, ಖರೀದಿ ಮಾಡಿ ಬಿಟ್ಟಿರೋ? ಮನೆಯೋಳಗೆ ನುಗ್ತೀರಾ?? ಮಾನ ಕೇಡಿಗಳೆ??? ನಿಮ್ಮಗಳ ಕಟ್ಟಿಕೊಂಡು ಬದುಕು ನಡೆಸೋದು ಸಾಧ್ಯನಾ?? ತಂಗಿ, ಅಣ್ಣ, ಅಕ್ಕ, ತಮ್ಮ ಜೊತೆಗೆ ಮನೆಯಿಂದ ಹೊರಬರುವದಕ್ಕೂ ಸಾಧ್ಯವಿಲ್ಲದ ಸ್ಥಿತಿಗೆ ತಳ್ಳುತಿದ್ದೀರಲ್ಲ ಮತಾಂಧ ಬಿಕನಾಸಿಗಳೆ, ಹೊಟ್ಟೆಗೆ ಏನ್ ತಿನ್ತೀರೋ ಏನೊ. ಒಬ್ಬ ಸೂಳೆಯನ್ನೂ ಹೆಣ್ಣೆಂಬ ಕಾರಣಕ್ಕೆ ಕೈ ಎತ್ತಲಾರದ ಮಾನವೀಯತೆ ಕಂಡುಕೊಂಡವರು ನಾವು.ಅಂತದ್ದರಲ್ಲಿ ನೀವುಗಳೂ ಅತೀ ಕೀಳರಲ್ಲಿ ಕೀಳು.ಮನುಷತ್ವದ ಅರ್ಥವೆ ಗೊತ್ತಿಲ್ಲದ ಥರ್ಡ್ ಕ್ಲಾಸ್ಗಳು.ವ್ಯಾಕ್ ಥೂಊಊ ನಿಮ್ಮ ಜನ್ಮಕ್ಕಿಷ್ಟು....

ತೋರಿಸಬೇಕಾದಲ್ಲಿ ತೋರಿಸ್ರಿ ಹೆತ್ತ ಅಡ್ನಾಡಿ ಪೌರುಷವ, ಅಲ್ಲಾ!!! ಎಂದಾದರೂ ಭಾಷೆ ನೆಲದ ಬಗ್ಗೆ ಮಾತೆತ್ತಿದ್ದೂ ಐತಾ?ಭ್ರಷ್ಟಾಚಾರ (ಸಂಘ ಕೃಪಾಪೋಷಿತವಲ್ಲದ್ದೂ) ವಿರೋಧಿ ಹೋರಾಟದಲ್ಲಿ ಸ್ವಂತಿಕೆಯಿಂದ ಭಾಗಿಯಾಗೋ ಪೌರುಷನಾ ನಿಮ್ದು?ಸಾಮಾಜಿಕ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಿ ಹೋರಾಟ ನಡೆಸಿದಾ ಮೂತಿನಾ ನಿಮ್ದು?ಇಲ್ಲಾ ಎಲ್ಲಾ ಒಳ್ಳೆ ವಿಷಯ, ಸ್ಪಂದಿಸಬಹುದಾದ ವಿಷಯದಲ್ಲೂ ನಮ್ಮಗಳ( ನಾನು ದಕ್ಷಿಣ ಕನ್ನಡದವನೆ ಆದುದರಿಂದ ನಮ್ಮಗಳ ಅನ್ನಬೇಕಾಯ್ತು)ನಿಲುವು ಸತ್ತ ಹೆಣದಂತೂ ಅಲ್ಲ ಕೊಳೆತ ಹೆಣದಂತೆ, ಇದೇನಪ್ಪಾ ಈ ಮಂಗಳೂರಿಗರೂ ಹಿಂಗೆ ಅಂತ ದೇಶವೆಲ್ಲಾ ಮಾತಾಡುತಿದ್ದರೂ ನಮ್ಮಗಳ ಜೀವದಲ್ಲಿ ಚಲನೆಯೆ ಇಲ್ಲ.ಅದೆ ಮುಸ್ಲಿಮರೊಬ್ಬ ಗಾಡಿ ತುಂಬಾ ದನ ಸಾಗಿಸಿದ , ಎಲ್ಲೋ ಮಸೀದಿ, ಚರ್ಚು , ದೇವಾಲಯಗಳಿಗೆ ಕಲ್ಲು ಬಿತ್ತು, ಯಾವನೋ ಅಂತರ್ಧರ್ಮೀಯಾ ಹುಡುಗ ಹುಡುಗಿ ಜೊತೆಗಿದ್ದಾರೆ(ಪರಸ್ಪರ ಒಪ್ಪಿಗೆಯಿದ್ದೂ) ಎನ್ನುವ ಪರಿಸ್ಥಿತಿಯಲ್ಲಿ ಸೆಟೆದುಕೊಳ್ಳುತ್ತೇವೆ ನಿಮಿಷದಲ್ಲೆ ಸಾವಿರಾರು ಮಂದಿ ಸೇರಿ ಬಿಡುತ್ತೇವೆ,ಹೊತ್ತಿನ ಊಟಕ್ಕೆ ದುಡಿಯಲಾಗದ, ಬಡವನನ್ನು ಬಾಳಿಸಲಾಗದ, ಸಮಾನತೆಯನ್ನೂ ಕಾಪಾಡಲಾರದ, ಸಹೋದರತೆಯನ್ನೂ ಎತ್ತಿ ಹಿಡಿಯಲಾಗದ ಈ ನಿಗುರುವಿಕೆ ಯಾವ ಕರ್ಮಕ್ಕೆ ."ಬೇಲೆ ಇಜ್ಜಂದಿ ಆಚಾರಿ ಬಾಲೆದ ಪೀಂಕಾನ್ ಕೆತ್ತಿಯೆ" ಅನ್ನೋ ತುಳು ಗಾದೆಯಂತೆ ಕೆಲಸವಿಲ್ಲದವನು, ಇನ್ನೊಬ್ಬರ ಅಣತಿಯಂತೆ ಬದುಕುವವ, ಸ್ವಂತಿಕೆ ಕಳಕೊಂಡ ವ್ಯಕ್ತಿ ಸಮೂಹ ಇನ್ನೇನನ್ನೂ ಮಾಡಲೂ ಸಾಧ್ಯ. ಪುಂಡಾಡಿಕೆಯಲ್ಲಿ ಹೆಸರು ಗಳಿಸೋ ಆಸೆಯನ್ನ ಸಂಘ ಪರಿವಾರಗಳೂ ಮಂಗಳೂರಿನ ಯುವ ಜನತೆಯಲ್ಲಿ ಬಿತ್ತಿದೆ. ಮಂಗಳೂರಿನಲ್ಲಿರುವ ವೈಚಾರಿಕ ನೆಲೆಗಟ್ಟಿನಲ್ಲಿ ಯೋಚಿಸುವ ಎಲ್ಲಾ ಮಂದಿಯೂ ಹೇಳುವ ಮಾತಿದು.ದೇಶಕ್ಕೊಂದು ಪ್ರಜಾಪ್ರಭುತ್ವ ವ್ಯವಸ್ಥೆಯಿದೆ, ಕಾನೂನುಗಳಿವೆ ಎಂಬುದನ್ನೂ ಮರೆತೂ ಅಥವಾ ಅವೆಲ್ಲವನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡು ದಾಂಧಲೆ ಎಬ್ಬಿಸುವ ಈ ಮಂದಿಗೆ ಒಂದು ಖಾರ ಎದ್ದು ನಿಲ್ಲಲಾಗದ ಮೆಸೇಜ್ ತಲುಪಲೇಬೇಕೂ. ಆದರೆ ಸರ್ಕಾರ ಇದೆ ಮತಾಂದ ವ್ಯವಸ್ಥೆಗೆ ಸಿಕ್ಕಿ ನಿರ್ವಿರ್ಯವಾಗಿ ಕುಂತಿದೆ. ಉಪ ಮುಖ್ಯಮಂತ್ರಿಯೆ, ಆಕ್ರೋಶ ಸಹಜ!!! ಅನ್ನಬೇಕಾದರೆ ಈ ಷಂಡರಿಂದ ಹೆಚ್ಚಿನ ಆಸೆ ಇಟ್ಟುಕೊಳ್ಳುವಂತಿಲ್ಲ. ಬರುವ ಚುನಾವಣೆಯನ್ನು ಈ ನಿಟ್ಟಿನಲ್ಲಿ ಯೋಚಿಸಬೇಕಾದುದು ನಮ್ಮೆಲ್ಲ ಪ್ರಜ್ಞಾವಂತರ ಕರ್ತವ್ಯ ಅಲ್ಲಿವರೆಗೆ .................!!!!!!! ಗೊತ್ತಿಲ್ಲ, ವ್ಯವಸ್ಥೆ ಸುಧಾರಣೆಯಾಗುತ್ತೋ ಬಿಡುತ್ತೋ ಮಾತು ದಾಖಲಿಸಬೇಕಷ್ಟೆ. ಇಷ್ಟೊಂದನ್ನ ಬರೆದಿದ್ದೂ ಅದಕ್ಕಾಗೆ ಕಿಂಚಿತ್ತು ಮನದ ಆಕ್ರೋಶಗಳನ್ನ ಹೊರಚೆಲ್ಲುವದಕ್ಕಾಗಿ ಅಷ್ಟೆ.ಬಹಳಷ್ಟೂ ಹೇಳಲಿದ್ದರೂ ಹೆಚ್ಚೇನೂ ಹೇಳುವಂತಿಲ್ಲ ಕಾರಣ ನಾನೂ ನಗೆಪಾಟಲಿಗೀಡಾದ ಬುದ್ದಿವಂತರೆಂದೂ ಕರೆಸಿಕೊಂಡ ಮೂರ್ಖನಾಡಿನ ಸಾಮಾನ್ಯ ಪ್ರಜೆಯಲ್ಲಿ ಅತೀ ಸಾಮಾನ್ಯನಷ್ಟೆ.